Homeಮುಖಪುಟಕಡಿಮೆ ಗುಣಮಟ್ಟದ ಕಲ್ಲಿದ್ದಲು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅದಾನಿಯಿಂದ ವಂಚನೆ?: ವರದಿ

ಕಡಿಮೆ ಗುಣಮಟ್ಟದ ಕಲ್ಲಿದ್ದಲು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅದಾನಿಯಿಂದ ವಂಚನೆ?: ವರದಿ

- Advertisement -
- Advertisement -

ಕಡಿಮೆ ದರ್ಜೆಯ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಇಂಧನವಾಗಿ ಮಾರಾಟ ಮಾಡುವ ಮೂಲಕ ಅದಾನಿ ಕಂಪನಿ ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ದಾಖಲೆಗಳ ಆಧಾರದಲ್ಲಿ ಫಿನಾನ್ಶಿಯಲ್ ಟೈಮ್ಸ್ ವಿಸ್ಕೃತ ಲೇಖನವನ್ನು ಪ್ರಕಟಿಸಿದೆ.

ಆರ್ಗನೈಸ್ಡ್ ಕ್ರೈಮ್ ಅಂಡ್ ಕರಪ್ಶನ್ ರಿಪೋರ್ಟಿಂಗ್ ಪ್ರಾಜೆಕ್ಟ್ (ಒಸಿಸಿಆರ್‌ಪಿ) ಸಂಗ್ರಹಿಸಿದ ಮತ್ತು ಫಿನಾನ್ಶಿಯಲ್ ಟೈಮ್ಸ್‌ ಪರಿಶೀಲಿಸಿದ ದಾಖಲೆಗಳ ಪ್ರಕಾರ, ಅದಾನಿ ಕಂಪನಿ ಅಥವಾ ಅದಾನಿ ಸಮೂಹ ಮಾಡಿರುವ ಆಪಾದಿತ ವಂಚನೆಯಿಂದ ದೇಶದ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ ಸಂಭವವಿದೆ.

ಕಡಿಮೆ ದರ್ಜೆಯ ಕಲ್ಲಿದ್ದಲನ್ನು ವಿದ್ಯುತ್‌ಗಾಗಿ ಬಳಸುವ ಮೂಲಕ ಹೆಚ್ಚು ಇಂಧನವನ್ನು ಸುಡಲಾಗಿದೆ ಅಥವಾ ಸುಡಲಾಗ್ತಿದೆ. ಈ ಮೂಲಕ ಅದಾನಿ ಕಂಪನಿ ಗಾಳಿಯ ಗುಣಮಟ್ಟವನ್ನು ಕಡೆಗಣಿಸಿ ಮೋಸದಿಂದ ಬಂಪರ್ ಲಾಭವನ್ನು ಪಡೆದಿರಬಹುದು ಎಂದು ವರದಿ ಹೇಳಿದೆ.

ದಾಖಲೆಗಳ ಪ್ರಕಾರ, ಜನವರಿ 2014ರಲ್ಲಿ ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಲ್ಲಿದ್ದಲು ಖರೀದಿಸಿತ್ತು. ಅದು ಗುಣಮಟ್ಟದಲ್ಲಿ ಪ್ರತಿ ಕಿಲೋಗ್ರಾಮ್‌ಗೆ 3,500 ಕ್ಯಾಲೊರಿಗಳನ್ನು ಹೊಂದಿತ್ತು. ಆದರೆ, ಆ ಕಲ್ಲಿದ್ದಲ್ಲನ್ನು ತಮಿಳುನಾಡು ಜನರೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಕಂಪನಿಗೆ (ತಂಗೆಡ್ಕೋ) ಅತ್ಯಮೂಲ್ಯ ದರ್ಜೆಯ 6,000 ಕ್ಯಾಲೋರಿಯ ಕಲ್ಲಿದ್ದಲು ಎಂದು ಮಾರಾಟ ಮಾಡಲಾಗಿದೆ. ಈ ಮೂಲಕ ಸಾರಿಗೆ ವೆಚ್ಚ ಹೊರತುಪಡಿಸಿ ಅದಾನಿ ಎರಡು ಪಟ್ಟು ಲಾಭ ಪಡೆದಿದೆ.

