Homeಮುಖಪುಟಉದ್ದಗಲ ಹರಡುತ್ತಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಮನುಷ್ಯ ಸೃಷ್ಟಿಯ ಮಾಯೆ

ಉದ್ದಗಲ ಹರಡುತ್ತಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂಬ ಮನುಷ್ಯ ಸೃಷ್ಟಿಯ ಮಾಯೆ

- Advertisement -
- Advertisement -

ಕಳೆದ ಕೆಲವು ವಾರಗಳಿಂದ ಇಂಟರ್ನೆಟ್‌ನಲ್ಲಿ ಒಂದೇ ಬಹು ಮುಖ್ಯ ಚರ್ಚೆ. ಚಾಟ್‌ಜಿಪಿಟಿ. ಓಪನ್ ಎಐ ಮುಕ್ತ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ ಚಾಟ್‌ಬಾಟ್ ಇದು. ನೀವು ಯಾವುದೇ ವಿಷಯಕ್ಕೆ ಸಂಧಿಸಿದ ಮಾಹಿತಿಯನ್ನು ಕೇಳಿದರೆ ಕ್ಷಣ ಮಾತ್ರದಲ್ಲಿ ನೀಡುವ ಈ ಬಾಟ್ (ರೋಬಾಟ್), ಗೂಗಲ್‌ಅನ್ನು ಮುಂದೆ ಮೀರಿಸುವಂತೆ ಸಂವಾದ ನಡೆಸುತ್ತದೆ. ಕೇಳಿದ ಪ್ರಶ್ನೆಗೆ ಉತ್ತರ ನೀಡುವುದಷ್ಟೇ ಅಲ್ಲ, ನಿಮಗೆ ಬೇಕಾದ್ದನ್ನು ಬರೆದುಕೊಡುತ್ತದೆ (ಸದ್ಯಕ್ಕೆ ಇಂಗ್ಲಿಷ್‌ನಲ್ಲಿ ಮಾತ್ರ)!

ಕಳೆದ ಒಂದೂವರೆ ದಶಕದಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಲಯದಲ್ಲಿ ಭಾರಿ ಸಂಶೋಧನೆಗಳು ನಡೆಯುತ್ತಾ ಬಂದಿವೆ. ಆದರೆ ಕಳೆದ ನಾಲ್ಕಾರು ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಳು ವಿಸ್ಮಯ, ಬೆರಗು ಹುಟ್ಟಿಸುವಂತಹವು. ಅದರ ಜೊತೆಗೆ ಆತಂಕವನ್ನೂ ಹುಟ್ಟಿಸುವಂತಹವು.

ಮನುಷ್ಯನ ಕಲಿಕೆ, ಸಂವಹನ ಹಾಗೂ ಸೇವೆಯ ಸಾಧ್ಯತೆಗಳನ್ನು ಈ ಹೊಸ ಆವಿಷ್ಕಾರದ ಬೆಳವಣಿಗೆ ವಿಸ್ತರಿಸಿದೆ. ತಂತ್ರಜ್ಞಾನ ಹಾಗೂ ಡೇಟಾ ಮೇಳೈಸಿದ ಈ ಕಲ್ಪನೆ ತಾಂತ್ರಿಕವೂ ಯಾಂತ್ರಿಕವೂ ಆಗಿದ್ದ ಪ್ರಕ್ರಿಯೆಗೆ ಸೃಜನಶೀಲತೆಯ ಆಯಾಮವನ್ನು ಒದಗಿಸಿದೆ. ಹಾಗಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈಗ ಎಲ್ಲರ ನಾಲಿಗೆಯ ಮೇಲೆ ನುಲಿಯುತ್ತಿದೆ.

ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಇಲಾನ್ ಮಸ್ಕ್ ಕೂಡಿ ಆರಂಭಿಸಿದ ಸ್ವತಂತ್ರ ಸಂಶೋಧನಾ ಸಂಸ್ಥೆ ಓಪನ್ ಎಐ. ನಂತರ ಹಲವು ತಂತ್ರಜ್ಞಾನ ಸಂಸ್ಥೆಗಳು ಇದಕ್ಕೆ ಕೈಜೋಡಿಸಿವೆ. ಈ ಸಂಸ್ಥೆಯ ಮೂಲಕ ಅಭಿವೃದ್ಧಿಪಡಿಸಿದ ಚಾಟ್‌ಬಾಟ್ ಈ ಚಾಟ್‌ಜಿಪಿಟಿ. ಬಿಡುಗಡೆಯಾದ ಒಂದೇ ಒಂದು ವಾರದಲ್ಲಿ 10 ಲಕ್ಷ ಬಳಕೆದಾರರು ಚಾಟ್ ಜಿಪಿಟಿಯ ಜೊತೆಗೆ ಹರಟೆ ಹೊಡೆದಿದ್ದಾರೆ. ಮೈಕ್ರೋಸಾಫ್ಟ್‌ನ ಸಿಇಒಯಿಂದ ಹಿಡಿದು ಸಾಮಾನ್ಯ ಯುವಕ/ಯುವತಿಯೂ ಈ ಚಾಟ್ ಜಿಪಿಟಿಯ ಸೆಳೆತಕ್ಕೆ ಒಳಗಾಗಿದ್ದಾರೆ.

ಚಾಟ್‌ಜಿಪಿಟಿ ಮಾತನಾಡುವುದಿಲ್ಲ. ಆದರೆ ಚಾಟ್ ಮಾಡುತ್ತದೆ. ಕ್ವಾಂಟಂ ಫಿಸಿಕ್ಸ್‌ನಂತಹ ಸಂಕೀರ್ಣ ವಿಷಯವನ್ನು ವಿವರಿಸುವುದೇ ಆಗಿರಲಿ, ಪದ್ಯವನ್ನು ಬರೆಯುವುದೇ ಇರಲಿ ಸಲೀಸಾಗಿ ಮಾಡಿಬಿಡುತ್ತದೆ. ಈ ಲೇಖನ ಬರೆಯುವ ಹೊತ್ತಿಗೆ ಚಾಟ್‌ಜಿಪಿಟಿ ಜನಪ್ರಿಯತೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಬಳಕೆದಾರರ ಬೇಡಿಕೆ ಪೂರೈಸುವುದಕ್ಕೆ ಕಸರತ್ತು ಪಡುವಷ್ಟು. ಈ ನೆಪದಲ್ಲಿ ತನ್ನ ಮೇಲೆ ತಾನೇ ಒಂದು ಸಾನೆಟ್ ಬರೆದು ಪ್ರಕಟಿಸಿತ್ತು! ಕೇಳಿದರೆ ಜೋಕ್ ಹೇಳುತ್ತದೆ, ಹಾಗೆಯೇ ಯಾವುದಾದರೂ ಖಾದ್ಯ ಮಾಡುವ ವಿಧಾನವನ್ನು ಹೇಳಿಕೊಡುತ್ತದೆ.

ಇವೆಲ್ಲವೂ ನಮಗೆ ಸರ್ಚ್‌ನಲ್ಲಿ ಸಿಗುತ್ತಿರಲಿಲ್ಲವೇ ಅಂದಿರಾ? ಇಷ್ಟು ದಿನ ನಮ್ಮೆಲ್ಲರಿಗೂ ಸಿಗುತ್ತಿದ್ದ ಯಂತ್ರದ ಶುಷ್ಕ ಪ್ರತಿಕ್ರಿಯೆಯ ಬದಲು, ಆಲೋಚಿಸುವ, ಆಪ್ತವಾಗಿ ಸ್ಪಂದಿಸುವ ವ್ಯಕ್ತಿಯೊಂದಿಗಿನ ಸಂವಾದದ ಅನುಭವವನ್ನು ಇದು ನೀಡುತ್ತಿದೆ. ಭಾಷೆಗೆ ಸಂಬಂಧಿಸಿದ ಸೇವೆಯನ್ನು ರೂಪಿಸುವ ನಿಟ್ಟಿನಲ್ಲಿ ಗೂಗಲ್, ಫೇಸ್‌ಬುಕ್ ಸಾಕಷ್ಟು ಕೆಲಸ ಮಾಡಿವೆ. ಆದರೆ ಇಷ್ಟೊಂದು ಸಮರ್ಥವಾದ, ಅಗಾಧ ಸಾಧ್ಯತೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸೇವೆಯೊಂದು ಸಾರ್ವಜನಿಕವಾಗಿ ಮುಕ್ತವಾಗಿ ಲಭ್ಯವಾಗಿರುವುದು ಇದೇ ಮೊದಲು.

