Homeಕರ್ನಾಟಕಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

ಈ ದುರಿತ ಕಾಲದಲ್ಲಿ ನೆಟ್ಟಿಗರಿಗೊಂದು ಸಿಟ್ಟಿನ ಪತ್ರ

2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

- Advertisement -
- Advertisement -

ಪ್ರಿಯ ನೆಟ್ಟಿಗರೆ,
ಕರ್ನಾಟಕದಲ್ಲಿ ಮೈತ್ರಿ ಸರಕಾರ ಸಂಕಷ್ಟದಲ್ಲಿದೆ. ಹಲವಾರು ಶಾಸಕರು ರಾಜೀನಾಮೆ ನೀಡಿದ್ದಾರೆ. ಕುದುರೆ ವ್ಯಾಪಾರ ನಡೆಯುತ್ತಿದೆ ಎನ್ನುವ ಸುದ್ದಿಗಳು ಪ್ರಚಲಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಇದರ ಬಗ್ಗೆಯೇ ಬರಹಗಳನ್ನು ಬರೆಯುತ್ತಿದ್ದೀರಿ. ಸದ್ಯದ ಸ್ಥಿತಿಯನ್ನು ವಿವರಿಸಲು ಇಷ್ಟು ಮಟ್ಟದ ಹಾಸ್ಯದ ವ್ಯಂಗ್ಯದ ಬಳಕೆಗೆ ಒಂದು ರೀತಿಯ ಪೈಪೋಟಿಯೇ ನಡೆಸಿದ್ದಂತಿದೆ.

ಈ ರೀತಿಯಲ್ಲಿ ಗೇಲಿ ಮಾಡಲು ನಮಗೆ ಸಂಪೂರ್ಣ ಅಧಿಕಾರವಿದೆ. ಎಲ್ಲಾ ರಾಜಕೀಯ ಹಿತಾಸಕ್ತಿಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಗೇಲಿಯಾಗುತ್ತಿದೆ ಎನ್ನುವ ಅರಿವಿದೆ. ಆದರೂ ಅವರೇನೂ ಮಾಡುವುದಿಲ್ಲ. ನಮಗೆ ಸಾಂವಿಧಾನಿಕವಾಗಿ ಸಿಕ್ಕ ಹಕ್ಕಿನ ಕಾರಣದಿಂದ, ಅವರೇನೂ ಮಾಡಲಾಗದೇ ನಿಷ್ಕ್ರಿಯರಾಗಿದ್ದಾರೆಂದು ನಾವೆಂದುಕೊಳ್ಳುತ್ತೇವೆ. ಆದರೆ ವಾಸ್ತವ ಅದಲ್ಲ. ಯಾವ ರಾಜಕೀಯ ಶಕ್ತಿಯೂ ನೇರವಾಗಿ ಯಾವ ಕ್ರಮಗಳನ್ನೂ ತೆಗೆದುಕೊಳ್ಳಲೇ ಇರುವುದಕ್ಕೆ ಕಾರಣವೆಂದರೆ ಈ ಬರಹಗಳು ಅವರಿಗೆ ಯಾವುದೇ ರೀತಿಯ ಅಪಾಯವನ್ನು ಒಡ್ಡುವುದಿಲ್ಲ. ಅಪಾಯ ಒಡ್ಡಿದಾಗ ಏನಾಗಬಹುದು ಎನ್ನುವುದನ್ನು ಈಗೀಗ ಕಾಣುತ್ತಿದ್ದೇವೆ.

ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದರಿಂದ ನಮಗೆಲ್ಲ ಒಂದು ರೀತಿಯ ಸೆನ್ಸ್ ಆಫ್ ಪಾವರ್ ಸಿಗುತ್ತೆ; ನಾವು ಇತರರಿಗಿಂತ ಉತ್ತಮರು ಎನ್ನುವ ಮೇಲರಿಮೆಯ ಭಾವನೆಯನ್ನೂ ನೀಡುತ್ತದೆ. ಈ ಮೇಲರಿಮೆ ನಮ್ಮ ಮುಂದೆ ಇರುವ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಎದುರಿಸದೇ ಇರುವುದಕ್ಕೆ ಕಾರಣವಾಗಬಲ್ಲದು.

