Homeಕರ್ನಾಟಕತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ತೀವ್ರ ಬೆಲೆ ಏರಿಕೆಯಾದರೂ ಅನುದಾನ ಹೆಚ್ಚಳವಿಲ್ಲ: ಅರೆಹೊಟ್ಟೆಯಲ್ಲಿ ಶಾಲಾ ಮಕ್ಕಳು

ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 2020ರ ಜೂನ್‌ನಲ್ಲಿ ನಿಗಧಿಪಡಿಸಿದ ಅನುದಾನವನ್ನೇ ಈಗಲೂ ನೀಡಲಾಗುತ್ತಿದೆ.

- Advertisement -
- Advertisement -

ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಕೊಡುತ್ತಿರುವ ಮಧ್ಯಾಹ್ನದ ಬಿಸಿಯೂಟ ಹೊಟ್ಟೆ ತುಂಬ ಸಿಗದಂತಾಗಿದೆ. ಒಂದೇ ಸಮನೆ ಗ್ಯಾಸ್ ಸಿಲೆಂಡರ್, ದವಸ ಧಾನ್ಯ ಮತ್ತು ತರಕಾರಿ ಬೆಲೆ ಏರಿಕೆಯಾಗುತ್ತಿದ್ದರೂ ಹಿಂದಿನ ಅನುದಾನ ಪರಿಷ್ಕರಿಸದೆ ಸರಕಾರ ಉದಾಸೀನ ತೋರಿರುವುದರಿಂದ ಬಿಸಿಯೂಟ ಯೋಜನೆಯ್ನು ಶಾಲೆಗಳಲ್ಲಿ ನಿಭಾಯಿಸಲಾಗುತ್ತಿಲ್ಲವೆಂದು ಶಿಕ್ಷಕರು ಅಲವತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಮಂತ್ರಿಯಾದಿಯಾಗಿ ಜನಪ್ರತಿನಿಧಿಗಳೆಲ್ಲ ಇದು ತಮಗೆ ಸಂಬಂಧಿಸಿದ ಸಂಗತಿ ಅಲ್ಲವೆಂಬಂತೆ ಇರುವುದರಿಂದ ವಿಧ್ಯಾರ್ಥಿಗಳು ಅರೆ-ಬರೆ ಉಂಡೇಳುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರತಿ ಮಗುವಿನ ಲೆಕ್ಕಾಚಾರದಲ್ಲಿ ಪ್ರತಿ ವರ್ಷ ಬಿಸಿಊಟದ ದರ ಸರ್ಕಾರ ಪರಿಷ್ಕರಿಸುವುದು ಪದ್ದತಿ. ಜೂನ್ 2020ರಲ್ಲಿ ಶೇ.10.99ರಷ್ಟು ಅನುದಾನ ಜಾಸ್ತಿ ಮಾಡಲಾಗಿತ್ತು. ಈ ದರದಂತೆ 1ರಿಂದ 5ನೇ ತರಗತಿ ವರೆಗಿನ ಒಂದು ಮಗುವಿಗೆ 4.97ರೂ. ಖರ್ಚು ಮಾಡಬಹುದು. 6ರಿಂದ 10ನೇ ತರಗತಿ ಮಕ್ಕಳಿಗೆ ತಲಾ 7.45ರೂ ವ್ಯಯಿಸಬೇಕು. ಅಡುಗೆ ಅನಿಲದಿಂದ, ಎಣ್ಣೆ ಬೇಳೆಕಾಳಿನ ತನಕದ ಎಲ್ಲ ಖರ್ಚು-ವೆಚ್ಚ ಹೆಚ್ಚಾಗಿದ್ದರೂ ಈ ವರ್ಷ ಅನುದಾನ ಮಾತ್ರ ಸರ್ಕಾರ ಹೆಚ್ಚಿಸಿಲ್ಲ. ಒಂದರಿಂದ ಐದನೇ ತರಗತಿ ವರೆಗಿನ ಒಂದು ಮಗುವಿಗೆ 2 ರೂಗೆ ತೊಗರಿ ಬೇಳೆ (20 ಗ್ರಾಂ), 1.36ರೂಗೆ ತರಕಾರಿ (50 ಗ್ರಾಂ), 1.73ರೂಗೆ ಎಣ್ಣೆ (5 ಗ್ರಾಂ), 37 ಪೈಸೆಗೆ ಸಾಂಬಾರ್ ಪುಡಿ, 3 ಪೈಸೆಗೆ ಉಪ್ಪು (2ಗ್ರಾಂ), ಇಂಧನಕ್ಕೆ 79 ಪೈಸೆ ಖರ್ಚು ಮಾಡಲಾಗುತ್ತಿದೆ.

