Homeಮುಖಪುಟಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

ಸಮಯ ನಿರ್ವಹಣೆಯ ಕಲೆ: ಹೀಗೆ ಮಾಡಿದರೆ ನಿಮ್ಮ ಸಮಯ ಉಳಿಸಬಹುದು ಗೊತ್ತೆ?

- Advertisement -
- Advertisement -

ಜೀವನ ಕಲೆಗಳು: ಅಂಕಣ-26

ಸಮಯ ನಿರ್ವಹಣೆಯ ಕಲೆ:

ದೇವರು ಪ್ರತಿಯೊಬ್ಬರಿಗೂ ಶಕ್ತಿ, ರೂಪ, ಗುಣ, ಸಂಪನ್ಮೂಲ, ಕಷ್ಟ, ಸುಖ, ಹಂಚುವಾಗ ತಾರತಮ್ಯ ತೋರಿರುವುದು ಎಲ್ಲೆಲ್ಲೂ ಎದ್ದು ಕಾಣುತ್ತದೆ. ಆದರೆ ಒಂದು ವಿಷಯದಲ್ಲಿ ಮಾತ್ರ, ಎಲ್ಲರಿಗೂ ಸರಿಸಮಾನವಾಗಿ, ದಿನಕ್ಕೆ 24 ಗಂಟೆಗಳನ್ನು ನೀಡಿರುತ್ತಾನೆ. ಯಾರಿಗೂ 25 ಗಂಟೆಯಾಗಲೀ, 23 ಗಂಟೆಯಾಗಲೀ ನೀಡಿಲ್ಲ. ಆದರಿಂದ ಸಮಯದ ಅಭಾವಕ್ಕೆ ಎಲ್ಲರೂ ತಮ್ಮನ್ನು ತಾವೇ ಹೊಣೆಗಾರರು ಎಂದು ಪರಿಗಣಿಸಬೇಕು.

ಕೆಲವರು ತಮ್ಮ ಎಲ್ಲಾ ಕೆಲಸವನ್ನು ನಿಗದಿತ ಸಮಯದಲ್ಲಿ ಮಾಡಿ ಮುಗಿಸಿ, ಹಾಯಾಗಿ ಹರಟೆ ಕೊಚ್ಚಲು ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಬೇರೊಬ್ಬರ ಬಗ್ಗೆ ಟೀಕೆ-ಟಿಪ್ಪಣಿ ಮಾಡುವುದಕ್ಕೂ ಸಮಯ ತೆಗೆದರೆ ಇನ್ನು ಕೆಲವರಿಗೆ ಯಾವ ಕೆಲಸಕ್ಕೂ ಪುರುಸೊತ್ತು ಇರುವುದಿಲ್ಲ. ಏಕೆ ಹೀಗೆ ಎಂದು ಯೋಚಿಸಿದ್ದೀರಾ?

ಸಮಯ ಯಾವಾಗಲೂ ಒಂದೇ ಗತಿಯಲ್ಲಿ ಓಡುತ್ತದೆ. ನಿಮ್ಮ ಕೆಲಸದ ಗತಿ ಅಥವಾ ನಿಮ್ಮ ಬೇಕು-ಬೇಡದ ಪ್ರಕಾರ ಹೊತ್ತು ಹೋಗುವುದಿಲ್ಲ. ಆದ್ದರಿಂದ ನಿಮ್ಮ ಕೆಲಸ ಸಮಯದೊಳಗೆ ಮಾಡಿ ಮುಗಿಸುವುದನ್ನು ನೀವೇ ಕಲಿಯಬೇಕು. ಇದನ್ನೇ ಸಮಯ ನಿರ್ವಹಣೆ (ಟೈಂ ಮ್ಯಾನೇಜ್ಮೆಂಟ್) ಎನ್ನುತ್ತಾರೆ. ಜೀವನಾವಶ್ಯಕ ಕಲೆಗಳಲ್ಲಿ ಇದೂ ಒಂದು.

