Homeಮುಖಪುಟಕರ್ನಾಟಕ ಚುನಾವಣೆ: 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್

ಕರ್ನಾಟಕ ಚುನಾವಣೆ: 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್

- Advertisement -
- Advertisement -

ಆಮ್ ಆದ್ಮಿ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯ 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಬ್ರಿಜೇಶ್ ಕಾಳಪ್ಪ, ಮೋಹನ್ ದಾಸರಿ, ಶರತ್ ಚಂದ್ರ, ಟೆನಿಸ್ ಕೃಷ್ಣ, ಆನೇಕಲ್ ದೊಡ್ಡಯ್ಯ ಸೇರಿದಂತೆ ಹಲವರಿಗೆ ಟಿಕೆಟ್ ಖಚಿತವಾಗಿದೆ.

ಮೊದಲ ಪಟ್ಟಿ ಬಿಡುಗಡೆಯಾಗಿದೆ. 80 ಜನ ಆಕ್ಷಾಂಕ್ಷಿಗಳು ಇಂದು ಅಭ್ಯರ್ಥಿಗಳಾಗಿ ಭಡ್ತಿ ಪಡೆದಿರುವಿರಿ. ಅಭಿನಂದನೆಗಳು ಎಂದು ಕರ್ನಾಟಕದ ಆಮ್ ಆದ್ಮಿ ಪಕ್ಷ ತನ್ನ ಟ್ವಿಟರ್ ಖಾತೆಯಲ್ಲಿ ಘೋಷಿಸಿದೆ.

ಕಾಂಗ್ರೆಸ್ ತೊರೆದಿದ್ದ ಡಿ.ಕೆ ಶಿವಕುಮಾರ್‌ರವರ ಮಾವ ಶರತ್ ಚಂದ್ರರವರಿಗೆ ಚನ್ನಪಟ್ಟಣದಲ್ಲಿ ಆಪ್ ಟಿಕೆಟ್ ನೀಡಿದೆ. ತುರುವೇಕೆರೆಯಿಂದ ಟೆನಿಸ್ ಕೃಷ್ಣ ಸ್ಪರ್ಧಿಸುತ್ತಿದ್ದಾರೆ. ಹಾಸನದಲ್ಲಿ ಅಗಿಲೆ ಯೋಗೀಶ್, ಸಾಗರದಲ್ಲಿ ಕೆ.ದಿವಾಕರ್, ರೋಣಾದಲ್ಲಿ ಆನೇಕಲ್ ದೊಡ್ಡಯ್ಯ, ಬಾಗೇಪಲ್ಲಿಯಲ್ಲಿ ಮಧುಸೀತಪ್ಪ, ಸಿ.ವಿ ರಾಮನ್‌ನಗರದಲ್ಲಿ ಮೋಹನ್ ದಾಸರಿ, ವಿಜಯನಗರದಲ್ಲಿ ಡಾ.ರಮೇಶ್ ಬೆಲ್ಲಂಕೊಂಡ ಮತ್ತು ಚಿಕ್ಕಪೇಟೆಯಲ್ಲಿ ಬ್ರಿಜೇಶ್ ಕಾಳಪ್ಪ ಆಪ್ ಸ್ಪರ್ಧಿಗಳಾಗಿದ್ದಾರೆ.

ಒಟ್ಟು 80 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ; ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸಮೀಕ್ಷೆ: ಎಚ್.ಡಿ ಕುಮಾರಸ್ವಾಮಿ V/S ಸಿ.ಪಿ ಯೋಗಿಶ್ವರ್ ನಡುವೆ ಗೆಲುವು ಯಾರಿಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...