Homeಕರ್ನಾಟಕಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

- Advertisement -
- Advertisement -

ರಾಜ್ಯದ ಸಾಹಿತಿಗಳು, ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರನ್ನು ಬಿಟ್ಟು ಶಿಕ್ಷಣ ಸಚಿವರು ಅವನು ಯಾವಾನೋ ಚರಂಡಿಯಲ್ಲಿ ಇರಬೇಕಾದವನನ್ನು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ‌ ಹರಿಪ್ರಸಾದ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವನು ಪ್ರೊಫೆಸರ್ ಎಂದು ಹೇಳಿ ಜವಾಬ್ದಾರಿ ಕೊಟ್ಟಿದ್ದಾರೆ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್‌, “ನಾನು ಫ್ರೋಫೆಸರ್ ಅಲ್ಲ ಎಂದು ಅವನೇ ಹೇಳಿಕೆ ನೀಡಿದ್ದಾನೆ. ಶಿಕ್ಷಣ ಸಚಿವರು ಸಿಇಟಿ ಫ್ರೋಫೆಸರ್ ಅಂತಾ ಹೇಳ್ತಿದಾರೆ. ಏನೂ ಅರ್ಹತೆ ಇಲ್ಲದವರನ್ನ ಕರೆ ತಂದು ನಾಗಪುರದ ಹಿಡನ್ ಕಾರ್ಯಸೂಚಿಗಳನ್ನ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂದು ದೇಶದ ಏಕತೆಯ ಸಂದೇಶ ಸಾರಿದ ಮಹನೀಯರ ವಿಚಾರಧಾರೆಗಳನ್ನ ಪಠ್ಯದಿಂದ ಕೈ ಬಿಡಲಾಗಿದೆ. ರಾಣಿ ಅಬ್ಬಕ್ಕ, ನಾರಾಯಣ ಗುರುಗಳ ಪಾಠ ಕೈ ಬಿಟ್ಟಿರುವುದರ ಬಗ್ಗೆ ಜನರಿಗೆ ಮನದಟ್ಟಾಗಿದ್ದು, ಸರ್ಕಾರಕ್ಕೆ ಬಿಸಿ‌ಮುಟ್ಟಿಸಲು ಸನ್ನದ್ಧರಾಗಿದ್ದಾರೆ. ಆರೆಸ್ಸೆಸ್‌‌ ಕಾರ್ಯಸೂಚಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಕ್ಕೆ ತರುವ ಪ್ರಯತ್ನಗಳ ಬಗ್ಗೆ ಮನದಟ್ಟಾಗಿದೆ. ಸ್ವಾರ್ಥಕ್ಕಾಗಿ ಯಾರನ್ನ ಬೇಕಾದರೂ ಬಲಿ ಕೊಡುತ್ತಾರೆ ಎಂಬುದು ಅರ್ಥವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜವನ್ನಲ್ಲ’ – ಡಿಕೆ ಶಿವಕುಮಾರ್‌

“ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಎಂಬುದು ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರುಗಳಿಗೆ ಜವಾಬ್ದಾರಿ ಇಲ್ಲ. ಪಠ್ಯ ಪುಸ್ತಕದಲ್ಲಿ ನಾಳೆ ಆರೆಸ್ಸೆಸ್ ಸೇರಿಸುವ ಅಂಶಗಳಿಗೆ ಪುರಾವೆ ಇರುವುದಿಲ್ಲ. ಆರೆಸ್ಸೆಸ್‌‌ಗೆ ಪುರಾವೆ ಇಲ್ಲ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ, ಅದಕ್ಕೆ ಅಸ್ಥಿತ್ವವೇ ಇಲ್ಲ. ಖಾಕಿ ಚೆಡ್ಡಿ, ಕರಿ ಟೋಪಿಯನ್ನ ಸುಡುವ ಮೂಲಕ ಅವರ ಅಸ್ತಿತ್ವ ನಾಶಪಡಿಸುವುದನ್ನೇ ಸಿದ್ದರಾಮಯ್ಯನವರು ‘ಚಡ್ಡಿ ಸುಡುವ ಅಭಿಯಾನ’ ಎಂದು ಹೇಳಿದ್ದಾರೆ” ಎಂದು ಅವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

