Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

ಪುಸ್ತಕ ಪರಿಚಯ; ಭೌತಶಾಸ್ತ್ರದ ಪ್ರೊಫೆಸರ್‌ರ ಹೋರಾಟದ ಹಾದಿ

- Advertisement -
- Advertisement -

ಎಚ್.ಆರ್. ರಾಮಕೃಷ್ಣ ರಾವ್ ಬೆಂಗಳೂರಿನ ಮಾವಳ್ಳಿಯಲ್ಲಿ ಹುಟ್ಟಿ, ಹೊಳಲ್ಕೆರೆಯಲ್ಲಿ ಬೆಳೆದು ಬೆಂಗಳೂರಿನ ವೈಜ್ಞಾನಿಕ ಮನೋಭಾವದ ಯುವ ಚೇತನಗಳಿಗೆ ದಾರಿದೀಪವಾದವರು.

ತಂದೆ ಎಚ್.ವಿ. ರಂಗರಾವ್, ತಾಯಿ ರಾಧಮ್ಮ ಅವರಿಂದ ಬಂದ ಜೀವನಶಿಸ್ತು, ಕನ್ನಡ ಮತ್ತು ಆಂಗ್ಲಭಾಷಾ ಪ್ರೌಢಿಮೆ, ಕಷ್ಟಸಹಿಷ್ಣು ಜೀವನ ಶ್ರದ್ಧೆ, ತಾಯಿಯ ಅಂತಃಕರಣ ಅರಿತ ಮಾತೃಸೇವಾ ನಿಷ್ಠತೆ, ತನ್ನ ಅರಿವನ್ನು ವಿಕಸಿಸಿಕೊಳ್ಳುವ ಜಾಗೃತ ಮನಸ್ಸಿನಿಂದ ರೂಪುಗೊಂಡವರು ಎಚ್.ಆರ್.ಆರ್. ಅವರು ಹೊಳಲ್ಕೆರೆಯಲ್ಲಿ ಬಾಲ್ಯಕಳೆದು, ಚಿತ್ರದುರ್ಗದಲ್ಲಿ ವಾರಾನ್ನದ ಹುಡುಗನಾಗಿ ಓದುವಾಗಲೇ ಗಣಿತ, ವಿಜ್ಞಾನ ಶಿಕ್ಷಕರಾದವರು. ಅವರ ವಿದ್ಯಾ ಶ್ರದ್ಧೆಯ ಮನೋಸ್ಥೈರ್ಯ ವಿದ್ಯಾರ್ಥಿಗಳಿಗೆ ಒಂದು ಆದರ್ಶ.

ಇಂಟರ್ ಮೀಡಿಯಟ್ ವಿದ್ಯಾಭ್ಯಾಸಕ್ಕೆ ನ್ಯಾಷನಲ್ ಕಾಲೇಜು ಸೇರಲು ಕಾರಣವಾಗಿ, ಭೌತಶಾಸ್ತ್ರದ ಬಗ್ಗೆ ಆಸಕ್ತಿಯನ್ನುಂಟು ಮಾಡಿದವರು ಹೆಚ್. ನರಸಿಂಹಯ್ಯ. ಅವರ ಬಗ್ಗೆ ಎಚ್.ಆರ್.ಆರ್‌ಗೆ ಅಪಾರ ಗೌರವ. ಬೇಂದ್ರೆಯವರು ಹೇಳುವ ’ಶುದ್ಧನಿದ್ದವ ಗೆದ್ದ’ ಎಂಬ ನುಡಿಯಂತೆ ಸತ್ಯ, ಧರ್ಮ, ನೈತಿಕ ನಿಲುವುಗಳಿಂದ ಜೀವನ ಪಯಣದಲ್ಲಿ ಗೆದ್ದ ಎಚ್.ಆರ್.ಆರ್. ಜನಸಾಮಾನ್ಯರಿಗೆ ಒಂದು ಮಾದರಿ.