ನಮ್ಮ ಇನ್ನೊಂದು ಬಹು ದೊಡ್ಡ ಸಮಸ್ಯೆ ಕೆಲಸಗಳನ್ನು ಮುಂದೂಡುವುದು (ಪ್ರೊಕ್ರಾಸ್ಟಿನೇಷನ್). ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡದೇ, ವಿನಾಕಾರಣ ಮುಂದೂಡುತ್ತ ಹೋಗುತ್ತೇವೆ. ಅದರಿಂದ ಅವು ಮುಂದೆ ಗಂಭೀರ ರೂಪ ತಳೆದು, ನಮ್ಮನ್ನು ತೊಂದರೆಗೀಡುಮಾಡುತ್ತವೆ. ನಿಮಿಷಗಳಲ್ಲಿ ಆಗುವ ಕೆಲಸ ಗಂಟೆಗಟ್ಟಲೆ ತೆಗೆದುಕೊಳ್ಳುತ್ತದೆ. ಬೇರೆಯವರಿಂದ ಮಾತೂ ಕೇಳಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಿ.

ನಿಮ್ಮ ದಿನಚರಿಯನ್ನು, ದೈನಂದಿನ ಎಲ್ಲಾ ಕೆಲಸಗಳ ಒಂದು ಉದ್ದನೆಯ ಪಟ್ಟಿ ತಯಾರಿಸಿ. ಯಾವುದನ್ನೂ, ಕೆಲಸ ಎಷ್ಟೇ ಸಣ್ಣದಾದರೂ ಸರಿ, ಬಿಡಬೇಡಿ, ಪಟ್ಟಿಯಲ್ಲಿ ಸೇರಿಸಿ. ನಿದ್ದೆ, ಊಟ, ಸ್ನಾನ, ಬಸ್ಸು-ರೈಲು-ಸಾರಿಗೆಗೆ ಕಾಯುವುದು, ಇತ್ಯಾದಿ ಎಲ್ಲಾ ಕೆಲಸಕ್ಕೂ ನೀವು ಎಷ್ಟು ಸಮಯ ಈಗ ತೆಗೆದುಕೊಳ್ಳುತ್ತೀರಿ ಎಂಬುದನ್ನೂ ಪಕ್ಕದಲ್ಲಿ ಗುರುತು ಹಾಕಿಕೊಳ್ಳಿ. ಒಟ್ಟು ಎಲ್ಲಾ ಸಮಯ ಸೇರಿ 24 ತಾಸಿಗಿಂತ ಹೆಚ್ಚಾದರೂ ಚಿಂತೆ ಇಲ್ಲ, ಯಾವುದನ್ನೂ ನಿರ್ಲಕ್ಷಿಸದೆ ಪಟ್ಟಿ ಮಾಡುತ್ತಾ ಹೋಗಿ. ಇದನ್ನು ಮಾಡಬೇಕಾದ ಕೆಲಸದ ಪಟ್ಟಿ (ಟು-ಡೂ-ಲಿಸ್ಟ್) ಎನ್ನೋಣ.

ನಮ್ಮ ಕೆಲಸಗಳಲ್ಲಿ ಕೆಲವು ಬಹಳ ಮುಖ್ಯ (ಇಂಪಾರ್ಟಂಟ್) ಕೆಲಸಗಳಾಗಿರುತ್ತವೆ, ಅದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ಮಾಡದಿದ್ದಲ್ಲಿ ಅದರ ಪರಿಣಾಮ ಗಂಭೀರವಾಗಿರುತ್ತದೆ. ಕೆಲವು ಕೆಲಸಗಳು ಬಹಳ ತುರ್ತು (ಅರ್ಜೆಂಟ್) ಆಗಿರುತ್ತದೆ ಅವನ್ನು ಕೂಡಲೇ ಅಥವಾ ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತದೆ. ಉದಾ: ನಿಮಗೆ ಶೌಚಾಲಯಕ್ಕೆ ಹೋಗಬೇಕಾದರೆ ಅದು ತುರ್ತು. ಕೆಲಸ ಮುಖ್ಯವೋ ಇಲ್ಲವೋ ಅದರ ಪ್ರಶ್ನೆ ಬರುವುದಿಲ್ಲ. ಕೆಲವು ಕೆಲಸಗಳು ಮುಖ್ಯ ಮತ್ತು ತುರ್ತು ಎರಡೂ ಆಗಿರುತ್ತದೆ. ಕೆಲವು ಕೇವಲ ಮುಖ್ಯ ಅಥವಾ ಕೇವಲ ತುರ್ತು ಆಗಿದ್ದರೆ ಮಿಕ್ಕ ಕೆಲಸಗಳು ಮುಖ್ಯವೂ ಅಲ್ಲ, ತುರ್ತು ಸಹ ಆಗಿರುವುದಿಲ್ಲ, ಅವನ್ನು ನಿದಾನವಾಗಿ, ಯಾವಾಗ ಬೇಕಾದರೂ ಮಾಡಬಹುದು.

