Homeಮುಖಪುಟದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ...?

ದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ…?

ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

- Advertisement -
- Advertisement -

| ಗೌರಿ ಡೆಸ್ಕ್ |

ಮೇ 29, `ದಿ ಕ್ವಿಂಟ್’ ಆನ್‍ಲೈನ್ ಪೋರ್ಟಲ್‍ನ ಸಂಸ್ಥಾಪಕ ಸಂಪಾದಕ ರಾಘವ್ ಬಹ್ಲ್ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು. ಅವತ್ತಿಗೆ ಸರಿಯಾಗಿ ಇಪ್ಪತ್ತೆಂಟು ದಿನಗಳ ಹಿಂದೆ (ಮೇ 1ರಿಂದ) ಶುರುವಾದ ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದರ ಸಾರಾಂಶ ಹೀಗಿದೆ.

ಮೇ 29, 2019ರಂದು ರಾಘವ್ ಅವರಿಗೆ ಅಧಿಕೃತ `ಇ ಕೋಟ್ರ್ಸ್’ ಆನ್‍ಲೈನ್ ಸೇವೆಯಿಂದ ಒಂದು ಸುದ್ದಿ ಬಂದು ತಲುಪುತ್ತದೆ. ಅವರ ವಿರುದ್ಧ ಮೀರತ್‍ನ ಚೀಫ್ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಮೇ 3ರಂದು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಅವುಗಳ ವಿಚಾರಣೆ ಜೂನ್ 6ಕ್ಕೆ ಇದೆ ಎಂಬುದು ಅದರ ಸಾರಾಂಶ.

ಐ.ಟಿ ಇಲಾಖೆಯ ಶೋಕಾಸ್ ನೋಟಿಸ್

ಅದನ್ನು ನೋಡಿದ ರಾಘವ್‍ರಿಗೆ ನಿಜಕ್ಕೂ ಶಾಕ್ ಆಗುತ್ತದೆ. ಯಾಕೆಂದರೆ, ದೂರು ದಾಖಲಾಗಿ ಹೆಚ್ಚೂಕಮ್ಮಿ ಒಂದು ತಿಂಗಳು ಕಳೆಯುತ್ತಾ ಬಂದರು ಅದರ ಬಗ್ಗೆ ಸಮನ್ಸ್ ಆಗಲಿ, ನೋಟಿಸನ್ನೇ ಆಗಲಿ ನೀಡದ ಐಟಿ ಇಲಾಖೆ, ಮುಂದಿನ ವಿಚಾರಣೆ ಇನ್ನೇನು ಬೆರಳೆಣಿಕೆಯ ದಿನಗಳಿರುವಾಗ ಸಾಕ್ಷ್ಯ ಸಮೇತ ವಿಚಾರಣೆಗೆ ಹಾಜರಾಗಿ ಎಂದದ್ದು ನಮ್ಮ ಸಂವಿಧಾನದ `ನೈಸರ್ಗಿಕ ನ್ಯಾಯ’ದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದೇ ವಿಚಾರವಾಗಿ ಈ ಹಿಂದೆ ಐಟಿ ಇಲಾಖೆ ಕೊಟ್ಟಿದ್ದ ಶೋಕಾಸ್ ನೋಟಿಸ್‍ಗೆ ಪ್ರತಿಕ್ರಿಯಿಸುತ್ತಾ ಅದು ಆರೋಪಿಸುತ್ತಿರುವ ವ್ಯವಹಾರದಲ್ಲಿ ತಾವು ಯಾವ ಅಕ್ರಮವನ್ನೂ ನಡೆಸಿಲ್ಲ ಎಂಬುದನ್ನು ಸಾಬೀತುಪಡಿಸಲು ವಹಿವಾಟು ನಡೆದ ಎಲ್ಲಾ ದಾಖಲೆಗಳನ್ನೂ ಮತ್ತು ಈ ಆರ್ಥಿಕ ವರ್ಷದಲ್ಲಿ ತಾವು, ತಮ್ಮ ಮಡದಿ ರಿತು ಕಪೂರ್ ಸಲ್ಲಿಸಿದ್ದ ಆದಾಯ ತೆರಿಗೆ ಪಾವತಿ ಪ್ರಮಾಣಪತ್ರಗಳನ್ನು ತಮ್ಮ ಚಾರ್ಟೆಡ್ ಅಕೌಂಟೆಂಟ್ (ಸಿಎ) ಮೂಲಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದರು. ಅವ್ಯಾವುಗಳನ್ನೂ ಲೆಕ್ಕಕ್ಕೆ ಪರಿಗಣಿಸದೆ ಐಟಿ ಇಲಾಖೆ ಈ ದೂರುಗಳನ್ನು ದಾಖಲಿಸಿದ್ದು ಇಲ್ಲಿ ಸ್ಪಷ್ಟವಾಗಿತ್ತು.

