Homeಮುಖಪುಟಕೋನಸೀಮಾ ಜಿಲ್ಲೆಗೆ ಅಂಬೇಡ್ಕರ್‌ ಹೆಸರು: ಹಿಂಸಾಚಾರಕ್ಕೆ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಪ್ರಚೋದನೆ

ಕೋನಸೀಮಾ ಜಿಲ್ಲೆಗೆ ಅಂಬೇಡ್ಕರ್‌ ಹೆಸರು: ಹಿಂಸಾಚಾರಕ್ಕೆ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಪ್ರಚೋದನೆ

ಆಂಧ್ರಪ್ರದೇಶದ ಸಚಿವ ಪಿಣಿಪೆ ವಿಶ್ವರೂಪು ಹಾಗೂ ಶಾಸಕ ಪಿ.ಸತೀಶ್ ಅವರ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈಗ ಹತ್ತಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
- Advertisement -

ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಅಮಲಾಪುರಂ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದ ಕೆಲವು ದಿನಗಳ ನಂತರ, “ಇದು ಪೂರ್ವ ಯೋಜಿತ ಮತ್ತು ಸಂಘಟಿತ ಕೃತ್ಯ” ಎಂದು ರಾಜ್ಯ ಪೊಲೀಸರು ಪತ್ತೆ ಪತ್ತೆಹಚ್ಚಿರುವುದಾಗಿ ‘ದಿ ನ್ಯೂಸ್‌ ಮಿನಿಟ್‌’ ಜಾಲತಾಣ ವರದಿ ಮಾಡಿದೆ.

ಕೋನಸೀಮಾ ಜಿಲ್ಲೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡುವ ಜಗನ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮೇ 24 ರಂದು ಕೋನಸೀಮಾ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ದೊಡ್ಡ ಗುಂಪು ಜಮಾಯಿಸಿತ್ತು. ಜಿಲ್ಲಾಧಿಕಾರಿ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದ್ದು, ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಇದಾದ ಬಳಿಕ ಸಚಿವ ಪಿಣಿಪೆ ವಿಶ್ವರೂಪು ಹಾಗೂ ಶಾಸಕ ಪಿ.ಸತೀಶ್ ಅವರ ಮನೆಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದರು. ಹಿಂಸಾಚಾರದಲ್ಲಿ ಸುಮಾರು 20 ಪೊಲೀಸ್ ಸಿಬ್ಬಂದಿ ಗಾಯಗೊಂಡರು. ಎರಡು ಬಸ್‌ಗಳು ಸೇರಿದಂತೆ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾದವು.

ಸಚಿವರು ಮತ್ತು ಶಾಸಕರ ಮನೆಯ ಸಿಸಿಟಿವಿ ಕ್ಯಾಮೆರಾಗಳು, ಕಿಮ್ಸ್ ಆಸ್ಪತ್ರೆ ಹಾಗೂ ಈ ಗುಂಪು ಸಂಚರಿಸುವ ಮಾರ್ಗದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ವಶಕ್ಕೆ ಪಡೆದು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ‘ನ್ಯೂಸ್‌ ಮಿನಿಟ್’ ವರದಿ ಮಾಡಿದೆ.

PC: TheNewsMinute

ಹಿಂಸಾಚಾರ ನಡೆದಾಗ ಅಲ್ಲಿದ್ದ ಸಿಬ್ಬಂದಿಯನ್ನು ಹಿಂಸಾಚಾರದಲ್ಲಿ ಭಾಗವಹಿಸಿದವರನ್ನು ಗುರುತಿಸಲು ಕರೆಸಲಾಯಿತು. ಜಿಲ್ಲೆಯ ಪ್ರಬಲ ಜಾತಿಗಳಾದ ಕಾಪುಗಳು, ಸೆಟ್ಟಿ ಬಲಿಜರು ಹಾಗೂ ನಾಗವಂಶದ ಕೆಲವು ಸದಸ್ಯರು ಘಟನೆಯಲ್ಲಿ ಭಾಗವಹಿಸಿದ್ದರು ಎಂದು ಹಿಂದಿನ ತನಿಖಾ ಅಧಿಕಾರಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

PC: TheNewsMinute

ಹಿಂಸಾಚಾರಕ್ಕೂ ಮುನ್ನ 20ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳು ಸಕ್ರಿಯವಾಗಿದ್ದವು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಹಿಂಸಾಚಾರವನ್ನು ಹೇಗೆ ಆಯೋಜಿಸಬೇಕು ಎಂಬುದರ ಕುರಿತು ನಿರ್ದಿಷ್ಟ ಸೂಚನೆಗಳೊಂದಿಗೆ ಪ್ರಚೋದನಕಾರಿ ಸಂದೇಶಗಳನ್ನು ಗುಂಪುಗಳಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿರಿ: ಆಂಧ್ರಪ್ರದೇಶ: ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ; ತಿಂಗಳುಗಳ ಬಳಿಕ ಪ್ರಕರಣ ಬಯಲು

ಜಿಲ್ಲೆಯ ಹೆಸರು ಕೋನಸೀಮಾ ಎಂದಷ್ಟೇ ಇರಬೇಕೆಂದು ಬಯಸುವ “ಸ್ನೇಹಿತರನ್ನು” ಒಂದುಗೂಡಿಸುವ ಉದ್ದೇಶದಿಂದ ಈ ಗುಂಪುಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜಿಲ್ಲೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ಸೇರಿಸುವ ಸರ್ಕಾರದ ನಿರ್ಧಾರದಿಂದ ಗುಂಪಿನಲ್ಲಿರುವವರು ಅಸಮಾಧಾನಗೊಂಡಿದ್ದಾರೆ. ಹೊಸದಾಗಿ ರೂಪುಗೊಂಡ ಜಿಲ್ಲೆಗೆ ಏಪ್ರಿಲ್ 4 ರಂದು ಕೋನಸೀಮ ಎಂದು ಹೆಸರಿಸಲಾಗಿದ್ದರೆ, ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಜೊತೆಗೆ ಸೇರಿಸುವ ನಿರ್ಧಾರವನ್ನು ಮೇ 18ರಂದು ಸರ್ಕಾರ ಘೋಷಿಸಿತು.

