2019 ರ ಫೆಬ್ರವರಿ 14 ರಂದು ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ 40 ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯನ್ನು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸಂಭ್ರಮಪಟ್ಟಿದ್ದಾರೆಂದು ಇತ್ತೀಚೆಗೆ ಅವರ ವಾಟ್ಸಪ್ ಚಾಟ್ಗಳು ಬಹಿರಂಗ ಪಡಿಸಿದೆ. ಈ ಹಿನ್ನಲೆಯಲ್ಲಿ ಅದನ್ನು ವಿರೋಧಿಸಿ ಹಾಗೂ ಅವರನ್ನು ಬಂಧಿಸುವಂತೆ ಆಗ್ರಹಿಸಿ #AntiNationalBJPArnab (ದೇಶವಿರೋಧಿ ಬಿಜೆಪಿ ಅರ್ನಾಬ್), #AntiNationalArnab(ದೇಶವಿರೋಧಿ ಅರ್ನಾಬ್) ಹ್ಯಾಶ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ.
ದೆಹಲಿ ಕಾಂಗ್ರೆಸ್, “ಬಾಲಕೋಟ್ ಸ್ಟ್ರೈಕ್ ಅನ್ನು ಮೂರು ದಿನ ಹಿಂದೆಯೆ ಅರ್ನಬ್ಗೆ ತಿಳಿದಿತ್ತು. ಸೇನೆಯ ರಹಸ್ಯ ಅರ್ನಾಬ್ಗೆ ಹೇಗೆ ತಿಳಿಯಿತು. ಇದು ಬಹಳ ದೊಡ್ಡ ರಕ್ಷಣಾ ವೈಫಲ್ಯ, ಇದು ತನಿಖೆಯಾಗಲೆ ಬೇಕು” ಎಂದು ಟ್ವೀಟ್ ಮಾಡಿದೆ. ಅರ್ನಾಬ್ ತನ್ನ ವಾಟ್ಸಪ್ ಚಾಟ್ಗಳಲ್ಲಿ ಬಾಲಕೋಟ್ ದಾಳಿಯ ಬಗ್ಗೆ ಮೂರು ದಿನದ ಮುಂಚೆಯೆ ಹೇಳಿದ್ದು, ಇದರಿಂದಾಗಿ ಬಿಜೆಪಿಯು ಜಾಸ್ತಿ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸೂಚಿಸಿದ್ದರು.
ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
How Arnab knew about the military secrets like Balakot strike at least 3 days in advance. It’s a major security failure and must be investigated. #AntiNationalBJPArnab
— Delhi Congress (@INCDelhi) January 17, 2021
ಮಾನವ ಹಕ್ಕು ಹೋರಾಟಗಾರ ತಿರುಮುರುಗನ್ ಗಾಂಧಿ, “ಅರ್ನಾಬ್ ಯಾರು, ಪುಲ್ವಾಮಾ ಯಾಕೆ ಸಂಭವಿಸಿತು, ಬಾಲಕೋಟ್ ಅನ್ನು ಹೇಗೆ ಯೋಜಿಸಿದ್ದಾರೆ, ಸಾಮಾಜಿಕ ಕಾರ್ಯಕರ್ತರನ್ನು ಯಾರು ಬೆದರಿಸುತ್ತಾರೆ, ರಾಷ್ಟ್ರೀಯತೆಯ ಹಿಂದೆ ಏನಿದೆ, ಬಿಜೆಪಿ ಸತ್ಯಗಳನ್ನು ಹೇಗೆ ತಿರುಚುತ್ತದೆ, ನಿಜವಾದ ರಾಷ್ಟ್ರ ವಿರೋಧಿ ಯಾರು ಎಂದು ರಾಷ್ಟ್ರಕ್ಕೆ ಈಗ ತಿಳಿಯಿತು” ಎಂದು ಹೇಳಿದ್ದಾರೆ.
'Nation Now Know'
-who is Arnab
-why pulwama happened
-how Balakot planned
-who intimidate activists
-what is behind nationalism
-how BJP twists truths
-who is real Anti-National#AntiNationalBJPArnab pic.twitter.com/hjGQUbuOul
— Thirumurugan Gandhi (@thiruja) January 17, 2021
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್ಪಿ ದಾಹಕ್ಕೆ ಕಂಗನಾ ಬಲಿಪಶು?
ಕೇವಲ ಭಯೋತ್ಪಾದಕರಷ್ಟೇ ಸೈನಿಕರ ಸಾವನ್ನು ಸಂಭ್ರಮಿಸುತ್ತಾರೆ ಎಂದು ವಿನಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
Only terrorists celebrate death of soldiers.
