Homeಮುಖಪುಟ2017ರಲ್ಲಿ ಆದಿತ್ಯನಾಥ್‌ ಅಧಿಕಾರ ವಹಿಸಿಕೊಂಡ ಬಳಿಕ 190 ಜನರ ಎನ್‌ಕೌಂಟರ್‌: ವರದಿ

2017ರಲ್ಲಿ ಆದಿತ್ಯನಾಥ್‌ ಅಧಿಕಾರ ವಹಿಸಿಕೊಂಡ ಬಳಿಕ 190 ಜನರ ಎನ್‌ಕೌಂಟರ್‌: ವರದಿ

- Advertisement -
- Advertisement -

2017ರಲ್ಲಿ ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಈವರೆಗೆ ಎನ್‌ಕೌಂಟರ್ ಎಂದು 190 ಜನರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು 2017ರಿಂದ 2023ರ ನಡುವೆ ಉತ್ತರಪ್ರದೇಶದ ಪೊಲೀಸರ ಗುಂಡೇಟಿನಿಂದ 5,591 ಜನರು ಗಾಯಗೊಂಡಿದ್ದಾರೆ.

ಲಕ್ನೋದಲ್ಲಿ ನಡೆದ ಪೊಲೀಸ್ ಸ್ಮೃತಿ ದಿವಸ್(ಪೊಲೀಸ್ ಸ್ಮರಣಾರ್ಥ ದಿನ) ಕಾರ್ಯಕ್ರಮದಲ್ಲಿ ಕೆಲ ಅಂಕಿ ಅಂಶಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವುದು, ಸಾರ್ವಜನಿಕರಲ್ಲಿ ಭದ್ರತೆಯ ಭಾವವನ್ನು ಮೂಡಿಸುವುದು ಮತ್ತು ಅಪರಾಧಿಗಳಲ್ಲಿ ಕಾನೂನಿನ ಭಯ ಮೂಡಿಸುವುದು ಸರಕಾರದ ಗುರಿ ಎಂದು ಹೇಳಿ ಎನ್‌ಕೌಂಟರನ್ನು  ಸಮರ್ಥಿಸಿಕೊಂಡಿದ್ದಾರೆ.

ಎನ್‌ಕೌಂಟರ್‌ಗಳನ್ನು ಅಪರಾಧದ ವಿರುದ್ಧದ ಶೂನ್ಯ ಸಹಿಷ್ಣುತೆಯ ನೀತಿ ಎಂದು ಸರಕಾರ ಕರೆದರೆ, ಮಾನವ ಹಕ್ಕುಗಳ ಕಾರ್ಯಕರ್ತರು ಎನ್‌ಕೌಂಟರ್‌ಗಳ ಬಗ್ಗೆ ಪ್ರಶ್ನಿಸಿದ್ದಾರೆ ಮತ್ತು ಅವುಗಳನ್ನು ಹಂತಹಂತದ ಹತ್ಯೆಗಳು ಎಂದು ಕರೆದಿದ್ದಾರೆ.

ಎನ್‌ಕೌಂಟರನ್ನು ಪೊಲೀಸರು ಆತ್ಮರಕ್ಷಣೆಯ ಭಾಗ ಎಂದು ಹೇಳಿಕೊಂಡರೆ. ಆಪಾದಿತ ಎನ್‌ಕೌಂಟರ್‌ಗಳ ಬಗ್ಗೆ ಅನುಮಾನಾಸ್ಪದವಾದ ವಿವರಗಳನ್ನು ಕೂಡ ನೀಡಲಾಗಿದೆ ಎನ್ನುವುದು ಗಮನಾರ್ಹ.

ಉತ್ತರಪ್ರದೇಶದಲ್ಲಿ ಬಿಜೆಪಿ ಸರಕಾರ, ದರೋಡೆ ಮತ್ತು ಸಾಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1986ರ ನಿಬಂಧನೆಗಳನ್ನು ಬಳಸಿದೆ. ಕೆಲವು ಪ್ರಕರಣಗಳಲ್ಲಿ ದರೋಡೆಕೋರರ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಇದನ್ನು ಕೆಲವು ಸಂದರ್ಭಗಳಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ರಾಜ್ಯವು ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ಯೋಗಿ ಸರಕಾರವು ರಾಜಕೀಯ ಉದ್ದೇಶದಿಂದ ವಿರೋಧಿಗಳನ್ನು ಬೆದರಿಸಲು ಮತ್ತು ಸಾಮಾನ್ಯ ನಾಗರಿಕರಿಗೆ ಕಿರುಕುಳ ನೀಡಲು ಕಾನೂನನ್ನು ದುರ್ಬಳಕೆ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ. ಬಿಜೆಪಿ ಸರ್ಕಾರವು ಮಾಫಿಯಾ ಗ್ಯಾಂಗ್‌ನ ಜನರ ವಿರುದ್ಧ ಮಾತ್ರವಲ್ಲದೆ ವಿರೋಧ ಪಕ್ಷದ ಶಾಸಕರು ಮತ್ತು ನಾಯಕರ ವಿರುದ್ಧವೂ 1986ರ ನಿಬಂಧನೆಗಳನ್ನು ನಿಯಮಿತವಾಗಿ ಬಳಸಿದೆ ಎಂದು ಆರೋಪಿಸಲಾಗಿದೆ.

ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದಾಗಿನಿಂದ 69,332 ಜನರ ವಿರುದ್ಧ ದರೋಡೆ ಕಾಯಿದೆಯಡಿ ಮತ್ತು 887 ಜನರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದಿತ್ಯನಾಥ್ ಅವರ ಸರ್ಕಾರವು ಮಾಫಿಯಾ ಗ್ಯಾಂಗ್‌ನ 68 ಸದಸ್ಯರ ಮೇಲೆ ಕಠಿಣ ಮೇಲೆ ಕ್ರಮಕೈಗೊಂಡಿದೆ. ಅವರಿಂದ 3,650 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಸಾಮಾಜಿಕ ಕಾರ್ಯಕರ್ತ ರಾಜೀವ್ ಯಾದವ್ ಅವರು ಎನ್‌ಕೌಂಟರ್‌ಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಪರಿಹರಿಸುವ ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ. ಎನ್‌ಕೌಂಟರ್‌ಗಳ ಮೂಲಕ ಅಪರಾಧವನ್ನು ನಿಯಂತ್ರಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಮತ್ತೇಕೆ ಅವರು ದರೋಡೆ ಕಾಯಿದೆ ಮತ್ತು ಗೂಂಡಾ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಮತ್ತು ಆಸ್ತಿಯನ್ನು ಕೆಡವಲು ಬುಲ್ಡೋಜರ್‌ಗಳನ್ನು ಬಳಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಯುಪಿಯಲ್ಲಿ ಸಣ್ಣ ಪ್ರಕರಣದ ಆರೋಪಿಗಳನ್ನು ಸುಲಭವಾಗಿ ಬಂಧಿಸಬಹುದಾದರೂ ಪೊಲೀಸರು ಫೈರಿಂಗ್ ಮಾಡಿರುವುದನ್ನು ಸಾಮಾಜಿಕ ಕಾರ್ಯಕರ್ತ ರಾಜೀವ್ ಯಾದವ್ ಗಮನಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಅಂಬೇಡ್ಕರ್ ನಗರದಲ್ಲಿ 16 ವರ್ಷದ ಬಾಲಕಿಯ ದುಪಟ್ಟಾವನ್ನು ಎಳೆದ ನಂತರ ಮೋಟಾರ್‌ಸೈಕಲ್‌ನಿಂದ ಬಿದ್ದು ಬಾಲಕಿ ಮೃತಪಟ್ಟ ಪ್ರಕರಣದಲ್ಲಿ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಯಾದವ್ ಉಲ್ಲೇಖಿಸಿದ್ದಾರೆ.

ಅ.20 ರಂದು ರಾಜ್ಯದಲ್ಲಿ ನಡೆದ 4 ಎನ್‌ಕೌಂಟಗಳು ಕ್ಷುಲ್ಲಕ ಕಾರಣಕ್ಕೆ ನಡೆದಿದೆ. ಅ.19ರ ರಾತ್ರಿ ಬುಲಂದ್‌ಶಹರ್‌ನಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಆತನಿಂದ ಕಳ್ಳತನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅ.20 ರಂದು ಪೊಲೀಸರು ಮಹಾರಾಜಗಂಜ್‌ನಲ್ಲಿ ಇಬ್ಬರನ್ನು ಗುಂಡು ಹಾರಿಸಿ ಅವರಿಂದ 55 ಲಕ್ಷ ರೂಪಾಯಿ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಇಂತಹ ಸಣ್ಣ ಸಣ್ಣ ಪ್ರಕರಣಗಳಲ್ಲೂ ಪೊಲೀಸರು ಎನ್‌ಕೌಂಟರ್‌ ಮಾಡಿದ್ದಾರೆ ಎಂದು ರಾಜೀವ್‌ ಯಾದವ್‌ ಹೇಳಿದ್ದಾರೆ.

ಇದನ್ನು ಓದಿ: ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದ ಮಿಜೋರಾಂ ಸಿಎಂ; ಬಿಜೆಪಿಗೆ ಶಾಕ್ ಕೊಟ್ಟ ಮೈತ್ರಿ ಪಕ್ಷ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ಬಂಧನದ ವಿರುದ್ಧ ಎಎಪಿಯಿಂದ ಸಹಿ ಅಭಿಯಾನ

0
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ ಗುರುವಾರ ಸಹಿ ಅಭಿಯಾನವನ್ನು ಪ್ರಾರಂಭಿಸಿದೆ. ಮಾರ್ಚ್ 21ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ...