Homeಆರೋಗ್ಯಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ಇಂತಹ ಒಂದು ಗಂಭೀರ ಸಾಂಕ್ರಾಮಿಕದ ಮಧ್ಯೆಯೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ನಿರಾಕರಿಸುತ್ತಿರುವ ರಾಜಕೀಯ ವರ್ಗ ನಮ್ಮನ್ನು ಆಳುತ್ತಿರುವುದು ನಮ್ಮ ದುರಾದೃಷ್ಟ.

- Advertisement -
- Advertisement -

ಅನೇಕ ವರ್ಷಗಳಿಂದ ಆರೋಗ್ಯ ಸೇವೆಗೆ ಅತಿ ಕಡಿಮೆ ಹಣ ಮೀಸಲಿಟ್ಟು ವ್ಯಯಿಸಿದ್ದರ ಕೆಟ್ಟ ಪರಿಣಾಮವನ್ನು ಕರ್ನಾಟಕ ಇಂದು ಕಾಣುತ್ತಿದೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೂ ಇದರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. 2020-21 ರ ಬಜೆಟ್ಟಿನಲ್ಲಿ, ಆರೋಗ್ಯಕ್ಕೆ ಮೀಸಲಿಟ್ಟ ಹಣ 4.3% ಆಗಿತ್ತು. ಅಂದರೆ ಹಿಂದಿನ ಸರಕಾರಗಳು ಮೀಸಲಿಟ್ಟಷ್ಟೇ ಹಣವನ್ನು ಈ ಹೊಸ ಸರಕಾರವೂ ಮೀಸಲಿಟ್ಟಿತು. ಇದು ಇತರ ಎಲ್ಲಾ ರಾಜ್ಯಗಳ ಸರಾಸರಿಯಾದ 5.3% ಕ್ಕೆ ಹೋಲಿಸಿದರೆ ಬಹಳ ಕಡಿಮೆ. ಕಳೆದ ವರ್ಷ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದಾಗ ನೀತಿ ಆಯೋಗವು ರಾಜ್ಯವಾರು ಆರೋಗ್ಯ ಅಂಕಿಅಂಶಗಳ ಎರಡನೇ ಸುತ್ತಿನ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿಯು, ಕರ್ನಾಟಕದ ಪ್ರಾಥಮಿಕ ಆರೋಗ್ಯ ಸೇವೆಯು ದುರ್ಬಲವಾಗಿರುವುದನ್ನು ಬಹಿರಂಗಗೊಳಿಸಿತು.

ಪ್ರಾಥಮಿಕ ಆರೋಗ್ಯ ಸೇವೆಯೇ ರೋಗಗಳನ್ನು ತಡೆಯುವುದರಲ್ಲಿ ಮತ್ತು ಆರೋಗ್ಯ ಸುಧಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ಉಪಕೇಂದ್ರಗಳಲ್ಲಿ ಎಎನ್‍ಎಮ್‍ಗಳ (Auxiliary Nursing Midwifery) ಹುದ್ದೆಗಳ ಖಾಲಿ ಪ್ರಮಾಣ 33.4% ಕ್ಕೆ ಏರಿದೆ. ಇದರಿಂದ ಬಾಣಂತಿಯರ ಮತ್ತು ಮಕ್ಕಳ ಆರೋಗ್ಯ ಸೇವೆಯಯಲ್ಲಿ ವ್ಯತ್ಯಯ ಉಂಟಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಸಿಎಚ್‍ಸಿಗಳ (ಸಮುದಾಯ ಆರೋಗ್ಯ ಕೇಂದ್ರಗಳು) ಬೆನ್ನೆಲುಬಾಗಿ ದುಡಿಯುವ ಸ್ಟಾಫ್ ನರ್ಸ್‍ಗಳ ಹುದ್ದೆಗಳಲ್ಲಿ ಸುಮಾರು 22% ಹುದ್ದೆಗಳು ಖಾಲಿಯಾಗಿ ಉಳಿದುಕೊಡಿವೆ. ಸಿಎಚ್‍ಸಿಗಳಲ್ಲಿ ಕೇವಲ 45% (ಆರೋಗ್ಯ ತುರ್ತಿನಲ್ಲಿ ಜೀವ ಉಳಿಸಲು ಪ್ರಮುಖ ಪಾತ್ರ ವಹಿಸುವ ಆರೋಗ್ಯ ಕೇಂದ್ರಗಳು) ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 37.7% ವಿಶೇಷಜ್ಞರ ಹುದ್ದೆಗಳು ಖಾಲಿಯಿದ್ದವು. ಹಾಗಾಗಿ, ನವಜಾತ ಶಿಶು ಮರಣದ ಪ್ರಮಾಣ 18% ಹಾಗೂ ಹೆಣ್ಣು-ಗಂಡು ಶಿಶುಗಳ ಲೈಂಗಿಕ ಅನುಪಾತದ ಪ್ರಮಾಣ 935 ಕ್ಕೆ ನಿಂತನೀರಾಗಿರುವುದು ಆಶ್ಚರ್ಯವಲ್ಲ. ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಕೇವಲ 79.6% ಆಗಿತ್ತು, ಅದು ಸದ್ಯದ ಗುರಿಯಾದ 90%ಕ್ಕಿಂತ ಕಡಿಮೆ ಹಾಗೂ ಟಿಬಿ ರೋಗದ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಕೇವಲ 79.7% ಆಗಿ ಉಳಿದಿದೆ.