— Vinay Kumar Dokania ?? ?️ (@VinayDokania) January 17, 2021
ಸಾಮಾಜಿಕ ಕಾರ್ಯಕರ್ತ ಶ್ರಿವತ್ಸ, “ದೇಶವಿರೋಧಿ ಅರ್ನಾಬ್, ಕೊಳಕು ನಾವಿಕಾ, ಪ್ರಯೋಜನಕ್ಕೆ ಬಾರದ ಪ್ರಕಾಶ್ ಜಾವ್ಡೇಕರ್, ಮೂರ್ಖ ರಜತ್ ಶರ್ಮ ಅವರನ್ನು, ಸೈನಿಕ ರಹಸ್ಯವನ್ನು ತಡೆಯುವುದಕ್ಕಾಗಿ ಸುಪ್ರೀಂಕೋಟ್ ಸಮಿತಿಯನ್ನು ಮುಖ್ಯನ್ಯಾಯಮೂರ್ತಿ ಬೋಬ್ಡೆಯವರು ತಕ್ಷಣ ನೇಮಿಸಬೇಕು” ಎಂದು ವ್ಯಂಗ್ಯವಾಡಿದ್ದಾರೆ.
CJI Bobde must immediately appoint#AntiNationalArnab Goswami
Navika Kachra
Prakash Useless Javdekar
Rajat Fool Sharmato the Supreme Court Committee for stopping leaking of Military Secrets.
— Srivatsa (@srivatsayb) January 17, 2021
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್ಪಿ ದಾಹಕ್ಕೆ ಕಂಗನಾ ಬಲಿಪಶು?
ಉಪನ್ಯಾಸಕ ಜಗದೀಶ್ ಎಸ್ ಪಾಟಿಲ್, “ಬಿಜೆಪಿ ಕೈಯಲ್ಲಿ ಹೇಗೆ ಒತ್ತೆಯಾಳಾಗಿದ್ದೀರಿ ಎಂದು ವಾಟ್ಸಾಪ್ ಚಾಟ್ಗಳು ರಾಷ್ಟ್ರಕ್ಕೆ ತೋರಿಸಿದೆ. ರೈತರಿಗೆ ಉಪನ್ಯಾಸ ನೀಡುವುದನ್ನು ನಿಲ್ಲಿಸಿ”
The Whatsapp Chats have shown the Nation, How you are a pawn in the hands BJP.
Stop lecturing the farmers.#AntinationalArnab #AntiNationalBJPArnab
— Jagadish S Patil (@JagadishSPatil2) January 17, 2021
ಜ್ಞಾನಿ ತಾವರೆಕೆರೆ ಅವರು, “ಕ್ರೊನಾಲಜಿ ನೋಡಿ, ಪುಲ್ವಾಮಾ ದಾಳಿ ಸಂಭವಿಸುತ್ತದೆ. ಆ ದಾಳಿಯ ನಂತರ ಹೆಚ್ಚಿನ ಸ್ಥಾನ ಗೆಲ್ಲುವುದಾಗಿ ಬಿಜೆಪಿ ನಾಯಕ ಯಡಿಯೂರಪ್ಪ ಹೇಳಿಕೊಂಡಿದ್ದಾರೆ. ಎನ್ಐಎ ಡೇವಿಂದರ್ ಸಿಂಗ್ ಅವರನ್ನು ಹಿಡಿಯಿತು ಮತ್ತು ಅವನು “ಇಲ್ಲಿ ಏನೋ ದೊಡ್ಡದು ನಡೆಯಲಿದೆ” ಎಂದು ಹೇಳುತ್ತಾನೆ. ಸೇನೆಯನ್ನು ಪ್ರಚಾರ ಮಾಡಿ ಬಿಜೆಪಿ ಚುನಾವಣೆಯಲ್ಲಿ ಜಯಗಳಿಸಿತು. ನಾವು ಸಿಕ್ಕಾಪಟ್ಟೆ ಗೆಲ್ಲಲಿದ್ದೇವೆ ಎಂದು ಅರ್ನಾಬ್ ಹೇಳುತ್ತಾನೆ” ಎಂದು ಟ್ವೀಟ್ ಮಾಡಿದ್ದಾರೆ.
Chronology
Pulwama attacked happen
BJP leader Yedurappa claims to win more seat after that attack
NIA caught Davinder singh & he says "Yaha kuch bada hone jaara hai"
BJP won election on the propoganda of Army
Arnab saying we won Like crazy #AntinationalArnab
— Gnany Tavarekere (@GnanyTavarekere) January 17, 2021
ಇದನ್ನೂ ಓದಿ: ಅರ್ನಾಬ್ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ಬಾರ್ಕ್ ಮಾಜಿ ಸಿಇಒ ದಾಸ್ಗುಪ್ತ ಐಸಿಯುಗೆ ದಾಖಲು