ಅವರು ಬಿ.ಎಸ್.ಸಿ ಓದುವಾಗ ಸ್ಕೌಟ್ಸ್‌ಗೆ ಸೇರಿಕೊಂಡರು. ಅಲ್ಲಿ ನೀಡಿದ ಹ್ಯಾಮ್‌ರೇಡಿಯೊ ಪ್ರಾತ್ಯಕ್ಷಿಕೆಯನ್ನು ಆಸಕ್ತಿಯಿಂದ ತಿಳಿದುಕೊಂಡರು. ಸಂಪರ್ಕ ಮಾಧ್ಯಮಕ್ಕೆ ಮೋರ್‍ಸ್‌ಕೋಡ್ ಬಳಸುವುದರಲ್ಲಿ ಆಸಕ್ತಿ ಹೊಂದಿದರು. ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಪರಿಚಯ ಮಾಡಿಕೊಂಡು ಮೋರ್‍ಸ್‌ಕೋಡ್ ಬಳಸಿ ಸಂದೇಶ ಕಳುಹಿಸುವುದನ್ನು ಹಾಗೂ ಸ್ವೀಕರಿಸುವುದನ್ನು ಕಲಿತುಕೊಂಡರು. ಬೇಸಿಗೆ ರಜೆಯಲ್ಲಿ ಸೆಂಟ್ರಲ್ ಟೆಲಿಗ್ರಾಫ್ ಆಫೀಸಿಗೆ ಹೋಗಿ ಅಲ್ಲಿ ಸಂದೇಶ ಸ್ವೀಕರಿಸುವ ಕೆಲಸ ಮಾಡಿ ವಾರಕ್ಕೆ ಹತ್ತು ರೂಪಾಯಿ ಸಂಪಾದಿಸುತ್ತಿದ್ದರು. ವಿದ್ಯಾರ್ಥಿದೆಸೆಯಲ್ಲಿ ತನ್ನ ಬೌದ್ಧಿಕ ಪರಿಣತಿಯಿಂದ ಹಣ ಸಂಪಾದಿಸುತ್ತಿದ್ದ ಅವರ ಕ್ರಿಯಾಶೀಲ ಬೌದ್ಧಿಕ ಚತುರತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ ಬೆಳಕು.

ತಂದೆಯ ಮರಣದ ನಂತರ ಓದು ಮುಂದುವರಿಸಲಾಗಲಿಲ್ಲ. ಆಗ ಪೋಸ್ಟ್‌ಮಾಸ್ಟರ್ ಜನರಲ್‌ಗೆ ಪತ್ರ ಬರೆದು, ತನ್ನ ಟೆಲಿಗ್ರಾಫ್ ಅನುಭವ ತಿಳಿಸಿ ಪೋಸ್ಟ್‌ಮ್ಯಾನ್ ಕೆಲಸ ಪಡೆದರು. ಅದು ನಿರುದ್ಯೋಗಿ ಯುವಕರಿಗೆ ಅವರಿಂದ ದೊರೆಯುವ ಅನುಕರಣೀಯ ಸಾಹಸ. ಅದು ಚೆನ್ನಾಗಿ ಗ್ರಂಥದಲ್ಲಿ ನಿರೂಪಿತವಾಗಿದೆ.

