Homeಮುಖಪುಟ'ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ' ಎಂದು ಬಾಲಿವುಡ್‌ಗೆ ಮನವರಿಕೆ...

‘ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ’ ಎಂದು ಬಾಲಿವುಡ್‌ಗೆ ಮನವರಿಕೆ ಮಾಡುವಲ್ಲಿ‌ ನಾವು ಸೋತೆವೆ?

- Advertisement -
- Advertisement -

‘ಪುಷ್ಪ’, ‘ಆರ್‌‌ಆರ್‌‌ಆರ್’, ‘ಕೆಜಿಎಫ್- 2’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಒತ್ತಡಕ್ಕೊಳಗಾಗಿದ್ದಾರೆಂಬ ಚರ್ಚೆ ನಡೆಯುತ್ತಿದೆ‌. ‘ಹಿಂದಿ ರಾಷ್ಟ್ರೀಯ ಭಾಷೆ’ ಎಂಬ ಹೇಳಿಕೆಗಳನ್ನು ನೋಡಿದರೆ ಬಾಲಿವುಡ್ ತಾರೆಗಳು ಭಯಗೊಂಡಿರುವುದು ನಿಜವೂ ಅನಿಸುತ್ತಿದೆ. ಇದೆಲ್ಲದರ ಹೊರತಾಗಿ ಯಶಸ್ವಿ ಸಿನಿಮಾವೆಂದರೆ ಏನೆಂದು ನಾವು ಕೇಳಿಕೊಳ್ಳುವ ಅಗತ್ಯವೂ ಇದೆ. ‘ಪ್ಯಾನ್‌ ಇಂಡಿಯಾ’ ಹಾಗೂ ‘ಹಣ ಗಳಿಕೆ’ಯ ಮಾನದಂಡಗಳಾಚೆಯ ಯಶಸ್ಸುಗಳನ್ನೂ ಮನಗಾಣಬೇಕಿದೆ.

ಬಾಲಿವುಡ್‌ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡೆದಿವೆ ಎಂಬ ಚರ್ಚೆಗೆ ಬಳಕೆಯಾಗುತ್ತಿರುವ ಈ ಮೂರೂ ಸಿನಿಮಾಗಳು ಏನನ್ನು ಹೇಳಲು ಹೊರಟಿವೆ? ಇವುಗಳ ಯಶಸ್ಸು ಪ್ರತಿನಿಧಿಸುತ್ತಿರುವುದೇನೂ ಎಂಬುದೂ ಮುಖ್ಯವಲ್ಲವೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪುಷ್ಪ’ ಮಾಫಿಯಾಗಳು ಮೇಲುಗೈ ಸಾಧಿಸುವ ಕಥೆಯುಳ್ಳ ಸಿನಿಮಾ, ಹಿಂದುತ್ವವನ್ನು ಜನರ ತಲೆಯೊಳಗೆ ತರುಕಲು ಯತ್ನಿಸಿರುವ ಸಿನಿಮಾ ‘ಆರ್‌ಆರ್‌ಆರ್‌’, ಬಿಲ್ಡಪ್ ಹಾಗೂ ಹೆಣ್ಣನ್ನು ಸರಕು ಎಂಬಂತೆ ಚಿತ್ರಿಸಿದ ಸಿನಿಮಾ ಕೆಜಿಎಫ್‌. ಇಂಥವುಗಳಿಗೆ ಭಾರೀ ಹಣ ತೆತ್ತು ಸಿನಿಮಾ ನೋಡಿದ ಪ್ರೇಕ್ಷಕ ಬಯಸಿದ್ದಾದರೂ ಏನು? ಇವುಗಳನ್ನೆಲ್ಲ ‘ಮನರಂಜನೆ’ ಎನ್ನಲು ಸಾಧ್ಯವೇ? ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿದರೆ ಮುಂಬರುವ ಪ್ರಯೋಗಗಳು ಹೇಗಿರುತ್ತವೆ? ಈ ಮೂರು ಸಿನಿಮಾಗಳಾಚೆಗೆ ದಕ್ಷಿಣ ಭಾರತದ ಚಿತ್ರರಂಗ ಹಿಡಿದಿರುವ ಹೊಸತನದ ಹಾದಿ ಮಸುಕಾಗಿ ಮತ್ತದೇ ಸವಕಲು ಮಾದರಿಗೆ ನಾವು ಹೊರಳುತ್ತೇವೆಯೇ?