ಚಾಟ್‌ಜಿಪಿಟಿಯೊಂದೇ ದೊಡ್ಡ ಆವಿಷ್ಕಾರವಲ್ಲ. ಕಳೆದ ವರ್ಷ ಡಾಲ್-ಇ ಎಂಬ, ಇನ್ನೊಂದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿದ ಕಲಾಕೃತಿ ರಚಿಸುವ ಬಾಟ್ ಸದ್ದುಮಾಡಿತ್ತು. ಇದು ವಿಶಿಷ್ಟ ರೀತಿಯಲ್ಲಿ ಕಲಾಕೃತಿಗಳನ್ನು ರಚಿಸಿಕೊಡಲು ಆರಂಭಿಸಿತ್ತು. ನೀವು ನಿಮಗೆ ಅಗತ್ಯವಿರುವ ಚಿತ್ರದ ವಿವರಣೆಯನ್ನು ನೀಡಿದರೆ, ಈ ಬಾಟ್ ಚಿತ್ರವನ್ನು ಸಿದ್ಧಪಡಿಸಿಕೊಡುತ್ತದೆ. ಕಲಾಸೃಷ್ಟಿಯ ಈ ಸಾಧ್ಯತೆಯನ್ನೂ ಸಾಧ್ಯವಾಗಿಸಿರುವುದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್! ತರಹೇವಾರಿ ಶೈಲಿಯ ಕಲಾಕೃತಿಗಳನ್ನ ಈ ಬಾಟ್ ಬಳಸಿ ಸಿದ್ಧಪಡಿಸಿ ಲಕ್ಷಾಂತರ ಬಳಕೆದಾರರು ಬೆರಗಾಗಿಹೋಗಿದ್ದಾರೆ. ಬಳಕೆದಾರರು ನಿರೀಕ್ಷೆಯ ಶೇ. 80ರಷ್ಟು ನಿಖರತೆಯ ಚಿತ್ರಗಳನ್ನು ಇದು ಸಿದ್ಧಪಡಿಸುತ್ತಿದೆ!

ಮೇಲಿನ ಎರಡು ಉದಾಹರಣೆಗಳು ಇತ್ತೀಚಿನವು ಹಾಗೂ ತಂತ್ರಜ್ಞಾನದ ತಿಳಿವಳಿಕೆ ಇಲ್ಲದವರೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೋಡಿಗೆ ಒಳಗಾಗಿರುವುದನ್ನು ವಿವರಿಸುವಂತಹವು.

ಇದನ್ನೂ ಓದಿ: ಸಾಹಿತ್ಯ ಪ್ರಾತಿನಿಧ್ಯವನ್ನು ಗೇಲಿ ಮಾಡುವ ಪ್ರತಿಗಾಮಿತನ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರೋಗ ಸಾಧ್ಯತೆಯ ಭವಿಷ್ಯ ನುಡಿಯುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಬೆಳವಣಿಗೆ. ಈ ತಂತ್ರಜ್ಞಾನ ಯಾವ ಮಟ್ಟಿಗೆ ಚಾಚಿಕೊಳ್ಳುತ್ತಿದೆ ಎಂದರೆ ವ್ಯಕ್ತಿಗತವಾದ ಔಷಧ ಪದ್ಧತಿಯನ್ನು ರೂಪಿಸಲು ಸಾಧ್ಯವಿದೆ ಎಂಬುದನ್ನು ಕಂಡುಕೊಂಡಿದೆ. ವ್ಯಕ್ತಿಯೊಬ್ಬರ ಆರೋಗ್ಯದ ಇತಿಹಾಸ, ಆಹಾರ ಪದ್ಧತಿ, ಜೀವನ ಶೈಲಿ ಆಧರಿಸಿ ವೈದ್ಯ ಸೇವೆಯನ್ನು ಖಾಸಗಿ ಹಾಗೂ ವ್ಯಕ್ತಿಗತವಾಗಿಸಬಹುದು ಎಂಬುದನ್ನು ಕಂಡುಕೊಳ್ಳಲಾಗಿದೆ.