ಅದಾನಿ ಕಂಪನಿಗೆ ಸಂಬಂಧಿಸಿದ 2014ರ 22 ಕಲ್ಲಿದ್ದಲು ಸಾಗಣೆಯ ದಾಖಲೆಗಳನ್ನು ಫಿನಾನ್ಶಿಯಲ್ ಟೈಮ್ಸ್ ಹೊಂದಿಸಿ ನೋಡಿದೆ. ಈ ವೇಳೆ 1.5 ಮಿಲಿಯನ್ ಟನ್ ಸರಬರಾಜಿನಲ್ಲಿ ಗ್ರೇಡ್ ವ್ಯತ್ಯಾಸ ಕಂಡು ಬಂದಿದೆ.

ಅದಾನಿ ಕಂಪನಿ ಇಂಡೋನೇಷ್ಯಾದಿಂದ ಕಡಿಮೆ ಕ್ಯಾಲೊರಿಯ ಕಲ್ಲಿದ್ದಲು ಖರೀದಿಸಿ, ಅದನ್ನು ಒಪ್ಪಂದಂತೆ ದಕ್ಷಿಣ ಭಾರತದ ವಿದ್ಯುತ್ ಕಂಪನಿಗಳಿಗೆ ಪೂರೈಕೆ ಮಾಡುತ್ತಿದೆ. ಈ ಮೂಲಕ ಅಧಿಕ ಲಾಭ ಪಡೆಯುತ್ತಿದೆ ಎಂದು ವರದಿಯಲ್ಲಿ ಆಪಾದಿಸಲಾಗಿದೆ.

ಅದಾನಿ ಕಂಪನಿಯ ಈ ಆಪಾದಿತ ವಂಚನೆಯಿಂದ ಕಂಪನಿ ದುಪ್ಪಟ್ಟು ಲಾಭ ಪಡೆಯುವುದು ಒಂದೆಡೆಯಾದರೆ, ಇದು ಪರಿಸರದ ಮೇಲೆ ದೊಡ್ಡಮಟ್ಟದ ಪರಿಣಾಮ ಬೀರುತ್ತಿದೆ. ದಿ ಲ್ಯಾನ್ಸೆಟ್‌ 2022ರ ಅಧ್ಯಯನದ ಪ್ರಕಾರ, ಹೊರಾಂಗಣ ವಾಯುಮಾಲಿನ್ಯದಿಂದ ಭಾರತದಲ್ಲಿ ಪ್ರತಿ ವರ್ಷ 2 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸಾಯುತ್ತಿದ್ದಾರೆ. ಈ ಪೈಕಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳ ಮರಣ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದೆ.

ದಶಕದ ಹಿಂದಿನ ಮತ್ತೊಂದು ಅಧ್ಯಯನದ ಪ್ರಕಾರ, ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳು ಭಾರತದ ಮುಕ್ಕಾಲು ಭಾಗದಷ್ಟು ವಿದ್ಯುತ್ ಪೂರೈಸುತ್ತದೆ. ಇದರ ಜೊತೆಗೆ ದೇಶದಲ್ಲಿ ಮಾನವ ನಿರ್ಮಿತ ಸೂಕ್ಷ್ಮ ಕಣಗಳ ಹೊರಸೂಸುವಿಕೆಯಲ್ಲಿ ಶೇ.15ರಷ್ಟು ಪಾಲು ಹೊಂದಿದೆ. ಈ ಪೈಕಿ ಶೇ.30ರಷ್ಟು ನೈಟ್ರೋಜನ್ ಆಕ್ಸೈಡ್‌ ಮತ್ತು ಶೇ. 50ರಷ್ಟು ಸಲ್ಫರ್ ಡೈಆಕ್ಸೈಡ್ ಸೇರಿದೆ.

ಕಲ್ಲಿದಲ್ಲು ಉರಿಸುವುದರ ಮೂಲಕ ವಿದ್ಯುತ್ ಉತ್ಪಾದನೆಯ ಲಾಭ ಒಂದೆಡೆಯಾದರೆ, ಮತ್ತೊಂದೆಡೆ ಇದು ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಭಾರತದ ಹಿಂದುಳಿದಿದೆ ಎಂದು ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರದ ನವದೆಹಲಿ ಮೂಲದ ವಿಶ್ಲೇಷಕ ಸುನಿಲ್ ದಹಿಯಾ ಹೇಳಿದ್ದಾರೆ.

2021ಮತ್ತು 2023ರ ನಡುವೆ ಭಾರತಕ್ಕೆ ಆಮದು ಮಾಡಿಕೊಳ್ಳಲಾದ ಕಲ್ಲಿದ್ದಲು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಪ್ರಮಾಣದಲ್ಲಿ, ಮಧ್ಯವರ್ತಿಗಳಿಗೆ 5 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣವನ್ನು ಪಾವತಿಸಿದೆ ಎಂದು ಫಿನಾನ್ಶಿಯಲ್ ಟೈಮ್ಸ್ ವರದಿ ಮಾಡಿದ ನಂತರ ವಿರೋಧ ಪಕ್ಷದ ನಾಯಕರು ಕಳೆದ ವರ್ಷ ಅದಾನಿ ವಿರುದ್ಧ ತನಿಖೆಗೆ ಕರೆ ಆಗ್ರಹಿಸಿದ್ದರು.

