Homeಕರ್ನಾಟಕExclusive | ವಾರ್ಡನ್‌ಗಳು, ಕ್ಲರ್ಕ್‌ಗಳು ಸೇರಿ 46 ಲಕ್ಷ ರೂ. ನುಂಗಿದ್ದರು: ಮೈಸೂರು ವಿವಿ ಡೀನ್‌‌

Exclusive | ವಾರ್ಡನ್‌ಗಳು, ಕ್ಲರ್ಕ್‌ಗಳು ಸೇರಿ 46 ಲಕ್ಷ ರೂ. ನುಂಗಿದ್ದರು: ಮೈಸೂರು ವಿವಿ ಡೀನ್‌‌

- Advertisement -
- Advertisement -

ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಹಾಸ್ಟೆಲ್‌ಗಳಲ್ಲಿ ಊಟ ನಿಲ್ಲಿಸಲಾಗಿದೆ ಎಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಸ್‌.ಟಿ.ರಾಮಚಂದ್ರ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ವೈರಲ್‌ ಆಗಿದೆ.

ಕೋವಿಡ್ ಅವಧಿಯಲ್ಲಿ ಹಾಸ್ಟೆಲ್ ಹಾಗೂ ಮೆಸ್‌ಗಳನ್ನು ಮುಚ್ಚಲಾಗಿತ್ತು. ಕಡಿಮೆ ಅವಧಿಯಲ್ಲಿ ಹಾಸ್ಟೆಲ್‌ ತೆರೆದು ಪರೀಕ್ಷೆಗಳನ್ನು ನಡೆಸಲಾಯಿತು. ಈಗ ಹೊಸ ವಿದ್ಯಾರ್ಥಿಗಳ ಪ್ರವೇಶಾತಿಯೂ ನಡೆಯುತ್ತಿದೆ. ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಮನೆಗೆ ತೆರೆಯದೆ ಹಾಸ್ಟೆಲ್‌ಗಳಲ್ಲೇ ಉಳಿದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದಾರೆ. ಆದರೆ ಊಟ ಅವಧಿ ಮುಗಿದ ವಿದ್ಯಾರ್ಥಿಗಳಿಗೆ ಊಟ ನೀಡುವುದಿಲ್ಲ ಎಂದು ಮೈಸೂರು ವಿವಿ ತಿಳಿಸಿತ್ತು. ಹೀಗೆ ಉಂಟಾಗಿರುವ ಗೊಂದಲದ ವೇಳೆ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಡಾ.ಎಸ್.ಟಿ.ರಾಮಚಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ‘ಗೂಂಡಾಗಿರಿ’ ಮಾಡಿದ್ದಾರೆ ಎಂದು ಆರೋಪಿಸಿ ವಿಡಿಯೋ ಹರಿಬಿಡಲಾಗಿದೆ.

ಇದರ ಕುರಿತು ಪ್ರತಿಕ್ರಿಯೆ ಪಡೆಯಲು ರಾಮಚಂದ್ರ ಅವರನ್ನು ಸಂಪರ್ಕಿಸಿದಾಗ ಅವರು ಘಟನೆಯ ವಿವರ ಹಾಗೂ ಮೈಸೂರು ವಿವಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. “ನಾನು ತನಿಖೆ ನಡೆಸಿದ್ದರಿಂದ ಸಿಕ್ಕಿಬಿದ್ದವರು ಕೆಲವರನ್ನು ಛೂ ಬಿಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕರಾದ ಡಾ.ಎಸ್.ಟಿ.ರಾಮಚಂದ್ರ

