Homeಮುಖಪುಟದೆಹಲಿ ಹೈಕೋರ್ಟ್ ಛೀಮಾರಿ: ನ್ಯೂಸ್ ಲಾಂಡ್ರಿ ಪತ್ರಕರ್ತೆಯರ ವಿರುದ್ಧದ ಪೋಸ್ಟ್ ತೆಗೆಯಲು ಅಭಿಜಿತ್ ಅಯ್ಯರ್ ಒಪ್ಪಿಗೆ

ದೆಹಲಿ ಹೈಕೋರ್ಟ್ ಛೀಮಾರಿ: ನ್ಯೂಸ್ ಲಾಂಡ್ರಿ ಪತ್ರಕರ್ತೆಯರ ವಿರುದ್ಧದ ಪೋಸ್ಟ್ ತೆಗೆಯಲು ಅಭಿಜಿತ್ ಅಯ್ಯರ್ ಒಪ್ಪಿಗೆ

- Advertisement -
- Advertisement -

ಡಿಜಿಟಲ್ ಸುದ್ದಿ ವೇದಿಕೆ ನ್ಯೂಸ್‌ ಲಾಂಡ್ರಿಯ ಪತ್ರಕರ್ತೆಯರನ್ನು ‘ವೇಶ್ಯೆಯರು’ ಮತ್ತು ಅವರು ಕೆಲಸ ಮಾಡುವ ಸ್ಥಳವನ್ನು ‘ವೇಶ್ಯಾಗೃಹ’ ಎಂದು ನಿಂದಿಸಿ ಪೋಸ್ಟ್ ಹಾಕಿದ್ದ ರಾಜಕೀಯ ವಿಶ್ಲೇಷಕ ಅಭಿಜಿತ್‌ ಅಯ್ಯರ್‌ ಮಿತ್ರಗೆ ದೆಹಲಿ ಹೈಕೋರ್ಟ್‌ ಬುಧವಾರ (ಮೇ.21) ಛೀಮಾರಿ ಹಾಕಿದೆ ಎಂದು ವರದಿಯಾಗಿದೆ.

ನಿಂದನೀಯ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಅಭಿಜಿತ್‌ಗೆ ಸೂಚಿಸಿರುವ ಕೋರ್ಟ್, ಪೋಸ್ಟ್ ತೆಗೆಯುವರೆಗೆ ಅವರ ವಾದ ಆಲಿಸುವುದಿಲ್ಲ ಎಂದಿರುವುದಾಗಿ livelaw.in ವರದಿ ಮಾಡಿದೆ.

ಅಭಿಜಿತ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಮ್ಮ ವಿರುದ್ದ ಲೈಂಗಿಕ ನಿಂದನಾತ್ಮಕ ಪೋಸ್ಟ್ ಹಾಕಿದ್ದಾರೆ ಎಂದು ಪತ್ರಕರ್ತೆಯರು ಆರೋಪಿಸಿದ್ದಾರೆ.

ಅಭಿಜಿತ್ ಅವರ ಎಕ್ಸ್  ಪೋಸ್ಟ್‌ಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರು “ನೀವು ನಿಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುತ್ತೀರಾ? ಹಿನ್ನೆಲೆ ಏನೇ ಇರಲಿ, ಮಹಿಳೆಯರ ವಿರುದ್ದ ಈ ರೀತಿಯ ಪದಗಳನ್ನು ಬಳಸುವುದು ಈ ಸಮಾಜದಲ್ಲಿ ಅನುವದನೀಯವೇ? ಮೊದಲು ನೀವು ನಿಮ್ಮ ಪೋಸ್ಟ್ ತೆಗೆದು ಹಾಕಿ, ಆ ನಂತರ ನಿಮ್ಮ ಮಾತು ಕೇಳುತ್ತೇವೆ” ಎಂದು ಅಭಿಜಿತ್‌ ಅಯ್ಯರ್‌ಗೆ ಮೌಖಿವಾಗಿ ಹೇಳಿದ್ದಾರೆ.

ಅಯ್ಯರ್ ಪರ ಹಾಜರಿದ್ದ ವಕೀಲ ಜೈ ಅನಂತ್ ದೇಹಾದ್ರಾಯಿ ವಾದ ಮಂಡಿಸಿ “ನಮ್ಮ ಕಕ್ಷಿದಾರರ ಒಂದೇ ಒಂದು ಪೋಸ್ಟ್ ಕೂಡ ಪತ್ರಕರ್ತರಿಗೆ ವೈಯಕ್ತಿಕವಾಗಿ ಸಂಬಂಧಿಸಿಲ್ಲ” ಎಂದಿದ್ದಾರೆ.