ದಕ್ಷಿಣ ಭಾರತದತ್ತ ಬಾಲಿವುಡ್ ತಿರುಗಿ ನೋಡಲೇಬೇಕಾದ ಸಾಕಷ್ಟು ಉತ್ಕೃಷ್ಟ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬರುತ್ತಿವೆ. ಕೋವಿಡ್ ನಡುವೆ ಬಂದ ‘ಆಕ್ಟ್ 1978’, ‘ಅರಿಷಡ್ವರ್ಗ’ ಕನ್ನಡದ ಮಟ್ಟಿಗೆ ಗುರುತಿಸಬಹುದಾದ ಪ್ರಯೋಗಗಳು. ಆದರೆ ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಪಟ್ಟಿಯೇ ಇವೆ. ‘ಸರಪಟ್ಟ ಪರಂಬರೈ’ ಥರದ ಸಿನಿಮಾ ಓಟಿಟಿಗೆ ಬಂತು. ಅದು ಏನಾದರೂ ಚಿತ್ರಮಂದಿರದಲ್ಲಿ ತೆರೆ ಕಂಡಿದಿದ್ದರೆ ಪ್ರೇಕ್ಷಕನಿಗೆ ಸಿಗುತ್ತಿದ್ದ ಫೀಲ್‌ ಉತ್ಕೃಷ್ಟವಾಗಿರುತ್ತಿತ್ತು. ‘ಸೂರರೈ ಪೊಟ್ರು’ ‘ಜೈ ಭೀಮ್’ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ‘ಪ್ಯಾನ್‌ ಇಂಡಿಯಾ’ ಮಾನದಂಡಕ್ಕೆ ಒಳಪಡುತ್ತಿದ್ದವೇನೋ!

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಾರತೀಯರು ಅತಿ ಹೆಚ್ಚು ನೋಡಿದ್ದು ಮಲಯಾಳಂ ಸಿನಿಮಾಗಳನ್ನು. ದೈತ್ಯ ಕಲಾವಿದ ಫಹಾದ್ ಫಾಸಿಲ್ ಅವರ ‘ಸಿ ಯೂ ಸೂನ್’, ‘ಇರುಳ್’, ‘ಜೋಜಿ’, ‘ಮಾಲಿಕ್’ ಒಟಿಟಿಗೆ ಬಂದವು. ಒಂದು ರೀತಿಯಲ್ಲಿ ಹೇಳುವುದಾದರೆ ಫಾಸಿಲ್, ಓಟಿಟಿಯ ಏಕಚಕ್ರಾಧಿಪತಿಯಂತೆ ಮೆರೆದರು. ಒಟಿಟಿಯಲ್ಲಿ ಬಂದ ‘ನಾಯಟ್ಟು’, ‘ಮಾಲಿಕ್’‌, ‘ಗ್ರೇಟ್ ಇಂಡಿಯನ್‌ ಕಿಚನ್’, ‘ಹೋಮ್’, ‘ಕುರುತಿ’, ‘ದೃಶ್ಯಂ2’ ಮೊದಲಾದ ಸಿನಿಮಾಗಳು ಹೊಸ ಚರ್ಚೆಯನ್ನೇ ಹುಟ್ಟು ಹಾಕಿದವು. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಮನೆಯೊಳಗೆ ಕುಳಿತ ಜನರನ್ನು ರಂಜಿಸಿದ್ದು, ಚಿಂತನೆಗೆ ಹಚ್ಚಿದ್ದು ಓಟಿಟಿಯಲ್ಲಿ ಬಂದ ಈ ಸಿನಿಮಾಗಳೆಂದರೆ ತಪ್ಪಾಗದು.