ನಿಮ್ಮ ಎಲ್ಲಾ ಕೆಲಸಗಳ ಸಮಗ್ರ ಪಟ್ಟಿ ಮುಂದಿಟ್ಟುಕೊಂಡು. ಯಾವ ಕೆಲಸ “ಮುಖ್ಯ” (ಇಂಪಾರ್ಟೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ಮುಖ್ಯ” (ಇಂಪಾರ್ಟೆಂಟ್) ಎಂದು ಬರೆಯಿರಿ. ಯಾವುದು ಮುಖ್ಯವಲ್ಲವೋ ಅದಕ್ಕೆ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಕೊಡಿ. ಹೀಗೆ ಒಂದೊಂದಾಗಿ ಎಲ್ಲಾ ಕೆಲಸಗಳಿಗೂ “ಮುಖ್ಯ” (ಇಂಪಾರ್ಟೆಂಟ್) ಅಥವಾ “ಮುಖ್ಯವಲ್ಲ” (ನಾಟ್ ಇಂಪಾರ್ಟೆಂಟ್)ಎಂಬ ಹಣೆಪಟ್ಟಿ ಬಿದ್ದಿರಬೇಕು. ಎರಡನೆಯದಾಗಿ ಅದೇ ಪಟ್ಟಿಯಲ್ಲಿ, (“ಮುಖ್ಯ” ಅಥವಾ “ಮುಖ್ಯವಲ್ಲ” ಎಂಬ ನಿರ್ಧಾರ ಈಗಾಗಲೇ ಆಗಿರುವ ಪಟ್ಟಿಯಲ್ಲಿ) ಯಾವ ಕೆಲಸ “ತುರ್ತು” (ಅರ್ಜೆಂಟ್) ಎಂದು ನಿಮಗೆ ಅನಿಸುತ್ತದೋ ಅದರ ಮುಂದೆ “ತುರ್ತು” (ಅರ್ಜೆಂಟ್) ಎಂದು ಬರೆಯಿರಿ. ಯಾವುದು ತುರ್ತು ಅಲ್ಲವೋ ಅದಕ್ಕೆ “ತುರ್ತು ಅಲ್ಲ” (ನಾಟ್ ಅರ್ಜೆಂಟ್)ಎಂಬ ಹಣೆಪಟ್ಟಿ ಕೊಡಿ. ಈಗ ನಿಮ್ಮ ಸಮಗ್ರ ಕೆಲಸದ ಪಟ್ಟಿಯಲ್ಲಿ ನಾಲ್ಕು ವಿಧವಾದ ಕೆಲಸಗಳಿವೆ, ಅಲ್ಲವೇ?.

1.      ಮುಖ್ಯ ಮತ್ತು ತುರ್ತು.

2.      ಮುಖ್ಯ ಆದರೆ ತುರ್ತು ಅಲ್ಲ.

3.      ಮುಖ್ಯ ಅಲ್ಲ ಆದರೆ ತುರ್ತು.

4.      ಮುಖ್ಯ ಅಲ್ಲ, ತುರ್ತು ಅಲ್ಲ.

ಈಗ, ನಿಮ್ಮ ಈ ನಾಲ್ಕು ಪಟ್ಟಿಯ ಕೆಲಸಗಳನ್ನು ಬೇರ್ಪಡಿಸಿ ಅದರಲ್ಲಿರುವ ಕೆಲಸಗಳನ್ನು ಆದ್ಯತೆಯ ಮೇಲೆ ಮರುಕ್ರಮಾಂಕ ನೀಡಿ. ಯಾವುದು ಬಹಳ ಮುಖ್ಯ ಮತ್ತು ಬಹಳ ತುರ್ತು ಅದಕ್ಕೆ ಕ್ರಮಾಂಕ 1, 2. 3. ಹೀಗೆ ಪ್ರತಿಯೊಂದು ಕೆಲಸಕ್ಕೂ ಕ್ರಮ ಸಂಖ್ಯೆ ನೀಡಿ, ನಾಲ್ಕೂ ಪಟ್ಟಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇಂತಹ ಪಟ್ಟಿಯನ್ನು ಐಸನ್ಹೋವರ್ ಮ್ಯಾಟ್ರಿಕ್ಸ್ ಎಂದು ಕರೆಯುತ್ತಾರೆ.

