ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತ ಅವರು ವಾಟ್ಸಾಪ್ನಲ್ಲಿ ನಡೆಸಿರುವ ಸಂಭಾಷಣೆಗಳನ್ನು ಮುಂಬೈ ಪೊಲೀಸರು ಬಹಿರಂಗಗೊಳಿಸಿದ್ದು, ಅದರಲ್ಲಿ ಹತ್ತಾರು ಸ್ಫೋಟಕ ಅಂಶಗಳು ಬೆಳಕಿಗೆ ಬಂದಿವೆ. ಹಾಗಾಗಿ ಇದರ ಮೇಲೆ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಬಹಿರಂಗಗೊಂಡಿರುವ ವಾಟ್ಸಾಪ್ ಚಾಟ್ನಲ್ಲಿ, ಪುಲ್ವಾಮಾ ದಾಳಿಯಲ್ಲಿನ ಸೈನಿಕರ ಸಾವನ್ನು ಸಂಭ್ರಮಿಸಿರುವುದು, ಬಿಜೆಪಿಯೊಂದಿಗಿನ ಸಂಬಂಧ, ಪ್ರಧಾನಿ ಸೇರಿದಂತೆ ಗೃಹ ಮಂತ್ರಿ ಅಮಿತ್ ಶಾ, ಕೇಂದ್ರ ಸಚಿವ ಪ್ರಕಾಶ್ ಜಾವಾಡೇಕರ್ ಅವರ ಹೆಸರುಗಳು ಉಲ್ಲೇಖವಾಗಿರುವುದು ಕಂಡುಬಂದಿತ್ತು. ಜೊತೆಗೆ ತಮ್ಮ ಚಾನೆಲ್ಗೆ ಕರೆದು ಪ್ರಚೋದನಾತ್ಮಕ ಹೇಳಿಕೆಗಳನ್ನು ಕೊಡಿಸುತ್ತಿದ್ದ ಕಂಗನಾ ರಣಾವತ್ ಬಗ್ಗೆಯೂ ಅಶ್ಲೀಲವಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ. ಇದರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಮತ್ತು ಕಾಂಗ್ರೆಸ್ ಸಂಸದ ಮನಿಶ್ ತಿವಾರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ವಿವಾದಗಳ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದ್ದಾರೆ. “ಕೆಲವು ಮಾಧ್ಯಮಗಳು ಮಾಡುತ್ತಿರುವ ವರದಿಗಳು ನಿಜವಾಗಿದ್ದರೆ, 2019 ರ ಚುನಾವಣೆ ಮತ್ತು ಬಾಲಾಕೋಟ್ ವಾಯುದಾಳಿಯ ನಡುವೆ ನೇರಾನೇರ ಸಂಬಂಧವಿದೆ ಎಂಬುದು ಸಾಬೀತಾಗುತ್ತದೆ. ಚುನಾವಣೆಗಾಗಿ ರಾಷ್ಟ್ರೀಯ ಭದ್ರತೆಯನ್ನು ಬಲಿಕೊಡಲಾಗಿದೆಯೇ? ಜಂಟಿ ಸಂಸದೀಯ ತನಿಖೆಯ ಅಗತ್ಯವಿದೆ” ಎಂದು ಮನಿಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ’ದೇಶ ವಿರೋಧಿ ಬಿಜೆಪಿ ಅರ್ನಾಬ್’- ಟ್ವಿಟ್ಟರ್ನಲ್ಲಿ ಹ್ಯಾಶ್ಟ್ಯಾಗ್ ಟ್ರೆಂಡ್
If what sections of Media is reporting is correct then it points towards a direct linkage between Balakot air strikes and 2019 General elections.
