Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

- Advertisement -
- Advertisement -

ಎಚ್.ಆರ್. ರಾಮಕೃಷ್ಣ ರಾವ್ ಬೆಂಗಳೂರಿನ ಮಾವಳ್ಳಿಯಲ್ಲಿ ಹುಟ್ಟಿ, ಹೊಳಲ್ಕೆರೆಯಲ್ಲಿ ಬೆಳೆದು ಬೆಂಗಳೂರಿನ ವೈಜ್ಞಾನಿಕ ಮನೋಭಾವದ ಯುವ ಚೇತನಗಳಿಗೆ ದಾರಿದೀಪವಾದವರು.

ತಂದೆ ಎಚ್.ವಿ. ರಂಗರಾವ್, ತಾಯಿ ರಾಧಮ್ಮ ಅವರಿಂದ ಬಂದ ಜೀವನಶಿಸ್ತು, ಕನ್ನಡ ಮತ್ತು ಆಂಗ್ಲಭಾಷಾ ಪ್ರೌಢಿಮೆ, ಕಷ್ಟಸಹಿಷ್ಣು ಜೀವನ ಶ್ರದ್ಧೆ, ತಾಯಿಯ ಅಂತಃಕರಣ ಅರಿತ ಮಾತೃಸೇವಾ ನಿಷ್ಠತೆ, ತನ್ನ ಅರಿವನ್ನು ವಿಕಸಿಸಿಕೊಳ್ಳುವ ಜಾಗೃತ ಮನಸ್ಸಿನಿಂದ ರೂಪುಗೊಂಡವರು ಎಚ್.ಆರ್.ಆರ್. ಅವರು ಹೊಳಲ್ಕೆರೆಯಲ್ಲಿ ಬಾಲ್ಯಕಳೆದು, ಚಿತ್ರದುರ್ಗದಲ್ಲಿ ವಾರಾನ್ನದ ಹುಡುಗನಾಗಿ ಓದುವಾಗಲೇ ಗಣಿತ, ವಿಜ್ಞಾನ ಶಿಕ್ಷಕರಾದವರು. ಅವರ ವಿದ್ಯಾ ಶ್ರದ್ಧೆಯ ಮನೋಸ್ಥೈರ್ಯ ವಿದ್ಯಾರ್ಥಿಗಳಿಗೆ ಒಂದು ಆದರ್ಶ.

ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಕಾಲೇಜು ಸೇರಲು ಕಾರಣವಾಗಿ, ಭೌತಶಾಸ್ತ್ರದ ಬಗ್ಗೆ ಆಸಕ್ತಿಯನ್ನುಂಟು ಮಾಡಿದವರು ಹೆಚ್. ನರಸಿಂಹಯ್ಯ. ಅವರ ಬಗ್ಗೆ ಎಚ್.ಆರ್.ಆರ್‌ಗೆ ಅಪಾರ ಗೌರವ. ಬೇಂದ್ರೆಯವರು ಹೇಳುವ ’ಶುದ್ಧನಿದ್ದವ ಗೆದ್ದ’ ಎಂಬ ನುಡಿಯಂತೆ ಸತ್ಯ, ಧರ್ಮ, ನೈತಿಕ ನಿಲುವುಗಳಿಂದ ಜೀವನ ಪಯಣದಲ್ಲಿ ಗೆದ್ದ ಎಚ್.ಆರ್.ಆರ್. ಜನಸಾಮಾನ್ಯರಿಗೆ ಒಂದು ಮಾದರಿ.

ಅವರು ಬಿ.ಎಸ್.ಸಿ ಓದುವಾಗ ಸ್ಕೌಟ್ಸ್‌ಗೆ ಸೇರಿಕೊಂಡರು. ಅಲ್ಲಿ ನೀಡಿದ ಹ್ಯಾಮ್‌ರೇಡಿಯೊ ಪ್ರಾತ್ಯಕ್ಷಿಕೆಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಸಂಪರ್ಕ ಮಾಧ್ಯಮಕ್ಕೆ ಮೋರ್‍ಸ್‌ಕೋಡ್ ಬಳಸುವುದರಲ್ಲಿ ಆಸಕ್ತಿ ಹೊಂದಿದರು. ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡು ಮೋರ್‍ಸ್‌ಕೋಡ್ ಬಳಸಿ ಸಂದೇಶ ಕಳುಹಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡರು. ಬೇಸಿಗೆ ರಜೆಯಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಅಲ್ಲಿ ಸಂದೇಶ ಸ್ವೀಕರಿಸುವ ಕೆಲಸ ಮಾಡಿ ವಾರಕ್ಕೆ ಹತ್ತು ರೂಪಾಯಿ ಸಂಪಾದಿಸುತ್ತಿದ್ದರು. ವಿದ್ಯಾರ್ಥಿದೆಸೆಯಲ್ಲಿ ತನ್ನ ಬೌದ್ಧಿಕ ಪರಿಣತಿಯಿಂದ ಹಣ ಸಂಪಾದಿಸುತ್ತಿದ್ದ ಅವರ ಕ್ರಿಯಾಶೀಲ ಬೌದ್ಧಿಕ ಚತುರತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಬೆಳಕು.