ಮೇ 1ರಂದು ರಾಘವ್ ಅವರ ಮೇಲ್ ಐಡಿಗೆ  incometax.gov.in ಅಕೌಂಟ್‍ನಿಂದ ಒಂದು ಶೋಕಾಸ್ ನೋಟಿಸ್ ಬಂದಿತ್ತು. `ನೀವು ಲಂಡನ್‍ನಲ್ಲಿ ಖರೀದಿಸಿರುವ ಆಸ್ತಿಯೊಂದರ ಮೌಲ್ಯವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲುವಾಗ ತಪ್ಪೆಸಗಿದ್ದೀರಿ, ಆ ಆಸ್ತಿಯ ಮೌಲ್ಯಕ್ಕಿಂತ 2.45 ಕೋಟಿ ಕಡಿಮೆ ಮೌಲ್ಯ ತೋರಿಸಿ ತೆರಿಗೆ ವಂಚಿಸಿದ್ದೀರಿ ಎಂದು ಕಪ್ಪುಹಣ ನಿಗ್ರಹ ಕಾಯ್ದೆ-2015ರ ಸೆಕ್ಷನ್ 50 ಮತ್ತು 51ರಡಿ ನಿಮ್ಮ ವಿರುದ್ಧ ಯಾಕೆ ದೂರು ದಾಖಲಿಸಬಾರದು ಎಂಬುದಕ್ಕೆ ಸೂಕ್ತ ದಾಖಲೆಗಳ ಸಹಿತ ವಿವರಣೆ ಕೊಡಿ. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ನಿಮ್ಮ ಅಭ್ಯಂತರವಿಲ್ಲವೆಂದು ಪರಿಗಣಿಸಬೇಕಾಗುತ್ತದೆ’ ಎಂಬುದು ಇಡೀ ನೋಟಿಸಿನ ಸಾರಾಂಶ. ವಿಪರ್ಯಾಸವೆಂದರೆ ಮೇ 1ನೇ ತಾರೀಕು ನೋಟಿಸು ಬರುತ್ತೆ, ದಾಖಲೆ ಸಲ್ಲಿಸಲು ಮೇ 2ನೇ ತಾರೀಕು ಮಧ್ಯಾಹ್ನ 3.30ಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡಲಾಗುತ್ತೆ. ಅಂದರೆ ಕೇವಲ 24 ಗಂಟೆಗಳ ಒಳಗೆ ಅವರು ದಾಖಲೆಗಳನ್ನು ಹಾಜರುಪಡಿಸಬೇಕಾಗಿತ್ತು.