ಹೀಗೆ ಆಟೋಮೇಷನ್, ಭಾಷೆ, ರೊಬೊಟಿಕ್ಸ್, ಫೇಷಿಯಲ್ ರೆಕಗ್ನಿಷನ್ ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಅನ್ನು ವ್ಯಾಪಕವಾಗಿ ಬಳಸಿ ಪ್ರಯೋಗಕ್ಕೆ ಒಡ್ಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ವಯದ ಪ್ರಮಾಣದ ದುಪ್ಪಟ್ಟಾಗಿದೆ ಎಂದು ಮೆಕೆನ್ಸಿ ವರದಿ ಹೇಳುತ್ತದೆ. ಕೋವಿಡ್ ಸೋಂಕಿನ ನಂತರ ಜಾಗತಿಕವಾಗಿ ಈ ತಂತ್ರಜ್ಞಾನ ವೇಗವಾಗಿ ಬೆಳೆದಿದೆ. ಭಾರತ ಕೂಡ ಈ ತಂತ್ರಜ್ಞಾನದ ಬಹುಮುಖ್ಯ ಭಾಗವಾದ ಅಲ್ಗಾರಿದಮ್, ಡೆಟಾ ಅನಾಲಿಸಿಸ್ ವಿಷಯದಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ. ಇಂಟರ್‌ನ್ಯಾಷನಲ್ ಡೆಟಾ ಕಾರ್ಪೊರೇಷನ್ ಸ್ಟಡಿಯ ಪ್ರಕಾರ ಭಾರತ 3.1 ಬಿಲಿಯನ್ ಡಾಲರ್‌ನಷ್ಟಿದ್ದ ಭಾರತದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಉದ್ಯಮ ಈಗ 8 ಬಿಲಿಯನ್ ಡಾಲರ್ ಗಡಿ ಮುಟ್ಟುವತ್ತ ಸಾಗಿದೆ!

ವೈಜ್ಞಾನಿಕ ಸಂಶೋಧನೆ, ಪ್ರಯೋಗಗಳ ವಿಧಾನದಲ್ಲಿಯೇ ಕ್ರಾಂತಿಕಾರಿ ಬದಲಾವಣೆ ತರುವ ಭರವಸೆಯನ್ನು ಈ ತಂತ್ರಜ್ಞಾನ ಮೂಡಿಸಿದೆ. ವಿದೇಶಾಂಗ ವ್ಯವಹಾರಗಳ ನೀತಿಯನ್ನು ರೂಪಿಸುವಲ್ಲೂ ಈ ತಂತ್ರಜ್ಞಾನ ನಿರ್ಣಾಯಕವಾಗುತ್ತಿದೆ ಎಂಬುದು ಈ ತಂತ್ರಜ್ಞಾನಕ್ಕಿರುವ ರಾಜಕೀಯ ಆಯಾಮ. ಅಮೆರಿಕ ಈ ನಿಟ್ಟಿನಲ್ಲಿ ಸಾಕಷ್ಟು ಚಿಂತನೆ ನಡೆಸಿದೆ. ಇನ್ನು ಸಾಮಾನ್ಯ ಬಳಕೆದಾರ ಅಥವಾ ಗ್ರಾಹಕರ ಕೊಳ್ಳುವ ಅನುಭವವನ್ನು ಹಿಗ್ಗಿಸಲಿದೆ ಎಂಬುದು ಮತ್ತೊಂದು ಸಾಧ್ಯತೆ. ಹವಾಮಾನ ವೈಪರೀತ್ಯ ಜಾಗತಿಕವಾಗಿ, ಕೃಷಿ, ಆಹಾರ, ಪರಿಸರ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಮತ್ತು ಪರಿಹಾರ ಕಂಡುಕೊಳ್ಳಲು ಕೂಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಮುಖ ಅಸ್ತ್ರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮಾಜ ಮತ್ತು ಆರ್ಥಿಕತೆ ಎರಡೂ ವಲಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎಂಬುದು ಈ ತಂತ್ರಜ್ಞಾನದ ಬಗ್ಗೆ ಹೆಚ್ಚಿಸಿರುವ ಕುತೂಹಲ.

