Homeಕರ್ನಾಟಕ'ಮಹಿಷಾ ದಸರಾ,' ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ.

- Advertisement -
- Advertisement -

ಕಳೆದ ಐದಾರು ವರ್ಷಗಳಿಂದ ‘ಮಹಿಷ ದಸರಾ’ ಎನ್ನುವುದು ಹೆಚ್ಚುಹೆಚ್ಚು ಚಾಲ್ತಿಗೆ ಬರುತ್ತಿದೆ. ಈ ಮೂಲಕ ಹೂತುಹೋಗಿರುವ ಇತಿಹಾಸವನ್ನು ಮತ್ತೆ ಮುನ್ನಲೆಗೆ ತಂದು ತಿಳಿಹೇಳುವ ಉದ್ದೇಶ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇತಿಹಾಸ, ಪುರಾಣ ಮತ್ತು ಶಾಸ್ತ್ರಗಳ ತುಂಬಾ ವೈದಿಕರ ವಿಚಾರಗಳೇ ತುಂಬಿ ನಿಂತಿವೆ. ಹೀಗಿರುವಾಗ ಅವೈದಿಕ ಪರಂಪರೆಯಲ್ಲಿ ಬಹುಸಮುದಾಯಗಳನ್ನು ಪೊರೆದವರು ಯಾರು? ಎನ್ನುವುದನ್ನು ಮತ್ತೆ ಮತ್ತೆ ಕೇಳಿಕೊಂಡಾಗ ಈ ತರದ ಅವಲೋಕನ ಸಾಧ್ಯವಾಗುತ್ತದೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು, ಮಹಿಷನೂರು ಮೊದಲಾದ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಇಂದಿನ ಮೈಸೂರು ಮಹಿಷನಾಳಿದ ಬಹುದೊಡ್ಡ ಪ್ರದೇಶವಾಗಿತ್ತು. ವಿಂಧ್ಯಪರ್ವತದ ಮಹಿಸ್ಮೃತಿ ತಪ್ಪಲಿನವರೆಗೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದ್ದ ಈ ಪ್ರದೇಶ, ಮೂಲನಿವಾಸಿ ರಾಜನೊಬ್ಬನ ಕತೆಯನ್ನು ಹಿಡಿದಿಟ್ಟುಕೊಂಡಿದೆ. ಇದೆಲ್ಲದಕ್ಕೆ ಸಾಕ್ಷಿಯಾಗಿ ಇತಿಹಾಸದ ಪುಟಗಳು ನಿಂತಿವೆ.

ಈ ದೇಶದಲ್ಲಿ ಮೂಲನಿವಾಸಿಗಳ, ಬುಡಕಟ್ಟುಗಳ ಮತ್ತು ಬೌದ್ಧರ ಮೇಲಿನ ದಾಳಿಗಳು ಇತಿಹಾಸವನ್ನು ಛಿದ್ರಛಿದ್ರವಾಗಿಸಿವೆ. ಈ ಛಿದ್ರತೆಯಲ್ಲಿ ಮೇಲುಗೈ ಪಡೆದ ವೈದಿಕ ಪರಂಪರೆ ಅನೇಕ ಕಟ್ಟುಕತೆಗಳ ರೂಪದಲ್ಲಿ ಇತಿಹಾಸವನ್ನು ನೋಡುವಂತೆ ನಮ್ಮ ಕಣ್ಣುಗಳನ್ನು ರೂಪಿಸಿದೆ. ಇದರಿಂದ ಮೂಲನಿವಾಸಿ ಮತ್ತು ಅಸುರ ರಾಜರುಗಳು ಹೆಚ್ಚು ಮನದಾಳದಲ್ಲಿ ಬೇರೂರಿದಂತಾಗಿದೆ. ಇದರ ಹಿಂದೆ ವೈದಿಕತೆಯನ್ನೇ ಹೆಚ್ಚು ವಿಜೃಂಭೀಕರಿಸುವ, ಆ ಮೂಲಕ ಸಾಮ್ರಾಜ್ಯವನ್ನು ಆಳುವ ಮತ್ತು ಶತಶತಮಾನಗಳ ಕಾಲ ಮಾನಸಿಕ ಗುಲಾಮಗಿರಿಗೆ ಒಳಗಾಗಿ ಬದುಕುವಂತೆ ಮಾಡುವ ಹುನ್ನಾರವನ್ನು ಈ ವರ್ಗ ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಲೇ ಇದೆ. ಇದಕ್ಕಾಗಿ ಅದು ಕೋಟ್ಯಾಂತರ ದೇವರುಗಳನ್ನು ಸೃಷ್ಟಿಸಿ ತಮ್ಮ ಬೇಳೆಯನ್ನು ಇಂದಿಗೂ ಬೇಯಿಸಿಕೊಳ್ಳುತ್ತಲೇ ಇದ್ದಾರೆ. ಕುರು, ಪಾಂಚಾಲ, ಚೇರ, ವೆಂಗಿ, ಮಗಧ ಮುಂತಾದ ರಾಜಮನೆತನಗಳ ಭವ್ಯ ಪರಂಪರೆಯನ್ನು ಕಟ್ಟಿಕೊಟ್ಟ ಹಾಗೆ ನಾಗ ಮತ್ತು ಮಹಿಷ ಮಂಡಲದ ಮನೆತನಗಳ ಇತಿಹಾಸವನ್ನು ಕಟ್ಟಿಕೊಡುವ ಗೋಜಿಗೆ ಅಕ್ಷರ ಬಲ್ಲವರು ಹೋಗಿಲ್ಲ. ಇದರ ಪರಿಣಾಮ ಇವೆರಡರ ಅಪ್ರತಿಮ ಹೋರಾಟಗಾರರು ಅಂಚಿಗೆ ಸರಿದರು. ಇದರಲ್ಲಿ ಮಹಿಷನೂ ಒಬ್ಬ.

ಭಾರತದ ವೈದಿಕಶಾಹಿ ಇಲ್ಲಿನ ಮೂಲನಿವಾಸಿಗಳ ಪರಂಪರೆಯನ್ನು ಒಡೆದು ಮೇಲುಗೈ ಸಾಧಿಸಿದಂತೆಲ್ಲ ಇಲ್ಲಿನ ಅಪ್ರತಿಮ ನಾಯಕರನ್ನು ಖಳನಾಯಕರಂತೆ ಬಿಂಬಿಸಲು ಪ್ರಾರಂಭಿಸಿತು. ರಾಕ್ಷಸ, ಅಸುರ, ದಾನವ, ಕಿನ್ನರ, ಕಿಂಪುರುಷ ಮೊದಲಾದ ಪದಗಳಿಗೆ ಅಪಾರ್ಥಗಳನ್ನು ಹೊರಿಸಿ ಜನತೆಯ ಮನದಲ್ಲಿ ಇವರ ಕೀರ್ತಿಪತಾಕೆಗಳನ್ನೇ ಶಾಶ್ವತವಾಗಿ ನಕಾರಾತ್ಮಕ ಧೋರಣೆ ಬರುವಂತೆ ಮಾಡಿದರು. ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಚಿತ್ರಿಸಿದರು. ಇವರ ಹಾದಿಯಲ್ಲಿ ಕಾಣುವ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರವನ್ನು ಈ ಮೂಲಕ ಮಾಡುತ್ತಾ ಬಂದರು. ಈ ವೈದಿಕಶಾಹಿ ತನಗೆ ವಿರುದ್ಧವಾದುದೆಲ್ಲವನ್ನು ರಾಕ್ಷಸ ಪರಂಪರೆಯೆಂದು ವಿಂಗಡಿಸಿ, ಅವರು ಕ್ರೂರಾತಿಕ್ರೂರರೆಂದು ಬಿಂಬಿಸಿದರು. ‘ಇವರನ್ನು ನಾಶಗೊಳಿಸಲು ದೇವನೊಬ್ಬನು ಅವತರಿಸಿ ಬರಬೇಕಾಯಿತು. ಹೀಗೆ ಬಂದದ್ದರಿಂದಲೇ ಈ ರಾಕ್ಷಸನ ಸಂಹಾರ ಸಾಧ್ಯವಾಗಿ ಲೋಕಕಲ್ಯಾಣವಾಯಿತು’ ಎನ್ನುವ ಹಸಿ ಸುಳ್ಳಿನ ಕತೆಯನ್ನು ಕಟ್ಟಿ ಜನತೆಗೆ ಆಚರಣೆ ಮೂಲಕ ನಂಬಿಸಿದರು. ಇದರ ಪರಿಣಾಮವಾಗಿ ಮೈಸೂರಿನ ದೊರೆಯಾದ ಮಹಿಷ ಹೊರನಿಲ್ಲುವಂತಾಗಿ ಕಟ್ಟಿದ ಕತೆಯ ಕುರುಹಾಗಿ ಚಾಮುಂಡಿ ಒಳ ನಿಲ್ಲುವಂತಾಗಿದೆ.