ರಾಘವ್ ಅವರ ಸಿಎ,  incometax.gov.in ಅಕೌಂಟ್‍ಗೆ ಮೇಲ್ ಮಾಡಿ ನಿಮ್ಮ ಶೋಕಾಸ್ ನೋಟಿಸ್‍ನಲ್ಲಿ ಸಾಕಷ್ಟು ತಪ್ಪು ಆರೋಪಗಳಿವೆ, ಅವುಗಳಿಗೆಲ್ಲ ಸೂಕ್ತ ದಾಖಲೆ ಒದಗಿಸಿ, ಕಾನೂನು ಸಲಹೆ ಪಡೆಯಲು ಎರಡು ವಾರ ಕಾಲಾವಕಾಶ ಬೇಕೆಂದು ಮೇ 2ರಂದು ಇಮೇಲ್ ರವಾನಿಸಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿದ್ದ ಐಟಿ ಇಲಾಖೆ, ಎರಡು ವಾರ ಕಾಲಾವಕಾಶ ಕೊಡಲು ಸಾಧ್ಯವೇ ಇಲ್ಲ, ಆದರೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರು ಫ್ಯಾಕ್ಚುಯಲ್ ಎರರ್‍ಗಳನ್ನಾದರು ನೀವು ಇವತ್ತೇ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು. ರಾಘವ್ ಅವರ ಸಿಎ ಅವತ್ತೇ `ಫ್ಯಾಕ್ಚುಯಲ್ ಪೊಸಿಷನ್’ಗಳನ್ನು ದಾಖಲಿಸಿ ಇಮೇಲ್ ರವಾನಿಸಿದ್ದರು.

ರಾಘವ್ ಅವರು ಒಪ್ಪಿಕೊಳ್ಳುವಂತೆ 2015ರಲ್ಲಿ ಅವರು ಲಂಡನ್‍ನಲ್ಲಿ 27.76 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದು ನಿಜ. ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರವನ್ನು ಬ್ಯಾಂಕ್ ಮಾರ್ಗಗಗಳಲ್ಲೇ ನಡೆಸಿದ್ದಾರೆ. ಹಾಗಾಗಿ ಕಪ್ಪು ಹಣ ವಹಿವಾಟಿಗೆ ಅವಕಾಶವೇ ಇಲ್ಲ. ಖರೀದಿಯ ಮುಂಗಡವಾಗಿ ರಾಘವ್ ಅವರ ಅಕೌಂಟ್‍ನಿಂದ 2.4 ಕೋಟಿ ವರ್ಗಾವಣೆಯಾದರೆ, ಅವರ ಮಡದಿ ರಿತು ಕಪೂರ್ ಅಕೌಂಟ್‍ನಿಂದ ಅಷ್ಟೇ ಮೊತ್ತ ವರ್ಗಾವಣೆಯಾಗಿದೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಆಸ್ತಿ ಖರೀದಿಸುವಾಗ ಅಲ್ಲಿನ ಕಟ್ಟಳೆಗಳಿಗೆ ಒಳಪಟ್ಟು ಖರೀದಿ ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಿಕೊಡುವ ಕೆಲ ಏಜೆನ್ಸಿಗಳಿರುತ್ತವೆ. ಅಂತದ್ದೇ ಒಂದು ಆರ್.ಬಿ.ಆರ್.ಕೆ ಇನ್ವೆಸ್ಟ್‍ಮೆಂಟ್ ಕಂಪನಿಗೆ ರಾಘವ್ ತಮ್ಮ ಖರೀದಿ ವ್ಯವಹಾರ ಒಪ್ಪಿಸಿದ್ದರು. ಆ ಕಂಪನಿ ಇಂಗ್ಲೆಂಡ್‍ನ ಬರ್‍ಕ್ಲೇ ಬ್ಯಾಂಕ್‍ನಿಂದ ರಾಘವ್ ಅವರಿಗೆ ಸುಮಾರು 17.95 ಕೋಟಿಯಷ್ಟು ಸಾಲ ಮಂಜೂರು ಮಾಡಿಸಿದ್ದಲ್ಲದೆ, ಮಿಕ್ಕುಳಿದ 2.45 ಕೋಟಿಯನ್ನು ತನ್ನ ಅಕೌಂಟ್‍ನಿಂದ ಆಸ್ತಿ ಒಡೆಯರಿಗೆ ವರ್ಗಾವಣೆ ಮಾಡಿತ್ತು. ಈಗ ಐಟಿ ಇಲಾಖೆ ಹೆಚ್ಚುವರಿ ಮೌಲ್ಯ ಮುಚ್ಚಿಟ್ಟಿದ್ದೀರಿ ಎಂದು ಆರೋಪಿಸುತ್ತಿರುವುದು ಇದೇ ರೂ. 2.45 ಕೋಟಿಯ ಮೇಲೆ.