ಅಭಿವೃದ್ಧಿ, ಪ್ರಗತಿಯ ಆಯಾಮದಲ್ಲಿ ವಿಸ್ಮಯ ಹುಟ್ಟಿಸಿರುವ ಈ ತಂತ್ರಜ್ಞಾನ ಆತಂಕ ಮತ್ತು ಸವಾಲುಗಳನ್ನೂ ಸೃಷ್ಟಿಸಿದೆ. ಈ ಸವಾಲುಗಳ ಬಗ್ಗೆ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ, ನೋಮ್ ಚಾಮ್‌ಸ್ಕಿ ಈ ಕುರಿತು ಅಭಿಪ್ರಾಯಪಟ್ಟಿರುವುದು ಹೀಗೆ: “ಡೀಪ್ ಲನಿಂಗ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅವಲಂಬಿತ ಯಂತ್ರಾಧರಿತ ಕಲಿಕೆ) ಹಲವು ಕ್ಷೇತ್ರಗಳಿಗೆ ಉಪಯುಕ್ತವಾದ ಸಾಧನಗಳನ್ನು ಒದಗಿಸಬಹುದು. ಆದರೆ ಈ ಉಪಯುಕ್ತತೆಯ ಆಚೆಗೆ ಒಂದು ನಿರ್ದಿಷ್ಟ ಭಾಷೆಯ ಹಿನ್ನೆಲೆಯಲ್ಲಿ ಗ್ರಹಿಕೆ, ಆಲೋಚನೆಯ ನಿಟ್ಟಿನಲ್ಲಿ ನಮ್ಮ ಕಲಿಕೆ ಏನು? ಇಂತಹ ಕಲಿಕೆ ನಮಗೆ ಅಗಾಧವಾದ ಮಾಹಿತಿ ಕೊಡುತ್ತಿರುವಂತೆಯೇ ಅಗಾಧವಾದ ಸೋಲುಗಳನ್ನು ತಂದು ನಿಲ್ಲಿಸುತ್ತದೆ”.

ಚಾಮ್‌ಸ್ಕಿ ಮಾತಿನಲ್ಲಿರುವ ತಥ್ಯವೆಂದರೆ, ತಾಂತ್ರಿಕವಾಗಿ, ಯಾವುದೇ ಸೇವೆಯ ಚೌಕಟ್ಟನ್ನು ನಿರ್ಧರಿಸಬಹುದು. ಉದಾಹರಣೆಗೆ ಒಂದು ಪಠ್ಯವನ್ನು ಸಿದ್ಧಪಡಿಸಿದರೆ, ಅದರ ವ್ಯಾಕರಣ, ಸರಿಯಾದ ಪದ ಬಳಕೆ ಇತ್ಯಾದಿ ವಿಷಯಗಳಲ್ಲಿ ಸಮರ್ಪಕವಾಗಿರಬಹುದು. ಆದರೆ ತರ್ಕ ಮತ್ತು ಸಂವೇದನೆಯಲ್ಲಿ ಲೋಪಗಳಿರುತ್ತವೆ. ಮೂಲದಲ್ಲಿ ನಾವು ಅವಲಂಬಿಸಬೇಕಿರುವುದೇ ಈ ಅಂಶಗಳ ಮೇಲೆ. ಆದರೆ ಡೇಟಾ ಆಧರಿಸಿ, ನಿರ್ಮಿಸುವ ದೊಡ್ಡದೊಡ್ಡ ಕಾರ್ಯವಿಧಾನಗಳು ಮತ್ತು ಅವುಗಳನ್ನು ಕ್ರಿಯಾಶೀಲವಾಗಿಸಿರುವ ಚಾಣಾಕ್ಷ ಪ್ರೊಗ್ರಾಮಿಂಗ್‌ಗಳಲ್ಲಿ ಈ ಸೂಕ್ಷ್ಮಗಳು ಇರುವುದಿಲ್ಲ ಎಂಬುದನ್ನು ಚಾಮ್‌ಸ್ಕಿ ವಿವರಿಸುತ್ತಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲರೂ ಸೃಜನಶೀಲರಾಗುವಂತೆ ಮಾಡುತ್ತಿದೆ (ಬರವಣಿಗೆಗೆ, ಚಿತ್ರ ರಚನೆಗೆ ಸಹಕರಿಸಿ). ಆದರೆ ಮೂಲಭೂತವಾಗಿ ಅದಕ್ಕೆ ಇರಬೇಕಾದ ಕೌಶಲ್ಯವನ್ನೇ ಕಲಿಸುವುದಿಲ್ಲ!