ಅದೇ ರೀತಿಯಾಗಿ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ 2.95ರೂಗೆ ತೊಗರಿಬೇಳೆ (30 ಗ್ರಾಂ), 2.04ರೂಗೆ ತರಕಾರಿ (75 ಗ್ರಾಂ), 54ಪೈಸೆಗೆ ಸಾಂಬಾರ್ ಪುಡಿ, 67 ಪೈಸೆಗೆ ಎಣ್ಣೆ (7.5 ಗ್ರಾಂ), 6 ಪೈಸೆಗೆ ಉಪ್ಪು(4ಗ್ರಾಂ), 1.19ರೂಗೆ ಇಂಧನದ ಲೆಕ್ಕದಲ್ಲಿ ಖರ್ಚು ಮಾಡಬೇಕೆಂದು ಸರ್ಕಾರಿ ಸುತ್ತೋಲೆ ಹೆಳುತ್ತದೆ. ವಾರಕ್ಕೊಮ್ಮೆ ಪಾಯಸ-ಹುಗ್ಗಿ ಮಕ್ಕಳಿಗೆ ಹಂಚಬೇಕು. ಇದಕ್ಕೆ ಪ್ರತ್ಯೇಕ ಅನುದಾನವಿಲ್ಲ. ಬಿಸಿಯೂಟ ಖಾತೆಯಿಂದ ನಿಗದಿತ ಪ್ರಮಾಣಕ್ಕಿಂತ ಒಂದು ಪೈಸೆ ಹೆಚ್ಚು ತೆಗೆಯುವಂತಿಲ್ಲ. ಆದರೆ ಈ ದರದಲ್ಲಿ ಬಿಸಿಯೂಟ ತಯಾರಿಸುವುದು ಹಾಲಿ ದುಬಾರಿ ದಿನ ಮಾನದಲ್ಲಿ ಅಸಾಧ್ಯದ ಮಾತೆಂಬ ಸಾಮಾನ್ಯ ಜ್ಞಾನ ಸರಕಾರ ನಡೆಸುವವರಿಗೆ ಇರಬೇಡವೆ ಎಂದು ಪಾಲಕರು ಪ್ರಶ್ನಿಸುತ್ತಾರೆ.

ಸರಕಾರ ನಿಗದಿಸಿರುವ ಈ ತಲಾ ಖರ್ಚಿನಲ್ಲಿ ಮಕ್ಕಳು ಕಡಿಮೆ ಸಂಖ್ಯೆಯಲ್ಲಿರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲಿ ಬಿಸಿಯೂಟ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಮೊದಲು ಶಾಲೆಗಳಿಗೆ ತಿಂಗಳಿಗೆ ಎರಡು ಅನಿಲ ಸಿಲೆಂಡರ್ ಕೊಡಲಾಗುತ್ತಿತ್ತು. ಈಗ ಅದರ ವೆಚ್ಚ ನೀಡಲಾಗುತ್ತಿದ್ದು ಶಿಕ್ಷಕರೆ ಗ್ಯಾಸ್‌ ತಂದುಕೊಳ್ಳಬೇಕಿದೆ. ಸರಕಾರ ಕೊಡುವ ಅನುದಾನದಲ್ಲಿ 910ರೂಗೆ ಗ್ಯಾಸ್ ಸಿಲೆಂಡರ್, ಕೆ.ಜಿ.ಗೆ 105 ರೂ.ಗಳ ತೊಗರಿ ಬೇಳೆ, ಕನಿಷ್ಟವೆಂದರೂ 40 ರಿಂದ 50 ರೂ.ಗಳಿರುವ ಕೆಜಿ ಈರುಳ್ಳಿ, ಟೊಮೆಟೊ, ಇನ್ನಿತರ ತರಕಾರಿ ಮತ್ತು ಲೀಟರಿಗೆ 160 ರೂ.ಗಳ ಖಾದ್ಯ ತೈಲಕ್ಕೆ ವಿಂಗಡಿಸಿ ಈ ಬೆಲೆ ಏರಿಕೆಯ ದಿನಗಳಲ್ಲಿ ಬಿಸಿಯೂಟ ತಯಾರಿಕೆ ಸಾಧ್ಯವಿಲ್ಲವೆಂದು ನಿರ್ವಾಹಕರು ಹೇಳುತ್ತಾರೆ.

