Homeನ್ಯಾಯ ಪಥಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಲ್ಲಿ ಬೆಳದುಬಂದ ”ಒಡನಾಡಿ ಸಬಿಹಾ”

ಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಲ್ಲಿ ಬೆಳದುಬಂದ ”ಒಡನಾಡಿ ಸಬಿಹಾ”

- Advertisement -
- Advertisement -

ಪ್ರೊ.ಸಬಿಹಾ ಭೂಮಿಗೌಡ ಅವರು ಎಂದೂ ಪ್ರಚಾರದ ಮುನ್ನೆಲೆಯಲ್ಲಿ ಇದ್ದವರಲ್ಲ. ಕವಿತೆ, ಕತೆ, ಅಂಕಣ, ಪ್ರಬಂಧ, ವಿಮರ್ಶೆ, ಸಂಶೋಧನೆ ಹೀಗೆ ಹತ್ತು ಹಲವು ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಅಧ್ಯಾಪನ ಮತ್ತು ಆಡಳಿತದ ಕೆಲಸಗಳನ್ನು ನಿರ್ವಹಿಸಿದವರು. ಚಳವಳಿ, ಸಂಘಟನೆಗಳಲ್ಲಿ ನಂಟು ಬೆಳೆಸಿ ಅವುಗಳಲ್ಲಿ ನಂಬಿಕೆಯಿಟ್ಟು ಬೆಳೆದವರು. ನವೆಂಬರ್ 14 ರಂದು ಮಂಗಳೂರಿನಲ್ಲಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ಅಭಿನಂದನೆಯು ಸಹೋದರಿತ್ವದ ವಿಸ್ತರಿತ ನೆಲೆಯಲ್ಲಿ ಆಗುತ್ತಿದೆ ಎಂಬುದೊಂದು ವಿಶೇಷ. ಹೆಂಗೆಳೆಯರು ಸೇರಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ “ಒಡನಾಡಿ ಸಬಿಹಾ” ಎಂಬ ಅಭಿನಂದನಾ ಹೊತ್ತಗೆಯೂ ಅನಾವರಣಗೊಳ್ಳಲಿದೆ.

ಎಂಬತ್ತರ ದಶಕದ ಅವಿಭಜಿತ ದಕ್ಷಿಣ ಕನ್ನಡದ ಬೆಚ್ಚನೆಯ ಉದಾರವಾದೀ ಸಾಮಾಜಿಕ ಪರಿಸರದಲ್ಲಿ ಬೆಳೆದವರು ಸಬಿಹಾರ ತಂದೆ ಪ್ರೊ. ಎಂ.ಆರ್.ಗಜೇಂದ್ರಗಡ ಅವರು ಉತ್ತರ ಕರ್ನಾಟಕ ಮೂಲದವರು. ವಿಜ್ಞಾನ ಪ್ರಾಧ್ಯಾಪಕರಾಗಿ, ಹುಟ್ಟಿನಿಂದ ಮುಸಲ್ಮಾನರಾಗಿದ್ದ ಅವರು ಸಂಸ್ಕೃತದ ಸಾಲನ್ನು ಪುಂಖಾನುಪುಂಖವಾಗಿ ಉದ್ಧರಿಸುತ್ತಾ ರಾಮಾಯಣ, ಮಹಾಭಾರತಗಳನ್ನು ಉದಾಹರಿಸುತ್ತಾ ಭಾಷಣ ಮಾಡಿ ಬೆರಗು ಹುಟ್ಟಿಸುತ್ತಿದ್ದರು. ಒಂದು ರೀತಿಯ ಸ್ವಾತಂತ್ರ್ಯ ಮತ್ತು ನಿರ್ಬಂಧಗಳ ಸಂಗಮದಂತಿದ್ದ ಮನೆಯ ವಾತಾವರಣದಲ್ಲಿ ಬೆಳೆದ ಸಬಿಹಾ, ಕನ್ನಡ ಎಂ.ಎ ಮಾಡಿದ್ದು ಅವರ ಬದುಕಿನ ತಿರುವಿಗೆ ಕಾರಣ. ಎಂ.ಎ ಮುಗಿಸುತ್ತಿದ್ದಂತೆ ಮಂಗಳೂರು ವಿ.ವಿಯಲ್ಲಿ ದೊರಕಿದ ಉಪನ್ಯಾಸಕ ವೃತ್ತಿ, ಭೂಮಿಗೌಡರೊಂದಿಗಿನ ಅಂತರ್‌ಧರ್ಮೀಯ ವಿವಾಹ, ಸಾಹಿತ್ಯ ಮತ್ತು ಚಳವಳಿಗಳೆಡೆಗಿನ ಆಸಕ್ತಿಯಿಂದ ವಿಸ್ತಾರವಾದ ಚಿಂತನೆಗಳು ಮತ್ತು ಗೆಳೆಯರ ಬಳಗ ಅವರನ್ನು ರೂಪಿಸಿದೆ.