ಈ ವಾದವನ್ನು ಒಪ್ಪಿಕೊಳ್ಳದ ನ್ಯಾಯಾಧೀಶರು, “ನೀವು ಆ ರೀತಿ ಅಂದುಕೊಂಡಿದ್ದರೆ, ಅದು ಪ್ರತಿವಾದಿಗಳಿಗೆ (ಪತ್ರಕರ್ತರಿಗೆ) ನೇರವಾಗಿ ಸಂಬಂಧಿಸಿವೆ ಎಂದು ನಾನು ಹೇಳುತ್ತೇನೆ” ಎಂದಿದ್ದಾರೆ.

ಈ ವೇಳೆ ಪ್ರತಿಕ್ರಿಯೆ ನೀಡಿದ ವಕೀಲ ದೇಹಾದ್ರಾಯಿ, “ನ್ಯೂಸ್ ಲಾಂಡ್ರಿ ಹೇಳಿಕೊಳ್ಳುವಂತಹ ಸಂಸ್ಥೆಯೇನು ಅಲ್ಲ. ಅದರ ಆದಾಯದ ಪ್ರಶ್ನಾರ್ಹ ಮೂಲಗಳ ಬಗ್ಗೆಯೂ ಅಯ್ಯರ್ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ” ಎಂದಿದ್ದಾರೆ.

ಮುಂದುವರಿದು, “ಆ ಸಂಸ್ಥೆಯ ಆದಾಯ ಮೂಲಗಳ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಯಿದೆ. ಹಾಗಾಗಿ, ಅದನ್ನು ವೇಶ್ಯಾಗೃಹ ಎಂದು ಉಲ್ಲೇಖಿಸಲಾಗಿದೆ” ಎಂಬ ದಾಟಿಯಲ್ಲಿ ಅಯ್ಯರ್ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನ್ಯಾಯಾಧೀಶರು,”ಪ್ರಶ್ನಾರ್ಹ ಆದಾಯ ಏನೇ ಇರಲಿ, ಇಂದು ಇಲ್ಲಿ ಪ್ರಶ್ನಿಸದ ಯಾವುದನ್ನೂ ಪರಿಶೀಲಿಸಲು ಸಾಧ್ಯವಿಲ್ಲ. ವೇಶ್ಯಾಗೃಹದ ವ್ಯಾಖ್ಯಾನವನ್ನು ಅವರು (ಅಭಿಜಿತ್ ಅಯ್ಯರ್) ಅರ್ಥಮಾಡಿಕೊಂಡಿದ್ದಾರಾ? ಪ್ರಶ್ನಾರ್ಹ ಮೂಲಗಳಿಂದ ಹಣಕಾಸಿನ ನೆರವು ಪಡೆಯುವ ಏನೇ ಆದರೂ ಅದನ್ನು ವೇಶ್ಯಾಗೃಹ ಎಂದು ಕರೆಯಬಹುದೇ?. ಪ್ರತಿವಾದಿಯ ವಿರುದ್ದ ಹಲವು ದೂರುಗಳು ಮತ್ತು ನಿಮ್ಮ ಕಕ್ಷಿದಾರರ ಪರ ಹಲವು ಸಮರ್ಥನೀಯ ವಾದಗಳು ನಿಮ್ಮಲ್ಲಿ ಇರಬಹುದು. ಹಾಗಾಂತ, ನಿಮ್ಮ ಕಕ್ಷಿದಾರರು ಬಳಕೆ ಮಾಡಿರುವ ಪದಗಳು ಸಮಾಜದಲ್ಲಿ ಸಮರ್ಥನೀಯವಲ್ಲ. ಯಾರಿಗೆ ಸಂಬಂಧಿಸದಿದ್ದರೂ, ಯಾವುದೇ ಕಲ್ಪನೆಯ ಮೇಲೆಯೂ ಸಾರ್ವಜನಿಕ ವೇದಿಕೆಯಲ್ಲಿ ಅಂತಹ ಪದ ಬಳಕೆ ಮಾಡಬಾರದು” ಎಂದು ಹೇಳಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ವಿರುದ್ಧ ನಿಂದನೀಯ ಪದಗಳನ್ನು ಬಳಸಿದ್ದಕ್ಕಾಗಿ ಅಯ್ಯರ್ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಲು ಪೀಠ ಮುಂದಾದಾಗ, ಪೋಸ್ಟ್‌ಗಳನ್ನು ತಕ್ಷಣವೇ ತೆಗೆದುಹಾಕಲು ಅಯ್ಯರ್ ಪರ ವಕೀಲರು ಒಪ್ಪಿಕೊಂಡರು. ನ್ಯಾಯಾಲಯ ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿ ಮಾಡಿದ್ದಾರೆ.