ಆದರೆ ಪ್ರಸಕ್ತ ಬೆಳವಣಿಗೆಗಳಿಂದ ನಮಗಾರಿಗೂ ಆಘಾತವಾದಂತೆ ತೋರುತ್ತಿಲ್ಲ. ಆಘಾತವಾಗುವಂತಹ ಸಂದರ್ಭಗಳೇ ನಮಗಿಲ್ಲವೇನೋ? ನಮ್ಮಲ್ಲಿ ಕೆಲವರು ಈ ಬೆಳವಣಿಗೆಗೆ ಸಿಟ್ಟನ್ನು ತೋರಿಸುತ್ತಿದ್ದಾರೆ. ಈ ಸಿಟ್ಟನ್ನು ನಮ್ಮ ಫೇಸ್‍ಬುಕ್‍ನ ಜಾಣ್ಮೆಯ ಬರಹಗಳಿಂದ ಮಾತ್ರ ತಣಿಸಬೇಕೆ? ಅಪಾಯವಿರುವುದು ಇಲ್ಲಿಯೇ ಗೆಳೆಯರೆ, ನಮ್ಮ ಸಿಟ್ಟು ತಣಿದುಬಿಡುತ್ತೆ ಕೆಲಮಟ್ಟಿಗೆ. ಸಿಟ್ಟು ತಣಿಯದಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇನ್ನೂ ಒಂದು ವಾದವಿದೆ. ಆ ಸಿಟ್ಟು ಯಾವ ಕಾರಣಕ್ಕೆ? ಇವರನ್ನು ಆಯ್ಕೆ ಮಾಡಿದಾಗ ಇವರು ಎಂಥವರು ಎನ್ನುವುದು ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿತ್ತು. ಇನ್ಯಾಕೆ ಸಿಟ್ಟು? ಎಂಬುದು. ಅದೂ ಸಹಾ ಅರ್ಧಸತ್ಯದ ಮಾತು. ನಾವು ಎಂದೂ ಇದರ ಬದಲಾವಣೆಗೆ ಕೈ ಹಾಕದಂತೆ ಮಾಡುವ ವಾದ ಅದು.

ಇನ್ನೊಂದು ವಿಷಯ, ಸುಮಾರು 2010ರಿಂದ ನಾವು ಬಿಜೆಪಿಯ, ನರೇಂದ್ರ ಮೋದಿಯ ಬೆಂಬಲಿಗರನ್ನು ಭಕ್ತರೆಂದು ಕರೆದು ಗೇಲಿ ಮಾಡುತ್ತಲೇ ಬಂದಿದ್ದೇವೆ. ಅವರನ್ನು ಅನ್‍ಫ್ರೆಂಡ್ ಮಾಡುವ ಬೆದರಿಕೆ ಹಾಕುತ್ತಲೇ ಬಂದಿದ್ದೇವೆ. ಅದರಿಂದ ಆದ ಪರಿಣಾಮ ಏನು ಎನ್ನುವ ಉತ್ತರವನ್ನು ಹುಡುಕುವ ಸಮಯ ಬಂದಿದೆ. 2009ರ ಚುನಾವಣೆಯಲ್ಲಿ ಕರ್ನಾಟಕದ ಮತದಾರರಲ್ಲಿ 41.6% ಜನ ಬಿಜೆಪಿಗೆ ಮತ ಹಾಕಿದರೆ, 2014 ರಲ್ಲಿ 43% ಮತದಾರರು ಬಿಜೆಪಿಗೆ ತಮ್ಮ ಮತ ನೀಡಿದರು. 2019ರಲ್ಲಿ ಬಿಜೆಪಿಯ ಮತದಾರರ ಪ್ರಮಾಣ 52%. ನಾವು, ನೆಟ್ಟಿಗರೂ, ಈ ಹೆಚ್ಚಳಕ್ಕೆ ಕಾರಣರಾಗಿದ್ದೇವೆಯೇ?