ಸಬಿಹಾ ಅವರು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿದ್ದಾಗ ಮಾಡಿದ ನೇಮಕಾತಿಗಳಲ್ಲಿದ್ದ ಪಾರದರ್ಶಕತೆ ಇಂದಿನ ದಿನಗಳಲ್ಲಿ ಬಹಳ ಮಹತ್ವದ ಸಂಗತಿಯಾಗಬೇಕಿತ್ತು. ಆದರೆ ಅದು ಪ್ರಚಾರ ಪಡೆದಿದ್ದು ಕಡಿಮೆ. ಮೂವತ್ಮೂರು ಜನ ಉಪನ್ಯಾಸಕರನ್ನು ನೇಮಿಸಿಕೊಂಡಾಗಿನ ಸಂದರ್ಶನದಿಂದ ಹಿಡಿದು ಪ್ರತಿ ವಿವರವನ್ನೂ ವಿಡಿಯೋ ಮಾಡಿ ಎಲ್ಲರಿಗೂ ಆ ಕ್ಷಣದಲ್ಲೇ ವಿವರ ಲಭ್ಯವಿರುವಂತೆ ಮಾಡಲಾಗಿತ್ತು. ಈಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಇದು ಅಪರೂಪದ ವಿದ್ಯಮಾನ. ಹಾಗೆಯೇ ತನ್ನ ಅಧಿಕಾರದ ಅವಧಿಯಲ್ಲಿ ಅಲ್ಲಿನ ಬೋಧಕೇತರ ಸಿಬ್ಬಂದಿಗಳಿಗೆ ಉಂಟಾಗುತ್ತಿದ್ದ ಆರ್ಥಿಕ ಶೋಷಣೆಯನ್ನು ತಪ್ಪಿಸಿದ್ದು ಕೂಡಾ ಅವರ ಆದ್ಯತೆಯನ್ನು ಹೇಳುತ್ತದೆ. ಇದೆಲ್ಲವೂ ಇಂದಿನ ದಿನಗಳಲ್ಲಿ ಮಹತ್ವದ ಸಂಗತಿಯಾಗಿ ಮುನ್ನೆಲೆಗೆ ಬರದೇ ಇರುವುದು ವಿಶ್ವವಿದ್ಯಾಲಯಗಳ ಒಟ್ಟಾರೆ ಕುಸಿತ ಮಾತ್ರವಲ್ಲ, ಸಾಮಾಜಿಕ ಬದುಕಿನ ಕುಸಿತವೂ ಸಾಧಾರಣ ಸಂಗತಿಯೆಂಬಂತೆ ಸ್ವೀಕೃತವಾಗಿರುವುದರ ಸಂಕೇತವೂ ಆಗಿದೆ.

ಮಹಿಳಾ ಚರಿತ್ರೆಯನ್ನು ಮಹಿಳೆಯರೇ ಬರೆಯ ಬೇಕಿರುವ ಅನಿವಾರ್ಯತೆಯಿದೆ. ಈ ದೃಷ್ಟಿಯಿಂದ ಮಹಿಳೆಯರು ಮುಂದೆ ನಿಂತು ಮಾಡುತ್ತಿರುವ ಇಂತಹ ಕೆಲಸಗಳನ್ನು ಗುರುತಿಸಬೇಕಿದೆ. ಕನ್ನಡ ನಾಡಿನ ಬೇರೆ ಬೇರೆ ವಲಯಗಳಲ್ಲಿ ಹೀಗೆ ಮಹಿಳೆಯರೇ ಅಭಿನಂದನಾ ಗ್ರಂಥಗಳನ್ನು ಹೊರತರುತ್ತಿದ್ದಾರೆ. ಇವುಗಳಲ್ಲಿ ದಶಕಗಳ ಮಹಿಳಾ ಸಾಹಿತ್ಯವನ್ನು ಅವಲೋಕಿಸುವ ಕೆಲಸವೂ ನಡೆದಿದೆ. ಈ ಗ್ರಂಥದಲ್ಲಿ 2000ಇಸವಿಯ ನಂತರದಲ್ಲಿನ ಇಪ್ಪತ್ತು ವರ್ಷಗಳಲ್ಲಿನ ವಿವಿಧ ಪ್ರಕಾರಗಳ ಮಹಿಳಾ ಸಾಹಿತ್ಯದ ಅವಲೋಕನಕ್ಕೆ ಸಂಬಂಧಿಸಿದ ಲೇಖನಗಳಿವೆ. ಹಾಗೆಯೇ ಸಬಿಹಾರ ವಿವಿಧ ಪ್ರಕಾರಗಳ ಸಾಹಿತ್ಯ ಕೃತಿಗಳ ಅವಲೋಕನವೂ ಇದೆ. ಜೊತೆಗೆ ಅವರ ಒಡನಾಡಿಗಳ ಆತ್ಮೀಯ ಬರೆಹ, ಸಂದರ್ಶನಗಳಿವೆ ಅಭಿನಂದನಾ ಗ್ರಂಥಗಳಿಗೆ ಇಂತದೇ ಒಂದು ಸ್ವರೂಪ ಅಂತೇನೂ ಇರಬೇಕಾಗಿಲ್ಲ. ಅದು ತನ್ನಷ್ಟಕ್ಕೆ ತಾನೇ ವಿಶಿಷ್ಟತೆಯನ್ನು ಒಳಗೊಳ್ಳಬಹುದು. ಅಥವಾ ಕೇವಲ ವ್ಯಕ್ತಿಯ ವೈಭವೀಕರಣವೋ, ಭಕ್ತಿಯೋ, ಅಭಿಮಾನವೋ ಆಗಿ ಅವುಗಳ ಕುರುಹಾಗಿ ಉಳಿಯಬಹುದು. ಆದರೆ, ಅಷ್ಟೇ ಆಗಿ ಉಳಿಯಬಾರದು ಎಂಬ ಎಚ್ಚರ ಈ ಕೃತಿಯಲ್ಲಿದೆ. ಅದಕ್ಕಾಗಿ ಇದು ಇತರ ಕೃತಿಗಳಿಗಿಂತ ಭಿನ್ನವಾಗುವ ಹೆಜ್ಜೆಯೊಂದನ್ನು ಇರಿಸಿದೆ. ಅದೆಂದರೆ, ಇದರಲ್ಲಿ ಕರ್ನಾಟಕದ ಚಳವಳಿಗಳು ಎಂಬ ದೀರ್ಘವಾದ ಭಾಗವೊಂದಿದೆ. ಇದರಲ್ಲಿ ನಾಡಿನಲ್ಲಿ ನಡೆದ ಎಲ್ಲ ರೀತಿಯ ಚಳವಳಿಗಳನ್ನೂ ದಾಖಲಿಸಲಾಗಿದೆ. ಸುಮಾರು ನೂರು ಪುಟಗಳನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಇದರಲ್ಲಿ ಮಹಿಳಾ ಚಳವಳಿ, ದಲಿತ ಚಳವಳಿ, ಪರಿಸರ ಚಳವಳಿ, ಸಾಹಿತ್ಯ ಚಳವಳಿ, ರೈತ ಚಳವಳಿ, ಮಾರ್ಕ್ಸ್‌ವಾದಿ ಚಳವಳಿಗಳು, ಚಳವಳಿಯಾಗಿ ಮಹಿಳಾ ಅಧ್ಯಯನ, ಕೋಮುಸೌಹಾರ್ದ ಚಳವಳಿ, ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಯ ಸಮೀಕ್ಷೆ ಹೀಗೆ ಇದು ವಿಸ್ತಾರವಾಗಿ ಹರಡಿಕೊಂಡಿದೆ.

ಹಾಗೆಯೇ ಎರಡು ದಶಕಗಳ ಮಹಿಳಾ ಸಾಹಿತ್ಯದ ಅವಲೋಕನವೂ ಕೂಡಾ, ಹೇಗೆ ಮಹಿಳಾ ಸಾಹಿತ್ಯವು ಭಿನ್ನ ಜೀವನ ನೋಟವನ್ನು ಕಟ್ಟಿಕೊಟ್ಟಿತು ಎಂಬೆಡೆಗೆ ಗಮನ ಹರಿಸುತ್ತದೆ. ಇಲ್ಲಿ ಎಲ್ಲಾ ಪ್ರಕಾರಗಳ ಕುರಿತು ಲೇಖನಗಳಿಲ್ಲವಾದರೂ, ಮಹಿಳೆಯು ಯಾವುದೇ ಪ್ರಕಾರದಲ್ಲಿ ಬದುಕಿನೆಡೆಗೆ ಹರಿಸುವ ನೋಟವು ಅಂತಿಮವಾಗಿ ಜೀವ ಕಾರುಣ್ಯವನ್ನು ಕಾಪಿಡುವೆಡೆಗೇ ಇರುವುದನ್ನು ಕಂಡುಕೊಳ್ಳುತ್ತವೆ. ತನ್ನ ಬದುಕೇ ಒಂದು ಅಗ್ನಿದಿವ್ಯವಾಗಿರುವಾಗಲೂ, ಆಕೆ ಹಣತೆಯಾದರೂ ಆದೇನು, ಕಾಡ್ಗಿಚ್ಚು ಆಗುವುದಿಲ್ಲ, ಕಿಚ್ಚು ಹಚ್ಚುವುದೂ ಇಲ್ಲ ಎಂಬ ನಿಲುವಿನವಳೇ ಆಗುವುದನ್ನು ಗುರುತಿಸುವುದು ಕೂಡಾ ಸ್ತ್ರೀಯರೇ ಬರೆದ ವಿಮರ್ಶೆಯಲ್ಲಿರುವುದನ್ನು ಕಾಣಬಹುದು. ನಿಜ. ಇದು ಅವಳ ಇದುವರೆಗಿನ ಆದ್ಯತೆ. ಇದು ಮುಂದೆಯೂ ಹೀಗೇ ಇರಬೇಕು ಎನ್ನುವುದಾದರೆ, ಸಾಮಾಜಿಕವಾದ ವಿಷಮ ವಿಷವು ಬಹಳ ವೇಗವಾಗಿ ಅವಳೆಡೆಗೆ ದಾಳಿ ಇಡುತ್ತಿರುವುದನ್ನು ಗುರುತಿಸಿ ಸ್ವತಃ ಅವಳೇ ಆ ಉರಿಗೆ ತುತ್ತಾಗದಂತೆ ತಡೆಯಬೇಕಾದ ಜರೂರು ಇಂದು ಅತಿ ಅಗತ್ಯವಾಗಿದೆ. ಇಂತಹ ಸನ್ನಿವೇಶವೂ ನಮ್ಮ ಮುಂದಿದೆ ಎಂಬ ಎಚ್ಚರವನ್ನೂ ಈ ಲೇಖನಗಳು ಹೊಂದಿವೆ.