Was National Security milked for electoral purposes ?Needs a JPC investigation.
https://t.co/WECJNhlWzU via @ThePrintIndia
— Manish Tewari (@ManishTewari) January 17, 2021
ಇದನ್ನೂ ಓದಿ: ಕಂಗನಾ ಕುರಿತು ಅಶ್ಲೀಲವಾಗಿ ಪ್ರತಿಕ್ರಿಯಿಸಿದ್ದ ಅರ್ನಾಬ್: ರಿಪಬ್ಲಿಕ್ ಟಿಆರ್ಪಿ ದಾಹಕ್ಕೆ ಕಂಗನಾ ಬಲಿಪಶು?
“ಯಾರೇ ಆದರೂ ಮತ್ತೊಬ್ಬರ ಖಾಸಗೀ ಚಾಟ್ಗಳನ್ನು ತನಿಖೆ ಮಾಡಬಾರದು. ಆದರೆ ವಾಯುದಾಳಿ ಮತ್ತು ಚುನಾವಣೆಗಳ ನಡುವೆ ಸಂಬಂಧವಿದ್ದರೆ ಅದನ್ನು ತನಿಖೆ ಮಾಡಲೇಬೇಕು” ಎಂದು ಹಿಂದೂಸ್ಥಾನ್ ಟೈಮ್ಸ್ಗೆ ಪ್ರತಿಕ್ರಿಯಿಸಿದ್ದಾರೆ.
ಪಿ ಚಿದಂಬರಂ ಟ್ವೀಟ್ ಮಾಡಿ, “ಸರ್ಜಿಕಲ್ ಸ್ಟ್ರೈಕ್ಗೆ ಮೂರು ದಿನಗಳ ಮೊದಲೇ ಪತ್ರಕರ್ತರಿಗೆ (ಅವರ ಸ್ನೇಹಿತರಿಗೆ) ತಿಳಿದಿದೆಯೇ? ಹೌದು ಎನ್ನುವುದಾದರೆ, ಈ ಮಾಹಿತಿಯನ್ನು ಅವರು ಗೂಢಾಚಾರರು ಮತ್ತು ಪಾಕಿಸ್ತಾನಕ್ಕಾಗಿ ಕೆಲಸ ಮಾಡುವವರೊಂದಿಗೆ ಹಂಚಿಕೊಂಡಿಲ್ಲ ಎನ್ನುವುದಕ್ಕೆ ಭರವಸೆ ಏನು? ನಿಮಗೆ ಮಾತ್ರ ತಿಳಿದಿರಬೇಕಾದ ವಿಷಯ ನಿಮ್ಮ ಸರ್ಕಾರವನ್ನು ಬೆಂಬಲಿಸುವ ಪತ್ರಕರ್ತನಿಗೆ ಹೇಗೆ ತಿಳಿದಿದೆ” ಎಂದು ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.
If yes, what is the guarantee that their ‘source’ did not share the information with others as well, including spies or informers working for Pakistan?
How did a “For Your Eyes Only” decision find its way to the government-supporting journalist? @rajnathsingh
— P. Chidambaram (@PChidambaram_IN) January 17, 2021
ಇದನ್ನೂ ಓದಿ: ಅರ್ನಾಬ್ ಜೊತೆಗಿನ ವಾಟ್ಸಾಪ್ ಚಾಟ್ ಲೀಕ್ ಬೆನ್ನಲ್ಲೆ ಬಾರ್ಕ್ ಮಾಜಿ ಸಿಇಒ ದಾಸ್ಗುಪ್ತ ಐಸಿಯುಗೆ ದಾಖಲು
ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಟ್ವೀಟ್ ಮಾಡಿದ್ದು, “ರಾಷ್ಟ್ರಕ್ಕೆ ತಿಳಿಯಬೇಕಿದೆ. ಸರ್ಕಾರವು ಬಾಲಾಕೋಟ್ ದಾಳಿ ಮತ್ತು 370 ನೇ ವಿಧಿಯ ರದ್ದತಿಯ ಪ್ರಾಥಮಿಕ ಮಾಹಿತಿಯನ್ನು ಪತ್ರಕರ್ತರಿಗೆ ಬಿಟ್ಟುಕೊಟ್ಟಿದೆ ಎಂಬುದನ್ನು ವಾಟ್ಸಾಪ್ ಸಂದೇಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಏನಾಗುತ್ತಿದೆ? ಮೋದಿ-ಶಾ ಮಾತ್ರ ಉತ್ತರಿಸಬೇಕೆಂಬುದು ನನ್ನ ಬಯಕೆ ಮಾತ್ರವೆ?” ಎಂದು ಪ್ರಶ್ನಿಸಿದ್ದಾರೆ.