ನ್ಯೂಸ್ ಲಾಂಡ್ರಿಯ ಪತ್ರಕರ್ತೆಯರು ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ಅಯ್ಯರ್‌ ಮಿತ್ರಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ತೆಗೆಯಬೇಕು ಮತ್ತು ಪರಿಹಾರವಾಗಿ 2 ಕೋಟಿ ರೂಪಾಯಿ ನೀಡಬೇಕು ಎಂದು ಕೋರಲಾಗಿದೆ.

ಮಹಿಳಾ ಪತ್ರಕರ್ತರಾದ ಮನೀಶಾ ಪಾಂಡೆ, ಇಶಿತಾ ಪ್ರದೀಪ್, ಸುಹಾಸಿನಿ ಬಿಸ್ವಾಸ್, ಸುಮೇಧಾ ಮಿತ್ತಲ್, ಟಿಸ್ತಾ ರಾಯ್ ಚೌಧರಿ, ತಸ್ನೀಮ್ ಫಾತಿಮಾ, ಪ್ರಿಯಾ ಜೈನ್, ಜಯಶ್ರೀ ಅರುಣಾಚಲಂ ಮತ್ತು ಪ್ರಿಯಾಲಿ ಧಿಂಗ್ರಾ ಮೊಕದ್ದಮೆ ಹೂಡಿದ್ದಾರೆ. ಪ್ರಕರಣದ ಪಕ್ಷಕಾರರಲ್ಲಿ ನ್ಯೂಸ್ ಲಾಂಡ್ರಿಯೂ ಸೇರಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಭಿಜಿತ್ ಅಯ್ಯರ್ ಹಾಕಿರುವ ಪೋಸ್ಟ್‌ಗಳು ಮಾನಹಾನಿಕರ ಆಧಾರರಹಿತ ಮತ್ತು ತಪ್ಪು ಕಲ್ಪನೆಯಿಂದ ಕೂಡಿದ್ದು, ಮಹಿಳಾ ಉದ್ಯೋಗಿಗಳ ಘನತೆ ಮತ್ತು ಖ್ಯಾತಿಗೆ ಹಾನಿ ಮಾಡುವ ಉದ್ದೇಶ ಹೊಂದಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಪತ್ರಿಕೋದ್ಯಮದ ಕೆಲಸದ ಬಗ್ಗೆ ನ್ಯಾಯಯುತ ಟೀಕೆ ಸ್ವಾಗತಾರ್ಹವಾದರೂ, ಯಾರೂ ವೈಯಕ್ತಿಕವಾಗಿ ಅವಮಾನಕ್ಕೊಳಗಾಗಲು ಅರ್ಹರಲ್ಲ ಎಂದು ಪತ್ರಕರ್ತೆಯರು ಹೇಳಿದ್ದಾರೆ.

ಅಭಿಜಿತ್ ಅಯ್ಯರ್ ತನ್ನ ಸರಣಿ ಎಕ್ಸ್‌ ಪೋಸ್ಟ್‌ನಲ್ಲಿ ಮಹಿಳಾ ಉದ್ಯೋಗಿಗಳ ವಿರುದ್ದ ದುರುದ್ದೇಶಪೂರಿತ ಮತ್ತು ನಿಂದನೀಯ ಪದಗಳನ್ನು ಬಳಸಿದ್ದಾರೆ. ನಮ್ಮನ್ನು ವೇಶ್ಯೆಯರು ಮತ್ತು ನಾನು ಕೆಲಸ ಮಾಡುವ ಸ್ಥಳವನ್ನು ವೇಶ್ಯಾಗೃಹ ಎಂದು ಕರೆದಿರುವುದಾಗಿ ತಿಳಿಸಿದ್ದಾರೆ.

