Homeಕರ್ನಾಟಕಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌

ಇದು ಆಹಾರದ ಪ್ರಶ್ನೆಯಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ: ಹಂಸಲೇಖರ ಪರ ನಿಂತ ನಟ ಚೇತನ್‌

- Advertisement -
- Advertisement -

ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ತೆರಳಿದ್ದ ವೇಳೆ, ಕನ್ನಡ ಚಿತ್ರರಂಗದ ಪ್ರತಿನಿಧಿಯಾಗಿ ಸ್ಥಳಕ್ಕೆ ಧಾವಿಸಿದ್ದ ನಟ ಚೇತನ್ ಅಹಿಂಸಾ ಅವರಿಗೆ ಮತೀಯವಾದಿಗಳು ಅಡ್ಡಿಪಡಿಸುವ ಬೆಳವಣಿಗೆ ನಡೆದಿದೆ.

ಹಂಸಲೇಖ ಅವರು ನೀಡಿದ ಹೇಳಿಕೆ ಸಂಬಂಧ ಸೃಷ್ಟಿಯಾಗಿರುವ ವಿವಾದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಹಂಸಲೇಖ ಅವರು ಕ್ಷಮೆಯಾಚಿಸಿದ ಬಳಿಕವೂ ವಿವಾದವನ್ನು ದೊಡ್ಡದು ಮಾಡಿ, ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಹೀಗಾಗಿ ವಿಚಾರಣೆಗೆ ಹಂಸಲೇಖ ಅವರು ಹಾಜರಾಗಿದ್ದರು. ಕನ್ನಡ ಚಿತ್ರರಂಗದಲ್ಲಿನ ಬೆರಳೆಣಿಯಷ್ಟು ಮಂದಿ ಮಾತ್ರ ಹಂಸಲೇಖರ ಪರ ಹೇಳಿಕೆ ನೀಡಿದ್ದು, ಅದರಲ್ಲಿ ನಟ ಚೇತನ್‌ ಕೂಡ ಒಬ್ಬರಾಗಿದ್ದಾರೆ.

“ನನ್ನನ್ನು ಯಾವ ಸಮುದಾಯ ಟಾರ್ಗೆಟ್‌ ಮಾಡಿತ್ತೊ ಅದೇ ಸಮುದಾಯದ ಲಾಬಿಗಳು ಇಂದು ಹಂಸಲೇಖ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಯಾವ ಅಡಿಯಲ್ಲಿ ಪೋಲಿಸ್‌ ದೂರು ದಾಖಲಾಗಿತ್ತೊ ಅದೇ ಅಡಿಯಲ್ಲಿ ಹಂಸಲೇಖ ಅವರಿಗೂ ಆಗಿದೆ. ಅದೇ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ನಟ ಚೇತನ್‌ ಹೇಳಿದ್ದರು. ಹೀಗಾಗಿ ಚೇತನ್‌ ಅವರು ಸ್ಥಳಕ್ಕೆ ಬರಬಾರದೆಂದು ಚೇತನ್‌ ವಿರೋಧಿಗಳು ಗಲಾಟೆ ಶುರು ಮಾಡಿದರು.

ಸಾಮಾಜಿಕ ನ್ಯಾಯದ ಪರ ಇರುವ ವೇದಿಕೆಗಳಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡಿರುವ ನಟ ಚೇತನ್‌ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿತ್ತು. ಬ್ರಾಹ್ಮಣ್ಯಕ್ಕೆ ಸಂಬಂಧಿಸಿದಂತೆ ಚೇತನ್‌ ತಾಳಿದ ನಿಲುವುಗಳಿಂದಾಗಿ ಚರ್ಚೆ ಶುರುವಾಗಿತ್ತು. ಬುದ್ಧ, ಬಸವ, ಅಂಬೇಡ್ಕರ್‌ ಚಿಂತನೆಗಳ ಕುರಿತು ಸದಾ ಮಾತನಾಡುವ ನಟ ಚೇತನ್‌, ಪಕ್ಷಾತೀತವಾಗಿ ನಿಲ್ಲುವ ವ್ಯಕ್ತಿ. ಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಚೇತನ್‌ ಅವರಿಗೂ ಕೋಮುವಾದಿಗಳಿಗೂ ತಿಕ್ಕಾಟ ಮೊದಲಿನಿಂದಲೂ ನಡೆಯುತ್ತಲೇ ಇದೆ. ಕನ್ನಡ ಚಿತ್ರರಂಗದ ಪ್ರತಿನಿಧಿಯೂ ಆಗಿರುವ ಚೇತನ್‌, ಹಂಸಲೇಖರ ಪರ ದನಿ ಎತ್ತಿದ್ದಾರೆ. ಇಂತಹ ಚೇತನ್‌ ಸ್ಥಳಕ್ಕೆ ಬರಬಾರದೆಂದು ಅಡ್ಡಿಪಡಿಸಲು ಯತ್ನಿಸಲಾಗಿದೆ.