ಎಲ್ಲ ತಂತ್ರಜ್ಞಾನಗಳಿಗೆ ಇರುವಂತೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ಗೂ ಎರಡು ಆಯಾಮಗಳು ಇವೆ. ಒಂದು ಒಳಿತನದ್ದು, ಇನ್ನೊಂದು ಕೆಡುಕಿನದ್ದು. ಅಸಾಧ್ಯಗಳನ್ನು ಸಾಧಿಸುವ ಹುಮ್ಮಸ್ಸಿನ ತಂತ್ರಜ್ಞಾನ, ಮುಕ್ತ ತಂತ್ರಜ್ಞಾನ ಸಂಪನ್ಮೂಲಗಳನ್ನು ಇನ್ನಷ್ಟು ಮುಕ್ತವಾಗಿಸಬಹುದು. ತಂತ್ರಜ್ಞಾನ ಕ್ಷೇತ್ರದಲ್ಲಿ ವಿಕೇಂದ್ರೀಕರಣಕ್ಕೆ ಇನ್ನಷ್ಟು ಬಲವನ್ನು ಒದಗಿಸಬಹುದು. ಅದರೊಟ್ಟಿಗೆ ಸಮಸ್ಯೆಗಳ ಸಾಗರವನ್ನೇ ಇದು ಸೃಷ್ಟಿಸಬಲ್ಲದು ಎಂದೂ ಪರಿಣಿತರು ಅಭಿಪ್ರಾಯ ಪಡುತ್ತಾರೆ. ಮಾಹಿತಿ ರೂಪದಲ್ಲಿರುವ ಯಾವುದೇ ಸಂಗತಿಯನ್ನು ಒಂದು ನಿರ್ದಿಷ್ಟ ಮಾದರಿಯನ್ನಾಗಿ ಅನುಸರಿಸುವ ಈ ತಂತ್ರಜ್ಞಾನ, ಪೂರ್ವಗ್ರಹಗಳನ್ನು ಕಳಚುವುದು, ಸಾಮಾಜಿಕ ಸೂಕ್ಷ್ಮಗಳನ್ನು ಕಲಿಯುವುದು ಕಷ್ಟವೆಂಬುದು ಅವರ ಕಾಳಜಿ.

ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನವಾಗಿಸುವ ಮನುಷ್ಯನ ಆಲೋಚನಾ ಶಕ್ತಿಯನ್ನು ಈಗ ಯಂತ್ರಗಳೂ ಪಡೆಯಲಾರಂಭಿಸಿವೆ. ಆದರೂ ಈ ಆಲೋಚನೆಯ ಜೊತೆಗಿರುವ ಕೌಶಲ್ಯ ಮತ್ತು ಸಂವೇದನೆಯನ್ನು ಯಂತ್ರಗಳು ಎಷ್ಟರ ಮಟ್ಟಿಗೆ ನಕಲು ಮಾಡಬಲ್ಲವು ಎಂಬು ಕುತೂಹಲ ಇನ್ನೂ ಉಳಿದಿದೆ.

ಎಸ್ ಕುಮಾರ್
ಹಿರಿಯ ಪತ್ರಕರ್ತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...