“72 ವಿದ್ಯಾರ್ಥಿಗಳಿಗೆ ಮಾತ್ರ ಮೌಖಿಕ ಸಂದರ್ಶನ (ವೈವಾ), ಪ್ರಾಯೋಗಿಕ ಪರೀಕ್ಷೆ ಹಾಗೂ ಡೆಸಾರ್ಟೇಷನ್‌ ಸಲ್ಲಿಕೆ ಬಾಕಿ ಇದೆ. ಉಳಿದ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರಕ್ರಿಯೆ ಮುಗಿದಿದೆ. ಪರೀಕ್ಷೆ ಮುಗಿದವರು ಮನೆಗೆ ಹೋಗಬೇಕಿತ್ತು. ಆದರೆ ಹೋಗಿಲ್ಲ. ವಿಭಾಗಗಳಲ್ಲಿ ಹೊಸದಾಗಿ ಪ್ರವೇಶ ಪಡೆದವರಿಗೆ (ಹಾಸ್ಟೆಲ್‌ಗೆ ಪ್ರವೇಶ ಪಡೆಯದಿದ್ದರೂ), ಪರೀಕ್ಷೆ ಇದ್ದವರಿಗೆ ಸೇರಿ 250 ಮಂದಿಗೆ ಮಂಗಳವಾರ ಅಡುಗೆ ಮಾಡಿಸಲಾಗಿತ್ತು. ಯಾರಿಗೂ ಊಟ ಮಾಡಲು ಅವಕಾಶ ನೀಡದೆ ವಿಶ್ವ ಪ್ರಸಾದ್ ಎಂಬವವರು ಮೆಸ್‌ಗೆ ಬೀಗ ಹಾಕಿದ್ದರು. ಪರೀಕ್ಷೆ ಇದ್ದ 72 ಮಂದಿ ವಿದ್ಯಾರ್ಥಿಗಳು ದೂರಿದಾಗ ಸ್ಥಳಕ್ಕೆ ಭೇಟಿ ನೀಡಲಾಯಿತು. ರಾಜಾನಂದ ಎಂಬವರು ನನ್ನ ಕೈ ಎಳೆಯೋದು,  ಮೈಮೇಲೆ ಬೀಳೋದು ಮಾಡುತ್ತಿದ್ದ. ಹೊಡೆಯುತ್ತೀಯೇನಪ್ಪ, ಬಾ ಹೊಡಿ ಎಂದು ನಾನು ಮುನ್ನುಗ್ಗಿದೆ ಅಷ್ಟೆ. ಅದನ್ನು ಗೂಂಡಾಗಿರಿ ಎಂದು ಬಿಂಬಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿರಿ: ದಕ್ಷಿಣ ಕನ್ನಡ: BJP ನಾಯಕನ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ತಲವಾರು ದಾಳಿ

ಅಕ್ಟೋಬರ್‌‌ 13ರಲ್ಲಿ ಪರೀಕ್ಷೆ ಮುಗಿದರೂ ಇಲ್ಲೇ ಇದ್ದಾರೆ. ಪ್ರವೇಶ ಪಡೆದವರು ಹಾಗೂ ಪರೀಕ್ಷೆ ಇರುವವರು ಸೇರಿ 170 ಮಂದಿ ಮಾತ್ರ ಇರಬೇಕು. ಆದರೆ 600 ಮಂದಿ ಅನಧಿಕೃತವಾಗಿದ್ದಾರೆ. ಅವರ್‍ಯಾರೂ ಅಧಿಕೃತ ಅಲ್ಲ ಎಂದ ಅವರಿಗೆ, ‘ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಇ.ಬಿ.ಎಲ್‌ ಹೆಚ್ಚುವರಿ ಹಣ ನೀಡಲಾಗಿಲ್ಲ ಯಾಕೆ?’ ಎಂದು ಪ್ರಶ್ನಿಸಿದಾಗ, ‘ಸರ್ಕಾರದಿಂದ ಹಣ ಬಂದಿಲ್ಲ’ ಎಂದರು.