ತಂದೆಯ ಮರಣದ ನಂತರ ಓದು ಮುಂದುವರಿಸಲಾಗಲಿಲ್ಲ. ಆಗ ಪೋಸ್ಟ್‌ಮಾಸ್ಟರ್ ಜನರಲ್‌ಗೆ ಪತ್ರ ಬರೆದು, ತನ್ನ ಟೆಲಿಗ್ರಾಫ್ ಅನುಭವ ತಿಳಿಸಿ ಪೋಸ್ಟ್‌ಮ್ಯಾನ್ ಕೆಲಸ ಪಡೆದರು. ಅದು ನಿರುದ್ಯೋಗಿ ಯುವಕರಿಗೆ ಅವರಿಂದ ದೊರೆಯುವ ಅನುಕರಣೀಯ ಸಾಹಸ. ಅದು ಚೆನ್ನಾಗಿ ಗ್ರಂಥದಲ್ಲಿ ನಿರೂಪಿತವಾಗಿದೆ.

ಎಚ್.ಆರ್.ಆರ್. ಅವರು ತಾನು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕೆಂಬ ಹಿರಿಯ ಬಯಕೆ ಹೊಂದಿದ್ದರು. ಕೆಲಸ ಮಾಡುತ್ತ ಭೌತವಿಜ್ಞಾನದ ಅತ್ಯುತ್ತಮ ಸಂಶೋಧನಾ ಪುಸ್ತಕಗಳನ್ನು ಕೊಂಡು ಅಧ್ಯಯನ ಮಾಡುತ್ತ ತಮ್ಮ ಮನದ ಗುರಿಯತ್ತ ದಾಪುಗಾಲು ಹಾಕುತ್ತಿದ್ದರು. ಅವರಿಗೆ ಮದುವೆ ಆಗಿ ಮಕ್ಕಳಿದ್ದರೂ ವಿದ್ಯಾದಾಹದಿಂದ ಖಾಯಂ ಸರ್ಕಾರಿ ಪೋಸ್ಟ್‌ಮ್ಯಾನ್ ಕೆಲಸ ಬಿಟ್ಟರು. ತಮಗೆ ಪ್ರೋತ್ಸಾಹ, ಪತ್ನಿಯ ಸಹಕಾರದಿಂದ ಎಂ.ಎಸ್ಸಿ ವಿದ್ಯಾರ್ಥಿಯಾದರು. ತನ್ನ ಭೌತವಿಜ್ಞಾನದ ಪರಿಣತ ಜ್ಞಾನವನ್ನು ಪ್ರಾಧ್ಯಾಪಕರ ಸಮಿತಿ ಮುಂದೆ ಸಮರ್ಥವಾಗಿ ಮಂಡಿಸಿ ಸೀಟ್ ಪಡೆದರು.

ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಸಂತ ಜೋಸೆಫ್‌ರ ಕಾಲೇಜಿನಲ್ಲಿ, ಆಚಾರ್ಯ ಪಾಠಶಾಲೆಯಲ್ಲಿ ಕೆಲಸ ಮಾಡಿ ಆತ್ಮಾನಂದದ ಸಾರ್ಥಕ ಶಿಕ್ಷಕರಾದರು. ಅನಂತರ ಕ್ರೈಸ್ಟ್ ಕಾಲೇಜಿಗೆ ಸೇರಿ, ಆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಿದರು. ಅಲ್ಲಿ ಚಿ. ಶ್ರೀನಿವಾಸರಾಜು ಅವರ ಜೊತೆಗೂಡಿ ’ಕನ್ನಡ ಸಂಘ’ದ ಮುಖಾಂತರ ಕನ್ನಡ ವಾತಾವರಣ ಸೃಷ್ಟಿಸಿದರು. ಆ ಕಾಲೇಜಿನ ರೆಕ್ಟರ್ ಅವರಿಗೆ ಕಾಲೇಜಿನ ಲೋಗೋದಲ್ಲಿ ಕನ್ನಡದಲ್ಲಿ ’ಕ್ರೈಸ್ಟ್’ ಕಾಲೇಜ್ ಎಂದು ಸೇರಿಸಲು ಧೈರ್ಯವಾಗಿ ಹೇಳಿ, ಅದು ಆಗುವಂತೆ ಮಾಡಿದರು. ಅದು ಅವರಲ್ಲಿಯ ಕನ್ನಡ ಉಳಿಸಿ ಬೆಳೆಸುವ ಕ್ರಿಯಾಶೀಲ ನಡೆಯ ಕನ್ನಡತನದ ಪ್ರತೀಕ.

ಅವರು ಸಂಚಾರಿ ಟೆಲಿಸ್ಕೋಪ್‌ನಿಂದ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಆಕಾಶದ ವೀಕ್ಷಣೆಯ ಅದ್ಭುತ ನೋಟ ಮನಗಾಣಿಸಿದರು. ಎಚ್.ಆರ್.ಆರ್. ಅವರು ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದ ಮೇಲೆ ಇಂಟರ್ ಮೀಡಿಯಟ್ ಕಾಲೇಜ್ ಸಹಪಾಟಿ ಪಾಂಡು ಕೋರಿಕೆಯಂತೆ, ಅವರು ನಡೆಸುತ್ತಿದ್ದ ಆರ್.ವಿ. ಕಾಲೇಜಿನ ಹದಗೆಟ್ಟ ಪಾಠ ಪ್ರವಚನ, ವಿದ್ಯಾರ್ಥಿ ಶಿಕ್ಷಕರ ನಡೆಯನ್ನು ಶಿಸ್ತಿಗೆ ಒಳಪಡಿಸಿದರು. ಆ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿ ಆ ಕಾಲೇಜು ನಿಜ ಶಿಕ್ಷಣ ನೆಲೆಯಾಗುವಂತೆ ಮಾಡಿದರು. ಆ ಜ್ಞಾನದಾಹ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಗೆಗಿನ ವಿಶ್ವಾಸ, ಆತ್ಮೀಯ ಕ್ರಿಯಾಶೀಲ ನಡೆ ವಿವರಿಸಿದರೆ ಅದರ ರುಚಿ ಕೆಡುತ್ತದೆ. ಅದನ್ನು ಕಲ್ಗುಂಡಿ ನವೀನ್ ಅವರ ನಿರೂಪಣೆಯಲ್ಲಿಯೇ ಓದಿ ಸವಿಯಬೇಕು. ಅದು ಇಂದಿನ ಹಾಗೂ ಮುಂದಿನ ವಿದ್ಯಾಸಂಸ್ಥೆಗಳು, ಎಲ್ಲ ಶಿಕ್ಷಕರು ಅನುಸರಿಸಬೇಕಾದ ನಡೆಯಾಗಿದೆ. ಹಾಗಾಗಿ ಈ ಆತ್ಮಕಥೆ ಸತ್ಯದ ದಾಖಲೆಯಾಗಿ ’ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,’ ಎಂಬ ಬಸವಣ್ಣನ ನುಡಿಯಂತೆ, ಎಚ್ಚರದಿಂದ ಅಲುಗಿನ ಮೇಲೆ ನಡೆದು ಸಾಗಿದಂತಿದೆ. ಇಂತಹ ಜೀವನ ಪಥ ಅನುಕರಣೀಯ. ಇಂತಹ ಆತ್ಮಕತೆಗಳು ಕನ್ನಡದಲ್ಲಿ ಅಪರೂಪ.