ಈ ಕಂಪನಿಯಲ್ಲಿ ರಾಘವ್ ಅವರ ಹೆಂಡತಿ ರಿತು ಕಪೂರ್ ಅವರು ಹೂಡಿಕೆ ಮಾಡಿದ್ದು, ಆ ಹೂಡಿಕೆ ಆಧಾರದಲ್ಲಿ ಕಂಪನಿ ಅಷ್ಟು ಮೊತ್ತ ಪಾವತಿಸಿದೆ. ಆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಕ್ಕೆ ರಿತು ಅವರ ಬಳಿ ಎಲ್ಲಾ ದಾಖಲೆಗಳಿದ್ದು ಅದನ್ನು ಐಟಿ ಇಲಾಖೆಯ ಮುಂದೆ ಘೋಷಿಸಿಕೊಂಡು, ಕಟ್ಟಬೇಕಾದ ತೆರಿಗೆಯನ್ನೆಲ್ಲ ಪಾವತಿಸಿದ್ದಾರೆ. ಹಾಗಾಗಿ ಕಂಪನಿ ಪಾವತಿಸಿದ ಮೊತ್ತಕ್ಕೂ ರಾಘವ್ ದಂಪತಿಗಳು ನ್ಯಾಯಬದ್ಧವಾಗಿಯೇ ತೆರಿಗೆ ಕಟ್ಟಿದ್ದಾರೆ.

ಇದೆಲ್ಲವನ್ನು ವಿವರಿಸಿ ಇಮೇಲ್ ಕಳಿಸಿದ್ದರೂ ಅದನ್ನು ಲೆಕ್ಕಿಸದೆ, ಐಟಿ ಇಲಾಖೆ ಮೇ 3ನೇ ತಾರೀಕು ಎರಡು ದೂರುಗಳನ್ನು ದಾಖಲಿಸುತ್ತದೆಂದರೆ ಇದು ಪೂರ್ವ ನಿಯೋಜಿತ ಸಂಚು ಎಂಬುದು ರಾಘವ್ ಅವರ ಅಭಿಪ್ರಾಯ. ಯಾಕೆಂದರೆ, ಮೇಲ್‍ನಲ್ಲಿ ವಿವರಿಸಿದ್ದು ಮಾತ್ರವಲ್ಲದೆ ಮೇ 13ರಂದು ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಐಟಿ ಕಚೇರಿಗೆ ಹೋದ ರಾಘವ್ ಅವರ ಪ್ರತಿನಿಧಿಗಳು ಅವುಗಳನ್ನು ಸ್ವೀಕರಿಸಿ, ತಮ್ಮ ಸ್ಪಷ್ಟೀಕರಣ ದಾಖಲಿಸಲು ಅವಕಾಶ ಕೊಡುವಂತೆ ಕೇಳಿದ್ದರು. ಆದರೆ ಅಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಅವರ ಸ್ಪಷ್ಟೀಕರಣವನ್ನೂ ದಾಖಲಿಸಿಕೊಳ್ಳದೆ ವಾಪಾಸು ಕಳಿಸಿದ್ದರು. ಅವತ್ತು ಸಹಾ, ನಿಮ್ಮ ಕಕ್ಷಿದಾರರ ಮೇಲೆ ಈಗಾಗಲೇ (ಮೇ 3ರಂದು) ಕೇಸು ದಾಖಲಿಸಿದ್ದೇವೆ ಎಂಬ ಗುಟ್ಟನ್ನು ಐಟಿ ಅಧಿಕಾರಿಗಳು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ರೆಜಿಸ್ಟಾರ್ ಪೋಸ್ಟ್ ಮೂಲಕ ಅವುಗಳನ್ನೆಲ್ಲ ಐಟಿ ಕಚೇರಿಗೆ ಕಳುಹಿಸಿ, ಮೇ 14ರಂದು ಅದೇ ದಾಖಲೆಗಳ ಪ್ರತಿಗಳನ್ನು iಟಿಛಿomeಣಚಿx.gov.iಟಿ ಅಕೌಂಟಿಗೆ ಮೇಲ್ ಕೂಡಾ ಮಾಡಿದ್ದರು. ಆದರೆ ಅಲ್ಲಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ.