Nation Needs to Know:
Transcript of whatsap chats shows clearly Government gave prior information about both Balakot strikes & abolishing Article 370 to tv anchorWhat is going on? Am I the only one who thinks ModiShah owe us answers? https://t.co/4aKIEVq3hZ
— Mahua Moitra (@MahuaMoitra) January 17, 2021
ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್ಗುಪ್ತಾ ನಡುವಿನ 500 ಪುಟಗಳ ವಾಟ್ಸಾಪ್ ಸಂಭಾಷಣೆಯು ಇತ್ತೀಚೆಗೆ ಬಹಿರಂಗಗೊಂಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: 3 ತಿಂಗಳ ‘ಮೊಬೈಲ್ ಜರ್ನಲಿಸಂ’ ಕೋರ್ಸ್: ಅರ್ನಾಬ್ ಹಾದಿಯಲ್ಲಿ ಕಪಿಲ್ ಮಿಶ್ರಾ!
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಈ ವಿಷಯವನ್ನು ಪ್ರಸ್ತಾಪಿಸಿದ್ದು, “ಪಕ್ಷವು ಬಿಜೆಪಿಯನ್ನು ಪ್ರಶ್ನಿಸಬೆಕು. ಇದು ಸಮಸ್ಯೆಯನ್ನು ಮೃದುವಾಗಿ ನಿರ್ವಹಿಸುವ ಸಮಯವಲ್ಲ” ಎಂದು ಹೆಸರು ಹೇಳದೆ ಟೀಕಿಸುವ ಸಮಯವಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಜೈರಾಮ್ ರಮೇಶ್, ಜಿತೇಂದ್ರ ಸಿಂಗ್, ಅಭಿಷೇಕ್ ಮನು ಸಿಂಗ್ವಿ ಮತ್ತು ಕಾರ್ತಿ ಚಿದಂಬರಂ ಅವರು ಶನಿವಾರ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್ ಮಾಡಿದ್ದಾರೆ.
ಕಾರ್ತಿ ಚದಂರಂ ಟ್ವೀಟ್ ಮಾಡಿ, “ಅರ್ನಾಬ್ಗೆ ಸಂಬಂಧಿಸಿದ ವಿವಾದಗಳ ಬಗ್ಗೆ ಬಿಜೆಪಿ ಏನಾದರೂ ಹೇಳುತ್ತದೆಯೇ? ಆಥವಾ ಇದು ಪ್ರತಿಕ್ರಿಯಿಸುವ ವಿಷಯವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
Does the @BJP4India have any comments on the #ArnabGate chat details, or is it too trivial to merit a response?
— Karti P Chidambaram (@KartiPC) January 17, 2021
ಇದನ್ನೂ ಓದಿ: ಪುಲ್ವಾಮ ದಾಳಿಯನ್ನು ಸಂಭ್ರಮಿಸಿದ್ದ ಅರ್ನಾಬ್: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಕಾಂಗ್ರೆಸ್ ಇನ್ನೂ ಅಧಿಕೃತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡಿಲ್ಲ. ಆದರೆ ದಾಖಲೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಸಮಯಕ್ಕೆ ಸ್ಪಂದಿಸುತ್ತೇವೆ ಎಂದು ಪಕ್ಷದ ಕಾರ್ಯಕರ್ತರು ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ ಅಭಿಷೇಕ್ ಸಿಂಘ್ವಿ ಟ್ವೀಟ್ ಮಾಡಿ, “ಪಾಕ್ ಗಡಿಯಲ್ಲಿನ ಭಾರತದ ಕ್ರಮವನ್ನು 23.02.2019 ರ ಅರ್ನಾಬ್ನ ಚಾಟ್ಗಳು ಉಲ್ಲೇಖಿಸುತ್ತವೆ. ಸರ್ಕಾರದಲ್ಲಿನ ಹಿರಿಯರು ಯಾರಾದರೂ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆಯೇ? ಇದು ನಮ್ಮ ಸೈನಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಮತ್ತು ಇವರ ಟಿಆರ್ಪಿಯನ್ನು ಹೆಚ್ಚಿಸಲು ಅನುವಾಯಿತೆ?” ಎಂದು ಪ್ರಶ್ನಿಸಿದ್ದಾರೆ.