ತಮಿಳಿನಲ್ಲಿ 2021, 2022ನೇ ಇಸವಿಯಲ್ಲಿ ಬಿಡುಗಡೆಯಾದ ‘ಮಂಡೇಲಾ’, ‘ಕರ್ಣನ್’, ‘ಸಾರ್ಪಟ್ಟ ಪರಂಬರೈ’, ‘ಜೈ ಭೀಮ್’, ‘ರೈಟರ್’, ‘ಠಾಣಾಕ್ಕಾರನ್’ ಸಿನಿಮಾಗಳು ಕಥೆ ಹಾಗೂ ಉತ್ಕೃಷ್ಟತೆಯ ದೃಷ್ಟಿಯಿಂದ ಅದ್ಭುತವಾದ ಪ್ರಯೋಗಗಳು. ‘ರೈಟರ್‌’ ಹಾಗೂ ‘ಕರ್ಣನ್’ ಕೆಲಕಾಲ ಥೇಟರ್‌ನಲ್ಲಿಯೂ ಪ್ರದರ್ಶನ ಕಂಡವು.

ಇತ್ತೀಚಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಈಗ ಒಟಿಟಿಗೂ ಬಂದಿರುವ ‘ಪಡ’ ಎಂಬ ಮಲಯಾಳಂ ಸಿನಿಮಾ ನೈಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಆದಿವಾಸಿಗಳ ಬೆಟ್ಟದಂತ ನೋವಿಗೆ ಕನ್ನಡಿ ಹಿಡಿದಿದೆ. ಅಹಿಂಸಾತ್ಮಕವಾದರೂ ಮಿಲಿಟೆಂಟ್ ಪ್ರತಿರೋಧಕ್ಕೆ ಇಳಿದ ಹೋರಾಟಗಾರರು ಎದುರಿಸಿದ ಪ್ರಭುತ್ವದ ಕಿರುಕುಳವನ್ನು ತೆರೆದಿಟ್ಟಿದೆ.

ಇದನ್ನೂ ಓದಿರಿ: NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

ಪೃಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಥರದ ಅದ್ಭುತ ನಟರು ಅಭಿನಯಿಸಿರುವ ‘ಜನಗಣಮನ’ (ಮಲಯಾಳಂ) ಸಿನಿಮಾ ಮೊನ್ನೆಯಷ್ಟೇ ಅಂದರೆ ಏಪ್ರಿಲ್‌ 28ರಂದು ಚಿತ್ರಮಂದಿರಗಳಿಗೆ ಬಂದಿದೆ. ಪ್ರಕರಣವೊಂದರ ಸುತ್ತ ಮಾಧ್ಯಮ ಹಾಗೂ ರಾಜಕಾರಣಿಗಳು ಸೃಷ್ಟಿಸುವ ಸಮೂಹ ಸನ್ನಿ, ವಾಸ್ತವಗಳಿಗೆ ಮಾಬ್‌ ಕುರುಡಾಗುವ ಪರಿಯನ್ನು ಈ ಸಿನಿಮಾ ಮನವರಿಕೆ ಮಾಡಿಕೊಟ್ಟಿದೆ. #FuckFascism ಎನ್ನುವಷ್ಟು ಧೈರ್ಯ ಮಲಯಾಳಿಗರಿಗಿದೆ. ಕ್ಯಾಂಪಸ್‌ಗಳ ಮೇಲೆ ಕೇಸರಿಧಾರಿಗಳು ದಾಳಿ ಮಾಡುತ್ತಿರುವುದರಿಂದ ಶೈಕ್ಷಣಿಕ ಹಾಗೂ ಡೆಮಾಕ್ರಟಿಕ್ ವ್ಯವಸ್ಥೆ ದಮನವಾಗುತ್ತಿರುವ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ.

