Homeಚಳವಳಿಲಖಿಂಪುರ್ ರೈತರ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಲಖಿಂಪುರ್ ರೈತರ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ಘಟನಾ ಸ್ಥಳದಲ್ಲಿದ್ದವರನ್ನು ಸಂಪರ್ಕಿಸಿ ‘ನ್ಯೂಸ್‌ಲ್ಯಾಂಡ್ರಿ’ ಸುದ್ದಿಜಾಲ ಮಾಡಿರುವ ‌ಈ ವರದಿಯು, ಕೇಂದ್ರ ಸಚಿವರ ಹೇಳಿಕೆಯನ್ನು ಅಲ್ಲಗಳೆಯುತ್ತದೆ. ಸಚಿವರ ಮಗ ಸ್ಥಳದಲ್ಲಿದ್ದ ಹಾಗೂ ಬಂದೂಕು ಬಳಸಿದ್ದ ಎನ್ನುತ್ತದೆ.

- Advertisement -
- Advertisement -

ಅಕ್ಟೋಬರ್‌ 3ರಂದು ಉತ್ತರ ಪ್ರದೇಶದ ಲಿಖಿಂಪುರ ಖೇರಿ ಪ್ರಾಂತ್ಯದಲ್ಲಿ ನಡೆದ ರೈತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್‌‌ಕುಮಾರ್‌ ಮಿಶ್ರಾ ಅವರು, “ನನ್ನ ಪುತ್ರ ಘಟನಾ ಪ್ರದೇಶದಲ್ಲಿ ಇರಲಿಲ್ಲ” ಎಂದು ಹೇಳಿದ್ದಾರೆ.

ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದ ರೈತರ ಮೇಲೆ ಮೂರು ವಾಹನಗಳು ಏಕಾಏಕಿ ನುಗ್ಗಿದ್ದವು. ಅದರಲ್ಲಿ ಒಂದು ವಾಹನವನ್ನು ಅಜಯ್‌ ಮಿಶ್ರಾ ಅವರ ಮಗ ಅಶೀಶ್‌ ಮಿಶ್ರಾ ಚಾಲನೆ ಮಾಡುತ್ತಿದ್ದರು ಎಂದು ರೈತರು ದೂರಿದ್ದಾರೆ. ಅಂದು ನಡೆದ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.

ರೈತರು ಸುಮ್ಮನೆ ನಡೆದುಕೊಂಡು ಹೋಗುವಾಗ ಮೂರು ವಾಹನಗಳು ರೈತರತ್ತ ನುಗ್ಗಿದೆ. ಒಬ್ಬ ರೈತನಿಗೆ ಕಾರಿನ ಬ್ಯಾನೆಟ್‌ ಹೊಡೆದಿದೆ. ಆದರೂ ಅದು ನಿಲ್ಲಲಿಲ್ಲ ಎಂಬುದನ್ನು ಟ್ವಿಟರ್‌‌ನಲ್ಲಿ ಶೇರ್‌ ಮಾಡಲಾಗಿರುವ 29 ಸೆಕೆಂಡ್‌ಗಳ ಒಂದು ವಿಡಿಯೋ ತಿಳಿಸಿದೆ. ಸಿಟ್ಟಿಗೆದ್ದ ರೈತರು ಗಾಡಿ ಚಾಲನೆ ಮಾಡುತ್ತಿದ್ದ ಒಬ್ಬನಿಗೆ ಹೊಡೆದಿದ್ದಾರೆ.

ಇದನ್ನೂ ಓದಿರಿ: ಲಖಿಂಪುರ್‌ ಖೇರಿ ಹತ್ಯಾಕಾಂಡ: ಮರಣೋತ್ತರ ಪರೀಕ್ಷೆ ವರದಿ ಬರುವವರೆಗೂ ಅಂತ್ಯಸಂಸ್ಕಾರಕ್ಕೆ ಒಪ್ಪದ ಕುಟುಂಬ

ನಂತರ ಬಿಜೆಪಿ ಕಾರ್ಯಕರ್ತರು ಮತ್ತು ಚಾಲಕನನ್ನು ವಾಹನದಿಂದ “ಎಳೆದೋಯ್ದರು” ಎಂದು ಅವರು ಹೇಳಿದ್ದರು. “ನಾನು ಎರಡು ದಿನಗಳಿಂದ ಪ್ರತಿಭಟನಾ ಸ್ಥಳದ ಬಳಿ ಇರಲಿಲ್ಲ” ಎಂದು ಆಶೀಶ್ ಹೇಳಿದ್ದರು.