ಪ್ರಾಥಮಿಕ ಆರೋಗ್ಯ ಸೇವೆಯು ಯಾವುದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಡಿಪಾಯ. ಹಾಗಾಗಿ ಒಂದು ದುರ್ಬಲ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯು ರಾಜ್ಯದಲ್ಲಿ ಕೋವಿಡ್-19 ನಂತಹ ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ ಯಾವ ರೀತಿ ಭಾಧಿಸುತ್ತೆ ಎಂಬುದು ಈಗ ಜಗಜ್ಜಾಹಿರವಾಗಿದೆ. ಇಷ್ಟಾದರೂ, ಯಡಿಯೂರಪ್ಪನವರ ಸರಕಾರವು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಿಗೊಟ್ಟು, ಖಾಸಗಿ ಆರೋಗ್ಯ ವಲಯವನ್ನು ಉತ್ತೇಜನ ನೀಡುವ ಅಪಾಯಕಾರಿ ನೀತಿಗಳನ್ನು ಅನುಸರಿಸುವುದನ್ನು ನಿಲ್ಲಿಸಿಲ್ಲ. ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನೀತಿ ಆಯೋಗವು ಸೂಚಿಸಿರುವಂತೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ನಿರ್ವಹಣೆಯಲ್ಲಿ ಖಾಸಗಿ ವಲಯವನ್ನು ತಂದು, ಸರಕಾರಿ ಆಸ್ಪತ್ರೆಗಳ ಖಾಸಗಿಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪ್ರಸಕ್ತ ಸರಕಾರದ ಹೆಚ್ಚಿನ ಆರೋಗ್ಯದ ಯೋಜನೆಗಳು ಪ್ರಾಥಮಿಕ ಮತ್ತು ಎರಡನೇ ಹಂತದ ಅರೋಗ್ಯ ಸೇವೆಗಳ ಮೇಲ್ಪಟ್ಟ ಮೂರನೇ ಹಂತದ ಆರೋಗ್ಯ ಸೇವೆಯ ಮೇಲೆಯೇ ಕೇಂದ್ರೀಕೃತವಾಗಿವೆ ಹಾಗೂ ಪಿಪಿಪಿ (ಖಾಸಗಿ, ಸರಕಾರಿ ಸಹಯೋಗ)ದ ಮಾದರಿಯಲ್ಲಿ ಯೋಜಿಸಲಾಗಿದೆ. ಅದರಲ್ಲಿ ಆರೋಗ್ಯ ತುರ್ತುಗಳನ್ನು ನಿರ್ವಹಿಸಲು 5 ತಾಲೂಕು ಆಸ್ಪತ್ರೆಗಳು, ಮಂಗಳೂರಿನಲ್ಲಿ ಮಕ್ಕಳ ಆರೋಗ್ಯ ಸೇವೆಯ ಪ್ರಾದೇಶಿಕ ಉನ್ನತ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತೀವ್ರ ನಿಘಾ ಘಟಕಗಳನ್ನು ಸ್ಥಾಪಿಸುವುದಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲಾ ಯೋಜನೆಗಳಲ್ಲಿ ಉಪಕರಣದ ಖರೀದಿಯಲ್ಲಿ ಮತ್ತು ನಿರ್ಮಾಣದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಬೇಕಾಗುತ್ತದೆ ಹಾಗೂ ಅದರಿಂದ ಭ್ರಷ್ಟಾಚಾರ ಮಾಡುವ ಅವಕಾಶ ಇರುತ್ತದೆ. ಅಂದರೆ, ವಿಶೇಷತಜ್ಞರ ಹುದ್ದೆಯನ್ನು ಭರ್ತಿ ಮಾಡದೇ ಐಸಿಯುಗಳನ್ನು ರಚಿಸುವುದು, ಎಎನ್‍ಎಮ್ ಮತ್ತು ಸ್ಟಾಫ್ ನರ್ಸಗಳ ಹುದ್ದೆಗಳನ್ನು ಭರ್ತಿ ಮಾಡದೇ ಪಿಎಚ್‍ಸಿಗಳಲ್ಲಿ ದೂರವಾಣಿ ಮೂಲಕ ಆರೋಗ್ಯ ಸೇವೆ ನೀಡುವುದು ಇತ್ಯಾದಿಗಳ ಅರ್ಥ ಸಾಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತೇಪೆ ಹೆಚ್ಚಿದಂತೆ ಆಗುತ್ತೆ ಹೊರತು ಮತ್ತೇನಿಲ್ಲ.