ವೈದ್ಯರಿಂದ ಹಿಡಿದು ವಕೀಲರು, ನ್ಯಾಯಾಧೀಶರು, ಶಿಕ್ಷಕರು, ವಿಜ್ಞಾನಿಗಳು, ವಾಸ್ತುಶಿಲ್ಪಿಗಳು, ಇಂಜಿನಿಯರ್‌ಗಳು ಮತ್ತು ಇತರರ ವರ್ಗದವರು ಎಂಬ ಗೌರವ ಇಲ್ಲದೆ, ನ್ಯೂಸ್ ಲಾಂಡ್ರಿಯ ಎಲ್ಲಾ ಚಂದಾದಾರರನ್ನು ‘ವೇಶ್ಯೆಯರು’ ಎಂದು ಉಲ್ಲೇಖಿಸಿರುವುದಾಗಿ ವಿವರಿಸಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರಿಗೂ ಸಹ ಘನತೆ ಇದೆ. ‘ವೇಶ್ಯೆ’ ಎಂಬ ಪದವು ಮಹಿಳಾ ಪತ್ರಕರ್ತರ ಮೇಲಿನ ದಾಳಿ ಮಾತ್ರವಲ್ಲ, ಲೈಂಗಿಕ ಕಾರ್ಯಕರ್ತೆಯರ ವಿರುದ್ಧದ ಅಸಹನೆ ಮತ್ತು ಹಿಂಸಾತ್ಮಕ ಮನೋಭಾವವನ್ನು ಬಿಂಬಿಸುತ್ತದೆ. ಈಗಾಗಲೇ ಅನೇಕ ಲೈಂಗಿಕ ಕಾರ್ಯಕರ್ತೆಯರ ಈ ರೀತಿಯ ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಪತ್ರಕರ್ತೆಯರ ಹೇಳಿದ್ದಾರೆ.

ಯಾವುದೇ ವ್ಯಕ್ತಿ/ ಮಹಿಳೆ ಅವಮಾನವೀಯ ಕೃತ್ಯಗಳಿಗೆ ಒಳಪಡಬೇಕಾದವರಲ್ಲ. ಯಾವುದೇ ವೃತ್ತಿಯನ್ನು ಅವಮಾನವೆಂದು ಶಸ್ತ್ರಸಜ್ಜಿತಗೊಳಿಸಲು ಸಾಧ್ಯವಿಲ್ಲ. ಅಭಿಜಿತ್ ಅಯ್ಯರ್ ಪೋಸ್ಟ್ ಪತ್ರಕರ್ತರಾಗಿರಲಿ ಅಥವಾ ಲೈಂಗಿಕ ಕಾರ್ಯಕರ್ತರಾಗಿರಲಿ ಮಹಿಳೆಯರ ಸಂಸ್ಥೆ, ಗೌರವವನ್ನು ಕಸಿದುಕೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕೋದ್ಯಮ ಟೀಕೆ ಅಥವಾ ವಿಡಂಬನೆ ಅಥವಾ ನ್ಯಾಯಯುತ ಹೇಳಿಕೆ ಎಂದು ಇದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಅಭಿಜಿತ್ ಅವರ ಪೋಸ್ಟ್ ನ್ಯೂಸ್ ಲಾಂಡ್ರಿಯ ಮಹಿಳಾ ವೃತ್ತಿಪರರನ್ನು ಅವಮಾನಿಸುವ ಗುರಿಯನ್ನು ಹೊಂದಿರುವ ಲೈಂಗಿಕ ನಿಂದನೆಗಳಾಗಿವೆ. ನ್ಯೂಸ್ ಲಾಂಡ್ರಿಯ ಮೇಲಿನ ದಾಳಿಯ ಹೊರತಾಗಿ, ಭಯ ಅಥವಾ ಲೈಂಗಿಕ ಕಿರುಕುಳವಿಲ್ಲದೆ ಕೆಲಸ ಮಾಡುವ ಮಹಿಳೆಯರ ಘನತೆ ಮತ್ತು ಹಕ್ಕಿನ ಮೇಲಿನ ನೇರ ದಾಳಿಯಾಗಿದೆ ಎಂದು ಹೇಳಿದ್ದಾರೆ.

ಪತ್ರಕರ್ತೆಯರು ವಕೀಲ ಉದ್ಧವ್ ಖನ್ನಾ ಮತ್ತು ಧ್ರುವ ವಿಗ್ ಮೂಲಕ ಈ ಮೊಕದ್ದಮೆ ಹೂಡಿದ್ದಾರೆ. ವರದಿಗಳ ಪ್ರಕಾರ, ನ್ಯಾಯಾಲಯದ ಕ್ಷಮೆ ಕೇಳಿರುವ ಅಭಿಜಿತ್ ಅಯ್ಯರ್ ಪರ ವಕೀಲ ದೇಹದ್ರಾಯ್‌ ಅವರು, 5 ಗಂಟೆಗಳ ಒಳಗೆ ಪೋಸ್ಟ್ ಅಳಿಸಿಹಾಕುವುದಾಗಿ ತಿಳಿಸಿದ್ದಾರೆ.

ನಗದು ಪತ್ತೆ ಪ್ರಕರಣ | ನ್ಯಾಯಮೂರ್ತಿ ವಿರುದ್ಧ ಎಫ್‌ಐಆರ್ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...