ಅಜಯ್‌ ಮಿಶ್ರ ಪ್ರತಿಕ್ರಿಯಿಸಿ, ಘಟನೆ ನಡೆದ ದಿನ ನನ್ನ ಮಗ ಬನ್ವಿಪುರ ಕುಸ್ತಿ ಪಂದ್ಯಾವಳಿಯಲ್ಲಿ ಇದ್ದರು.  ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನು. ಇದು ಖಾಲಿಸ್ತಾನಿಗಳಿಂದಾದ ಘಟನೆ ಎಂದು ದೂರಿದ್ದರು. ಆದರೆ ಘಟನೆಯ ಪ್ರತ್ಯಕ್ಷದರ್ಶಿಗಳನ್ನು ಸಂದರ್ಶಿಸಿ ನ್ಯೂಸ್‌ ಲ್ಯಾಂಡ್ರಿ ವರದಿ ಮಾಡಿದ್ದು, ಬೇರೆ ಸಂಗತಿಗಳನ್ನು ಮುನ್ನಲೆಗೆ ತಂದಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದೇನು?

ಸೆಪ್ಟೆಂಬರ್‌ 25ರಂದು ಅಜಯ್‌ಕುಮಾರ್ ಮಿಶ್ರಾ ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದರು. “ಅವರು ನನ್ನನ್ನು ಎದುರಿಸಲಿ. ಎರಡು ನಿಮಿಷಗಳಲ್ಲಿ ಅವರನ್ನು ಖಾಲಿ ಮಾಡಿಸುತ್ತೇನೆ” ಎಂದು ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ರೈತರು ಸೇರಿದ್ದರು.

ಅಕ್ಟೋಬರ್‌ 3ರಂದು ಬನ್ವೀಪುರದಲ್ಲಿ ಆಯೋಜಿಸಿದ್ದ ಸ್ಥಳೀಯ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಉಪಮುಖ್ಯಮಂತ್ರಿ ಕೇಶವ್‌ ಪ್ರಸಾ‌ದ್ ಮೌರ್ಯ ಹಾಗೂ ಅಜಯ್‌ ಕುಮಾರ್‌ ಮಿಶ್ರಾ ತಿಕುನಿಯಾದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದರು. ಹೀಗಾಗಿ ಮಹಾರಾಜ ಅಕ್ರಸೇನ ಕಾಲೇಜು ಮೈದಾನದಲ್ಲಿ (ಹೆಲಿಪ್ಯಾಡ್‌ ಇರುವ ಸ್ಥಳ) ರೈತರು ಸೇರಿದ್ದರು.

ಅಂದು ಬೆಳಿಗ್ಗೆ 11.30ರ ವೇಳೆಗೆ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿ ಕುರಿತು ಅಂದು ಬೆಳಿಗ್ಗೆ ಹಾಜರಿದ್ದ ದಿಲ್ಬಾಗ್‌ ಸಿಂಗ್‌ ಹೇಳಿಕೆ ನೀಡಿದ್ದು, “ಮಿಶ್ರಾ ಮತ್ತು ಮೌರ್ಯ ಆಗಮಿಸುವ ಮೊದಲ ಜಿಲ್ಲಾಧಿಕಾರಿಯವರು, ತಮ್ಮ ಪ್ರತಿಭಟನೆಯನ್ನು ಸದರಿ ಸ್ಥಳದಲ್ಲಿಯೇ ಮುಂದುವರಿಸಬಹುದು, ಶ್ರೀಯುತ ಮಿಶ್ರಾ ಮತ್ತು ಮೌರ್ಯ ಈ ಕಾರ್ಯಕ್ರಮಕ್ಕೆ ಹಾಜರಾಗಲು ಬೇರೆ ಮಾರ್ಗವನ್ನು ಅನುಸರಿಸಲಿದ್ದಾರೆ ಎಂದು ರೈತರಿಗೆ ಹೇಳಿದರು” ಎಂದಿದ್ದಾರೆ.

ಹಾಗಾಗಿ, ಅವರಿಬ್ಬರು ಹೆಲಿಕಾಪ್ಟರ್ ಮೂಲಕ ಬಾರದೆ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಿದರು. ಸಚಿವರು ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಕಾರ್ಯಕ್ರಮಕ್ಕೆ ಹಾಜರಾದರು. ಅದು ಮಧ್ಯಾಹ್ನದ ವೇಳೆಗೆ ಕಾರ್ಯಕ್ರಮ ಕೊನೆಗೊಂಡಿತು.