“ಅಡುಗೆ ಅನಿಲ ಸಮಸ್ಯೆಯಿಂದ ಬಿಸಿಯೂಟ ತಯಾರಿಸುವುದು ದೊಡ್ಡ ಸವಾಲಿನ ಸಂಗತಿಯೆಂಬಂತಾಗಿದೆ. 50 ಮಕ್ಕಳಿರುವ ಶಾಲೆಗೆ ತಿಂಗಳಿಗೆ ಒಂದು ಸಿಲೆಂಡರ್ ಮತ್ತು 100 ಮಕ್ಕಳಿರುವ ಶಾಲೆಗಳಿಗೆ ತಿಂಗಳಿಗೆ ಎರಡು ಸಿಲಿಂಡರ್ ನಿಗದಿಪಡಿಸಲಾಗಿದೆ. 20ರಿಂದ 30 ಮಕ್ಕಳಿರುವ ಶಾಲೆಗಳೆ ಹೆಚ್ಚಿವೆ. ನಮ್ಮದು ಸಹ ಅಂತಹ ಶಾಲೆಯಾಗಿದ್ದು ಇಲ್ಲಿ 16-17 ದಿನಕ್ಕೆ ಸಿಲಿಂಡರ್ ಖಾಲಿಯಾಗುತ್ತಿದೆ. ಉಳಿದ ದಿನಗಳ ಸಮಸ್ಯೆಗೆ ನಾವೆ ತಲೆಕೊಡಬೇಕಾಗಿದೆ” ಎಂದು ಹೆಸರು ಹೇಳಲು ಇಚ್ಛಿಸಿದ ಶಾಲಾ ಮುಖ್ಯೋಪಾಧ್ಯಾಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಬಿಸಿ ಊಟ ತಯಾರಿಸುವ ಮಹಿಳಾ ನೌಕರರಿಗೆ 2021ರ ಜೂನ್ ತಿಂಗಳಿನಿಂದಲೂ ಸಂಬಳ ನೀಡಿಲ್ಲ. ಈ ಬಗ್ಗೆ ಹಲವು ಹೋರಾಟಗಳು ನಡೆದರೂ ಸರ್ಕಾರ ಮಾತ್ರ ಕಡೆಗಣಿಸುತ್ತಲೇ ಇದೆ.

ಬಿಸಿಯೂಟ ತಯಾರಿಕೆಯಲ್ಲಾಗುತ್ತಿರುವ ತೊಂದರೆ-ತೊಡಕು ನಿವಾರಣೆಗೆ ಜನ ಪ್ರತಿನಿಧಿಗಳು ಅದರಲ್ಲೂ ಶಾಸಕರು ಇಚ್ಚಾ ಶಕ್ತಿ ತೋರಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.


ಇದನ್ನೂ ಓದಿ: ಮೋದಿ ಅಭಿವೃದ್ಧಿ ವಾಹನವು ರಿವರ್ಸ್ ಗೇರ್‌ನಲ್ಲಿದೆ ಹಾಗೂ ಅದರ ಬ್ರೇಕ್‌ ವಿಫಲವಾಗಿದೆ: ರಾಹುಲ್‌ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...