ಎಚ್.ಆರ್.ಆರ್. ಅವರು ತಾನು ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಬೇಕೆಂಬ ಹಿರಿಯ ಬಯಕೆ ಹೊಂದಿದ್ದರು. ಕೆಲಸ ಮಾಡುತ್ತ ಭೌತವಿಜ್ಞಾನದ ಅತ್ಯುತ್ತಮ ಸಂಶೋಧನಾ ಪುಸ್ತಕಗಳನ್ನು ಕೊಂಡು ಅಧ್ಯಯನ ಮಾಡುತ್ತ ತಮ್ಮ ಮನದ ಗುರಿಯತ್ತ ದಾಪುಗಾಲು ಹಾಕುತ್ತಿದ್ದರು. ಅವರಿಗೆ ಮದುವೆ ಆಗಿ ಮಕ್ಕಳಿದ್ದರೂ ವಿದ್ಯಾದಾಹದಿಂದ ಖಾಯಂ ಸರ್ಕಾರಿ ಪೋಸ್ಟ್‌ಮ್ಯಾನ್ ಕೆಲಸ ಬಿಟ್ಟರು. ತಮಗೆ ಪ್ರೋತ್ಸಾಹ, ಪತ್ನಿಯ ಸಹಕಾರದಿಂದ ಎಂ.ಎಸ್ಸಿ ವಿದ್ಯಾರ್ಥಿಯಾದರು. ತನ್ನ ಭೌತವಿಜ್ಞಾನದ ಪರಿಣತ ಜ್ಞಾನವನ್ನು ಪ್ರಾಧ್ಯಾಪಕರ ಸಮಿತಿ ಮುಂದೆ ಸಮರ್ಥವಾಗಿ ಮಂಡಿಸಿ ಸೀಟ್ ಪಡೆದರು.

ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ಸಂತ ಜೋಸೆಫ್‌ರ ಕಾಲೇಜಿನಲ್ಲಿ, ಆಚಾರ್ಯ ಪಾಠಶಾಲೆಯಲ್ಲಿ ಕೆಲಸ ಮಾಡಿ ಆತ್ಮಾನಂದದ ಸಾರ್ಥಕ ಶಿಕ್ಷಕರಾದರು. ಅನಂತರ ಕ್ರೈಸ್ಟ್ ಕಾಲೇಜಿಗೆ ಸೇರಿ, ಆ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಸಹಾಯ ಮಾಡಿದರು. ಅಲ್ಲಿ ಚಿ. ಶ್ರೀನಿವಾಸರಾಜು ಅವರ ಜೊತೆಗೂಡಿ ’ಕನ್ನಡ ಸಂಘ’ದ ಮುಖಾಂತರ ಕನ್ನಡ ವಾತಾವರಣ ಸೃಷ್ಟಿಸಿದರು. ಆ ಕಾಲೇಜಿನ ರೆಕ್ಟರ್ ಅವರಿಗೆ ಕಾಲೇಜಿನ ಲೋಗೋದಲ್ಲಿ ಕನ್ನಡದಲ್ಲಿ ’ಕ್ರೈಸ್ಟ್’ ಕಾಲೇಜ್ ಎಂದು ಸೇರಿಸಲು ಧೈರ್ಯವಾಗಿ ಹೇಳಿ, ಅದು ಆಗುವಂತೆ ಮಾಡಿದರು. ಅದು ಅವರಲ್ಲಿಯ ಕನ್ನಡ ಉಳಿಸಿ ಬೆಳೆಸುವ ಕ್ರಿಯಾಶೀಲ ನಡೆಯ ಕನ್ನಡತನದ ಪ್ರತೀಕ.