ಮಹಿಷನಿಂದಾಗಿ ಮೈಸೂರು ಎನ್ನುವ ಹೆಸರು ಇದುವರೆಗೂ ನಿಂತಿದೆ ಎನ್ನುವುದನ್ನು ಇತಿಹಾಸದ ಹಲವು ಪುಟಗಳು ಸಾರುತ್ತಿವೆ. ಮಹಿಷೂರನ್ನು ಕೇಂದ್ರ ಸ್ಥಾನವಾಗಿಸಿಕೊಂಡು ಬೃಹತ್ ಸಾಮ್ರಾಜ್ಯ ಕಟ್ಟಿ ಆಳಿದ ರಾಜ ಈ ಮಹಿಷ. ಕೇರಳ ರಾಜ್ಯದಲ್ಲಿ ಬಲಿಚಕ್ರವರ್ತಿಯನ್ನು ನೆನಪಿಸುವ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವಂತೆ ಈ ಭಾಗದ ಮೂಲನಿವಾಸಿಗಳು ಅತ್ಯಂತ ಪ್ರೀತಿ ಮತ್ತು ಧನ್ಯತೆಗಳಿಂದ ಮಹಿಷನನ್ನು ಸ್ಮರಿಸುತ್ತಾರೆ. ಈ ಧನ್ಯತೆಯ ಭಾವದಿಂದ ಆಚರಿಸಲ್ಪಡುವ ಹಬ್ಬವೇ ದಸರಾ. ಇತಿಹಾಸವನ್ನು ತಿರುಚಿ ಅಂತೆಕಂತೆಗಳ ಪುರಾಣ ಕಟ್ಟುವಲ್ಲಿ ಪ್ರಸಿದ್ಧರಾದ ವೈದಿಕರು ‘ಬ್ರಾಹ್ಮಣನ ವೇಷದಲ್ಲಿ ಬಂದು ಮೂರು ಮೊಳ ಭೂಮಿಯನ್ನು ದಾನ ಪಡೆದು ವಿಷ್ಣು ಅವನನ್ನು ಭೂಮಿಗೆ ತುಳಿದನು’ ಎನ್ನುವ ಕತೆ ಕಟ್ಟಿದಂತೆ ಅತಿ ಕೆಟ್ಟವನಾದ ಮಹಿಷನನ್ನು ಸಂಹರಿಸಲು ಪಾರ್ವತಿ ದೇವಿಯೇ ಶಕ್ತಿ ಪಡೆದು ಬಂದು ಅವನನ್ನು ಸಂಹರಿಸಿದಳು’ ಎನ್ನುವ ಕತೆಯನ್ನು ಕಟ್ಟಿ ನಂಬಿಸಿದರು. ಈ ನಂಬಿಸಿದ ಫಲವೇ ಇಂದಿನ ಚಾಮುಂಡಿ ದಸರಾ. ಇದಕ್ಕೆ ರಾಜಮಹಾರಾಜರ ಒಪ್ಪಿತ ಮುದ್ರೆ ಬಿದ್ದಿದ್ದರಿಂದ ಇದು ನಿರಂತರ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಂದಮೇಲೂ ಇಂತವೇ ಮನಸ್ಸುಗಳು ಇಲ್ಲಿ ಉಸಿರಾಡುತ್ತಿರುವುದರಿಂದ ಈಗಲೂ ಅದ್ದೂರಿ ದಸರಾ ಹಬ್ಬ ‘ನಾಡದೇವತೆ’ ಎನ್ನುವ ಹೆಸರಿನಡಿ ನಡೆಯುತ್ತಲೇ ಇದೆ.