ಈಗ ನಿಮ್ಮ ದಿನಚರಿಗೆ ಹೋಲಿಸಿಕೊಂಡು, ಬೆಳಿಗ್ಗೆ ಎದ್ದಾಗನಿಂದ ರಾತ್ರಿ ಮಲಗುವ ತನಕದ ಸಮಯ ಸಾರಣಿಗೆ ಜೋಡಿಸುತ್ತಾ, ಯಾವುದು ಮುಖ್ಯ ಮತ್ತು ತುರ್ತು ಅದನ್ನು ಮೊದಲು ಮಾಡಿ, ಯಾವುದು ತುರ್ತು ಆದರೆ ಮುಖ್ಯವಲ್ಲ ಅದನ್ನು ಕೂಡಲೇ ಮಾಡಿ, ಅದಕ್ಕೆ ಯೋಜನೆ ಹಾಕಿಕೊಳ್ಳಿ, ಸಮಯಾವಕಾಶ ಮಾಡಿಕೊಳ್ಳಿ. ಯಾವುದು ಮುಖ್ಯ ಆದರೆ ತುರ್ತು ಅಲ್ಲ, ಅದನ್ನು ಮರೆಯದೆ ಮಾಡಿ, ಅದನ್ನು ಇನ್ನೊಬ್ಬರಿಗೆ ವಹಿಸಬಹುದೇ ನೋಡಿ. ಯಾವುದು ಮುಖ್ಯವೂ ಅಲ್ಲ, ತುರ್ತೂ ಅಲ್ಲ. ಅದನ್ನು ಸಮಯ ಸಿಕ್ಕಾಗ ಮಾಡಿ, ಅಂತಹ ಕೆಲಸಗಳನ್ನು ದಿನಚರಿಯಿಂದ ಕಡಿಮೆ ಮಾಡಿಕೊಳ್ಳಿ.

ಉದಾ: ನಿಮಗೆ ಬೆಳಿಗ್ಗೆ ಕಚೇರಿಗೆ ತೆರಳಲು 9:05ರ ಮೆಟ್ರೋ ಹಿಡಿಯಬೇಕು, ಆದರೆ ಮನೆಯಿಂದ ಹೊರಡುವ ಮುನ್ನ ನಿಮ್ಮ ಸ್ನೇಹಿತ/ಸಹೋದ್ಯೋಗಿಯ ಮಿಸ್ಡ್ ಕಾಲ್ ಅಥವಾ ಮೆಸೇಜ್ ಬಂತು ಎಂದಿಟ್ಟುಕೊಳ್ಳಿ. ಅದನ್ನು ನೋಡಲು ಅಥವಾ ಅದಕ್ಕೆ ಉತ್ತರಿಸಲು ಹೋಗಿ, ನಿಮ್ಮ ಮೆಟ್ರೋ ತಪ್ಪಿಸಿಕೊಳ್ಳಬೇಡಿ. ಸ್ಟೇಷನ್ನಿಗೆ ಸಮಯಕ್ಕೆ ಸರಿಯಾಗಿ ತಲುಪಿ ಅಲ್ಲಿ ರೈಲಿಗೆ ಕಾಯುತ್ತಿರುವಾಗ ಸ್ನೇಹಿತ/ಸಹೋದ್ಯೋಗಿಯ ಸಂದೇಶಕ್ಕೆ ಗಮನಕೊಡಿ. ಅನಿರೀಕ್ಷಿತವಾಗಿ ಸಮಯ ಸಿಕ್ಕಾಗ “ಮುಖ್ಯ ಅಲ್ಲ, ತುರ್ತು ಅಲ್ಲ” ಎಂಬ ಕೆಲಸಗಳನ್ನು ನಿಪಟಾಯಿಸಿಕೊಳ್ಳಿ.

