Homeಅಂಕಣಗಳುಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

- Advertisement -
- Advertisement -

1984ರಲ್ಲಿ ಇಂದಿರಾ ಹತ್ಯೆ ಜರುಗಿದ ನಂತರ ಸಿಖ್ಖರ ಸಾಮೂಹಿಕ ಮಾರಣಹೋಮದ ರಣಭೂಮಿ ಆದದ್ದು ಪೂರ್ವೀ ದೆಹಲಿಯ ತ್ರಿಲೋಕಪುರಿ ಮತ್ತು ನೆರೆಹೊರೆಯ ಕಲ್ಯಾಣಪುರಿ. ಕಾಂಗ್ರೆಸ್ಸಿನ ತಲೆಯಾಳುಗಳೇ ಈ ಮಾರಣಹೋಮದ ನೇತೃತ್ವ ವಹಿಸಿದ್ದರು.

ನೆಹರೂ ಮತ್ತು ಇಂದಿರಾ ಕಾಲದಲ್ಲಿ ದೆಹಲಿಯ ಕೊಳೆಗೇರಿಗಳನ್ನು ಕೆಡವಿದ ನಂತರ ನಿರಾಶ್ರಿತರಾದ ದೀನದಲಿತರಿಗೆ ಪುನರ್ವಸತಿ ಕಲ್ಪಿಸಿದ್ದು ತ್ರಿಲೋಕಪುರಿ ಮತ್ತು ಪಕ್ಕದ ಕಲ್ಯಾಣಪುರಿಯಲ್ಲಿ. ಸಂಜಯಗಾಂಧೀ ಬುಲ್ಡೋಜರ್ ನೆಲಸಮ ಮಾಡಿದ ತುರ್ಕಮಾನ ಗೇಟಿನ ಕೊಳೆಗೇರಿಗಳ ಬಡ ಮುಸಲ್ಮಾನರನ್ನೂ ಇದೇ ತ್ರಿಲೋಕಪುರಿಗೆ ತಂದು ಒಗೆಯಲಾಗಿತ್ತು.

ಆ ಕಾಲಕ್ಕೆ ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಇಲ್ಲದ ಈ ಬರಡು ಬಂಜರು ನೆಲದಲ್ಲಿ ದಲಿತರು, ಹಿಂದುಳಿದವರು, ಮುಸಲ್ಮಾನರು ಕಾಲಕ್ರಮೇಣ ತಮ್ಮ ಬಡಬದುಕುಗಳನ್ನು ಕಟ್ಟಿಕೊಂಡರು.

ಪೂರ್ವ ದೆಹಲಿಯ ತ್ರಿಲೋಕಪುರಿ, ಕಲ್ಯಾಣಪುರಿ ಹಾಗೂ ವಾಯುವ್ಯ ದೆಹಲಿಯ ಮಂಗೋಲ್ ಪುರಿಯಲ್ಲಿ ಐದಾರೂ ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಇವರೆಲ್ಲ ತಮಿಳುನಾಡಿನಿಂದ ವಲಸೆ ಬಂದವರು. ತಮಿಳರ ಪಾಲಿಗೆ ಇವರು ’ಕನ್ನಡಕಾರ’ರು. ಆದರೆ ಕರ್ನಾಟಕದ ಕನ್ನಡಿಗರಿರಲಿ, ಕರ್ನಾಟಕದ ಕನ್ನಡಿಗರು ಕೂಡ ಈ ’ಕನ್ನಡಕಾರರ’ ಇರವನ್ನೇ ಅರಿಯರು. ಹೊರನಾಡ ಕನ್ನಡಿಗರು ಎಂಬ ಸ್ಥಾನಮಾನವಾಗಲಿ, ಅದರ ವ್ಯಾಖ್ಯೆಯಾಗಲಿ ಇವರ ಬಳಿ ಸುಳಿದೇ ಇಲ್ಲ. 1948ರಷ್ಟು ಹಿಂದೆಯೇ ಹುಟ್ಟಿದ ಹೆಸರಾಂತ ಸಂಸ್ಥೆ ದೆಹಲಿ ಕರ್ನಾಟಕ ಸಂಘ. ಕೊಳೆಗೇರಿಯ ಈ ಬಡ ದೆಹಲಿ ’ಕನ್ನಡಕಾರ’ರ ಸಂಗತಿ ಸಂಘದ ಗಮನಕ್ಕೆ ಬಂದು ಐದಾರು ವರ್ಷಗಳೇ ಉರುಳಿವೆ. ಸಂಘ ಅವರ ಕುರಿತು ಕನಿಷ್ಠ ಕುತೂಹಲವನ್ನೂ ತೋರಿಲ್ಲ. ಅವರೂ ನಾವು ಕನ್ನಡಿಗರೆಂದು ಹೇಳಿಕೊಂಡು ಸಂಘದ ಬಳಿ ಸಾರುವ ಸಾಹಸ ಮಾಡಿಲ್ಲ.