“2019-20ನೇ ಸಾಲಿನ ವಿದ್ಯಾರ್ಥಿವೇತನ ಮಾತ್ರ ಬರುತ್ತಿದೆ. ಲಾಕ್‌ ಡೌನ್‌ ಜಾರಿಯಾದ ಸಮಯದ ಹಣವನ್ನು ಸರ್ಕಾರ ಕೊಡುವುದಿಲ್ಲ. ಇ.ಬಿ.ಎಲ್‌. ಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬೆಂಗಳೂರಿಗೆ ಹೋಗಿ ಬಂದಿದ್ದು ಇ.ಬಿ.ಎಲ್‌. ಹಣವನ್ನು ನೀಡಬೇಕೆಂದು ಕೋರಿದ್ದೇವೆ. ಸರ್ಕಾರದ ಮಟ್ಟದಲ್ಲಿ ಆಗಬೇಕು. ಯಾವುದೇ ಹಣವೂ ದುರಪಯೋಗಿ ಆಗಿಲ್ಲ. 2021ನೇ ಸಾಲಿನಲ್ಲಿ ಆರು ತಿಂಗಳಿಗೆ ಮಾತ್ರ ಸ್ಕಾಲರ್‌ಶಿಪ್‌ ನೀಡಲಾಗಿದೆ. ಈ ವರ್ಷದ ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳ ವೆಚ್ಚವನ್ನು ವಿಶ್ವವಿದ್ಯಾನಿಲಯದಿಂದ ಭರಿಸಬೇಕು. ವಿದ್ಯಾರ್ಥಿಗಳಿಗೆ ಬರಬೇಕಾದ ಇ.ಬಿ.ಎಲ್‌. ಬಂದರೆ ನಾವು ಅವರಿಗೆ ತಲುಪಿಸುತ್ತೇವೆ” ಎಂದು ಪ್ರತಿಕ್ರಿಯಿಸಿದರು.

ಸರ್ಕಾರ ಒಬ್ಬ ವಿದ್ಯಾರ್ಥಿಗೆ 1600 ರೂ.ಗಳನ್ನು ತಿಂಗಳಿಗೆ ನೀಡುತ್ತದೆ. ವಿಶ್ವವಿದ್ಯಾನಿಲಯದಿಂದ ಇ.ಬಿ.ಎಲ್‌. 300 ರೂ. ನೀಡಿ, ಒಂದು ತಿಂಗಳ ಮೆಸ್‌ ಬಿಲ್‌ 1900 ರೂ. ಭರಿಸಲಾಗುತ್ತಿದೆ. ಈ ಹಣ ದಿನಸಿ ವೆಚ್ಚವಾಗಿ ಹೋಗುತ್ತದೆ. ಅಡುಗೆ ಭಟ್ಟರಿಗೆ ವಿವಿ ಹಣ ನೀಡುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಹಾಸ್ಟೆಲ್‌ಗಳು ಇರಲಿಲ್ಲ. ಹೀಗಾಗಿ ಈ ಸಮಯದ ಹಣವನ್ನು ಸರ್ಕಾರ ನೀಡುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದೆವು. ವಿಶ್ವವಿದ್ಯಾನಿಲಯವೇ 38 ಲಕ್ಷ ರೂ.ಗಳನ್ನು ಭರಿಸಬೇಕಾಯಿತು. ಈ ಬಾರಿಯೂ ಅಷ್ಟೇ. ಆರು ತಿಂಗಳ ಹಣವನ್ನು ಮಾತ್ರ ಸರ್ಕಾರ ನೀಡುತ್ತದೆ. ಇನ್ನೆರಡು ತಿಂಗಳ ಹಣವನ್ನು ಸರ್ಕಾರವೇ ಭರಿಸಬೇಕಾಗುತ್ತದೆ ಎಂದು ಸಂಕಷ್ಟ ತೋಡಿಕೊಂಡರು.

ಮುಂದುವರಿದು ಮಾತನಾಡಿದ ಅವರು, “ಎರಡು ವರ್ಷಗಳಿಂದ ಇ.ಬಿ.ಎಲ್‌‌. ಹಣ ಬಂದಿಲ್ಲ. ಅದರ ಹಿಂದಿನ ವರ್ಷಗಳಲ್ಲಿಯೂ ಬಹಳ ವಿದ್ಯಾರ್ಥಿಗಳಿಗೆ ಇ.ಬಿ.ಎಲ್‌. ಬಂದಿಲ್ಲ. ಅದನ್ನೆಲ್ಲ ಸರಿ ಮಾಡಲಾಗುತ್ತಿದೆ. ನಾನು ನಿರ್ದೇಶಕನಾಗಿ ಅಧಿಕಾರಕ್ಕೆ ಒಂದು ವರ್ಷ, ಐದು ತಿಂಗಳಾಗಿದೆ. 28 ಲಕ್ಷ ರೂ. ಹೆಚ್ಚುವರಿ ಮೆಸ್‌ ಬಿಲ್‌ ಬಂದಿತ್ತು. ಈ ಹಿಂದೆ ಒಟ್ಟು 46 ಲಕ್ಷ ರೂ.ಗಳನ್ನು ವಾರ್ಡನ್‌ಗಳು, ಕ್ಲರ್ಕ್‌‌ಗಳು ಎಲ್ಲ ಸೇರಿ ತಿಂದಿದ್ದರು. ಅವರನ್ನೆಲ್ಲ ಹಿಡಿದು ತನಿಖೆ ಮಾಡಿಸಿದ್ದೇನೆ. ನಾನು ಯಾರ್‍ಯಾರನ್ನು ಹಿಡಿದಿದ್ದೇನೆಯೋ ಅವರೆಲ್ಲ ಈ ಪ್ರತಿಭಟನೆಯ ಹಿಂದೆ ಇದ್ದಾರೆ” ಎಂದು ಆರೋಪಿಸಿದರು.