ರಾಮಕೃಷ್ಣರಾವ್ ಅವರ ’ರಾಮನ್, ದ ನ್ಯಾಚುರಲ್ ಫಿಲಾಸಪರ್’ ಸಾಕ್ಷಚಿತ್ರ., ಸರ್ ಸಿ.ವಿ.ರಾಮನ್‌ರನ್ನು ಕಂಡು ಅನುಭವಿಸಿದ ಸುಖ, ಅವರ ಪ್ರಯೋಗಾಲಯದ ಅನುಭವಗಳು ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅವರ ರನ್ನಿಂಗ್ ಥ್ರೂ ದ ಸಿಸ್ಟಮ್ – ಪಠ್ಯೇತರ ಇಂಗ್ಲೀಷ್ ಪುಸ್ತಕ, ’ಕಲಾಂ ಮೇಷ್ಟು’ ಕನ್ನಡ ಪುಸ್ತಕ ಹಾಗೂ ಎಚ್.ಆರ್.ಆರ್.ಆರ್. ಅವರ ವಂಶಸ್ಥರಾದ ರಾಮಣ್ಣಯ್ಯ ತಾಳೆ ಲಿಪಿ ಮಾಡಿದ್ದ ’ಕರ್ಣಾಟಕ ಭಾಗವತ’, ಕೃತಿಗಳು ಉತ್ತಮ ಸಾಹಿತ್ಯ ಕೊಡುಗೆಗಳಾಗಿವೆ.

ಈ ಆತ್ಮಕತೆಯಲ್ಲಿ ಅವರ ಸಂದರ್ಶನ, ಅಪರೂಪದ ಪೋಟೋಗಳು ಇದ್ದು ಅವರ ನಡೆಯ ಖಚಿತತೆಗೆ ಸಾಕ್ಷಿಯಾತಿಗಿವೆ. ಕನ್ನಡ ಜನರ ಮನಸ್ಸಿನಿಂದ ಸುಲಭವಾಗಿ ಮರೆತು ಹೋಗಬಹುದಾಗಿದ್ದ ಎಚ್.ಆರ್.ಆರ್. ಎಂಬ ಓರ್ವ ಬೌದ್ಧಿಕ ಪರಿಣತನ, ಸಾಹಸಿಯುವಕನ, ಮಾಗಿದ ಪ್ರಾಧ್ಯಾಪಕನ ಜೀವನಾನುಭವ ಸಾರವನ್ನು ಪ್ರಕಟಿಸಿ ಉದಯಭಾನು ಕಲಾಸಂಘ ತುಂಬಾ ಉಪಯುಕ್ತ ಕೆಲಸ ಮಾಡಿದೆ.

ಈ ಆತ್ಮಕಥೆಯನ್ನು ತುಂಬಾ ನವಿರಾದ ಭಾಷೆಯಲ್ಲಿ ನಿರೂಪಿಸಿರುವ ಕಲ್ಗುಂಡಿ ನವೀನ್ ಕೂಡ ಅಭಿನಂದನೀಯ.

ಕೃತಿ : ಅಂಬಿಗಾ! ದಡ ಹಾಯಿಸು….
(ಭೌತ ವಿಜ್ಞಾನದ ಪಾಧ್ಯಾಪಕರಾದ ಎಚ್.ಆರ್. ರಾಮಕೃಷ್ಣ ರಾವ್ ಅವರ ಆತ್ಮಕಥೆ)
ನಿರೂಪಣೆ : ಕಲ್ಗುಂಡಿ ನವೀನ್
ಪುಟಗಳು : 216
ಬೆಲೆ : ರೂ.200/-
ಪ್ರಕಟಣೆ : ಉದಯಭಾನು ಕಲಾಸಂಘ, ಬೆಂಗಳೂರು.

ಡಾ. ಜಿ. ಕೃಷ್ಣಪ್ಪ

ಡಾ. ಜಿ. ಕೃಷ್ಣಪ್ಪ
’ಬೇಂದ್ರೆ’ ಕೃಷ್ಣಪ್ಪ ಎಂದೇ ಜನಪ್ರಿಯರಾಗಿ, ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದ ಪರಿಚಾರಕಾರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ’ಹಾಡು ಹಕ್ಕಿ ಅಂಬಿಕಾತನಯದತ್ತ’, ’ನಾಕುತಂತಿ-ಒಂದು ಟಿಪ್ಪಣಿ’, ’ಹಸಿರು ಹಚ್ಚಿ ಚುಚ್ಚಿ’, ’ಶ್ರೀ ರಾಮಾಯಣದರ್ಶನಂ ಪಾತ್ರಗಳ ಕಥಾವಳಿ’, ’ಬೇಂದ್ರೆ ಕಾವ್ಯ: ಪದನಿರುಕ್ತ’ ಕೃಷ್ಣಪ್ಪನವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...