Homeಕರ್ನಾಟಕPower TV ಬೆಂಬಲಕ್ಕೆ ನಿಂತ ಜನತೆ: ಮುಖ್ಯಮಂತ್ರಿಗೆ ಪತ್ರ ಬರೆದ ಕಾರ್ಯನಿರತ ಪತ್ರಕರ್ತರ ಸಂಘ

Power TV ಬೆಂಬಲಕ್ಕೆ ನಿಂತ ಜನತೆ: ಮುಖ್ಯಮಂತ್ರಿಗೆ ಪತ್ರ ಬರೆದ ಕಾರ್ಯನಿರತ ಪತ್ರಕರ್ತರ ಸಂಘ

ಟ್ವಿಟ್ಟರ್‌ನಲ್ಲಿ #StandwithpowerTv ಟ್ರೆಂಡ್ ಆಗುತ್ತಿದ್ದು, ಹಲವಾರು ಜನರು ಸರ್ಕಾರದ ನಡೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಮುಖ್ಯಮಂತ್ರಿ ಕುಟುಂಬದ ಭ್ರಷ್ಟಾಚಾರದ ಕುರಿತು ನಿರಂತರ ವರದಿ ಮಾಡಿದ್ದ ಪವರ್‌ ಟಿವಿ ಕನ್ನಡ ಸುದ್ದಿ ವಾಹಿನಿಯ ಲೈವ್‌ ಬಂದ್‌ ಮಾಡಿರುವುದನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿದೆ.

ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಬರೆದ ಪತ್ರದಲ್ಲಿ, “ಪವರ್ ಟಿವಿ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ, ಅದಕ್ಕೆ ತನಿಖೆ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಟಿವಿ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮ ಅಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿಗಳ ದಾಳಿಗೆ ಬಗ್ಗುವುದಿಲ್ಲ, ಪವರ್ ಟಿವಿ ಪುಟಿದೇಳಲಿದೆ: ರಹಮಾನ್ ಹಾಸನ್

“ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುದರಿಂದ ಅದನ್ನು ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ತಾವು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ, ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿಸಿಕೊಳ್ಳುತ್ತೇವೆ” ಸಂಘವು ತನ್ನ ಪತ್ರದಲ್ಲಿ ಹೇಳಿದೆ.

ಬಿ.ವೈ ವಿಜಯೇಂದ್ರ ಭ್ರಷ್ಟಾಚಾರ ನಡೆಸಿದ್ದಾರೆಂದು ಕಳೆದ ಹಲವು ದಿನಗಳಿಂದ ದಾಖಲೆ ಸಹಿತ ಸತತವಾಗಿ ವರದಿ ಮಾಡಿ ರಾಜ್ಯದ ಗಮನ ಸೆಳೆದಿದ್ದ ಕನ್ನಡದ ಸುದ್ದಿ ಮಾಧ್ಯಮ “Power TV”ಯ ಪ್ರಸಾರವನ್ನು ನಿನ್ನೆ ರಾತ್ರಿಯಿಂದ ತಡೆಹಿಡಿಯಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಕೂಡಾ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಲವಾರು ಕಡೆ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ತಯಾರಿಗಳು ನಡೆಯುತ್ತಿವೆ.

ಇದನ್ನೂ ಓದಿ: ಸಿಎಂ ಮಗನ ಭ್ರಷ್ಟಾಚಾರ ಬಯಲು: ಪವರ್‌ ಟಿವಿ ಪ್ರಸಾರಕ್ಕೆ ತಡೆ!

ಕನ್ನಡ ಚಿತ್ರನಟ, ಚಿಂತಕ ಚೇತನ್, “1975 ರಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿದ್ದರು, ಮಾಧ್ಯಮದವರನ್ನು ನಿಶ್ಶಬ್ದಗೊಳಿಸಲಾಗಿತ್ತು ಮತ್ತು 250 ಜನ ಪತ್ರಕರ್ತರನ್ನು ಜೈಲಿಗಟ್ಟಲಾಗಿತ್ತು. ಕರಾಳ ಸಮಯ. ಈಗ ಕರ್ನಾಟಕದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಮುಖ್ಯಮಂತ್ರಿಯ ಕುಟುಂಬದವರಿಂದ ನಡೆದಿದೆ ಎನ್ನಲಾದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕೆ, ಬಿಜೆಪಿ ಮತ್ತು ಸಿ.ಸಿ.ಬಿ ಸೇರಿ ಪವರ್ ಟೀವಿಯನ್ನು ಮುಚ್ಚಲಾಗಿದೆ. ಎಲ್ಲಾ ಮಾಧ್ಯಮಗಳು ಒಂದಾಗಬೇಕು, ಮತ್ತು ಮಾಧ್ಯಮಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಹಿರಿಯ ಪತ್ರಕರ್ತ ಶಶಿಧರ ಹೆಮ್ಮಾಡಿ, “ಬೆಂಗಳೂರು ಟೆರರ್ ಹಬ್ ಎಂದು ಒಬ್ಬ ಬಿಜೆಪಿ ಎಂಪಿ ಹೇಳುತ್ತಾನೆ. ಅವನದೇ ಪಕ್ಷದ ಸರ್ಕಾರ ಸ್ವತಃ ತಾನೇ ಭಯೋತ್ಪಾದಕ ಸರ್ಕಾರ ಎನ್ನುವುದನ್ನು ಸಾಬೀತುಪಡಿಸಿದ ಮೇಲೆ ಆ ಎಂಪಿ ಹೇಳುವುದರಲ್ಲಿ ವಿಶೇಷವೇನೂ ಇಲ್ಲ. ಪವರ್ ಟಿವಿಯಂತಹ ಒಂದು ಚಾನಲ್ ಅನ್ನೇ ಈ ಭಯೋತ್ಪಾದಕ ಸರ್ಕಾರ ಬಂದ್ ಮಾಡುತ್ತದೆ ಎಂದರೆ ಇದು ತುರ್ತು ಸ್ಥಿತಿಗೂ ಕರಾಳ. ಈ ಸಂದರ್ಭದಲ್ಲಿ ಪವರ್ ಟಿವಿಯ ಪರ ಮತ್ತು ಸರ್ಕಾರದ ಈ ಭಯೋತ್ಪಾದಕ ನೀತಿಯ ವಿರುದ್ಧ ನಿಲ್ಲದ ಮಾಧ್ಯಮದ ಮಂದಿ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರನ _______ ನೆಕ್ಕುವುದೇ ಅತ್ಯಂತ ಸೂಕ್ತ. ಈ ದುಷ್ಟ ಸರ್ಕಾರಕ್ಕೆ ಧಿಕ್ಕಾರವಿರಲಿ. ನಾನು ಪವರ್ ಟಿವಿಯ ಜೊತೆ” ಎಂದು ತಮ್ಮ ಫೇಸ್‌ಬುಕ್‌‌ನಲ್ಲಿ ಬರೆದಿದ್ದಾರೆ.

