Homeಅಂಕಣಗಳುಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

ಬಹುಜನ ಭಾರತ; ದೆಹಲಿಯಲ್ಲೊಂದು ಅಜ್ಞಾತ ತಮಿಳ್ಕನ್ನಡಿಗ ಲೋಕ!

- Advertisement -
- Advertisement -

1984ರಲ್ಲಿ ಇಂದಿರಾ ಹತ್ಯೆ ಜರುಗಿದ ನಂತರ ಸಿಖ್ಖರ ಸಾಮೂಹಿಕ ಮಾರಣಹೋಮದ ರಣಭೂಮಿ ಆದದ್ದು ಪೂರ್ವೀ ದೆಹಲಿಯ ತ್ರಿಲೋಕಪುರಿ ಮತ್ತು ನೆರೆಹೊರೆಯ ಕಲ್ಯಾಣಪುರಿ. ಕಾಂಗ್ರೆಸ್ಸಿನ ತಲೆಯಾಳುಗಳೇ ಈ ಮಾರಣಹೋಮದ ನೇತೃತ್ವ ವಹಿಸಿದ್ದರು.

ನೆಹರೂ ಮತ್ತು ಇಂದಿರಾ ಕಾಲದಲ್ಲಿ ದೆಹಲಿಯ ಕೊಳೆಗೇರಿಗಳನ್ನು ಕೆಡವಿದ ನಂತರ ನಿರಾಶ್ರಿತರಾದ ದೀನದಲಿತರಿಗೆ ಪುನರ್ವಸತಿ ಕಲ್ಪಿಸಿದ್ದು ತ್ರಿಲೋಕಪುರಿ ಮತ್ತು ಪಕ್ಕದ ಕಲ್ಯಾಣಪುರಿಯಲ್ಲಿ. ಸಂಜಯಗಾಂಧೀ ಬುಲ್ಡೋಜರ್ ನೆಲಸಮ ಮಾಡಿದ ತುರ್ಕಮಾನ ಗೇಟಿನ ಕೊಳೆಗೇರಿಗಳ ಬಡ ಮುಸಲ್ಮಾನರನ್ನೂ ಇದೇ ತ್ರಿಲೋಕಪುರಿಗೆ ತಂದು ಒಗೆಯಲಾಗಿತ್ತು.

ಆ ಕಾಲಕ್ಕೆ ನೀರು, ಬೆಳಕು, ನೆರಳಿನ ಯಾವುದೇ ನಾಗರಿಕ ಸೌಲಭ್ಯಗಳ ಸುಳಿವೂ ಇಲ್ಲದ ಈ ಬರಡು ಬಂಜರು ನೆಲದಲ್ಲಿ ದಲಿತರು, ಹಿಂದುಳಿದವರು, ಮುಸಲ್ಮಾನರು ಕಾಲಕ್ರಮೇಣ ತಮ್ಮ ಬಡಬದುಕುಗಳನ್ನು ಕಟ್ಟಿಕೊಂಡರು.

ಪೂರ್ವ ದೆಹಲಿಯ ತ್ರಿಲೋಕಪುರಿ, ಕಲ್ಯಾಣಪುರಿ ಹಾಗೂ ವಾಯುವ್ಯ ದೆಹಲಿಯ ಮಂಗೋಲ್ ಪುರಿಯಲ್ಲಿ ಐದಾರೂ ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ನೆಲೆಸಿದ್ದಾರೆ. ಇವರೆಲ್ಲ ತಮಿಳುನಾಡಿನಿಂದ ವಲಸೆ ಬಂದವರು. ತಮಿಳರ ಪಾಲಿಗೆ ಇವರು ’ಕನ್ನಡಕಾರ’ರು. ಆದರೆ ಕರ್ನಾಟಕದ ಕನ್ನಡಿಗರಿರಲಿ, ಕರ್ನಾಟಕದ ಕನ್ನಡಿಗರು ಕೂಡ ಈ ’ಕನ್ನಡಕಾರರ’ ಇರವನ್ನೇ ಅರಿಯರು. ಹೊರನಾಡ ಕನ್ನಡಿಗರು ಎಂಬ ಸ್ಥಾನಮಾನವಾಗಲಿ, ಅದರ ವ್ಯಾಖ್ಯೆಯಾಗಲಿ ಇವರ ಬಳಿ ಸುಳಿದೇ ಇಲ್ಲ. 1948ರಷ್ಟು ಹಿಂದೆಯೇ ಹುಟ್ಟಿದ ಹೆಸರಾಂತ ಸಂಸ್ಥೆ ದೆಹಲಿ ಕರ್ನಾಟಕ ಸಂಘ. ಕೊಳೆಗೇರಿಯ ಈ ಬಡ ದೆಹಲಿ ’ಕನ್ನಡಕಾರ’ರ ಸಂಗತಿ ಸಂಘದ ಗಮನಕ್ಕೆ ಬಂದು ಐದಾರು ವರ್ಷಗಳೇ ಉರುಳಿವೆ. ಸಂಘ ಅವರ ಕುರಿತು ಕನಿಷ್ಠ ಕುತೂಹಲವನ್ನೂ ತೋರಿಲ್ಲ. ಅವರೂ ನಾವು ಕನ್ನಡಿಗರೆಂದು ಹೇಳಿಕೊಂಡು ಸಂಘದ ಬಳಿ ಸಾರುವ ಸಾಹಸ ಮಾಡಿಲ್ಲ.