ಆಯ್ತು, ನಾವು ಕಾರಣರಲ್ಲ ಎಂದಿಟ್ಟುಕೊಳ್ಳೋಣ. ಸದ್ಯದ ಈ ಅಸಹ್ಯಕರ, ಅವಮಾನಕರ ವಿದ್ಯಮಾನಗಳು ಮುಂದೆ ಮರುಕಳಿಸದಂತೆ ಮಾಡಲು ನಮ್ಮ ವ್ಯಂಗ್ಯ, ಸಿಟ್ಟು ಏನಾದರೂ ಮಾಡಬಲ್ಲವೇ? ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಮಾಡುವ ಪ್ರತಿರೋಧ, ವ್ಯಂಗ್ಯಕ್ಕೆ ನೀಡಿರುವ ಸ್ವಾತಂತ್ರ್ಯವು ಒಂದು ಲೆಕ್ಕಾಚಾರದೊಂದಿಗೆ ನೀಡಲಾಗಿದ್ದು ಎನ್ನುವ ವಿಷಯವನ್ನು ಮನದಟ್ಟಾಗಿಸಬೇಕಿದೆ.

ಈ ವಿದ್ಯಮಾನಗಳು ನಮ್ಮನ್ನು, ನಮ್ಮ ರಾಜ್ಯವನ್ನು ಅವಮಾನಕ್ಕೆ ದೂಡಿವೆ ಎಂದರೆ ಇವು ಮರುಕಳಿಸದಂತೆ ಆಗದಂತೆ ಏನು ಮಾಡಬೇಕು ಎನ್ನುವ ಚಿಂತನೆಯೂ ಸಾಮಾಜಿಕ ಜಾಲತಾಣಗಳಲ್ಲಿ ಶುರು ಮಾಡಬೇಕಿದೆ. ಭವಿಷ್ಯವನ್ನು ರೂಪಿಸುವ ಚಿಂತನೆಗಳು ಶುರುವಾದರೆ ಅಲ್ಲಿ ವ್ಯಂಗ್ಯಕ್ಕೆ ಸ್ಥಾನವಿರುವುದಿಲ್ಲ; ಒಂದು ವೇಳೆ ಇದ್ದರೂ ಅದು Constructive ಆಗಿರುತ್ತೆ. ನಮ್ಮ ಪ್ರತಿ ಫೇಸ್‍ಬುಕ್ ಗೋಡೆಬರಹ ಸಕಾರಾತ್ಮಕ ಬದಲಾವಣೆಗೆ ಪೂರಕವಾಗಿದೆಯೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ರಾಜಕೀಯ ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಿದ್ದೇವೆ ಎಂದ ಮಾತ್ರಕ್ಕೆ ಹೆಮ್ಮೆ ಪಡುವುದನ್ನು ನಿಲ್ಲಿಸುತ್ತೇವೆ. ಖಾರವಾಗಿ ಬರೆಯುವುದರಿಂದ ಏನಾದರೂ ಲಾಭವಿದೆಯೇ ಎನ್ನುವುದನ್ನು ಕೇಳಿಕೊಳ್ಳುತ್ತೇವೆ. ಸತ್ಯವನ್ನು ನುಡಿದ ಮಾತ್ರಕ್ಕೆ ನಮ್ಮ ಕರ್ತವ್ಯ ಮುಗಿಯುವುದಿಲ್ಲ ಎಂದುದು ತಿಳಿಯುವುದೂ ಭವಿಷ್ಯಕ್ಕೆ ನಾವು ನಿಜವಾಗಿಯೂ ಜವಾಬ್ದಾರರಾದಾಗ ಮಾತ್ರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...