ಸಬಿಹಾ ಅವರ ಸಾಹಿತ್ಯದ ಅವಲೋಕನದ ಲೇಖನಗಳೂ ಕೂಡ ಇಂತಹ ಜೀವನ್ಮುಖಿ ಆಶಯವನ್ನು ಗುರುತಿಸುತ್ತವೆ. ಅವರ ಕವಿತೆಗಳು ವ್ಯಕ್ತಿನೆಲೆಯಿಂದ ಹೊರಟು ಸಮಷ್ಟಿ ನೆಲೆಗೆ ಹೊರಳಿಕೊಳ್ಳುತ್ತವೆ. ಸುತ್ತಲಿನ ಅನುಭವಗಳೇ ರೂಪಕಗಳಾಗುತ್ತವೆ. ಮೂಕವಾಗಿರುವ ಅಡುಗೆ ಮನೆಯ ವಸ್ತುಗಳು, ಪರಿಕರಗಳು ಮಾತಾಡತೊಡಗಿ ಪ್ರತಿಮೆಗಳಾಗುತ್ತವೆ. ಹೆಣ್ಣಿನ ಸ್ವಗತವೇ ಸಂಗಾತವಾಗುವ ಪರಿಯದು. ಕುಕ್ಕರ್ ಎಂಬ ಅವರ ಕವಿತೆಯು ಧ್ವನಿಸುವುದು ಇದನ್ನೇ. ತನ್ನೆಲ್ಲಾ ಒತ್ತಡವನ್ನೂ ತನ್ನವರ ಹಸಿವನ್ನು ತಣಿಸುವುದಕ್ಕೇ ಬಳಸುವ ಕುಕ್ಕರ್ ಕೂಡಾ ಒಂದು ದಿನ ಸ್ಫೋಟಿಸುವ ಸಾಧ್ಯತೆಯನ್ನೂ, ಅದನ್ನು ಗ್ರಹಿಸದ ಜಡತೆಯನ್ನೂ ಒಟ್ಟಿಗೇ ಹೇಳುವ ಕವಿತೆಯಿದು. ಅವರ ಕವಿತೆಗಳಿಗಿಂತ ಭಿನ್ನವಾಗಿ ಅವರ ಕತೆಗಳಿವೆ. ಈ ಕತೆಗಳು ಒಂದು ಸಾಮುದಾಯಿಕ ಬದುಕನ್ನು ಧ್ಯಾನಿಸುತ್ತಿರುತ್ತವೆ. ಸಂಘರ್ಷವೇ ಮೌಲ್ಯವಾಗಿ ಹೊರಳಿಕೊಳ್ಳುತ್ತಿರುವ ಅಥವಾ ಹಾಗೆ ಹೊರಳಿಸಲಾಗುತ್ತಿರುವ ಸುತ್ತಲಿನ ವಿದ್ಯಮಾನದಿಂದ ಆತಂಕಿತವಾದ ಮನಸ್ಸು, ಇದಕ್ಕೆಲ್ಲ ಹದವಾದ ನೆಲ ಇಲ್ಲೇ ಇತ್ತಲ್ಲವೇ, ಅದರ ವಿಸ್ಮೃತಿಯು ತಂದೊಡ್ಡುವ ದುರಂತಗಳೇನು ಎಂಬೆಡೆಗೆ ಹೆಚ್ಚು ಆಸಕ್ತವಾಗುತ್ತದೆ. ಕೆಡಹುವ ದೈತ್ಯ ಶಕ್ತಿಯೆದುರು, ಕಟ್ಟುವ ಮೆಲುಧ್ವನಿಯೊಂದು ಇಲ್ಲಿ ಮುನ್ನೆಲೆಗೆ ಬರುತ್ತದೆ. ಇಂದಿಗೂ ಸೌಹಾರ್ದದ ಬೇರು ಉಳಿಸಿಕೊಂಡಿರುವ ಇಲ್ಲಿಯದೇ ನೆಲದ ಜೊತೆಗೆ, ತನ್ನೊಂದಿಗೇ ಬೆಳೆಯುತ್ತ ಬಂದ ತನ್ನದೇ ಪರಿಸರದಲ್ಲಿ ಹಿಂದೆ ಇದ್ದ ಬೇರು ಇಂದು ಟೊಳ್ಳಾಗಿ ಗೆದ್ದಲು ಹಿಡಿಸಿಕೊಳ್ಳುತ್ತಿರುವುದನ್ನು ದಿಗ್ಭ್ರಾಂತಿಯಿಂದ, ಹತಾಶೆಯಿಂದ ನೋಡುತ್ತಲೇ ಒಳಿತಿಗೆ ಕನಸುವ ಮನಸ್ಸು ಇಲ್ಲಿದೆ. ಪ್ರಬಂಧಗಳೂ ಕೂಡಾ ತನ್ನ ಸುತ್ತಲಿನ ಸಣ್ಣಸಣ್ಣ ಸಂಗತಿಯನ್ನೂ ಆಹ್ಲಾದಿಸುವ, ಆ ಆಹ್ಲಾದತೆಯೇ ಪ್ರತಿ ಬದುಕಿನ ಸೆಲೆಯಾಗಲಿ ಎಂದು ಬಯಸುವ ನೆಲೆಯಲ್ಲಿರುವುದನ್ನು ಕಾಣಬಹುದು.