ಡೆಲ್ಲಿ ಕನ್ನಡಸಂಘ ನಮ್ಮನ್ನು ಕರೆದಿಲ್ಲ, ನಾವು ಅವರ ಬಳಿ ಹೋಗಿಲ್ಲ. ತಮಿಳು ಸಂಘಂಗೆ ಹೋಗಿದ್ದೇವೆ. ಸದಸ್ಯರೂ ಆಗಿದ್ದೇವೆ. ಮಕ್ಕಳು ಡೆಲ್ಲಿಯ ತಮಿಳು ಶಾಲೆಗಳಿಗೆ ಹೋಗಿ ಕಲೀತಾರೆ. ತಮಿಳುನಾಡಿನಲ್ಲಿ ನಮ್ಮ ಸಂಖ್ಯೆ ಹತ್ತಿಪ್ಪತ್ತು ಲಕ್ಷವಾದರೂ ಇದ್ದೀತು ಎನ್ನುತ್ತಾರವರು.

ಬಹುತೇಕ ಮನೆಗೆಲಸದ ಪಾತ್ರೆ ತಿಕ್ಕುವವರಾಗಿ, ಅಡುಗೆ ಮಾಡುವವರಾಗಿ, ಡ್ರೈವರುಗಳಾಗಿ, ನೆರೆಯ ನೋಯ್ಡಾದ ಫ್ಯಾಕ್ಟರಿಗಳಲ್ಲಿ ಕೂಲಿಕಾರರಾಗಿ, ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಹೂವು ಮಾರುವವರಾಗಿ, ಸಣ್ಣಪುಟ್ಟ ವ್ಯಾಪಾರ ಮಾಡುವವರಾಗಿ ಹೊಟ್ಟೆ ಹೊರೆಯುತ್ತಿದ್ದಾರೆ ಈ ಕನ್ನಡಿಗರು. ಉತ್ತಮ ಉದ್ಯೋಗಗಳಲ್ಲಿ ನೆಮ್ಮದಿ ಕಂಡುಕೊಂಡಿರುವವರ ಸಂಖ್ಯೆ ಬೆರಳೆಣಿಕೆಯದು.

ಇವರ ಮನೆಮಾತು ಕನ್ನಡ. ನೂರಕ್ಕೆ ಅರವತ್ತು ಎಪ್ಪತ್ತು ಪದಗಳು ಕನ್ನಡ. ಉಳಿದವು ತಮಿಳು. ತಮ್ಮ ಮಾತೃಭಾಷೆ ಕನ್ನಡವೆಂದೇ ಸಾರಿ ಹೇಳುತ್ತಾರೆ. ತಮಿಳುನಾಡಿನಲ್ಲಿ ಇವರನ್ನು ’ಕನ್ನಡ ದೇವಾಂಗ ಚೆಟ್ಟಿಯಾರ್’ ಎಂದೇ ಕರೆಯಲಾಗುತ್ತದೆ. ನೇಯುವುದು ಇವರ ಮೂಲ ಕಸುಬು. 1967ರ ಆಸುಪಾಸಿನಲ್ಲಿ ದಿಲ್ಲಿಗೆ ವಲಸೆ ಬಂದವರಿವರು. ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿದ ಡಿ.ಎಂ.ಕೆ. ವಿದ್ಯುತ್ ಚಾಲಿತ ಮಗ್ಗಗಳ ಆರಂಭಕ್ಕೆ ಅನುಮತಿ ನೀಡಿದ ನಂತರ ನಿರ್ಗತಿಕರಾದ ಕೈಮಗ್ಗದ ನೇಕಾರರು ಇವರು. ವಿದ್ಯುತ್ ಮಗ್ಗಗಳು ತಮ್ಮ ಕಸುಬಿಗೆ ನೀಡಿದ ಕೊಡಲಿಯೇಟನ್ನು ಭರಿಸಲಾರದೆ ಹೊಟ್ಟೆ ಹೊರೆಯಲು ದಿಲ್ಲಿ, ಮುಂಬಯಿ, ಬೆಂಗಳೂರು ನಗರಗಳ ರೈಲುಗಳನ್ನು ಹತ್ತಿದ್ದವರು.