ಬೆಂಗಳೂರು ಟೆರರ್ ಹಬ್ ಎಂದು ಒಬ್ಬ ಬಿಜೆಪಿ ಎಂಪಿ ಹೇಳುತ್ತಾನೆ. ಅವನದೇ ಪಕ್ಷದ ಸರ್ಕಾರ ಸ್ವತಃ ತಾನೇ ಭಯೋತ್ಪಾದಕ ಸರ್ಕಾರ ಎನ್ನುವುದನ್ನು…

Posted by Shashidhar Hemmady on Monday, September 28, 2020

ಹೋರಾಟಗಾರ್ತಿ ಭಾರತಿ ಪ್ರಶಾಂತ್‌, “#PowerTV ಯವರು ವಿಜಯೇಂದ್ರನ ಬಗ್ಗೆ ಇನ್ನೇನು ಹೇಳಬೇಕಾಗಿಲ್ಲ. ನಿಮ್ಮ ಚಾನೆಲನ್ನು ಮುಚ್ಚಿಸಿದಾಗಲೆ ಜನತೆಗೆ ಅವರ ಭ್ರಷ್ಟಾಚಾರದ ಸ್ಟಷ್ಟತೆ ಸಿಕ್ಕಿತು. ಹೆಗಲು ಮುಟ್ಟಿ ನೋಡಿದ ಕುಂಬಳಕಾಯಿ ಕಳ್ಳ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾದಂಬರಿಗಾರ ಕಾರ್ತಿಕಾದಿತ್ಯ ಬೆಳಗೋಡ್‌‌, “ಯಡಿಯೂರಪ್ಪನವರ ಮಗ ಪ್ರಶ್ನಾತೀತರಾ!? ಪವರ್ ಟಿವಿ ಸುಳ್ಳು ವರದಿ ಪ್ರಸಾರ ಮಾಡಿದ್ದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ. ಅದನ್ನು ಬಿಟ್ಟು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಡುವ ಕೆಲಸ ಯಡಿಯೂರಪ್ಪನವರಿಗಂತೂ ಶೋಭೆಯಲ್ಲ. ಈ ಕೆಟ್ಟ ಬೆಳವಣಿಗೆಯ ಬಗ್ಗೆ ನಮ್ಮ ‘ನಾ ಖಾವೂಂಗಾ ನಾ ಖಾನೇದೂಂಗಾ’ ಪ್ರಧಾನಿಗಳು ಏನು ಕ್ರಮ ಕೈಗೊಳ್ಳುತ್ತಾರೋ ನೋಡಬೇಕು” ಎಂದು ಬರೆದಿದ್ದಾರೆ.

ಪವರ್ ಟಿವಿಯನ್ನು ರಾತ್ರೋ ರಾತ್ರಿ ಮುಚ್ಚಿಸಿರುವುದು ನಿಜಕ್ಕೂ ಆತಂಕಕಾರಿ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದ ದೌರ್ಜನ್ಯ. ಒಂದು ವರದಿಯ…

Posted by Kartikaditya Belgodu on Monday, September 28, 2020

ಇಷ್ಟೆ ಅಲ್ಲದೆ ಟ್ವಿಟ್ಟರ್‌ನಲ್ಲಿ #StandwithpowerTv ಟ್ರೆಂಡ್ ಆಗುತ್ತಿದೆ. ಹಲವಾರು ಜನರು ಸರ್ಕಾರದ ನಡೆಯ ವಿರುದ್ದ ಧ್ವನಿ ಎತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಪುತ್ರನ ಭ್ರಷ್ಟಾಚಾರದ ಬಗ್ಗೆ ನಿರಂತರ ವರದಿ ಮಾಡಿದ ಪವರ್‌ ಟಿವಿ MD ಮನೆ ಮೇಲೆ ಪೊಲೀಸರ ದಾಳಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...