ಸಬಿಹಾ ಅವರ ವ್ಯಕ್ತಿತ್ವವನ್ನು ರೂಪಿಸಿದ್ದು ಸ್ತ್ರೀವಾದದ ಓದು. ಅಕಡೆಮಿಕ್ ಆಸಕ್ತಿ ಮತ್ತು ಅವಶ್ಯಕತೆಯಾಗಿ ಜೊತೆಯಾದ ಸ್ತ್ರೀವಾದವು ಅವರ ಜೀವನ ನೋಟವನ್ನು ರೂಪಿಸುತ್ತಾ ಹೋಗಿದ್ದನ್ನು ಈ ಕೃತಿಯ ಬೇರೆ ಬೇರೆ ಬರಹಗಳು ದಾಖಲಿಸುತ್ತವೆ. ಸಬಿಹಾ ಅವರು ತಾವೇ ಹೇಳಿಕೊಂಡಂತೆ ’ತಾನೊಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ಸುತ್ತಲನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಪ್ರಜ್ಞಾಪೂರ್ವಕವಾಗಿ ತನ್ನನ್ನು ತಾನು ಕಟ್ಟಿಕೊಳ್ಳುತ್ತಾ ಹೋದೆ’ ಎನ್ನುವ ಮಾತು ಮುಖ್ಯವಾದುದು. ಯಾಕೆಂದರೆ, ಹೆಣ್ಣನ್ನು ಪ್ರಧಾನವಾಗಿ ಆಕ್ರಮಿಸಿಕೊಳ್ಳುವುದು ಕೀಳರಿಮೆ.

