Homeಮುಖಪುಟಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In...

ಬಾಬರಿ ಮಸೀದಿ ಧ್ವಂಸ ದಿನ: ರಾಮ್‌ ಕೆ ನಾಮ್ | ರಾಮನ ಹೆಸರಿನಲ್ಲಿ | In the name of God | ಸಾಕ್ಷ್ಯಚಿತ್ರ ನೋಡಿ

ದೇಶದ ಕೋಮು ಸೌಹಾರ್ದವನ್ನು ಒಡೆಯಲು ಬಿಜೆಪಿ ಬೆಂಬಲಿತ ಸಂಘಟನೆಗಳು ಏನೆಲ್ಲಾ ಮಾಡಿತ್ತು ಎಂಬುವುದನ್ನು ಈ ಸಾಕ್ಷ್ಯಚಿತ್ರ ಶೋಧಿಸುತ್ತದೆ ಮತ್ತು ಅದನ್ನು ಹಿಂದಿ, ಬಂಗಾಳಿ ಮತ್ತು ಮಲಯಾಳಂ ಭಾಷೆಯಲ್ಲಿ ನೀವು ವೀಕ್ಷಿಸಬಹುದಾಗಿದೆ.

- Advertisement -
- Advertisement -

ಬಾಬರಿ ಮಸೀದಿ ಒಡೆದು ಇಂದಿಗೆ 29 ವರ್ಷಗಳಾಯಿತು. ಐತಿಹಾಸಿಕ ಮಸೀದಿ ಒಡೆಯುವುದರೊಂದಿಗೆ ದೇಶದ ಕೋಮು ಸೌಹಾರ್ದತೆಯನ್ನು ಕೂಡಾ ಒಡೆಯಲಾಯಿತು. ಮಸೀದಿ ಒಡೆದ ನಂತರ ದೇಶದಾದ್ಯಂತ ನಡೆದ ಕೋಮು ಗಲಭೆಯಲ್ಲಿ ಸುಮಾರು 2000 ಜನರು ಮೃತರಾದರು. ಇದೀಗ ಮಸೀದಿ ಒಡೆದ ಸ್ಥಳದಲ್ಲಿ ಬೇರೆಯೆ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.

ಬಾಬರಿ ಮಸೀದಿ ಒಡೆಯಲು ಬೇಕಾಗಿ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳ ಗುಂಪು ಏನೆಲ್ಲಾ ನಡೆಸಿತು ಎಂದು ಹಿರಿಯ ಚಲನಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್‌ 1992 ರಲ್ಲಿ ‘ರಾಮ್‌ ಕೆ ನಾಮ್’(ರಾಮನ ಹೆಸರಿನಲ್ಲಿ) ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.

ಅಯೋಧ್ಯೆಯ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಲಪಂಥೀಯ ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಎಚ್‌ಪಿ ನಡೆಸಿದ ಅಭಿಯಾನ ಮತ್ತು ಅದು ಪ್ರಚೋದಿಸಿದ ಕೋಮು ಹಿಂಸಾಚಾರವನ್ನು ಈ ಚಲನಚಿತ್ರವು ಪರಿಶೋಧಿಸುತ್ತದೆ. ರಾಮ್ ಕೆ ನಾಮ್ (ಇಂಗ್ಲಿಷ್: ಇನ್ ದಿ ನೇಮ್ ಆಫ್ ಗಾಡ್) ಭಾರತೀಯ ಚಲನಚಿತ್ರದಲ್ಲಿ ಒಂದು ಪ್ರಮುಖ ಮೈಲಿಗಲ್ಲಿನ ಚಿತ್ರವಾಗಿದೆ. ರಾಮ್ ಕೆ ನಾಮ್ ಬಿಡುಗಡೆಯಾದ ಒಂದೆರಡು ತಿಂಗಳ ನಂತರ, ವಿಎಚ್‌ಪಿ ಮತ್ತು ಇತರ ಆರೆಸ್ಸೆಸ್‌ ಮತ್ತು ಬಿಜೆಪಿ ಬೆಂಬಲಿತ ಗುಂಪುಗಳ ಕಾರ್ಯಕರ್ತರು 1992 ರಲ್ಲಿ ಬಾಬರಿ ಮಸೀದಿಯನ್ನು ಕೆಡವಿದರು.

ಈ ಚಿತ್ರವು ಆನಂದ್‌ ಪಟವರ್ಧನ್‌ಗೆ ವ್ಯಾಪಕ ಮನ್ನಣೆಯನ್ನು ತಂದುಕೊಟ್ಟಿತು ಮತ್ತು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು. ಈ ಪ್ರಸಿದ್ದ ಸಾಕ್ಷ್ಯಚಿತ್ರವನ್ನು ನಾನುಗೌರಿ.ಕಾಂ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ. ಹಿಂದಿ, ಬಂಗಾಳಿ ಮತ್ತು ಮಲಯಾಳಂ ಭಾಷೆಯಲ್ಲಿ ನೀವು ಅದನ್ನು ವೀಕ್ಷಿಸಬಹುದಾಗಿದೆ.

ಹಿಂದಿ ಭಾಷೆಯಲ್ಲಿ ‘ರಾಮ್‌ ಕೆ ನಾಮ್‌’ ಚಿತ್ರ, ಇಂಗ್ಲಿಷ್‌ ಸಬ್‌ಟೈಟಲ್‌ನೊಂದಿಗೆ.

ಮಲಯಾಳಂ ಭಾಷೆಯಲ್ಲಿ ‘ರಾಮ್‌ ಕೆ ನಾಮ್‌’ ಚಿತ್ರ, ಮಳಯಾಳಂ ಸಬ್‌ಟೈಟಲ್‌ನೊಂದಿಗೆ. (ಈ ಮಲಯಾಳಂ ಆವೃತ್ತಿಯನ್ನು 2010 ರಲ್ಲಿ ದುರಂತ ಅಪಘಾತದಲ್ಲಿ ನಿಧನರಾದ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ಹೋರಾಟಗಾರ ಸಿ.ಶರತ್ಚಂದ್ರನ್ ಅವರು ಮಾಡಿದ್ದಾರೆ)

ಬಂಗಾಳಿ ಭಾಷೆಯಲ್ಲಿ ‘ರಾಮ್‌ ಕೆ ನಾಮ್‌’ ಚಿತ್ರ, ಬಂಗಾಳಿ ಸಬ್‌ಟೈಟಲ್‌ನೊಂದಿಗೆ. (ಈ ಆವೃತ್ತಿಯನ್ನು ಕೊಂಕಣ್‌ ಸೇನ್‌ ಅವರು ಮಾಡಿದ್ದಾರೆ. ಸಬ್‌ಟೈಟಲ್‌ಗಳು ಕೆಲವು ದೋಷಗಳನ್ನು ಹೊಂದಿವೆ.)

ಹಿಂದಿ ಭಾಷೆಯಲ್ಲಿ ಇಂಗ್ಲಿಷ್‌ ಸಬ್‌ಟೈಟಲ್‌ನೊಂದಿಗೆ(ಸ್ಟಾಂಡ್‌ ಅಪ್‌ ಹಾಸ್ಯನಟ ಕುನಾಲ್‌ ಕಮ್ರಾ ಅವರ ಯೂಟ್ಯೂಬ್ ಚಾನೆಲ್‌ನಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...