ಇಷ್ಟೆಲ್ಲ ಅದ್ಭುತ ಸಿನಿಮಾಗಳು ದಕ್ಷಿಣ ಭಾರತದಲ್ಲಿಯೇ ಕಳೆದೆರಡು ವರ್ಷಗಳಲ್ಲಿ ಬಂದಿವೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಿವೆ. ಹೊಸ ಆಲೋಚನೆಯನ್ನು ಹುಟ್ಟಿಹಾಕಿ, ಪ್ರಭುತ್ವದ ಮತೀಯ ತಾರತಮ್ಯವನ್ನು ಪ್ರಶ್ನಿಸಿವೆ. ಹೀಗಿರುವಾಗ ಬಾಲಿವುಡ್‌ v/s ದಕ್ಷಿಣ ಭಾರತದ ಚಿತ್ರರಂಗದ ಚರ್ಚೆಗೆ ಬಳಕೆಯಾಗುತ್ತಿರುವ ಸಿನಿಮಾಗಳ್ಯಾವುವು? ನಮ್ಮಲ್ಲಿ ಅದ್ಬುತ ಪ್ರಯೋಗಗಳು ನಡೆಸುತ್ತಿದ್ದರೂ ನಾವು ಬಾಲಿವುಡ್‌ಗೆ ಚಾಲೆಂಜ್ ಮಾಡುತ್ತಿರುವುದು ಯಾವ ರೀತಿಯ ಸಿನಿಮಾಗಳ ಮೂಲಕ? ನಮ್ಮ‌ ದೃಷ್ಟಿಕೋನ ಬದಲಾಗುವ ಅವಶ್ಯಕತೆ ಇದೆ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಕೆ.ಜಿ.ಎಫ್, ಪುಷ್ಪ, RRR ಸಿನಿಮಾಗಳು ಅದೋಗತಿಗೆ ಇಳಿದಿರುವ ನಮ್ಮ ಸಂವೇದನೆಗಳ ಪ್ರತೀಕ ಅಷ್ಟೆ.

  2. Act 1978, ಅರಿಷಡ್ವರ್ಗ, ಸೂರರೈ ಪೊಟ್ರು, ಜೈ ಭೀಮ್ ಚಿತ್ರ ಸರಿ ಇಲ್ಲ ಅಂತ ಹೇಳಿದವರು ಯಾರು. ಆ ಚಿತ್ರಗಳೂ ಚೆನ್ನಾಗಿವೆ. ಆದರೆ ಭಾರತೀಯ ಚಿತ್ರರಂಗ ಎಂದರೆ ಕೇವಲ ಹಿಂದಿ ಚಿತ್ರಗಳು ಉಳಿದ ಎಲ್ಲಾ ಭಾರತೀಯ ಚಿತ್ರಗಳು ಕೇವಲ ಪ್ರಾದೇಶಿಕ ಚಿತ್ರಗಳು ಎಂಬ ಭ್ರಮೆ, ಭಾರತದೊಳಗೆ ಹಾಗೂ ಭಾರತದ ಆಚೆ ಇದ್ದ ಪರಸ್ಥಿತಿಯಲ್ಲಿ ತೆರೆಕಂಡು ಇಡೀ ಭಾರತೀಯ ಹಾಗೂ ವಿದೇಶಿಯ ಚಿತ್ರರಂಗಗಳು ಕಣ್ಣು ಬಾಯಿ ಬಿಟ್ಟು ನೋಡೋ ಹಾಗೆ ಮಾಡಿದ್ದು rrr, kgf ಸರಣಿ, ಪುಷ್ಪ ಚಿತ್ರಗಳು, ಎಂದರೆ ಯಾವದೇ ಅತಿಶಯೋಕ್ತಿ ಆಗಲಿಕ್ಕಿಲ್ಲ. ಒಂದು ಚಿತ್ರ ಸಾವಿರಾರು ಕೋಟಿ ಗಳಿಸುತ್ತದೆ ಆದರೆ ಅದು ಹಾಲಿವುಡ್ ಚಿತವಾಗಿದ್ದರೆ ಅಂಥ ಚಿತ ಭಾರತೀಯರು ನಿರ್ಮಾಣ ಮಾಡುವದಿಲ್ಲ ಅಂತ ನಾವೇ ಬೊಬ್ಬೆ ಹಾಕ್ತಿವಿ. ಭಾರತೀಯ ,ಅದರಲ್ಲೂ ಸೌತ್ ಚಿತ್ರಗಳು ಆ ಕಮಾಲ್ ಮಾಡಿದರೆ ಅದನ್ನು ಕೂಡ ನಾವು ಸಹಿಸುವದಿಲ್ಲ.. ಇದೇ ನೋಡಿ ಕೆಲವು ವಿಚಾರವಂತರ ಮನೋಸ್ಥಿತಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....