Arnab's chats dated 23.02.2019 refer to sharing of Intel re: action along the Pak border. It means someone very senior in Govt is leaking highly confidential info which may endanger the lives of our soldiers & so that mercenary considerations can add to TRPs.
— Abhishek Singhvi (@DrAMSinghvi) January 16, 2021
ಇದನ್ನೂ ಓದಿ: PMO ಕಚೇರಿಯಿಂದಲೇ ಸಹಾಯ ಕೇಳಿದ್ದ ಅರ್ನಾಬ್?: BARC ಸಿಇಒ ಜೊತೆಗಿನ ವಾಟ್ಸಾಪ್ ಚಾಟ್ಗಳು ಲೀಕ್!
ಕಾಂಗ್ರೆಸ್ನ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿ, “1967 ರಿಂದ BARC ಎಂದರೆ ಬಾಬಾ ಆಟಾಮಿಕ್ ರಿಸರ್ಚ್ ಸೆಂಟರ್ ಎಂದು ತಿಳಿದಿದ್ದೆವು. ಈಗ ಅರ್ನಾಬ್ ಗೋಸ್ವಾಮಿಯ ದೆಸೆಯಿಂದಾಗಿ ಮತ್ತೊಂದು BARC – ಬ್ರಾಡ್ ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಲ್ – ಸುದ್ದಿಯಲ್ಲಿದೆ. ಈ ಎರಡು BARC ಗಳಲ್ಲಿ ಮೊದಲನೆಯದು ಬಲಿಷ್ಟ ಹಾಗೂ ವೈಜ್ಞಾನಿಕ ಭಾರತದ ನಿರ್ಮಾಣಕ್ಕೆ ಕೆಲಸ ಮಾಡಿದ್ದರೆ ಮತ್ತೊಂದು ಸಮೂಹ ತಪ್ಪು ಮಾಹಿತಿಯ ಹತಾರಗಳನ್ನು ಒದಗಿಸುತ್ತಾ ಜನರನ್ನು ದಿಕ್ಕು ತಪ್ಪಿಸಲು ಕೆಲಸ ಮಾಡುತ್ತಿದೆ.” ಎಂದು ಕಿಡಿಕಾರಿದ್ದಾರೆ.
Since 1967 BARC has stood for Bhabha Atomic Research Centre. Thanks to Arnab Goswami another self-styled BARC —Broadcast Audience Research Council is in news now. The first BARC built a strong & scientific India. The other BARC is aiding & abetting weapons of mass disinformation.
— Jairam Ramesh (@Jairam_Ramesh) January 16, 2021
ಇದನ್ನೂ ಓದಿ: TRP ಹಗರಣ: ಅರ್ನಾಬ್ ಲಕ್ಷಗಟ್ಟಲೆ ಲಂಚ ನೀಡಿದ್ದರು ಎಂದು ಒಪ್ಪಿಕೊಂಡ ಬಾರ್ಕ್ ಮಾಜಿ ಮುಖ್ಯಸ್ಥ
ಮನುವಾದಿಗಳ ಬಣ್ಣ ಬಯಲಾಗುತ್ತಿದೆ.