ಯಾವ ಕೆಲಸಗಳು ಅವಶ್ಯಕತೆಗಿಂತ ಹೆಚ್ಚಿನ ಸಮಯ/ಗಮನ ತೆಗೆದುಕೊಳ್ಳುತ್ತಿವೆ, ಅವನ್ನು ಮರು-ಪರಿಶೀಲಿಸಿ, ಅವನ್ನು ತ್ವರಿತವಾಗಿ/ಗಮನವಿಟ್ಟು ಮಾಡುವುದನ್ನು ಕಲಿಯಿರಿ. ತೀರಾ ಅವಶ್ಯಕವಾದಲ್ಲಿ ನಿಮ್ಮ ಅನುತ್ಪಾದನಾ ಕೆಲಸಗಳನ್ನು (4ನೆಯ ಪಟ್ಟಿಯ) ಅಥವಾ ನಿದ್ರೆಯ ಸಮಯವನ್ನು ಕತ್ತರಿಸಿ. ಮೊಬೈಲ್ ಬಳಕೆ ಕಡಿಮೆ ಮಾಡಿ, ಸಮಯದ ದುರುಪಯೋಗಕ್ಕೆ ಬಹು ದೊಡ್ದ ಕಾರಣ ಸ್ಮಾರ್ಟ್ ಫೋನ್. ಆರೋಗ್ಯಕ್ಕೆ ಧಕ್ಕೆ ಬರುವಂತಹ ಕೆಲಸ ಮಾಡಬೇಡಿ. ಅನಾರೋಗ್ಯದಿಂದ ಕೆಲಸದ ಗತಿ ಇನ್ನೂ ಕಡಿಮೆ ಆಗುತ್ತದೆ. ಹೀಗೆ ಎಲ್ಲಾ ಕೆಲಸಗಳು, ಮತ್ತು ಅದಕ್ಕೆ ತಗಲುವ ಸಮಯ ನಿಮ್ಮ ನಿಯಂತ್ರಣಕ್ಕೆ ಬರಲು ಪ್ರಾರಂಭವಾಗುತ್ತವೆ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಸ್ಲಿಮರ ಬಗ್ಗೆ ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆ : ಸಿ.ಟಿ ರವಿ ವಿರುದ್ಧ FIR

ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು...

ಹತ್ಯಾಕಾಂಡಕ್ಕೆ ಸಮನಾದ NEET ಹಗರಣ ನಡೆಯಲು ಬಿಟ್ಟ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಲಿ

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಲೀಕ್ ಆದ ನಂತರದ ಬೆಳವಣಿಗೆಗಳನ್ನು ಇಡೀ ದೇಶ ಗಮನಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಜೂನ್ ಆರಂಭದಿಂದ ಇಲ್ಲಿಯವರೆಗೆ ದೇಶದ ವಿದ್ಯಾರ್ಥಿಗಳು ನಡೆಸುತ್ತಿರುವ ಆಂದೋಲನವನ್ನು ದೇಶದ ಜನತೆ ನೋಡುತ್ತಿದ್ದಾರೆ. ದೇಶದ...

ಸಿಜೆಪಿ ಮತ್ತು ಜೆನ್‌ ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಇತ್ತೀಚಿನ ಬೆಳವಣಿಗೆಗಳು ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ (ಕಾಕ್ರೋಚ್‌ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ (ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ...

SIR ಕರ್ತವ್ಯದ ವೇಳೆ ಶಿಕ್ಷಕಿಗೆ ಹಾರ್ಟ್ ಅಟ್ಯಾಕ್: ಚಿಕಿತ್ಸೆ ಫಲಿಸದೇ ಸಾವು

ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ 'ವಿಶೇಷ ಸಮಗ್ರ ಪರಿಷ್ಕರಣೆ' (SIR) ಕೆಲಸದ ಹೆಸರಿನಲ್ಲಿ ಶಿಕ್ಷಕರ ಮೇಲೆ ಹೇರುತ್ತಿರುವ ಅತಿಯಾದ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಮತ್ತೊಬ್ಬ ಶಿಕ್ಷಕಿ ಬಲಿಯಾಗಿದ್ದಾರೆ. ಬೆಂಗಳೂರಿನ...

ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಮುಲ್ಲಾನಿಗೂ ನೀಟ್‌ಗೂ ಏನು ಸಂಬಂಧ: ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ

ದೇಶಾದ್ಯಂತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವಜನ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ವಿದ್ಯಾರ್ಥಿಗಳ ಹೋರಾಟವನ್ನು ಕುಹಕವಾಡಿರುವ ವಿಧಾನ ಪರಿಷತ್ ಬಿಜೆಪಿ...

ಪ್ರತಿಭಟನೆಯನ್ನು ಹತ್ತಿಕ್ಕಲು ಅಕ್ಕಾಡಕ್ಕಿಳಿದಿವೆ ಹಿಂದುತ್ವವಾದಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್‌ ಮತ್ತು ಉಗ್ರ ಗೂಂಡಾ ಪಡೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜೂನ್ 20ರಂದು ಶುರುವಾಗಿದ್ದ ಈ ಆಂದೋಲನ ಇದೀಗ ದೇಶಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಸಿಜೆಪಿ ಪಟ್ಟು ಹಿಡಿದಿದ್ದು, ಇಂದು...

ಜಿರಳೆಗಳನ್ನು ಸಾಯಿಸಿ ಎಂದು ವಿವಾದಾತ್ಮಕ ಪೋಸ್ಟ್‌ ಹಾಕಿದ ಪ್ರಜ್ಞಾ ಸಿಂಗ್ ಠಾಕೂರ್

ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ದೇಶದಿಂದ ಜಿರಳೆಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ವ್ಯವಸ್ಥೆ ಮಾಡುವಂತೆ ದೇಶದ ನಾಯಕರಿಗೆ ಮನವಿ ಮಾಡಿದ್ದಾರೆ. X (ಟ್ವಿಟರ್) ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, 2008 ರ...

ಸೋನಮ್ ವಾಂಗ್ಚುಕ್ ಮತ್ತು ಸರ್ಕಾರದ ಡೀಲ್‌ನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಂಶವೇ ಇಲ್ಲ

ಕೇಂದ್ರದ ಮೋದಿ ಸರ್ಕಾರ ತನ್ನ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ನಂತರ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಜುಲೈ 23ರ ಗುರುವಾರ ತಮ್ಮ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ....

“50 ಗ್ರಾಂ ಡ್ರಗ್ಸ್ ಇಟ್ಟು ಕೇಸ್ ಹಾಕ್ತೀನಿ!”: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಮಾದಕದ್ರವ್ಯ ಪ್ರಕರಣದ ಬೆದರಿಕೆಯೊಡ್ಡಿದ ಮುಂಬೈ ಪೊಲೀಸ್!

ಮುಂಬೈ: ದೇಶಾದ್ಯಂತ ವಿದ್ಯಾರ್ಥಿ ಸಮುದಾಯದ ಆಕ್ರೋಶ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುತ್ತಿರುವ ಯುವಜನರನ್ನು ಹತೋಟಿಗೆ ತರಲು ಪೊಲೀಸರು ಯಾವ ಮಟ್ಟದ ದಮನಕಾರಿ ಮಾರ್ಗಗಳನ್ನು ತುಳಿಯುತ್ತಿದ್ದಾರೆ ಎಂಬುದಕ್ಕೆ ಮುಂಬೈನಲ್ಲಿ ನಡೆದ ಘಟನೆಯೊಂದು...

ಬಿಡದಿ ಟೌನ್‌ಶಿಪ್: 80% ರೈತರ ಒಪ್ಪಿಗೆ ಇದೆ ಎಂಬ ವಾದ ಸಾಬೀತುಪಡಿಸಿ – ಸರ್ಕಾರಕ್ಕೆ ಸಂಯುಕ್ತ ಹೋರಾಟ ಸವಾಲು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂಮಿ ನೀಡಲು ಉದ್ದೇಶಿತ ಪ್ರದೇಶದ ಶೇಕಡಾ 80 ರಷ್ಟು ರೈತರು ಒಪ್ಪಿದ್ದಾರೆ ಎಂಬ ಸರ್ಕಾರದ ವಾದಕ್ಕೆ ಯಾವುದೇ ವಾಸ್ತವಿಕ ಆಧಾರವಿಲ್ಲ. ಸರ್ಕಾರಕ್ಕೆ ಧೈರ್ಯವಿದ್ದರೆ ತನ್ನ ಈ ಹೇಳಿಕೆಯನ್ನು ಜನರ...