ಅವರು ಸಂಚಾರಿ ಟೆಲಿಸ್ಕೋಪ್‌ನಿಂದ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಆಕಾಶದ ವೀಕ್ಷಣೆಯ ಅದ್ಭುತ ನೋಟ ಮನಗಾಣಿಸಿದರು. ಎಚ್.ಆರ್.ಆರ್. ಅವರು ಕ್ರೈಸ್ಟ್ ಕಾಲೇಜಿನಿಂದ ನಿವೃತ್ತರಾದ ಮೇಲೆ ಇಂಟರ್ ಮೀಡಿಯಟ್ ಕಾಲೇಜ್ ಸಹಪಾಟಿ ಪಾಂಡು ಕೋರಿಕೆಯಂತೆ, ಅವರು ನಡೆಸುತ್ತಿದ್ದ ಆರ್.ವಿ. ಕಾಲೇಜಿನ ಹದಗೆಟ್ಟ ಪಾಠ ಪ್ರವಚನ, ವಿದ್ಯಾರ್ಥಿ ಶಿಕ್ಷಕರ ನಡೆಯನ್ನು ಶಿಸ್ತಿಗೆ ಒಳಪಡಿಸಿದರು. ಆ ಕೆಲಸವನ್ನು ನಿಸ್ವಾರ್ಥ ಮನೋಭಾವದಿಂದ ಮಾಡಿ ಆ ಕಾಲೇಜು ನಿಜ ಶಿಕ್ಷಣ ನೆಲೆಯಾಗುವಂತೆ ಮಾಡಿದರು. ಆ ಜ್ಞಾನದಾಹ, ವಿದ್ಯಾರ್ಥಿ ಮತ್ತು ಶಿಕ್ಷಕರ ಬಗೆಗಿನ ವಿಶ್ವಾಸ, ಆತ್ಮೀಯ ಕ್ರಿಯಾಶೀಲ ನಡೆ ವಿವರಿಸಿದರೆ ಅದರ ರುಚಿ ಕೆಡುತ್ತದೆ. ಅದನ್ನು ಕಲ್ಗುಂಡಿ ನವೀನ್ ಅವರ ನಿರೂಪಣೆಯಲ್ಲಿಯೇ ಓದಿ ಸವಿಯಬೇಕು. ಅದು ಇಂದಿನ ಹಾಗೂ ಮುಂದಿನ ವಿದ್ಯಾಸಂಸ್ಥೆಗಳು, ಎಲ್ಲ ಶಿಕ್ಷಕರು ಅನುಸರಿಸಬೇಕಾದ ನಡೆಯಾಗಿದೆ. ಹಾಗಾಗಿ ಈ ಆತ್ಮಕಥೆ ಸತ್ಯದ ದಾಖಲೆಯಾಗಿ ’ತನ್ನ ಬಣ್ಣಿಸ ಬೇಡ, ಇದಿರ ಹಳಿಯಲು ಬೇಡ,’ ಎಂಬ ಬಸವಣ್ಣನ ನುಡಿಯಂತೆ, ಎಚ್ಚರದಿಂದ ಅಲುಗಿನ ಮೇಲೆ ನಡೆದು ಸಾಗಿದಂತಿದೆ. ಇಂತಹ ಜೀವನ ಪಥ ಅನುಕರಣೀಯ. ಇಂತಹ ಆತ್ಮಕತೆಗಳು ಕನ್ನಡದಲ್ಲಿ ಅಪರೂಪ.

ರಾಮಕೃಷ್ಣರಾವ್ ಅವರ ’ರಾಮನ್, ದ ನ್ಯಾಚುರಲ್ ಫಿಲಾಸಪರ್’ ಸಾಕ್ಷಚಿತ್ರ., ಸರ್ ಸಿ.ವಿ.ರಾಮನ್‌ರನ್ನು ಕಂಡು ಅನುಭವಿಸಿದ ಸುಖ, ಅವರ ಪ್ರಯೋಗಾಲಯದ ಅನುಭವಗಳು ಭೌತಶಾಸ್ತ್ರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. ಅವರ ರನ್ನಿಂಗ್ ಥ್ರೂ ದ ಸಿಸ್ಟಮ್ – ಪಠ್ಯೇತರ ಇಂಗ್ಲೀಷ್ ಪುಸ್ತಕ, ’ಕಲಾಂ ಮೇಷ್ಟು’ ಕನ್ನಡ ಪುಸ್ತಕ ಹಾಗೂ ಎಚ್.ಆರ್.ಆರ್.ಆರ್. ಅವರ ವಂಶಸ್ಥರಾದ ರಾಮಣ್ಣಯ್ಯ ತಾಳೆ ಲಿಪಿ ಮಾಡಿದ್ದ ’ಕರ್ಣಾಟಕ ಭಾಗವತ’, ಕೃತಿಗಳು ಉತ್ತಮ ಸಾಹಿತ್ಯ ಕೊಡುಗೆಗಳಾಗಿವೆ.