ತಿಂಗಳುಗಳು, ವರ್ಷದೊಪ್ಪತ್ತಿನ ಅಂತರದಲ್ಲಿ ಅಂದಿನ ದಿನಗಳಲ್ಲಿ ದಿಲ್ಲಿಗೆ ಬಂದಿಳಿದ ಕುಟುಂಬಗಳು ಹತ್ತಿರಹತ್ತಿರ ಸಾವಿರ ಎನ್ನುತ್ತಾರೆ ನಾಗಲಿಂಗಂ ಕನ್ನಡ ದೇವಾಂಗ ಚೆಟ್ಟಿಯಾರ್. ಒಂಬತ್ತು ವರ್ಷದ ಹುಡುಗನಾಗಿ ಪಂಜಾಬಿ ಚಹಾದ ಅಂಗಡಿಯಲ್ಲಿ ಕೆಲಸ ಮಾಡಿ ದಿಲ್ಲಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಅವರು.

ನಾಗಲಿಂಗಂ ಅವರನ್ನು ಎದುರಿಗೆ ಕೂರಿಸಿಕೊಂಡು ಮಾತನಾಡಿದರೆ ಅವರ ಕನ್ನಡದಲ್ಲಿ ನೂರಕ್ಕೆ ಅರವತ್ತು ಪದಗಳು ಮಾತ್ರವೇ ನಮಗೆ ತಿಳಿದಾವು. ಬೇರೆ ಕಸುಬೇ ಗೊತ್ತಿಲ್ಲದ ಈ ’ಕನ್ನಡಕಾರ’ರು, ದಿಲ್ಲಿಗೆ ಬಂದ ಆರಂಭದ ದಿನಗಳಲ್ಲಿ ನೆರೆಹೊರೆಯ ಪಾಣಿಪತ್, ಸೋನೆಪತ್, ಘಾಜಿಯಾಬಾದುಗಳ ಕೈಮಗ್ಗಗಳಲ್ಲಿ ಕೂಲಿ ಮಾಡುತ್ತಾರೆ. ತಮಿಳುನಾಡಿನಲ್ಲಿ ತಾವು ನೇಯುತ್ತಿದ್ದ ಸೀರೆಗಳ ಬದಲಿಗೆ ಇಲ್ಲಿ, ದುಪ್ಪಟಿ, ಕಂಬಳಿ ನೇಯ್ದರಂತೆ. ಈ ಮಗ್ಗಗಳೂ ಅಳಿದ ನಂತರ ಬಾಣಲೆಯಿಂದ ಬೆಂಕಿಗೆ ಬಿದ್ದು ಬೇರೆ ಅನ್ನದ ದಾರಿಗಳನ್ನು ಹುಡುಕಿಕೊಳ್ಳುತ್ತಾರೆ.

ಕರೋಲ್ ಬಾಗಿನ ಝುಗ್ಗಿ ಝೋಪಡಿಗಳಿಂದ ತೆರವು ಮಾಡಿಸುವ ಸರ್ಕಾರ ತ್ರಿಲೋಕಪುರಿ, ಮಂಗೋಲ್‌ಪುರಿ, ಇಂದ್ರಾಪುರಿಯಲ್ಲಿ ಪುಟ್ಟ ನಿವೇಶನ ನೀಡಿ ಸಾಗಹಾಕುತ್ತದೆ. ಇಂದಿನ ತ್ರಿಲೋಕಪುರಿಯಲ್ಲಿ ನೆಲೆಸಿರುವ ’ಕನ್ನಡಕಾರರ’ ಕುಟುಂಬಗಳ ಸಂಖ್ಯೆ ನಾನೂರಕ್ಕೂ ಹೆಚ್ಚು. ಕನ್ನಡ ದೇವಾಂಗ ಚೆಟ್ಟಿಯಾರರ ಕುಲದೈವ ಚೌಡೇಶ್ವರಿ. ಆಕೆಗೊಂದು ದೊಡ್ಡದೇ ಆದ ಗುಡಿ ಕಟ್ಟಿದ್ದಾರೆ.