ಅಡ್ಡಿಗಳನ್ನು ದಾಟಿ ಬಸವನಗುಡಿ ಪೊಲೀಸ್ ಠಾಣೆಯ ಬಳಿ ಬಂದು ಮಾತನಾಡಿದ ಚೇತನ್‌, “ಇದು ಮಾಂಸಾಹಾರಿ, ಸಸ್ಯಾಹಾರಿಗಳ ಪ್ರಶ್ನೆ ಅಲ್ಲ. ಸಂವಿಧಾನದ ಅಡಿಪಾಯವಾದ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಬೇಕಾಗಿದೆ. ಹಂಸಲೇಖರ ಮಾತು ಇಷ್ಟವಾಗದವರು, ಕ್ಷಮೆ ಕೇಳಿದರೂ ಹಂಸಲೇಖರ ಮೇಲೆ ದೂರು ನೀಡಲಾಗಿದೆ. ಮಾತನಾಡಿದರೆ ಜೈಲಿಗೆ ಹಾಕಿಸಲು ತಮ್ಮ ಅನುಕೂಲಕರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಇದನ್ನು ಒಪ್ಪಲು ಆಗಲ್ಲ. ನಾಳೆ ನವೆಂಬರ್‌ 26ರಂದು ಹಂಸಲೇಖರ ಪರ ಸೇರುತ್ತಿದ್ದೇವೆ. ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌‌ವರೆಗೆ ಜಾಥಾ ನಡೆಯಲಿದೆ” ಎಂದು ತಿಳಿಸಿದರು.

“ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ರೈತ, ಮಹಿಳಾಪರ ಸಂಘಟನೆಗಳೆಲ್ಲ ಸೇರುತ್ತಿವೆ. ಹಂಸಲೇಖರ ಮೇಲೆ ಆಗುತ್ತಿರುವ ದಾಳಿಯನ್ನು ಯಾರೂ ಸಹಿಸಲು ಆಗಲ್ಲ. ಅವರ ಮಾತನ್ನು ಒಪ್ಪಲಿ, ಒಪ್ಪದಿರಲಿ ಅವರ ಮೇಲಿನ ದಾಳಿಯನ್ನು ಸಹಿಸಲು ಆಗಲ್ಲ. ವಾಕ್ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಬನ್ನಿ. ಜೈ ಕರ್ನಾಟಕ, ಜೈ ಬಸವ, ಜೈ ಭೀಮ್‌” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ವಾಕ್ ಸ್ವಾತಂತ್ರ್ಯ ಏನೆಂದು ಕೆಲವರು ಅರಿತಿಲ್ಲ.

    ವಾಕ್ ಸ್ವಾತಂತ್ರ್ಯ ಇದೇ ಇಂದು ಯಾವ ವ್ಯಕ್ತಿಯ ಅಥವಾ ಸಮುದಾಯದ ಗೌರವ ಕ್ಕೆ ದಕ್ಕೆ ಬರುವಹಾಗೆ, ಕೋಮುವಾದಕ್ಕೆ ದಾರಿ ಮಾಡಿಕೊಡುವಂತೆ ಯಾರಿಗೂ ಅಧಿಕಾರ ಕೊಟ್ಟಿಲ್ಲ

    ಎಲ್ಲ ಮಹಾಕೆಲಸ ಮಾಡಿರೋ ಮಹಾ ವ್ಯಕ್ತಿಗಳ ಬಗ್ಗೆ ಎಲ್ಲರೂ ಒಳ್ಳೇದು ಮಾತಾಡಿ, ಅವರು ಮಾಡಿರೋ ಒಳ್ಳೆ ಕಾರ್ಯಗಳನ್ನು ಜನರರಿಗೆ ತಿಳಿಸಬೇಕು. ಶಾಂತಿ ಇಂದ ನಡೆದು ಕೊಳ್ಳ ಬೇಕು.