ಪಾಕಿಸ್ತಾನದ ಗಡಿಯ ಸಮೀಪವಿರುವ ಖಾವ್ಡಾದಲ್ಲಿ ವಿಶ್ವದ ಅತಿದೊಡ್ಡ ಗಾಳಿ ಮತ್ತು ಸೌರ ಪಾರ್ಕ್‌ ಒಂದನ್ನು ನಿರ್ಮಿಸುವ ಮೂಲಕ ಅದಾನಿಯು ತನ್ನನ್ನು ದೊಡ್ಡ ನವೀಕರಿಸಬಹುದಾದ ಇಂಧನ ಉತ್ಪದಕನಾಗಿ ಮರುಬ್ರಾಂಡ್ ಮಾಡಲು ಪ್ರಯತ್ನಿಸುತ್ತಿರುವ ನಡುವೆ ವಂಚನೆಯ ಆರೋಪ ಕೇಳಿ ಬಂದಿದೆ. ಈ ಆರೋಪವನ್ನು ನಿರಾಕರಿಸಿರುವ ಕಂಪನಿ, ತಾನು ಭಾರತದ ಅತಿದೊಡ್ಡ ಕಲ್ಲಿದ್ದಲು ಆಮದುದಾರರಲ್ಲಿ ಒಂದು ಎಂದು ಸಮರ್ಥಿಸಿಕೊಂಡಿದೆ.

ಅದಾನಿ ಕಂಪನಿ ಕಲ್ಲಿದ್ದಲು ಖರೀದಿಯಲ್ಲಿ ವಂಚನೆ ಎಸಗಿರುವ ಆರೋಪ ದೇಶದಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ನರೇಂದ್ರ ಮೋದಿಯಯವರು ಮೂರನೇ ಬಾರಿಗೆ ಪ್ರಧಾನಿಯಾಗುವ ಉತ್ಸಾಹದಲ್ಲಿರುವ ನಡುವೆ, ಈಗಾಗಲೇ ಗೌತಮ್ ಅದಾನಿ ಸೇರಿದಂತೆ ದೇಶದ ಪ್ರಮುಖ ಕೋಟ್ಯಾಧಿಪತಿಗಳು ಅನುಭವಿಸುತ್ತಿರುವ ಅಧಿಕಾರ ಮತ್ತು ಪ್ರಭಾವದ ಕುರಿತು ಚರ್ಚೆಗಳು ಜೋರಾಗಿದೆ.

ಒಸಿಸಿಆರ್‌ಪಿಯಿಂದ ಪಡೆದ ಹೊಸ ದಾಖಲೆಯ ಪ್ರಕಾರ, ಡಿಸೆಂಬರ್ 2013ರಲ್ಲಿ ಎಂ.ವಿ ಕಲ್ಲಿಯೋಪಿ ಎಲ್‌ ಹಡಗು ಇಂಡೋನೇಷ್ಯಾದಿಂದ ಟನ್‌ಗೆ 28 ಡಾಲರ್‌ ಮೊತ್ತ ಕಲ್ಲಿದ್ದಲನ್ನು ಹೊತ್ತು ತಂದಿತ್ತು. ಹೊಸ ವರ್ಷಕ್ಕೆ (2024ಕ್ಕೆ) ಹಡಗು ಭಾರತ ತಲುಪಿದಾಗ ಅದಾನಿ ಕಂಪನಿ ಆ ಕಲ್ಲಿದ್ದಲನ್ನು ಟನ್‌ಗೆ 92 ಡಾಲರ್‌ಗೆ ತಂಗೆಡ್ಕೋ ಮಾರಾಟ ಮಾಡಿತ್ತು ಎಂದು ಫಿನಾನ್ಶಿಯಲ್ ಟೈಮ್ಸ್ ಹೇಳಿದೆ.

