ಪಕ್ಷ ಅಥವಾ ಅದರ ಯಾವುದೇ ನಾಯಕರನ್ನು ಹೆಸರಿಸದೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಾರಿ ನಿರ್ದೇಶನಾಲಯದ ಮೂಲಕ ಸಮನ್ಸ್ ಕಳುಹಿಸುವ ಬದಲು ಧೈರ್ಯವಿದ್ದರೆ ಬಂಧಿಸುವಂತೆ ಸವಾಲು ಎಸೆದಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತಮ್ಮ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಅವರು ಇಂದು ರಾಜ್ಯದಲ್ಲಿ ಇರುವ ನಿರ್ದೇಶನಾಲಯಲ್ಲಿ ಹಾಜರಾಗಬೇಕಿತ್ತು. ಅದರ ಬದಲಾಗಿ ಮುಖ್ಯಮಂತ್ರಿ ಸೋರೆನ್ ಅವರು ರಾಂಚಿಯ ಕಾಂಕೆ ರಸ್ತೆ ಪ್ರದೇಶದಲ್ಲಿ ತಮ್ಮ ಅಧಿಕೃತ ನಿವಾಸದ ಹೊರಗೆ ಮಧ್ಯಾಹ್ನ 2.30 ರ ನಂತರ ನೂರಾರು ಬೆಂಬಲಿಗರ ನಡುವೆ ಮಾತನಾತ್ತಾ ಬಿಜೆಪಿಗೆ ಸವಾಲೆಸೆದಿದ್ದಾರೆ. ನಂತರ ಅವರು ಬುಡಕಟ್ಟು ಜನಾಂಗದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಛತ್ತೀಸ್ಗಢಕ್ಕೆ ತೆರಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಛತ್ತೀಸ್ಗಢದ ರಾಯ್ಪುರದಲ್ಲಿ ಆದಿವಾಸಿ ನೃತ್ಯ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಅವರನ್ನು ಮುಂಚಿತವಾಗಿಯೇ ಆಹ್ವಾನಿಸಲಾಗಿತ್ತು. ಅದೇ ದಿನ ನಿರ್ದೇಶನಾಲಯ ಅವರನ್ನು ಕರೆಸಿರುವುದು ‘ಪಿತೂರಿ’ ಎಂದು ಸೋರೆನ್ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ಗೆ ಜಾರಿ ನಿರ್ದೇಶನಾಲಯ ಸಮನ್ಸ್
“ನಾನು ಯಾರನ್ನಾದರೂ ಕೊಲೆ ಮಾಡಿದ್ದೇನೆಯೇ? ನಾನೇನು ಅಪರಾಧ ಮಾಡಿದ್ದೇನೆ? ಒಂದು ವೇಳೆ ತಪ್ಪು ಮಾಡಿದ್ದರೆ ನನ್ನನ್ನು ಬಂಧಿಸಿ ತೋರಿಸಿ. ಸಮನ್ಸ್ ಏಕೆ ಕಳುಹಿಸಬೇಕು? ನಮ್ಮ ಸರ್ಕಾರವು ರಾಜ್ಯಕ್ಕಾಗಿ ಪೂರ್ಣ ಶಕ್ತಿಯಿಂದ ಕೆಲಸ ಮಾಡುತ್ತಿದೆ. ಒಂದು ವೇಳೆ ಆದಿವಾಸಿಗಳು ಬಂದರೆ ವಿಪಕ್ಷಗಳಿಗೆ ತಲೆಮರೆಸಿಕೊಳ್ಳಲು ಜಾಗ ಸಿಗುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.‘
‘‘ಆದಿವಾಸಿಗಳು ಮತ್ತು ಮೂಲ ನಿವಾಸಿಗಳು ಯಶಸ್ವಿಯಾಗುವುದನ್ನು ಬಯಸದ ‘ಹೊರಗಿನ ಗ್ಯಾಂಗ್’ ಜಾರ್ಖಂಡ್ನಲ್ಲಿ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ಆರೋಪಿಸಿದ್ದು, ಅವರೆಲ್ಲರನ್ನೂ ತಾವು ಗುರುತಿಸಿದ್ದು, ಅವರಿಗೆ ‘‘ತಕ್ಕ ಉತ್ತರ’’ ನೀಡುತ್ತಿದ್ದೇನೆ ಎಂದು ಸೊರೆನ್ ಹೇಳಿದ್ದಾರೆ.
ವಿಚಾರಣೆಯ ಹೆಸರಿನಲ್ಲಿ ನಾವು ಇಲ್ಲಿ ಸರ್ಕಾರ ರಚಿಸುತ್ತಿದ್ದೇವೆ ಎಂಬ ಸಂದೇಶವನ್ನು ಅವರು (ಬಿಜೆಪಿ) ನೀಡಲು ಬಯಸುತ್ತಿದ್ದಾರೆ. ಆದರೆ ಈ ಹಿಂದೆ ನಡೆದ ನಾಲ್ಕು ಉಪಚುನಾವಣೆಯಲ್ಲಿ ನಾಲ್ಕರಲ್ಲೂ ಅವರು ಸೋತಿದ್ದಾರೆ ಎಂದು ಸೊರೆನ್ ನೆನಪಿಸಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್: ವಿಮಾನ ನಿಲ್ದಾಣದಲ್ಲಿ ಅತಿಕ್ರಮ ಪ್ರವೇಶ, ಬಲವಂತವಾಗಿ ವಿಮಾನ ಹಾರಿಸಿದ್ದ ಬಿಜೆಪಿ ಸಂಸದನ ವಿರುದ್ಧ ದೂರು
ಮುಂಬರುವ ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ಜನತೆಯಿಂದ ಉತ್ತರ ಸಿಗಲಿದೆ ಎಂದು ಹೇಳಿದ ಅವರು, “ಜಾರ್ಖಂಡ್ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ‘ಸರ್ಕಾರ್ ಆಪ್ಕೆ ದ್ವಾರ’ದಿಂದಾಗಿ ಬಿಜೆಪಿಯು ‘ಹೆದರಿರುವ ಮೋಡ್’ನಲ್ಲಿದೆ” ಎಂದು ಒತ್ತಿ ಹೇಳಿದ್ದಾರೆ.