ಇನ್ನು ಗಾಯಕ್ಕೆ ಬರೆ ಹಾಕಿದಂತೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಲಾಗಿದೆ. 3-5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆರೋಗ್ಯ ಸೇವೆಯ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲು ಸರಕಾರ ನಿರಾಕರಿಸಿದೆ ಮತ್ತು ‘ಸಮಾನ ಕೆಲಸಕ್ಕೆ ಸಮಾನ ವೇತನ’ದ ಬೇಡಿಕೆಗೂ ಕಿವಿಗೊಟ್ಟಿಲ್ಲ. ಈ ಸಾಂಕ್ರಾಮಿಕದ ನಡುವೆಯೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವೈದ್ಯರು, ಸ್ಟಾಫ್ ನರ್ಸ್‍ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ನರ ವೇತನಗಳನ್ನು ತಡೆಹಿಡಿಯಲಾಗಿದೆ. ಇದನ್ನು ನೋಡಿದರೆ, ಈ ಸರಕಾರವು ಇಂತಹ ಬಿಕ್ಕಟ್ಟಿನ ನಡುವೆಯೇ ತನ್ನದೇ ಆರೋಗ್ಯ ಸೇವೆಯ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡುತ್ತಿದೆ ಎಂದು ಕಾಣುತ್ತದೆ.

