Homeಕರ್ನಾಟಕಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

- Advertisement -
- Advertisement -

ಬಲಪಂಥೀಯ ಬರಹಗಾರ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲಿಸಲಾಗಿರುವ ಪಠ್ಯದಲ್ಲಿರುವ ಹಲವು ತಪ್ಪಗಳು, ವಿವಾದಾತ್ಮಕ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಈ ವಿದ್ಯಮಾನಕ್ಕೆ ‘ಮನುಸ್ಮೃತಿ’ಯ ಕುರಿತು ಬರೆದಿರುವ ಸಾಲು ಸೇರಿಕೊಂಡಿದೆ.

ಸಮಾಜ ಧರ್ಮಮಾರ್ಗದಲ್ಲಿ ನಡೆಯಲು ತಿಳಿಸಿದ ಕೃತಿಗಳ ಪಟ್ಟಿಯಲ್ಲಿ ‘ಮನುಸ್ಮೃತಿ’ಯೂ ಸೇರಿಕೊಂಡಿದೆ.

ರೋಹಿತ್‌ ಚಕ್ರತೀರ್ಥ ಸಮಿತಿಯು ‘ಸನಾತನ ಧರ್ಮ’ ಎಂಬ ಪಾಠವನ್ನು ಎಂಟನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಿದೆ. ವೇದ, ವೇದ ಸಾಹಿತ್ಯ, ವೇದ ಸ್ವರೂಪ, ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು, ಆಸ್ತಿಕ ಮತ್ತು ನಾಸ್ತಿಕ ಪಂಥಗಳು, ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು, ಮತಗಳು ಹಾಗೂ ಮತಾಚಾರ್ಯರು, ಜೈನ ಮತ್ತು ಬೌದ್ಧ ಮತಗಳು, ವಿಗ್ರಹಾರಾಧನೆ ಆರಂಭ, ಐಕ್ಯ ಇದ್ದರೂ ವೈವಿಧ್ಯಮಯ ಧರ್ಮ- ಇತ್ಯಾದಿ ಉಪಶೀರ್ಷಿಕೆಗಳಲ್ಲಿ ಪಾಠವನ್ನು ಸಮಿತಿ ರೂಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು’ ಉಪಶೀರ್ಷಿಕೆಯಲ್ಲಿ ಬರೆಯುತ್ತಾ, “ಧರ್ಮಶಾಸ್ತ್ರವು ವ್ಯಕ್ತಿಯ ಧಾರ್ಮಿಕ ಬದುಕಿಗೆ ಮತ್ತು ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ತಿಳಿಸುತ್ತದೆ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಪರಾಶನ ಸ್ಮೃತಿ ಮುಂತಾದ ಹಲವು ಗ್ರಂಥಗಳಲ್ಲಿ ಸಮಾಜವು ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂಬ ಸೂಚನೆಗಳಿವೆ” ಎಂದು ಉಲ್ಲೇಖಿಸಲಾಗಿದೆ.

ರಾಮಾಯಣ ಮಹಾಭಾರತ ಐತಿಹಾಸಿಕ ಕೃತಿ

“ಸ್ಮೃತಿ ಸಾಹಿತ್ಯದ ಎರಡನೆ ಭಾಗ ಐತಿಹಾಸ ಗ್ರಂಥಗಳೆನಿಸುವ ರಾಮಾಯಣ, ಮಹಾಭಾರತ; ಹದಿನೆಂಟು ಪುರಾಣಗಳು ಹಾಗೂ ಅಷ್ಟೇ ಸಂಖ್ಯೆಯ ಉಪಪುರಾಣಗಳು. ಅಂತೆಯೇ ಪೌರಾಣಿಕ ಉಪನಿಷತ್ತುಗಳು ಹಾಗೂ ಪೌರಾಣಿಕ ಗೀತೆಗಳು ಈ ಭಾಗದಲ್ಲಿ ಬರುತ್ತವೆ” ಎಂಬ ವಿವರಣೆಯನ್ನು ಇದೇ ಪಾಠದಲ್ಲಿ ಬರೆಯಲಾಗಿದೆ. ರಾಮಾಯಣ ಮತ್ತು ಮಹಾಭಾರತಗಳನ್ನು ಇತಿಹಾಸ ಪಠ್ಯಗಳೆಂದು ಸಂಘಪರಿವಾರ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದು, ಈಗ ಆ ಪ್ರತಿಪಾದನೆ ಪಠ್ಯವನ್ನೂ ಸೇರಿದೆ.

ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು ಬಾಬಾ ಸಾಹೇಬರು

ಒಂದೆಡೆ “ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌” ಎಂಬ ಸಾಲನ್ನು ಕಿತ್ತು ಹಾಕಿರುವ ಸಮಿತಿ, ಅದೇ ಅಂಬೇಡ್ಕರ್‌ ಅವರು ಸುಟ್ಟು ಹಾಕಿದ ‘ಮನುಸ್ಮೃತಿ’ಯನ್ನು ಶ್ಲಾಘಿಸಿರುವುದು ಪಠ್ಯದಲ್ಲಿ ಕಂಡು ಬರುತ್ತಿದೆ.

ಶೂದ್ರರು, ಮಹಿಳೆಯರು ಮತ್ತು ಪಂಚಮರನ್ನು ಅಂತ್ಯಂತ ನಿಷ್ಕೃತವಾಗಿ ಕಾಣುವ ಮನುಸ್ಮೃತಿಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಸಾರ್ವಜನಿಕವಾಗಿ ಸುಟ್ಟು ಹಾಕಿ ಪ್ರತಿಭಟಿಸಿದ್ದು ಈಗ ಇತಿಹಾಸ.

ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ‘ಮನುಸ್ಮೃತಿ’ ಎಂಬ ‘ಭೂತಕಾಲದ ಸಂವಿಧಾನ’ವನ್ನು ಡಾ‌. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ದಿನವದು.

ಭಾರತದ ಹಿಂದೂ ಮನಸ್ಸು ಬದಲಾಗಬಹುದು, ಹಿಂದೂ ಧರ್ಮವನ್ನು ಒಳಗಿದ್ದುಕೊಂಡೇ ಸುಧಾರಿಸಬಹುದೇನೋ ಎನ್ನುವ ನಂಬಿಕೆಯಲ್ಲಿ ಮಹಾಡ್, ಚೌಡಾರ್ ಸತ್ಯಾಗ್ರಹಗಳನ್ನು ನಡೆಸಿದ ಅಂಬೇಡ್ಕರ್ ಅವರಿಗೆ ದೊಡ್ಡ ನಿರಾಶೆ ಕಾದಿತ್ತು. ಆಗಿನ ಸರ್ಕಾರ 1923 ರಲ್ಲೆ The Bole Resolution ಮೂಲಕ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿರುವ ಕೆರೆಗೆಳು, ಬಾವಿಗಳು, ಧರ್ಮಶಾಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಅನ್ನುವ ಕಾಯ್ದೆ ತಂದಿದ್ದರೂ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ತಮಗೆ ಇದ್ದ ಹಕ್ಕನ್ನು ಪಡೆಯುವುದಕ್ಕಾಗಿಯೇ ಅಂಬೇಡ್ಕರ್ ಚೌಡಾರ್ ಕೆರೆ ನೀರನ್ನು ಸಾರ್ವಜನಿಕವಾಗಿ ಕುಡಿಯುವ ಚಳುವಳಿಯನ್ನು ಆಯೋಜಿಸಿದರು. ಆದರೆ ಅಸ್ಪೃಶ್ಯರು ಮುಟ್ಟಿದ್ದಕ್ಕಾಗಿ ಕೆರೆಯೆ ಮಲಿನವಾಯಿತೆಂದು ಗೋಳಾಡಿದ ಸವರ್ಣೀಯ ಜನ ಹಸುವಿನ ಸಗಣಿ, ಗಂಜಲ, ಹಾಲು, ತುಪ್ಪ, ಮೊಸರನ್ನು ಸುರಿದು ವೇದಗಳನ್ನು ಪಠಿಸುತ್ತಾ ಕೆರೆಯ ‘ಶುದ್ದೀಕರಣ’ ಮಾಡಿದರು. ದಲಿತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ವಿದ್ಯಾವಂತ, ಪ್ರಗತಿಪರ ಹಿಂದೂಗಳು ಅವರ ಜೊತೆಗೂಡಿ ಹೋರಾಟ ಮಾಡಬಹುದು ಹಿಂದೂ ಧರ್ಮ ಸುಧಾರಣೆಗೆ ಇದು ಕೂಡ ನೆರವಾಗಬಹುದು ಎಂಬ ಅಂಬೇಡ್ಕರ್ ನಿರೀಕ್ಷೆ ಸುಳ್ಳಾಯಿತು. ಮಹಾಡ್, ಚೌಡಾರ್ ಸತ್ಯಾಗ್ರಹಗಳಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಿಂಸಾತ್ಮಕವಾದ ದಾಳಿಗಳನ್ನು ಮೇಲ್ಜಾತಿಗಳು ಮಾಡಿದವು.

ಇದನ್ನೂ ಓದಿರಿ: ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಇದಾದ ಒಂಬತ್ತು ತಿಂಗಳ ನಂತರ ಚೌಡಾರ್ ಸತ್ಯಾಗ್ರಹವನ್ನು ಅಂಬೇಡ್ಕರ್ ಆಯೋಜಿಸಿದರು. ಆಗ ಮತ್ತೆ ಸವರ್ಣೀಯರು ಹಿಂದೂಗಳು ಚೌಡಾರ್ ಕೆರೆ ಸಾರ್ವಜನಿಕ ಆಸ್ತಿಯಲ್ಲ ಖಾಸಗಿ ಸ್ವತ್ತು ಎಂದು ಕೋರ್ಟಿಗೆ ಹೋದರು. ಸತ್ಯಾಗ್ರಹ ತಡೆಯಲು ಪ್ರಯತ್ನ ಮಾಡಿದರು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಸತ್ಯಾಗ್ರಹ ನಡೆಸಿದ ಅಂಬೇಡ್ಕರ್ ಡಿಸೆಂಬರ್ 25, 1927 ರಂದು ಹಿಂದೂ ಧರ್ಮದ ಆಧಾರವಾಗಿರುವ, ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಸೈದ್ದಾಂತಿಕ ಗ್ರಂಥವಾಗಿರುವ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟು ಹಿಂದೂ ಧರ್ಮದ ಕರ್ಮಠತನ, ಅಸಮಾನತೆಯ ವಿರುದ್ಧ ಸಮರ ಸಾರಿದರು.

ವಿಶೇಷವೆಂದರೆ ಈ ಸಮಾವೇಶದಲ್ಲಿ ಮನುಸ್ಮೃತಿಗೆ ಸಾರ್ವಜನಿಕವಾಗಿ ಬೆಂಕಿ ಇಟ್ಟವರು ಬಾಪೂಸಾಹೇಬ ಸಹಸ್ರಬುದ್ಧೆ ಎನ್ನುವ ಪ್ರಗತಿಪರ ಬ್ರಾಹ್ಮಣರು. ಇದಾದ ಮೇಲೆ ಹಿಂದೂ ಧರ್ಮದ ಒಳಗಿದ್ದು ಅದನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂದು ಮನಗಂಡು ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸುವ ನಿರ್ಧಾರ ಮಾಡಿದರು‌. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...