ಡೆಲ್ಲಿ ಕನ್ನಡಸಂಘ ನಮ್ಮನ್ನು ಕರೆದಿಲ್ಲ, ನಾವು ಅವರ ಬಳಿ ಹೋಗಿಲ್ಲ. ತಮಿಳು ಸಂಘಂಗೆ ಹೋಗಿದ್ದೇವೆ. ಸದಸ್ಯರೂ ಆಗಿದ್ದೇವೆ. ಮಕ್ಕಳು ಡೆಲ್ಲಿಯ ತಮಿಳು ಶಾಲೆಗಳಿಗೆ ಹೋಗಿ ಕಲೀತಾರೆ. ತಮಿಳುನಾಡಿನಲ್ಲಿ ನಮ್ಮ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು ಎನ್ನುತ್ತಾರವರು.

ಬಹುತೇಕ ಮನೆಗೆಲಸದ ಪಾತ್ರೆ ತಿಕ್ಕುವವರಾಗಿ, ಅಡುಗೆ ಮಾಡುವವರಾಗಿ, ಡ್ರೈವರುಗಳಾಗಿ, ನೆರೆಯ ನೋಯ್ಡಾದ ಫ್ಯಾಕ್ಟರಿಗಳಲ್ಲಿ ಕೂಲಿಕಾರರಾಗಿ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಹೂವು ಮಾರುವವರಾಗಿ, ಸಣ್ಣಪುಟ್ಟ ವ್ಯಾಪಾರ ಮಾಡುವವರಾಗಿ ಹೊಟ್ಟೆ ಹೊರೆಯುತ್ತಿದ್ದಾರೆ ಈ ಕನ್ನಡಿಗರು. ಉತ್ತಮ ಉದ್ಯೋಗಗಳಲ್ಲಿ ನೆಮ್ಮದಿ ಕಂಡುಕೊಂಡಿರುವವರ ಸಂಖ್ಯೆ ಬೆರಳೆಣಿಕೆಯದು.

ಇವರ ಮನೆಮಾತು ಕನ್ನಡ. ನೂರಕ್ಕೆ ಅರವತ್ತು ಎಪ್ಪತ್ತು ಪದಗಳು ಕನ್ನಡ. ಉಳಿದವು ತಮಿಳು. ತಮ್ಮ ಮಾತೃಭಾಷೆ ಕನ್ನಡವೆಂದೇ ಸಾರಿ ಹೇಳುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ’ಕನ್ನಡ ದೇವಾಂಗ ಚೆಟ್ಟಿಯಾರ್’ ಎಂದೇ ಕರೆಯಲಾಗುತ್ತದೆ. ನೇಯುವುದು ಇವರ ಮೂಲ ಕಸುಬು. 1967ರ ಆಸುಪಾಸಿನಲ್ಲಿ ದಿಲ್ಲಿಗೆ ವಲಸೆ ಬಂದವರಿವರು. ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಡಿ.ಎಂ.ಕೆ. ವಿದ್ಯುತ್ ಚಾಲಿತ ಮಗ್ಗಗಳ ಆರಂಭಕ್ಕೆ ಅನುಮತಿ ನೀಡಿದ ನಂತರ ನಿರ್ಗತಿಕರಾದ ಕೈಮಗ್ಗದ ನೇಕಾರರು ಇವರು. ವಿದ್ಯುತ್ ಮಗ್ಗಗಳು ತಮ್ಮ ಕಸುಬಿಗೆ ನೀಡಿದ ಕೊಡಲಿಯೇಟನ್ನು ಭರಿಸಲಾರದೆ ಹೊಟ್ಟೆ ಹೊರೆಯಲು ದಿಲ್ಲಿ, ಮುಂಬಯಿ, ಬೆಂಗಳೂರು ನಗರಗಳ ರೈಲುಗಳನ್ನು ಹತ್ತಿದ್ದವರು.

ತಿಂಗಳುಗಳು, ವರ್ಷದೊಪ್ಪತ್ತಿನ ಅಂತರದಲ್ಲಿ ಅಂದಿನ ದಿನಗಳಲ್ಲಿ ದಿಲ್ಲಿಗೆ ಬಂದಿಳಿದ ಕುಟುಂಬಗಳು ಹತ್ತಿರಹತ್ತಿರ ಸಾವಿರ ಎನ್ನುತ್ತಾರೆ ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಒಂಬತ್ತು ವರ್ಷದ ಹುಡುಗನಾಗಿ ಪಂಜಾಬಿ ಚಹಾದ ಅಂಗಡಿಯಲ್ಲಿ ಕೆಲಸ ಮಾಡಿ ದಿಲ್ಲಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅವರು.