ಎಲ್ಲಾ ಅಕಡೆಮಿಕ್ ವಲಯದಲ್ಲೂ ಈ ಮೂವತ್ತು ನಲವತ್ತು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡ ಹೆಂಗಸರಿಗೆ ಆರಂಭದಲ್ಲಿ ತಮ್ಮನ್ನು ಇನ್ನೊಬ್ಬರೊಂದಿಗೆ, ಅದರಲ್ಲೂ ಗಂಡಸರ ಸಾಧನೆಗಳೊಂದಿಗೆ ಹೋಲಿಕೆ ಮಾಡಿ ಕೀಳರಿಮೆಗೆ ತಳ್ಳುವುದು ಅನುಭವಕ್ಕೆ ಬಂದೇ ಇರುತ್ತದೆ. ಆ ಅಂಗಿಯ ಅಳತೆಗೆ ತಮ್ಮನ್ನು ಹೊಂದಿಸಿಕೊಳ್ಳುವುದರಲ್ಲೇ ಕೆಲವು ವರ್ಷಗಳು ಕಳೆದುಹೋಗುತ್ತವೆ. ಆಮೇಲೆಯೇ ಇದಲ್ಲ ನಾನು ಆಗಬೇಕಾಗಿರುವುದು, ನನ್ನ ಅಳತೆ ನಾನೇ ಕಂಡುಕೊಳ್ಳಬೇಕು ಎಂಬಲ್ಲಿಗೆ ಅವಳು ತನ್ನದೇ ಪಥ ನಿರ್ಮಿಸಿಕೊಳ್ಳಲು ಸಾಧ್ಯವಾಗುವುದು. ಈ ಸವಾಲುಗಳು ವಿಭಾಗದಲ್ಲಿ ಉದ್ದಕ್ಕೂ ಒಬ್ಬಳೇ ಮಹಿಳೆಯಾಗಿ ತಾನು ಅನುಭವಿಸಿದ್ದನ್ನು ಅವರು ಹೇಳಿಕೊಂಡಿದ್ದಾರೆ. ಬಹುಶಃ ಅಚ್ಚುಕಟ್ಟುತನದ ಕೃತಿಯ ಮೂಲಕ ಅವರು ಇದನ್ನು ಗೆದ್ದಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಬಿಹಾ ಅವರನ್ನೂ ಸೇರಿಸಿಕೊಂಡು ಮಹಿಳೆಯರ ಅಭಿನಂದನಾ ಗ್ರಂಥಗಳ ಭಿನ್ನ ನಡೆಗಳು ಮುಖ್ಯವಾಗಿದೆ.

ಈ ಕೃತಿಯನ್ನು ದು.ಸರಸ್ವತಿ, ಆರ್.ಸುನಂದಮ್ಮ, ಓಂಕಾರ ಕಾಕಡೆ, ಎಚ್.ಎಸ್.ಅನುಪಮಾ ಸಂಪಾದಿಸಿಕೊಟ್ಟಿದ್ದಾರೆ. ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಮಂಗಳೂರು ಹಾಗೂ ಕವಿ ಪ್ರಕಾಶನ, ಕವಲಕ್ಕಿಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.

ಡಾ. ಸಬಿತಾ ಬನ್ನಾಡಿ

(ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಸಬಿತಾ ಅವರು ಕವಿ, ಲೇಖಕಿ ಮತ್ತು ಅಂಕಣಕಾರ್ತಿ. ’ಆಲಯವು ಬಯಲಾಗಿ’, ’ನಿರಿಗೆ’, ’ಗೂಡು ಮತ್ತು ಆಕಾಶ’ ಅವರ ಕೆಲವು ಪ್ರಕಟಿತ ಪುಸ್ತಕಗಳು.)


ಇದನ್ನೂ ಓದಿ: ಭಾನುವಾರದ ಓದು; ದಯಾ ಗಂಗನಘಟ್ಟ ಅವರ ಕಥೆ ‘ಒಂದು ಕುರ್ಚಿಯ ಸಾವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೊಸಹೊಸ ಚಿಂತನಶೀಲ ವಿಷಯಗಳನ್ನು
    ಒಳಗೊಂಡ ವರದಿಯನ್ನು ಪ್ರಸ್ತುತ ಪಡಿಸುವಲ್ಲಿ
    ತಮ್ಮ. ಪ್ರಯತ್ನ ಕ್ಕೆ ಧನ್ಯವಾದಗಳು .

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...