ಈ ಆತ್ಮಕತೆಯಲ್ಲಿ ಅವರ ಸಂದರ್ಶನ, ಅಪರೂಪದ ಪೋಟೋಗಳು ಇದ್ದು ಅವರ ನಡೆಯ ಖಚಿತತೆಗೆ ಸಾಕ್ಷಿಯಾತಿಗಿವೆ. ಕನ್ನಡ ಜನರ ಮನಸ್ಸಿನಿಂದ ಸುಲಭವಾಗಿ ಮರೆತು ಹೋಗಬಹುದಾಗಿದ್ದ ಎಚ್.ಆರ್.ಆರ್. ಎಂಬ ಓರ್ವ ಬೌದ್ಧಿಕ ಪರಿಣತನ, ಸಾಹಸಿಯುವಕನ, ಮಾಗಿದ ಪ್ರಾಧ್ಯಾಪಕನ ಜೀವನಾನುಭವ ಸಾರವನ್ನು ಪ್ರಕಟಿಸಿ ಉದಯಭಾನು ಕಲಾಸಂಘ ತುಂಬಾ ಉಪಯುಕ್ತ ಕೆಲಸ ಮಾಡಿದೆ.

ಈ ಆತ್ಮಕಥೆಯನ್ನು ತುಂಬಾ ನವಿರಾದ ಭಾಷೆಯಲ್ಲಿ ನಿರೂಪಿಸಿರುವ ಕಲ್ಗುಂಡಿ ನವೀನ್ ಕೂಡ ಅಭಿನಂದನೀಯ.

ಕೃತಿ : ಅಂಬಿಗಾ! ದಡ ಹಾಯಿಸು….
(ಭೌತ ವಿಜ್ಞಾನದ ಪಾಧ್ಯಾಪಕರಾದ ಎಚ್.ಆರ್. ರಾಮಕೃಷ್ಣ ರಾವ್ ಅವರ ಆತ್ಮಕಥೆ)
ನಿರೂಪಣೆ : ಕಲ್ಗುಂಡಿ ನವೀನ್
ಪುಟಗಳು : 216
ಬೆಲೆ : ರೂ.200/-
ಪ್ರಕಟಣೆ : ಉದಯಭಾನು ಕಲಾಸಂಘ, ಬೆಂಗಳೂರು.

ಡಾ. ಜಿ. ಕೃಷ್ಣಪ್ಪ

ಡಾ. ಜಿ. ಕೃಷ್ಣಪ್ಪ
’ಬೇಂದ್ರೆ’ ಕೃಷ್ಣಪ್ಪ ಎಂದೇ ಜನಪ್ರಿಯರಾಗಿ, ಬೇಂದ್ರೆ ಮತ್ತು ಕುವೆಂಪು ಸಾಹಿತ್ಯದ ಪರಿಚಾರಕಾರಾಗಿ, ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ’ಹಾಡು ಹಕ್ಕಿ ಅಂಬಿಕಾತನಯದತ್ತ’, ’ನಾಕುತಂತಿ-ಒಂದು ಟಿಪ್ಪಣಿ’, ’ಹಸಿರು ಹಚ್ಚಿ ಚುಚ್ಚಿ’, ’ಶ್ರೀ ರಾಮಾಯಣದರ್ಶನಂ ಪಾತ್ರಗಳ ಕಥಾವಳಿ’, ’ಬೇಂದ್ರೆ ಕಾವ್ಯ: ಪದನಿರುಕ್ತ’ ಕೃಷ್ಣಪ್ಪನವರ ಪ್ರಕಟಿತ ಪುಸ್ತಕಗಳಲ್ಲಿ ಕೆಲವು


ಇದನ್ನೂ ಓದಿ: ವೈರಮುತ್ತು ಅವರ ’ಕಳ್ಳಿಗಾಡಿನ ಇತಿಹಾಸ’ ಇದು ರಾಮಾಯಣವಲ್ಲ ಗ್ರಾಮಾಯಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...