ಇದನ್ನೂ ಓದಿರಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆ ನಡೆಸಲು ವಕೀಲರ ಪತ್ರ

ಮಧ್ಯಾಹ್ನ ನಾಲ್ಕು ಗಂಟೆಯಾದರೂ ಪ್ರತಿಭಟನೆಯನ್ನು ಕಾಲೇಜು ಆವರಣದಲ್ಲಿ ರೈತರು ಮುಂದುವರಿಸಿದರು. ವಿಶ್ರಾ ಮತ್ತು ಮೌರ್ಯ ಬಾರದಿದ್ದಾಗ ರೈತರು ಹಿಂತಿರುಗಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೋಗ್ಮಿತ್ತಲ್‌ ಸಿಂಗ್‌ ಹೇಳುತ್ತಾರೆ: “ಎಲ್ಲರೂ ಸ್ವಲ್ಪ ನಿರಾಳವಾಗಿದ್ದರು. ಲಂಗರ್ ಹಾಕಲಾಗಿತ್ತು. ಎಲ್ಲರೂ ಆಹಾರ ಸೇವಿಸುವುದರಲ್ಲಿ ನಿರತರಾಗಿದ್ದರು. ಊಟ ಮಾಡಿದವರು ಹೊರಡಲು ಆರಂಭಿಸಿದರು. ನಂತರ, ನಮ್ಮತ್ತ ಒಂದು ಫಾರ್ಚೂನರ್, ಒಂದು ಸ್ಕಾರ್ಪಿಯೋ ಮತ್ತು ಒಂದು ಥಾರ್ ಅತಿವೇಗವಾಗಿ ನಮ್ಮ ಕಡೆಗೆ ಬರುತ್ತಿರುವುದನ್ನು ನೋಡಿದೆವು. ಜನರ ಸಮೀಪ ಬರುತ್ತಿದ್ದರೂ ಆ ಮೂರು ವಾಹನಗಳು ನಿಧಾನವಾಗಲೇ ಇಲ್ಲ.”

“ಕೆಲವು ರೈತರು ತಕ್ಷಣಕ್ಕೆ ಬದಿಗೆ ಸರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ವಾಹನಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡರು. ವಾಹನಗಳು ನಿಧಾನವಾಗಲೇ ಇಲ್ಲ. ದೇಹಗಳನ್ನು ರಸ್ತೆಯ ಉದ್ದಕ್ಕೂ ಎಳೆದೋಯ್ದವು. ಅಷ್ಟರಲ್ಲಿ, ಫಾರ್ಚೂನರ್ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಬಿದ್ದಿತು. ಇನ್ನೊಂದು ವಾಹನದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಲು ಆರಂಭಿಸಿದರು. ತುಂಬಾ ಧೂಳು ಇತ್ತು, ಆರಂಭದಲ್ಲಿ ಏನಾಗುತ್ತಿದೆ ಎಂದು ನೋಡಲು ಕಷ್ಟವಾಗಿತ್ತು” ಎನ್ನುತ್ತಾರೆ ಜೋಗ್ಮಿತ್ತಲ್ ಸಿಂಗ್‌.

ಮುಂದುವರಿದು ಹೇಳುತ್ತಾರೆ: “ಒಬ್ಬಾತ ಸಾವಿಗೀಡಾದರು, ಒಬ್ಬಾತ ಸಾವಿಗೀಡಾದರು” ಎಂದು ಎಲ್ಲರೂ ಕೂಗಾಡಲು ಶುರುಮಾಡಿದರು. ಒಂದು ವಾಹನ ನಿಯಂತ್ರಣ ಕಳೆದುಕೊಂಡು ಮಗುಚಿಬಿತ್ತು. ಆಗ ಬಂದೂಕಿನ ಸುರುಮಳೆಯಾಯಿತು. ಒಬ್ಬಾತ ದೇವಾಲಯ ಬಳಿ ಗುಂಡಿಗೆ ಬಲಿಯಾದ ಹಾಗೂ ಬಂದೂಕಿನ ಶಬ್ದವನ್ನು ನಾನು ಆಲಿಸಿದೆ” ಎಂದಿದ್ದಾರೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ಗುರುಸೇವಕ್‌ ಸಿಂಗ್‌ ಮಾತನಾಡಿ, “ಒಂದು ವಾಹನದಲ್ಲಿದ್ದವರು ಓಡಲು ಆರಂಭಿಸಿದಾಗ ಬಂದೂಕು ಬಳಸಲು ಆರಂಭಿಸಿದರು. ಗಾಯಗೊಂಡವರನ್ನು ರಕ್ಷಿಸಲು ರೈತರು ಯತ್ನಿಸಿದರು. ಆದರೆ ಬಂದೂಕಿನ ಮಳೆಗರೆಯುವುದು ಮುಂದುವರಿದಾಗ ಎಲ್ಲರೂ ಸುಮ್ಮನೇ ನೋಡುತ್ತಾ ಇರಬೇಕಾಯಿತು. ಪ್ರತಿಭಟನೆಯ ಕಾರಣ ಸ್ಥಳದಲ್ಲಿದ್ದ ಪೊಲೀಸರೂ ಓಡಲಾರಂಭಿಸಿದರು” ಎಂದು ಹೇಳಿದ್ದಾರೆ.