    ಯಾವ ಬುದ್ಧಿಜೀವಿಗಳು ತಮ್ಮ ತಂದೆ, ತಾಯಿ, ಗುರು ಹಿರಿಯರು, ಆತ್ಮೀಯರ ಮುಂತಾದ ಇಷ್ಟ ವಸ್ತುಗಳ ಬಗ್ಗೆ ಅವಹೇಳನಾಕಾರಿ ಮಾತು ಕೇಳಲು ಇಷ್ಟ ಪಡುವುದಿಲ್ಲ ಮತ್ತೆ ಸಂವಿಧಾನದಲ್ಲಿ ಈ ರೀತಿ ಪುರಾವೆ ಇಲ್ಲದ ಮಾತುಗಳಿಗೆ ವಾಕ್ ಸ್ವಾತಂತ್ರನು ಕೊಟ್ಟಿಲ್ಲ.

    ಶ್ರೀ ಪೇಜಾವರ ಶ್ರೀಗಳು, ಶ್ರೀ ಅಂಬೇಡಿಕರ್ ಅವರು ಹೇಳಿದಂತೆ ಎಲ್ಲರೂ ಸಮಾನರು ಎಂದು ಸಮಾಜಕ್ಕೆ ತೋರುಸಿದ್ದಾರೆ. ದಲಿತರ ಪರ ನಿಂತು ಅವರಿಗೆ ಬಹಳಷ್ಟು ಒಳ್ಳೆ ಕೆಲಸಗಳು ಮಾಡಿದಾರೆ. ಗಂಗಾನದಿ ಸ್ವಚ್ಛತೆ, ರಾಮ ಮಂದಿರ ನಿರ್ಮಾಣಕ್ಕೆ ಅವರಿಗೆ ಭಾರತ ಸರ್ಕಾರ ಕೊಟ್ಟ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಭಾಯಿಸಿದ್ದಾರೆ. ಯಾರಿಗೂ, ಏನು ಮಾಡದೆ ಭಾರತ ರತ್ನ ಕೊಡುವುದಿಲ್ಲ. ಶ್ರೀಗಳಿಗೆ ಕೊಟ್ಟಿದ್ದಾರೆ…ಅಂತವರ ಬಗ್ಗೆ ಮಾತಾಡಿದರೆ ಖಂಡಿತ ಬೇಸರವಾಗುತ್ತೆ.

    ಚೇತನ್ ಅವರು “ನನ್ನನ್ನು ಯಾವ ಸಮುದಾಯ ಟಾರ್ಗೆಟ್‌ ಮಾಡಿತ್ತೊ ಅದೇ ಸಮುದಾಯದ ಲಾಬಿಗಳು ಇಂದು ಹಂಸಲೇಖ ಅವರಿಗೆ ಕಿರುಕುಳ ನೀಡುತ್ತಿದ್ದಾರೆ.” ಎಂದು ಹೇಳಿದ್ದಾರೆ. ಬಹುತೇಕ ಬೇರೆ ದೇಶದಲ್ಲಿದ್ದ ಅವರಿಗೆ, ಹಿಂದೂಸ್ತಾನದ ಬಗ್ಗೆ ಗೊತ್ತಿಲ್ಲ ಅನ್ನಿಸುತ್ತೆ. ಇಲ್ಲಿ ಎಲ್ಲ ಶಾಂತಿ ಇಂದ ಇರುತ್ತಾರೆ. ನೀವು ಏನಾದ್ರು ಹೇಳಿ ಕೆಣಕಿದರೆನೆ ಕೋಮುವಾದಗಲ್ಲು ಹುಟ್ಟುವುದು. ಶ್ರೀಗಳು ಅದನ್ನೇ ಬೇಡ ಅಂತ ನಮಗೆ ತೋರಿಸಿಕೊಟ್ಟಿದ್ದಾರೆ..ಎಲ್ಲಾರು ಶಾಂತಿ ಕಾಪಾಡಲು ಬದ್ಧವಾಗಿರಬೇಕು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...