ಇತಿಹಾಸದ ಮಹತ್ವದ ಅಂಶಗಳು ಒಂದಲ್ಲ ಒಂದು ಕಾಲದಲ್ಲಿ ಬೆಳಕಿಗೆ ಬಂದೇ ಬರುತ್ತವೆ. ಹೀಗೆ ಬೆಳಕಿಗೆ ಬಂದ ಪ್ರತಿಫಲವೇ ವೈದಿಕರು ಕಟ್ಟಿರುವ ಎಲ್ಲ ದುಷ್ಟಶಕ್ತಿಗಳ ಹಿಂದಿನ ನೈಜತೆ ಬೆಳಕಿಗೆ ಬರುತ್ತಿದೆ. ಹೀಗೆ ಬೆಳಕಿಗೆ ಬಂದ ಕಾರಣದಿಂದಲೇ ಅಸುರ ಶಕ್ತಿಗಳಾದ ಬಲಿಚಕ್ರವರ್ತಿ, ಮಹಿಷ, ರಾವಣ, ನರಕಾಸುರ ಮುಂತಾದವರ ಬಗ್ಗೆ ಹೊಸ ಹೊಸ ದೃಷ್ಟಿಕೋನಗಳು ಬೆಳೆಯುತ್ತಿವೆ. ವಿದ್ಯೆ, ಸಂಪತ್ತು, ಅಧಿಕಾರ ಎಲ್ಲವನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿದ್ದ ವೈದಿಕಶಾಹಿ ಸಹಜವಾಗಿಯೇ ತನಗೆ ವಿರುದ್ಧದಾದುದ್ದೆಲ್ಲವನ್ನು ಇನ್ನಿಲ್ಲದ ತಂತ್ರಗಳ ಮೂಲಕ ಹಣಿಯಲು ಪ್ರಾರಂಭಿಸಿತು. ಇದೆಲ್ಲವು ಶಾಶ್ವತವಾಗಿರಲು ಜನತೆಯ ನಂಬಿಕೆಯೊಂದೇ ಪ್ರಬಲ ಅಸ್ತ್ರವೆಂದು ತಿಳಿದ ಈ ಬೌದ್ಧಿಕಶಾಹಿಗಳು ಕತೆ, ಗೀತೆ, ಮಹಾಕಾವ್ಯ, ಪುರಾಣ, ಶಾಸ್ತ್ರ, ವೇದ ಮುಂತಾದವುಗಳನ್ನು ಜನತೆಯ ಮನದಾಳದಲ್ಲಿ ಬೇರೂರಿಸಿತು. ಇದರಿಂದ ಅಪ್ರತಿಮ ದೊರೆಯಾದ, ನಾಡಿನ ಹೆಮ್ಮೆಯ ಪ್ರತಿನಿಧಿಯಾದ, ಮೂಲನಿವಾಸಿ ರಾಜನಾದ ಮಹಿಷನಂತವರು ಖಳನಾಯಕರಾಗಿ ಜನಮನದಲ್ಲಿ ನಿಂತರು. ಇಂದು ಇತಿಹಾಸ ಪುನರ್ ವ್ಯಾಖ್ಯಾನಕ್ಕೆ ನಾಡಿನ ಪ್ರಗತಿಪರ ಮತ್ತು ದಮನಿತ ಸಮುದಾಯಗಳು ಮುಂದಾಗಿವೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೈತ್ಯ ಪ್ರತಿಭೆ ಎದುರಿಗಿದೆ. ಇದೆಲ್ಲವನ್ನು ಬಳಸಿಕೊಂಡು ಮಹಿಷದಸರಾ ಮಾಡಲು ಸೇನೆಯಂತೆ ಮುನ್ನುಗ್ಗಿದೆ ಮೂಲನಿವಾಸಿಗಳ ದಂಡು. ಇದು ಕಾರ್ಯಗತಗೊಳ್ಳಲಿ. ನಾಡಿನ ಹೆಮ್ಮೆಯ ವೀರನಾದ ಮಹಿಷ ಮತ್ತೆ ಎಲ್ಲರ ಎದೆಯಲ್ಲಿ ನಿಲ್ಲಲಿ. ಈ ಮೂಲಕ ಅಗೋಚರಕ್ಕೆ ಒಳಗಾಗಿರುವ ಎಲ್ಲ ಮೂಲನಿವಾಸಿ ದೇವರುಗಳು ಅಂಚಿನಿಂದ ಮುನ್ನಲೆಗೆ ಬಂದು ನಿಲ್ಲುವಂತಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...