ಇಂತಹ ಕೆಟ್ಟ ಹೆಜ್ಜೆಗಳು ಈಗ ತಮ್ಮ ಪರಿಣಾಮಗಳನ್ನು ತೋರಿಸುತ್ತಿವೆ. ಸಾಂಕ್ರಾಮಿಕ ರೋಗಗಳು ಹೆಡೆಬಿಚ್ಚಿದಾಗ ಕೇವಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಂಬಿಕೊಳ್ಳಬಹುದು ಎಂಬುದು ಈಗ ಸ್ಪಷ್ಟವಾಗುತ್ತಿದೆ ಹಾಗೂ ಖಾಸಗಿ ವಲಯಕ್ಕೆ ಎಷ್ಟೇ ‘ಪ್ರೋತ್ಸಾಹ’ಗಳನ್ನು ನೀಡಿದರೂ ಅದು ತನ್ನ ಹಿತಾಸಕ್ತಿಯನ್ನು ಮಾತ್ರ ನೋಡಿ, ಸಾರ್ವಜನಿಕರ ರಕ್ಷಣೆಗೆ ಬರಲಾರದು ಎಂಬುದೂ ಖಚಿತವಾಗಿದೆ. ಪರಿಸ್ಥಿತಿ ಎಷ್ಟೇ ಗಂಭೀರವಾಗಿರಲಿ, ಖಾಸಗಿ ಆರೋಗ್ಯ ಕ್ಷೇತ್ರವು ತನ್ನ ಲಾಭದ ಚಿಂತೆಯನ್ನಷ್ಟೇ ಮಾಡುತ್ತದೆ ಮತ್ತು ತನ್ನ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಲು ದುಡಿಯುತ್ತ, ಸರಕಾರವು ಖಾಸಗಿ ವಲಯಕ್ಕೆ ಮಾಡಿದ ‘ಅನ್ಯಾಯ’ಗಳ ಬಗ್ಗೆ ದೂರುವುದು, ಗಲಾಟೆ ಜಗಳ ಮಾಡುವುದನ್ನು ಮುಂದುವರೆಸುತ್ತದೆ ಎಂಬುದು ಸಾಬೀತಾಗಿದೆ.

ಇಂತಹ ಒಂದು ಗಂಭೀರ ಸಾಂಕ್ರಾಮಿಕದ ಮಧ್ಯೆಯೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ನಿರಾಕರಿಸುತ್ತಿರುವ ರಾಜಕೀಯ ವರ್ಗ ನಮ್ಮನ್ನು ಆಳುತ್ತಿರುವುದು ನಮ್ಮ ದುರಾದೃಷ್ಟ. ಉದಾಹರಣೆಗೆ, ಈ ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿ, ತುರ್ತು ಪರಿಸ್ಥಿತಿಯ ಕಾನೂನುಗಳು ನೀಡುವ ನ್ಯಾಯಸಮ್ಮತ ಅಧಿಕಾರವನ್ನು ಬಳಸಿಕೊಂಡು ಖಾಸಗಿ ಆರೋಗ್ಯ ಸೇವೆಯ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸುವಲ್ಲಿ ಯಾವುದು ಅಡ್ಡಿ ಬರುತ್ತಿದೆ? ಸರಕಾರ ಉಚಿತ ಸೌಲಭ್ಯಗಳನ್ನು ನೀಡುತ್ತಿರುವಾಗ ಸಾರ್ವಜನಿಕರು ಕೋವಿಡ್ ಸೇವೆಗಳಿಗಾಗಿ ಖಾಸಗಿ ಸಂಸ್ಥೆಗಳಿಗೆ ಏಕೆ ಹಣ ತೆತ್ತಬೇಕು? ಸಾರ್ವಜನಿಕರ ಹಿತಾಸಕ್ತಿಯನ್ನು ಸರಕಾರ ಕಾಪಾಡದಿದ್ದರೆ ಮತ್ಯಾರು ಕಾಪಾಡಬೇಕು? ಈ ಸರಕಾರವನ್ನು, ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿ ಕಳುಹಿಸಿದ್ದೇವೆ ಎಂಬುದನ್ನು ನೆನಪಿಡಬೇಕಿದೆ ಹಾಗೂ ಸರಕಾರದ ತಪ್ಪುಗಳಿಗೆ ಅವರು ಹೊಣೆ ಹೊರುವಂತೆ ಮಾಡುವ ಸಮಯ ಬಂದಿದೆ. ಅದನ್ನು ಈಗ ಮಾಡದಿದ್ದರೆ ಯಾವಾಗ?

ಡಾ. ಅಖಿಲಾ ವಾಸನ್, ಜನಾರೋಗ್ಯ ಚಳವಳಿಯ ಮುಂಚೂಣಿ ಕಾರ್ಯಕರ್ತೆ ಮತ್ತು ಸಾರ್ವಜನಿಕ ಆರೋಗ್ಯದ ಸಂಶೋಧಕಿ


ಇದನ್ನು ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...