ಗ್ರೂಪ್‌ ಅಡ್ಮಿನ್‌ಗಳ ಪತ್ತೆ

“ಹಿಂಸಾಚಾರದಲ್ಲಿ ಭಾಗವಹಿಸಿದ 19 ಜನರನ್ನು ಬಂಧಿಸಲಾಗಿದೆ” ಎಂದು ಏಲೂರು ವ್ಯಾಪ್ತಿಯ ಡಿಐಜಿ ಪಾಲ ರಾಜು ‘ನ್ಯೂಸ್‌ ಮಿನಿಟ್‌’ಗೆ ತಿಳಿಸಿದ್ದಾರೆ.

“ನಾವು ಮೇ 25ರಂದು 46 ಜನರನ್ನು ಬಂಧಿಸಿದ್ದೇವೆ. ಹಿಂಸಾಚಾರದಲ್ಲಿ ಅವರ ಪಾತ್ರವನ್ನು ಸಾಬೀತುಪಡಿಸಲು ನಮಗೆ ಸಾಕಷ್ಟು ಪುರಾವೆಗಳು ದೊರೆತಿವೆ. ನಾವು ಅವರ ಫೋನ್‌ಗಳನ್ನು ಪರಿಶೀಲಿಸಿದ್ದು, ವಿವಿಧ ಗ್ರೂಪ್‌ಗಳಲ್ಲಿನ ಹಲವಾರು ಸಂದೇಶಗಳನ್ನು ಡಿಲೀಟ್ ಮಾಡಲಾಗಿದೆ. ಘಟನೆಯ ನಂತರ ಅನೇಕರು ಗ್ರೂಪ್‌ಗಳಿಂದ ಲೆಫ್ಟ್‌ ಆಗಿದ್ದಾರೆ. ಡಿಲೀಟ್ ಮಾಡಲಾದ ಎಲ್ಲಾ ಸಂದೇಶಗಳನ್ನು ಮತ್ತು ಗುಂಪುಗಳಿಂದ ನಿರ್ಗಮಿಸಿದವರ ವಿವರಗಳನ್ನು ನಾವು ತಂತ್ರಜ್ಞಾನಗಳನ್ನು ಬಳಸಿಕೊಂಡು ಪತ್ತೆಹಚ್ಚಿದ್ದೇವೆ. ನಾವು ಗ್ರೂಪ್ ಅಡ್ಮಿನ್‌ಗಳನ್ನು ಗುರುತಿಸಿದ್ದೇವೆ. ಅವರು ಕೂಡ ಶೀಘ್ರದಲ್ಲೇ ಕಾನೂನಿನ ಕ್ರಮಗಳನ್ನು ಎದುರಿಸಲಿದ್ದಾರೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಜಾತಿಯ ವಿಷಯವಾಗಿ ಈ ಗುಂಪುಗಳನ್ನು ರಚಿಸಲಾಗಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ತನಿಖಾಧಿಕಾರಿ, “ಜಾತಿ ವಿಚಾರವಾಗಿ ಒಗ್ಗೂಡಿರುವ ಕುರಿತು ನಾವಿನ್ನು ವಿಶ್ಲೇಷಣೆ ಮಾಡಿಲ್ಲ. ಈ ವಾಟ್ಸಾಪ್ ಗುಂಪುಗಳು ಮುಖ್ಯವಾಗಿ ಜಿಲ್ಲೆಗೆ ಕೋನಸೀಮಾ ಎಂದು ಹೆಸರಿಸಬೇಕೆಂದು ಬಯಸುವ ಸ್ನೇಹಿತರನ್ನು ಒಳಗೊಂಡಿವೆ. ವಾಟ್ಸಾಪ್ ಗ್ರೂಪ್‌ಗಳ ಹೆಸರು ಗಮನಿಸಿದರೆ ಇದು ಬಹಿರಂಗವಾಗುತ್ತದೆ. ಹೆಚ್ಚಿನವರನ್ನು ಬಂಧಿಸಿದ ಬಳಿಕ, ನಾವು ವಿವಿಧ ಆಯಾಮಗಳನ್ನು ಗುರುತಿಸಲು ಪ್ರಯತ್ನಿಸುತ್ತೇವೆ. ಜಾತಿ ಒಗ್ಗೂಡುವಿಕೆ ಮತ್ತು ರಾಜಕೀಯ ಸಂಬಂಧಗಳನ್ನೂ ವಿಚಾರಣೆ ನಡೆಸುತ್ತೇವೆ” ಎಂದಿದ್ದಾರೆ.

ಮೂಲ: ದಿ ನ್ಯೂಸ್‌ ಮಿನಿಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...