“ನನ್ನ ಮೇಲೆ ನೂರು ರೂಪಾಯಿ ಭ್ರಷ್ಟಾಚಾರ ಇದ್ದರು ನನ್ನನ್ನು ಜೈಲಿಗೆ ಹಾಕಿರಿ. ನಾನು ಸಹ ಪ್ರಾಧ್ಯಾಪಕ. ನನ್ನ ಮೇಲೆ ಆರೋಪ ಬಂದರೆ ಇವತ್ತೇ ಈ ನಿರ್ದೇಶಕನ ಸ್ಥಾನ ಬಿಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಎಲ್ಲ ಹಾಸ್ಟೆಲ್‌ಗಳನ್ನು ಸೇರಿ 4,300 ವಿದ್ಯಾರ್ಥಿಗಳು ಇದ್ದಾರೆ. ಕೇವಲ 2% ವಿದ್ಯಾರ್ಥಿಗಳು ಮಾತ್ರ ಹೀಗೆ ತಿರುಗಿ ಬೀಳುತ್ತಿದ್ದಾರೆ. ಕೆಲವರನ್ನು ನನಗಾಗದವರು ಛೂ ಬಿಡುತ್ತಿದ್ದಾರೆ. ನನ್ನಿಂದ ರೋಲ್‌ಕಾಲ್‌ ಮಾಡಲು ನೋಡುತ್ತಿದ್ದಾರೆ ಎಂದು ದೂರಿದರು.

ಪರೀಕ್ಷೆ ಮುಗಿದ ಮೇಲೂ ಮೆಸ್‌ ನಡೆಸಿದರೆ ಏಕೆ ಮೆಸ್‌ ನಡೆಸುತ್ತಿದ್ದೀರಿ ಎಂದು ಆಡಿಟರ್‌ ನನ್ನನ್ನು ಕೇಳುತ್ತಾರೆ. ಮುನ್ನೂರು ಜನರು ಇರುವಲ್ಲಿ, ಐನ್ನೂರು ಜನರಿಗೆ ಊಟ ಯಾಕೆ ಹಾಕಿದ್ದೀರಿ ಎಂದು ನನ್ನನ್ನು ಪ್ರಶ್ನಿಸುತ್ತಾರೆ” ನಾನೇನು ಉತ್ತರ ನೀಡಲಿ” ಎಂದು ಕೇಳಿದರು.

“ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿವೆ. ಈಗ ಉಳಿದಿರುವ ವಿದ್ಯಾರ್ಥಿಗಳನ್ನು ಖಾಲಿ ಮಾಡಿಸಲೇಬೇಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ವಿದ್ಯಾರ್ಥಿಗಳು ಇದ್ದಾರೆ. ಅವಧಿ ಮುಗಿದ ಮೇಲೆಯೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲ್ಲ. ಅಕ್ಟೋಬರ್‌ 31ಕ್ಕೆ ಕ್ಲೋಸ್‌ ಮಾಡಿಸಿ, ಹೊಸ ವಿದ್ಯಾರ್ಥಿಗಳಿಗೆ ನವೆಂಬರ್‌ 1ರಿಂದ ಅವಕಾಶ ನೀಡಲಾಗುತ್ತಿದೆ” ಎಂದರು.


ಇದನ್ನೂ ಓದಿರಿ: ನೀಟ್ ವಿರೋಧಿಸಿ SFI ಯಿಂದ ದೇಶಾದ್ಯಂತ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...