ವಾಹನ ಉರುಳಿತು. ಇಬ್ಬರು ಬಿಜೆಪಿ ಕಾರ್ಯಕರ್ತರು, ವಾಹನ ಚಾಲಕ ಸೇರಿ ಮೂವರು ಸಾವನ್ನಪಿದರು. ರೊಚ್ಚಿಗೆದ್ದ ರೈತರು ವಾಹನ ಚಾಲಕನಿಗೆ ಹೊಡೆದರು. ಭಾನುವಾರ ಆಶೀಶ್‌ ಮಿಶ್ರಾ ಅಲ್ಲಿದ್ದನ್ನು ಅನೇಕರು ಗುರುತಿಸಿದ್ದಾರೆ. ಎಲ್ಲರಿಗೂ ಆತ ಯಾರೆಂಬುದು ಗೊತ್ತಿತ್ತು. ಆತ ಮಂತ್ರಿಯ ಮಗ ಎಂಬುದು ತಿಳಿದಿತ್ತು ಎನ್ನಲಾಗಿದೆ.

ಮತ್ತೊಬ್ಬ ಪ್ರತ್ಯಕ್ಷದರ್ಶಿ ತಲ್ವೀರ್‌ ಸಿಂಗ್‌ ಹೇಳಿಕೆ ನೀಡಿದ್ದು, “ರೈತರ ಮೇಲೆ ನುಗ್ಗಿದ ಒಂದು ಕಾರನ್ನು ಆಶೀಶ್‌ ಚಾಲನೆ ಮಾಡುತ್ತಿದ್ದ. ಆಶೀಶ್‌ ಓಡುತ್ತಾ ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಹಲವರು ನೋಡಿದ್ದಾರೆ” ಎಂದಿದ್ದಾರೆ.

ಆಶೀಶ್‌ ಪಿಸ್ತೂಲ್‌ ತುಂಬುತ್ತಿರುವ ವಿಡಿಯೋಕ್ಲಿಪ್‌ಅನ್ನು ಪ್ರತ್ಯಕ್ಷದರ್ಶಿಗಳು ನ್ಯೂಸ್‌ಲ್ಯಾಂಡ್ರಿಗೆ ತೋರಿಸಿದ್ದಾರೆ. “ಅಂದು ಮಧ್ಯಾಹ್ನ ಮೂರು ಗಂಟೆಯ ವೇಳೆಯಲ್ಲಿ ಘಟನೆ ನಡೆಯುವ ಮುನ್ನ, ಘಟನಾ ಸ್ಥಳದಿಂದ ಮೂರು ಕಿ.ಮೀ. ದೂರದ ರೈಸ್‌ಮಿಲ್‌ ಬಳಿಯಿಂದ ಫೇಸ್‌ಬುಕ್ ಲೈವ್ ಆಗಿದೆ” ಎನ್ನುತ್ತಾರೆ ಗುರ್‌ಸೇವಕ್‌ ಸಿಂಗ್‌.

“ಆದರೆ ಈ ವಿಡಿಯೋ ಕ್ಲಿಪ್ ಬ್ಲರ್‌ ಆಗಿದ್ದು, ಆದರೆ ವಿಡಿಯೋದಲ್ಲಿರುವುದು ಆಶೀಶ್‌ ಎಂದು ಅನೇಕ ಸ್ಥಳೀಯರು ಗುರುತಿಸಿದ್ದಾರೆ. ಈ ವ್ಯಕ್ತಿ ಆಶೀಶ್‌ ಆದರೂ ಆತ ಪಿಸ್ತೂಲು ಹಿಡಿದಿದ್ದ ಎಂಬುದನ್ನು ಗುರುತಿಸಲಾಗಿಲ್ಲ ಎಂದು ನ್ಯೂಸ್‌ಲ್ಯಾಂಡ್ರಿ ವರದಿ ಮಾಡಿದೆ. ಆದರೆ ಘಟನಾ ಸ್ಥಳದಲ್ಲಿ ಆಶೀಶ್‌ ಇರಲಿಲ್ಲ ಎಂಬ ವಾದವನ್ನು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅಲ್ಲಗಳೆಯುತ್ತವೆ.

ಕೃಪೆ: ನ್ಯೂಸ್‌ಲ್ಯಾಂಡ್ರಿ

 ಇದನ್ನೂ ಓದಿರಿ: #भाजपा_के_आतंकवादी | ‘ಬಿಜೆಪಿ ಭಯೋತ್ಪಾದಕರು’ – ಟ್ವಿಟರ್‌‌‌ ಟ್ರೆಂಡ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...