ನಾಗಲಿಂಗಂ ಅವರನ್ನು ಎದುರಿಗೆ ಕೂರಿಸಿಕೊಂಡು ಮಾತನಾಡಿದರೆ ಅವರ ಕನ್ನಡದಲ್ಲಿ ನೂರಕ್ಕೆ ಅರವತ್ತು ಪದಗಳು ಮಾತ್ರವೇ ನಮಗೆ ತಿಳಿದಾವು. ಬೇರೆ ಕಸುಬೇ ಗೊತ್ತಿಲ್ಲದ ಈ ’ಕನ್ನಡಕಾರ’ರು, ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದುಗಳ ಕೈಮಗ್ಗಗಳಲ್ಲಿ ಕೂಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯ್ದರಂತೆ. ಈ ಮಗ್ಗಗಳೂ ಅಳಿದ ನಂತರ ಬಾಣಲೆಯಿಂದ ಬೆಂಕಿಗೆ ಬಿದ್ದು ಬೇರೆ ಅನ್ನದ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ.

ಕರೋಲ್ ಬಾಗಿನ ಝುಗ್ಗಿ ಝೋಪಡಿಗಳಿಂದ ತೆರವು ಮಾಡಿಸುವ ಸರ್ಕಾರ ತ್ರಿಲೋಕಪುರಿ, ಮಂಗೋಲ್‌ಪುರಿ, ಇಂದ್ರಾಪುರಿಯಲ್ಲಿ ಪುಟ್ಟ ನಿವೇಶನ ನೀಡಿ ಸಾಗಹಾಕುತ್ತದೆ. ಇಂದಿನ ತ್ರಿಲೋಕಪುರಿಯಲ್ಲಿ ನೆಲೆಸಿರುವ ’ಕನ್ನಡಕಾರರ’ ಕುಟುಂಬಗಳ ಸಂಖ್ಯೆ ನಾನೂರಕ್ಕೂ ಹೆಚ್ಚು. ಕನ್ನಡ ದೇವಾಂಗ ಚೆಟ್ಟಿಯಾರರ ಕುಲದೈವ ಚೌಡೇಶ್ವರಿ. ಆಕೆಗೊಂದು ದೊಡ್ಡದೇ ಆದ ಗುಡಿ ಕಟ್ಟಿದ್ದಾರೆ.

ಕರ್ನಾಟಕದ ಹಂಪಿಯ ದಯಾನಂದ ಸ್ವಾಮಿ ಸರಸ್ವತಿ ಅವರ ಮಠವೇ ಇವರ ಮುಖ್ಯ ಮಠ. ತಮಿಳುನಾಡಿನಲ್ಲಿ ಕನ್ನಡ ದೇವಾಂಗ ಚೆಟ್ಟಿಯಾರರ ಗುಡಿಗಳ ಉದ್ಘಾಟನೆಗೆ ದಯಾನಂದ ಸ್ವಾಮಿ ಹೋಗುತ್ತಾರೆ. ತಮಿಳುನಾಡಿನಲ್ಲಿ ಇವರ ಸಂಸ್ಕೃತಿಯೇ ಬೇರೆ, ತಮಿಳು ಸಂಸ್ಕೃತಿಯೇ ಬೇರೆ. ಉಗಾದಿ ಕನ್ನಡದವರ ಹಬ್ಬವೆಂದು ಇವರಿಗೆ ಗೊತ್ತು. ಆದರೆ ಆಚರಿಸುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.

ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಎರಡು ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅರವತ್ತೂರು, ಮೂವತ್ತೂರು ಎಂಬ ಎರಡು ಸೀಮೆಗಳಲ್ಲಿ ಅರವತ್ತು ಮತ್ತು ಮೂವತ್ತು ಒಟ್ಟು ತೊಂಬತ್ತು ನಾನಾ ಊರುಗಳಲ್ಲಿ ಇವರ ವಾಸ.

ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಜನಾಂಗಕ್ಕೆ ತಮ್ಮ ಬೇರುಗಳ ಕುರಿತ ಅರಿವಿಲ್ಲ. ತಾವು ತಮಿಳುನಾಡಿನ ಮೂಲನಿವಾಸಿಗಳೇ ಅಥವಾ ವಲಸೆ ಬಂದವರೇ ಎಂಬುದು ಗೊತ್ತಿಲ್ಲ. ಮನೆಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ, ಹೊರಗೆ ತಮಿಳನ್ನೂ ಮಾತಾಡುವ, ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೇ ಇಲ್ಲದ, ಪತ್ರವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಿರುವ, ಆದರೆ ಅಂತಹ ಕನ್ನಡವನ್ನು ತಮಿಳು ಲಿಪಿಯಲ್ಲೇ ಬರೆಯುವ ಅನಿವಾರ್ಯ ಈ ’ಕನ್ನಡಕಾರ’ರದು.

ದಿಂಡಿಗಲ್, ಮಧುರೈ, ವಿರುಧನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ, ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲ. ಅಲ್ಲಿ ಕನ್ನಡ ಅನ್ನ ಸಂಪಾದಿಸುವ ದಾರಿಯಲ್ಲ.


ಇದನ್ನೂ ಓದಿ: ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...