ಬ್ರಿಟಿಷ್ ವರ್ಜಿನ್ ದ್ವೀಪದ ಮೂಲದ ಕಂಪನಿಯ ಪಾತ್ರ

ಕಲ್ಲಿದ್ದಲನ್ನು ಮೂಲತಃ ಸೌತ್ ಕಲಿಮಂಟನ್‌ನ ಇಂಡೋನೇಶ್ಯಾದ ಗಣಿಗಾರಿಕೆ ಸಮೂಹ ಪಿಟಿ ಜಾನ್‌ಲಿನ್‌ ಸಪ್ಲೈಸ್‌ನಿಂದ ಖರೀದಿಸಲಾಗಿತ್ತು. ಅದನ್ನು ಅಲ್ಲಿಯೇ ಹಡಗಿಗೆ ತುಂಬಲಾಗಿತ್ತು. ಪಿಟಿ ಜಾನ್‌ಲಿನ್‌ನ ರಫ್ತು ಘೋಷಣೆಯಲ್ಲಿ ಅಂತಿಮ ಖರೀದಿದಾರ ತಂಗೆಡ್ಕೋ ಆಗಿದೆ ಎಂದು ತಿಳಿಸಿತ್ತು ಮತ್ತು ಮಧ್ಯವರ್ತಿಯಾಗಿ ಅದಾನಿಯನ್ನು ಹೆಸರಿಸಿತ್ತು.

ಜಾನಲಿನ್‌ನ ಇನ್ವಾಯ್ಸ್ ಬ್ರಿಟಿಷ್ ವರ್ಜಿನ್ ದ್ವೀಪದ ಸುಪ್ರೀಂ ಯೂನಿಯನ್ ಇನ್ವೆಸ್ಟರ್ಸ್‌ಗೆ ಹೋಗಿತ್ತು. ಅದು ಪ್ರತಿ ಟನ್‌ಗೆ 28 ಡಾಲರ್‌ ಬೆಲೆ ನಿಗದಿಗೊಳಿಸಿತ್ತು. ಪ್ರಮುಖ ವಿಷಯವೆಂದರೆ, ಒಂದು ವಾರದಲ್ಲಿ ಸುಪ್ರೀಂ ಯೂನಿಯನ್ ಸಿಂಗಾಪುರದಲ್ಲಿ ಅದಾನಿಗೆ ಪ್ರತಿ ಟನ್‌ಗೆ 34 ಡಾಲರ್‌ಗಳಲ್ಲಿ ಶಿಪ್‌ಮೆಂಟ್‌ನ ಇನ್ವಾಯ್ಸ್ ಮಾಡಿತ್ತು ಮತ್ತು ಕಲ್ಲಿದ್ದಲು ಪ್ರತಿ ಕೆಜಿಗೆ 3,500 ಕ್ಯಾಲೊರಿಗಳನ್ನು ಒಳಗೊಂಡಿದೆ ಎಂದು ಹೇಳಿತ್ತು.

ಆದರೆ, ಅದೇ ಕಲ್ಲಿದ್ದಲಿಗಾಗಿ ಅದಾನಿ ಕಂಪನಿ ತಂಗೆಡ್ಕೋಗೆ ನೀಡಿದ್ದ ಇನ್ವಾಯ್ಸ್‌ನಲ್ಲಿ ಗುಣಮಟ್ಟವು 6,000 ಕ್ಯಾಲೊರಿಗಳಿಗೆ ಜಿಗಿದಿತ್ತು ಮತ್ತು ಬೆಲೆ ಪ್ರತಿ ಟನ್‌ಗೆ 92 ಡಾ‌ಲರ್‌ಗೆ ಏರಿಕೆಯಾಗಿತ್ತು. ತಂಗೆಡ್ಕೋಗೆ 22 ಶಿಪ್‌ಮೆಂಟ್‌ಗಳ ಮೂಲಕ ಅದಾನಿ ಕಂಪನಿ ಮತ್ತು ಅದರ ಮಧ್ಯವರ್ತಿಗಳು ಅಂದಾಜು ಏಳು ಕೋಟಿ ಡಾಲರ್ ಲಾಭಗಳಿಸಿದ್ದರು ಎಂದು ಫಿನಾನ್ಶಿಯಲ್ ಟೈಮ್ಸ್‌ ಹೇಳಿದೆ.