‘ಖಾಕಿ ಚೆಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದುಕೊಂಡವರು ಈ ದೇಶವನ್ನ ಕಾಪಾಡುತ್ತಿದ್ದಾರೆ ಎನ್ನುವ ಮೂಲಕ ಈ ದೇಶದ ಮಿಲಿಟರಿ, ಅರೆಸೇನೆ, ಪೊಲೀಸ್ ವ್ಯವಸ್ಥೆಯನ್ನ ಬಿಜೆಪಿ ಅವಮಾನಿಸುತ್ತಿದೆ. 100 ವರ್ಷಗಳ ಈಚೆಗೆ ಬಂದ ಇವರು ನಾವು ಮಾತ್ರ ಹಿಂದೂ ಧರ್ಮವನ್ನ ಕಾಪಾಡುತ್ತೇವೆ ಎಂದು ಜನರ ಕಣ್ಣಿಗೆ ಮಣ್ಣರೆಚುವ ತಂತ್ರ ಮಾಡುತ್ತಿದ್ದಾರೆ. ವೇದ ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಎಲ್ಲೂ ಕೂಡಾ ಖಾಕಿ ಚೆಡ್ಡಿ, ಕರಿ ಟೋಪಿಯ ಉಲ್ಲೇಖವಿಲ್ಲ. ಪ್ರಪಂಚದಲ್ಲಿ ಇದು ಕಾಣ ಸಿಗುವುದು ಜರ್ಮನಿಯ ಹಿಟ್ಲರ್ ಸೇನೆಯಲ್ಲಿ ಮಾತ್ರ. ಸುಳ್ಳು ಹೇಳುವುದೇ ಅವರ ಕಾಯಕ, ದೇಶವನ್ನ ಧರ್ಮಾಂಧತೆಯ ಅಫೀಮಿನಿಂದ ರಕ್ಷಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

“ಈಗ ಖಾಕಿ ಚೆಡ್ಡಿ ಬದಲು ಪ್ಯಾಂಟ್ ಬಂದಿದೆ. ಇದು ಅವರ ಅಸ್ಮಿತೆಯನ್ನೇ ಅವರು ಕಳೆದು ಕೊಂಡಿರುವುದರ ಸಂಕೇತ. ಸರಳತೆ, ತ್ಯಾಗ ಎಂದು ಹೇಳುತ್ತಿದ್ದವರು ಈಗ ಯಾಕೆ ಪ್ಯಾಂಟ್ ಗೆ ಬದಲಾಯಿಸಿದ್ದಾರೆ? ಅದಕ್ಕೆ ಕಾರಣ 40% ಕಮಿಷನ್. ಕಮಿಷನ್ ಹಣದಿಂದಲೇ ಪ್ಯಾಂಟ್ ಹಾಗೂ ಹತ್ತು ಲಕ್ಷದ ಕೋಟ್ ಬಂದಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಪಿಯುಸಿ ಪರಿಷ್ಕರಣೆಯ ‘ಚಕ್ರತೀರ್ಥ ವರದಿ’ ಪಡೆಯಲ್ಲ ಎಂದ ಸಚಿವ ಬಿಸಿ ನಾಗೇಶ್‌; ಜನಾಕ್ರೋಶಕ್ಕೆ ಮಣಿದ ಸರ್ಕಾರ

“ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ದವಾಗಿದ್ದವರು ಆರೆಸ್ಸೆಸ್‌. ಹಿಂದಿ ಭಾಷಿಕ ರಾಜ್ಯಗಳು ಬಿಟ್ಟು ಬೇರೆ ಕಡೆ ಅವರ ಪ್ರಭಾವ ಬೀರಿದೆಯಾ? ದೇಶ ಅಂದ್ರೆ ಕೇವಲ ಹಿಂದಿ ರಾಜ್ಯಗಳಲ್ಲ. ಎಲ್ಲರನ್ನೂ ಒಳಗೊಳ್ಳಬೇಕೆಂದು ನೆಹರೂ ಅವರು ತಮ್ಮ ಸಂಪುಟದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದ ಶ್ಯಾಂ ಪ್ರಸಾದ್ ಮುಖರ್ಜಿಯನ್ನು ಸಚಿವರನ್ನಾಗಿ ಮಾಡಿದ್ದರು. ಅಂಬೇಡ್ಕರ್ ಅವರಿಗೂ ಅವಕಾಶ ನೀಡಿದ್ದರು‌. ಕೆಲವು ಮುಸ್ಲಿಂ ಲೀಗ್‌ನವರಿಗೂ ಸಚಿವ ಸ್ಥಾನ ನೀಡಲಾಗಿತ್ತು. ನರೇಂದ್ರ ಮೋದಿ ಬಂದ ಮೇಲೆ ಅವರ ವಿರುದ್ಧ ಮಾತಾಡುವವರು ದೇಶದ್ರೋಹಿಗಳೆಂದು ಪಟ್ಟ ಕಟ್ಟಲಾಗ್ತಿದೆ. ಎಂಟು ವರ್ಷಗಳಲ್ಲಿ ದೇಶಕ್ಕೆ ಒಂದೇ ಒಂದು ಕೆಲಸ ಮಾಡಲಿಲ್ಲ” ಎಂದು ಅವರು ಕಿಡಿ ಕಾರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...