ಕರ್ನಾಟಕದ ಹಂಪಿಯ ದಯಾನಂದ ಸ್ವಾಮಿ ಸರಸ್ವತಿ ಅವರ ಮಠವೇ ಇವರ ಮುಖ್ಯ ಮಠ. ತಮಿಳುನಾಡಿನಲ್ಲಿ ಕನ್ನಡ ದೇವಾಂಗ ಚೆಟ್ಟಿಯಾರರ ಗುಡಿಗಳ ಉದ್ಘಾಟನೆಗೆ ದಯಾನಂದ ಸ್ವಾಮಿ ಹೋಗುತ್ತಾರೆ. ತಮಿಳುನಾಡಿನಲ್ಲಿ ಇವರ ಸಂಸ್ಕೃತಿಯೇ ಬೇರೆ, ತಮಿಳು ಸಂಸ್ಕೃತಿಯೇ ಬೇರೆ. ಉಗಾದಿ ಕನ್ನಡದವರ ಹಬ್ಬವೆಂದು ಇವರಿಗೆ ಗೊತ್ತು. ಆದರೆ ಆಚರಿಸುವುದಿಲ್ಲ. ಯಾಕೆ ಅಂತ ಗೊತ್ತಿಲ್ಲ.

ತಮಿಳುನಾಡಿನಲ್ಲಿ ಕನ್ನಡಿಗ ದೇವಾಂಗ ಚೆಟ್ಟಿಯಾರರು ತಾವು ವಾಸಿಸುವ ಪ್ರದೇಶಗಳನ್ನು ಎರಡು ಸೀಮೆಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅರವತ್ತೂರು, ಮೂವತ್ತೂರು ಎಂಬ ಎರಡು ಸೀಮೆಗಳಲ್ಲಿ ಅರವತ್ತು ಮತ್ತು ಮೂವತ್ತು ಒಟ್ಟು ತೊಂಬತ್ತು ನಾನಾ ಊರುಗಳಲ್ಲಿ ಇವರ ವಾಸ.

ನೂರಾರು ವರ್ಷಗಳಿಂದ ತಮಿಳುನಾಡಿನಲ್ಲಿ ಬದುಕಿರುವ ಈ ಜನಾಂಗಕ್ಕೆ ತಮ್ಮ ಬೇರುಗಳ ಕುರಿತ ಅರಿವಿಲ್ಲ. ತಾವು ತಮಿಳುನಾಡಿನ ಮೂಲನಿವಾಸಿಗಳೇ ಅಥವಾ ವಲಸೆ ಬಂದವರೇ ಎಂಬುದು ಗೊತ್ತಿಲ್ಲ. ಮನೆಮನೆಗಳ ಹೊಸ್ತಿಲುಗಳ ಒಳಗೆ ಕನ್ನಡವನ್ನೂ, ಹೊರಗೆ ತಮಿಳನ್ನೂ ಮಾತಾಡುವ, ಶಾಲೆಗಳಲ್ಲಿ ಕನ್ನಡ ಕಲಿಯುವ ಅವಕಾಶವೇ ಇಲ್ಲದ, ಪತ್ರವ್ಯವಹಾರಗಳಲ್ಲಿ ಕನ್ನಡವನ್ನು ಬಳಸುತ್ತಿರುವ, ಆದರೆ ಅಂತಹ ಕನ್ನಡವನ್ನು ತಮಿಳು ಲಿಪಿಯಲ್ಲೇ ಬರೆಯುವ ಅನಿವಾರ್ಯ ಈ ’ಕನ್ನಡಕಾರ’ರದು.

ದಿಂಡಿಗಲ್, ಮಧುರೈ, ವಿರುಧನಗರ, ಶಿವಕಾಶಿ, ಸೇಲಂ, ಕೊಯಮತ್ತೂರು, ಈರೋಡು, ಕಾರೈಕುಡಿ, ಪ್ರದೇಶಗಳಲ್ಲಿ ನೆಲೆಸಿರುವ ಇವರಿಗೆ ವಿರುಧನಗರ ಜಿಲ್ಲೆಯ ಅರಪ್ಪುಕೋಟೈ ಎಂಬಲ್ಲಿ ತಮ್ಮದೇ ಜನಾಂಗ ನಡೆಸುವ ಶಿಕ್ಷಣ ಸಂಸ್ಥೆಗಳಿವೆ. ಆದರೆ ಅಲ್ಲಿ ಕನ್ನಡ ಕಲಿಸುವ ವ್ಯವಸ್ಥೆ ಇಲ್ಲ. ಅಲ್ಲಿ ಕನ್ನಡ ಅನ್ನ ಸಂಪಾದಿಸುವ ದಾರಿಯಲ್ಲ.


ಇದನ್ನೂ ಓದಿ: ರಾಜಕೀಯ ಮುಖಂಡರ ಆರ್‌ಎಸ್‌ಎಸ್ ವಿರೋಧವಷ್ಟೇ ಸಾಲದು; ವಿಷಪೂರಿತ ಸಿದ್ಧಾಂತವನ್ನು ತೊಲಗಿಸುವ ಹೋರಾಟಕ್ಕೆ ಸಜ್ಜಾಗಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...