ಫ್ಯಾಕ್ಚುಯಲ್ ದೋಷಗಳಿರುವ ಶೋಕಾಸ್ ನೋಟಿಸ್ ನೀಡುವುದು, ನೋಟಿಸ್ ತಲುಪಿದ ಒಂದೇ ದಿನಕ್ಕೆ ದಾಖಲೆ ಒದಗಿಸುವಂತೆ ಅಪ್ರಾಯೋಗಿಕ ಗಡುವು ನೀಡುವುದು, ಅವಧಿ ವಿಸ್ತರಣೆ ಕೋರಿಕೆಯನ್ನು ಮನ್ನಿಸದೆ ಅವರು ಸಲ್ಲಿಸುವ ಪ್ರತಿಕ್ರಿಯೆಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಮಾರನೇ ದಿನವೇ ದೂರು ದಾಖಲಿಸುವುದು, ಆ ದೂರಿನ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಡದಿರುವುದು, ದಾಖಲೆ ಸಲ್ಲಿಸಲು ಕಚೇರಿಗೆ ಹೋದರೆ ಸ್ವೀಕರಿಸದೆ ವಾಪಾಸು ಕಳಿಸುವುದು, ವಿಚಾರಣೆಗೆ ಕೆಲವೇ ದಿನ ಇರುವಾಗ ಇವರಿಗೆ ಸುದ್ದಿ ಗೊತ್ತಾಗುವುದು, ಇವೆಲ್ಲವನ್ನೂ ಗಮನಿಸಿದರೆ ಕೇಂದ್ರ ಐಟಿ ಇಲಾಖೆ ಉದ್ದೇಶಪೂರ್ವಕವಾಗೇ, ಎಲ್ಲಾ ಕಟ್ಟಳೆಗಳನ್ನು ಧಿಕ್ಕರಿಸಿ ತನ್ನನ್ನು ಟ್ರ್ಯಾಪ್ ಮಾಡಲು ಯತ್ನಿಸುತ್ತಿದೆ ಎಂಬುದು ರಾಘವ್ ಅವರ ಸ್ಪಷ್ಟ ನಿಲುವು.

ರಾಘವ್ ಮತ್ತು ರಿತು ದಂಪತಿಗಳು `ನ್ಯೂಸ್ 18’ ಸಂಸ್ಥೆಯಿಂದ ಹೊರಬಂದ ನಂತರ 2015ರಲ್ಲಿ `ದಿ ಕ್ವಿಂಟ್’ ಎಂಬ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆನ್‍ಲೈನ್ ನ್ಯೂಸ್ ಪೋರ್ಟಲ್ ಆರಂಭಿಸಿದ್ದರು. 2016ರಲ್ಲಿ ಬ್ಲೂಮ್‍ಬರ್ಗ್ ನ್ಯೂಸ್ ಸಂಸ್ಥೆ ಪಾಲುದಾರನಾಗಿ ಇದರಲ್ಲಿ ಹೂಡಿಕೆ ಮಾಡಿದೆ. ಬಹುಪಾಲು ಮಾಧ್ಯಮಗಳು, ಪತ್ರಿಕೆಗಳು ಆಳುವ ಸರ್ಕಾರದ ಕೈಗೊಂಬೆಯಂತೆ, ಒಂದು ಪ್ರಬಲ ರಾಜಕೀಯ ಪಕ್ಷದ ಪಕ್ಷಪಾತಿಗಳಂತೆ ವರ್ತಿಸುತ್ತಿವೆ ಎಂಬ ಅಭಿಪ್ರಾಯ ಜನರ ನಡುವೆ ಮೂಡುತ್ತಿದ್ದ ಕಾಲದಲ್ಲಿ `ದಿ ಕ್ವಿಂಟ್’ ಅದಕ್ಕೆ ತದ್ವಿರುದ್ಧವಾಗಿ ಯಾರ ಮುಲಾಜಿಗೂ ಒಳಗಾಗದೆ ಅಧಿಕಾರಸ್ಥರ ವಿರುದ್ಧವೇ ಆಘಾತಕಾರಿ ಸತ್ಯಗಳನ್ನು ಹೊರಗೆಡವುವ ಸುದ್ದಿಸಂಸ್ಥೆಯಾಗಿ ಗುರುತಿಸಿಕೊಂಡಿತ್ತು. 2018ರಲ್ಲಿ ರಾಘವ್ ಅವರ ಮೇಲೆ ಐಟಿ ದಾಳಿ ನಡೆದಾಗ, ಅದರ ಹಿಂದೆ `ದಿ ಕ್ವಿಂಟ್’ ನ್ಯೂಸ್ ಸಂಸ್ಥೆಯನ್ನು ಹತ್ತಿಕ್ಕುವ ಹುನ್ನಾರಗಳಿರಬಹುದೆಂದು ಹಲವಾರು ವಿಶ್ಲೇಷಕರು ಅಂದಾಜಿಸಿದ್ದರು. ಈಗ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ ಅದು ನಿಜವೆನ್ನಿಸುತ್ತದೆ.