ಆರೋಪ ನಿರಾಕರಿಸಿದ ಅದಾನಿ 

ಅದಾನಿ ಕಂಪನಿಯು ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಪೂರೈಕೆಯಾದ ಕಲ್ಲಿದ್ದಲು ಹಲವಾರು ಏಜೆನ್ಸಿಗಳಿಂದ ಹಲವು ಹಂತಗಳಲ್ಲಿ ವಿಸ್ತ್ರತ ಗುಣಮಟ್ಟ ಪರೀಕ್ಷೆಗೆ ಒಳಗಾಗಿತ್ತು. ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆ ಆರೋಪ ಆಧಾರರಹಿತ ಮಾತ್ರವಲ್ಲ, ಸಂಪೂರ್ಣ ಅಸಂಬದ್ಧವಾಗಿದೆ ಎಂದು ಅದಾನಿ ಗ್ರೂಪ್‌ನ ವಕ್ತಾರರು ಫಿನಾನ್ಶಿಯಲ್ ಟೈಮ್ಸ್‌ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಕೇರಳ: ವಿವಿ ಸೆನೆಟ್‌ಗೆ ಗವರ್ನರ್ ನೇಮಿಸಿದ್ದ ನಾಲ್ವರು ಎಬಿವಿಪಿ ಸದಸ್ಯರ ನಾಮನಿರ್ದೇಶನ ರದ್ದುಗೊಳಿಸಿದ ಹೈಕೋರ್ಟ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...

ಮಾನವೀಯತೆ ಮರೆತ ಪಂಚಾಯಿತಿ: 3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು 1 ಲಕ್ಷ ರೂ.ದಂಡ, ಆ ಹಣದಲ್ಲೇ ಮದ್ಯದ ಪಾರ್ಟಿ!

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಘಾಗ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ಮಾ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ವಿಕೃತ ಘಟನೆಯೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವಿನ ಮೇಲೆ ನಡೆದ ಭೀಕರ...

ಪೆಟ್ರೋಲ್ – ಎಥೆನಾಲ್ ಕುರಿತ ಮಾಹಿತಿ ಒದಗಿಸುವಂತೆ ತೈಲ ಸಚಿವಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಆದೇಶ

ಪೆಟ್ರೋಲ್ ಉತ್ಪಾದನೆ ಮತ್ತು ಆಮದು, ಎಥೆನಾಲ್ ಸಂಗ್ರಹಣೆ, ಮಿಶ್ರಣ ಮತ್ತು ಪೆಟ್ರೋಲಿಯಂ ವಲಯದ ಲಾಭದ ಕುರಿತ ಹಿಂದಿನ ಡೇಟಾವನ್ನು ಬಹಿರಂಗಪಡಿಸುವಂತೆ ತೈಲ ಸಚಿವಾಲಯದ ಯೋಜನಾ ವಿಭಾಗವಾದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣ : ಮುಸ್ಲಿಮರ ಮೇಲ್ಮನವಿ ವಿಚಾರಣೆಗೆ ಸುಪ್ರೀಂ ಸಮ್ಮತಿ; ಮಧ್ಯಂತರ ನಮಾಝ್‌ಗೆ ನಿರಾಕರಣೆ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ...

ತೀವ್ರ ಹದಗೆಟ್ಟ ಸೋನಮ್ ವಾಂಗ್ಚುಕ್ ಆರೋಗ್ಯ : ಉಪವಾಸ ಕೈ ಬಿಡುವಂತೆ ವಿಪಕ್ಷ ನಾಯಕರಿಂದ ಮನವಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಿಗೆ ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ಮಂಗಳವಾರ (ಜು.14) ಮನವಿ...

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಸಮೀಪವೇ ರಸ್ತೆಯಿಲ್ಲ; ಬಟ್ಟೆ ಜೋಲಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿದ ಉಂಬರಾನೆ ವಾಡಿಯ ಜನ

ಖಲಾಪುರ (ರಾಯಗಢ): ಗರ್ಭಿಣಿಯನ್ನು ಯೋಗ್ಯವಾದ ರಸ್ತೆ, ಆಂಬ್ಯುಲೆನ್ಸ್ ಇಲ್ಲದ ಕಾರಣ ಬಟ್ಟೆಯ ಜೋಳಿಗೆಯಲ್ಲಿ ಆಸ್ಪತ್ರೆಗೆ ಸಾಗಿಸಿದ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಖಲಾಪುರ ತಾಲ್ಲೂಕಿಗೆ ಸೇರಿದ ಉಂಬರಾನೆ ವಾಡಿಯಲ್ಲಿ ನಡೆದಿದೆ.  ದೇಶದಲ್ಲೇ...

ಕಾಜಿರಂಗ ಹೋಟೆಲ್ ಯೋಜನೆ ವಿರುದ್ಧ ಪ್ರತಿಭಟನೆ: ಅಸ್ಸಾಂ ಹೋರಾಟಗಾರ ಪ್ರಣಬ್ ಡೋಲೆ ಅಕ್ರಮ ಬಂಧನ: ಜಿಕೆಎಲ್‌ಎಚ್‌ಆರ್‌ಪಿಸಿ ಗಂಭೀರ ಆರೋಪ

ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ...

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...