ಇದನ್ನೂ ಓದಿರಿ: ಕನ್ನಡದ ನಟರ ಮೇಲೆಕೆ ಐ.ಟಿ ಕಣ್ಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...

ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ: ವಿಚಾರಣೆ ತಿರಸ್ಕರಿಸಿದ ಸುಪ್ರೀಂ; “ವಿಡಿಯೋ ನೋಡಲು ನಮಗೆ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದ ನ್ಯಾಯಮೂರ್ತಿ ಸೂರ್ಯಕಾಂತ್

ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಶಾಂತಿಯುತವಾಗಿ ಹೋರಾಡುತ್ತಿದ್ದ ಯುವ ಸಮೂಹದ ಮೇಲೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯದ ವಿರುದ್ಧ ನ್ಯಾಯದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ದೇಶದ ಅತ್ಯುನ್ನತ ನ್ಯಾಯಾಲಯದಿಂದ...

ರಾಹುಲ್ ಗಾಂಧಿ ವಿದ್ಯಾರ್ಥಿಗಳನ್ನು ‘ರಾಜಕೀಯ ದಾಳ’ವಾಗಿ ಬಳಸುತ್ತಿದ್ದಾರೆ ಎಂದ ಧರ್ಮೇಂದ್ರ ಪ್ರಧಾನ್ ವಿರುದ್ಧ ವ್ಯಾಪಕ ಆಕ್ರೋಶ

ನವದೆಹಲಿ: ದೇಶಾದ್ಯಂತ ನೀಟ್ (NEET) ಪರೀಕ್ಷೆಯ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶಿಕ್ಷಣ ಸಚಿವ ಧರ್ಮೇಂದ್ರ...

ಸಿಜೆಪಿ ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್ ಬಳಕೆ, ವಿದ್ಯುತ್ ಲಾಠಿ ಪ್ರಹಾರ: ಆರೋಪ ನಿರಾಕರಿಸಿದ ಪೊಲೀಸರು

ಸೋಮವಾರ (ಜುಲೈ 20) ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಕರೆ ನೀಡಿದ್ದ ಸಂಸತ್ ಚಲೋ ಮೆರವಣಿ ಸಂದರ್ಭದಲ್ಲಿ ನಡೆದ ಪೊಲೀಸರ ದೌರ್ಜನ್ಯದಲ್ಲಿ ಗಾಯಗೊಂಡ 80 ಪ್ರತಿಭಟನಾಕಾರರಲ್ಲಿ ಕನಿಷ್ಠ ಒಬ್ಬರಿಗೆ ಪೆಲೆಟ್ ಗನ್ ಗಾಯಗಳಾಗಿವೆ...