Homeಮುಖಪುಟಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

- Advertisement -
- Advertisement -

ಕಳೆದ ಒಂದು ದಶಕದಿಂದ ನಾವೆಲ್ಲರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಮತಿ ಎಂಬುದರ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ ಮತ್ತು ಓದುತ್ತಿದ್ದೇವೆ. ಈ ಚರ್ಚೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇನ್ನಷ್ಟು ಚುರುಕು ಪಡೆದಿರುವುದೂ ನಿಜ. ವಿಜ್ಞಾನ ಮತ್ತು ತಂತ್ರಜ್ಞಾನ ಯಾವೆಲ್ಲ ರೀತಿ ಮಾನವನ ಜೀವನ ಸುಗಮಗೊಳಿಸಬಹುದು ಮತ್ತು ಅದ್ಭುತಗಳನ್ನು ಸೃಸ್ಟಿಸಬಹುದು ಎಂಬುದು ಬಹು ಚರ್ಚಿತ ವಿಷಯವಾಗಿಯೇ ಉಳಿದಿದೆ. ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಮತಿ ಅಥವಾ ಬುದ್ಧಿಮತ್ತೆ ಯಂತ್ರಗಳಲ್ಲಿ ಇರುವುದಿಲ್ಲ ಎಂಬುದು ಈಗ ಸಾಮಾನ್ಯ ನಂಬಿಕೆಯಾಗಿ ಉಳಿದಿಲ್ಲ. ಮಾನವ ಯಂತ್ರಗಳಿಗೂ ತನ್ನದೇ ಆದ ಕೃತಕ ಮತಿ ಸೃಷ್ಟಿಸುವಲ್ಲಿ ಸಫಲವಾಗಿದ್ದಾನೆ ಮತ್ತು ಇದನ್ನೇ ಜನಪ್ರಿಯ ಮಾತುಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಎನ್ನುತ್ತಾರೆ. ಇಂದು ಎಷ್ಟೋ ಸಾಮಾನ್ಯ ನಾಗರಿಕರು ಬಳಸುವ ಸಲಕರಣಗಳಲ್ಲಿ ಎಐ ಹಾಸುಹೊಕ್ಕಿದೆ. ಇದರಿಂದ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಪ್ರಯೋಜನವಿದೆಯೇ? ಅಥವಾ ಪ್ರತಿ ನಾಗರಿಕನ ಗೌಪ್ಯತೆಗೆ ಯಾವುದೇ ಬೆಲೆ ಕೊಡದೆ, ಮಾಹಿತಿ ತಂತ್ರಜ್ಞಾನ ಸೃಷ್ಟಿಸುತ್ತಿರುವ ಡಿಜಿಟಲ್ ಕಣ್ಗಾವಲಿನ ಡಿಸ್ಟೋಪಿಯಾದ ಮುಂದುವರೆದ ಅಧ್ಯಾಯವೇ? ಸದ್ಯದ ಪರಿಸ್ಥಿತಿಯಲ್ಲಿ ಇದರ ಪ್ರಯೋಜನ ಆರೋಗ್ಯ ಕ್ಷೇತ್ರದಲ್ಲಿ ಎಷ್ಟಿದೆ ಮತ್ತು ಈ ಕೃತಕ ಮತಿಯ ಮಿತಿಗಳೇನು ಎಂಬ ಪ್ರಶ್ನೆಗಳು ಎದ್ದಿರುವಾಗ ಇದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಹಿಂದಿಗಿಂತಲೂ ಈಗ ಹೆಚ್ಚಿದೆ.

ಜಾನ್ ಮಕ್ಕಾರ್ತಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪದವನ್ನು ಮೊದಲು ಜಾನ್ ಮಕ್ಕಾರ್ತಿ ಎಂಬುವವರು 1956ರಲ್ಲಿ ಬಳಸಿದ್ದಾದರೂ ಇದನ್ನು ಮೊದಲು ಜಗತ್ತಿಗೆ ಪರಿಚಯಿಸಿದ್ದು ಅಲನ್ ಟ್ಯೂರಿಂಗ್ ಎಂಬ ಗಣಿತಜ್ಞ ಮತ್ತು ಕಂಪ್ಯೂಟರ್ ತರ್ಕವನ್ನು ಪರಿಚಯಿಸಿದ ವಿಜ್ಞಾನಿ. ಇಲ್ಲಿಂದ ಮನುಷ್ಯನ ಮತಿಯ ಮಿತಿಗಳನ್ನು ಕೃತಕ ಮಿತಿ ಒಂದೊಂದಾಗಿ ಮೀರುತ್ತಾ ಸಾಗಿದೆ. ವಿಜ್ಞಾನ ಜಗತ್ತಿನ ಹೊಸಹೊಸ ಆವಿಷ್ಕಾರಗಳು ತಾನು ನೀಡುತ್ತಿರುವ ತಿರುವುಗಳಿಂದ ಮಾನವ ಸಮಾಜವನ್ನು ಮುನ್ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಕೃತಕ ಮತಿ ಎಂಬ ಹೊಸ ಆಯಾಮದ ವಿಜ್ಞಾನ ಕಳೆದ ಏಳೆಂಟು ದಶಕಗಳಿಂದ ಬೃಹತ್ತಾಗಿ ಬೆಳೆಯುತ್ತಾ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಆವರಿಸಿಕೊಂಡಿರುವುದಷ್ಟೇ ಅಲ್ಲದೆ ನಮ್ಮ ಜೀವನದ ಒಂದು ಭಾಗವಾಗಿ ಬೆಳೆದು ನಿಂತಿದೆ. ಮೊದಲಿಗೆ ಬಹಳ ಸರಳವಾದ ಕೆಲಸಗಳನ್ನು ಮಾಡುತ್ತಿದ್ದ ತಂತ್ರಜ್ಞಾನ ಈಗ ಮುಖ ಗುರುತಿಸುವಿಕೆ, ಕಂಪ್ಯೂಟರ್ ದೃಷ್ಟಿ, ಬಯೋಮೆಟ್ರಿಕ್ಸ್, ನಿಗಾವಹಿಸುವುದು, ಮುಂದೆ ನಡೆಯುವುದನ್ನು ಮೊದಲೇ ಪ್ರೆಡಿಕ್ಟ್ ಮಾಡುವುದು ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಅಪ್ಲಿಕೇಶನ್‌ಗಳಿಗೆ ಕೃತಕ ಮತಿಯನ್ನು ಅನ್ವಯಿಸುವುದರಿಂದ ದೂರಗಾಮಿ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ. ಹಣಕಾಸು, ಔಷಧ, ಆರೋಗ್ಯ, ಇ-ಕಾಮರ್ಸ್, ಸಂಚಾರ, ಉತ್ಪಾದನೆ, ನಿರ್ವಹಣೆ ಮತ್ತು ಸಾರ್ವಜನಿಕ ಭದ್ರತೆ ಸೇರಿದಂತೆ ಇತರೆ ಅನೇಕ ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ.

ಕಳೆದ ಒಂದೂವರೆ ದಶಕದಿಂದಲೂ ಈ ಕೃತಕ ಮತಿ ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಗಣನೀಯವಾಗಿ ಬೆಳೆಸಿಕೊಳ್ಳುತ್ತಾ ಬಂದಿದೆ. ಅದಕ್ಕೆ ಅಮೆರಿಕ ಮತ್ತು ಯೂರೋಪ್ ಖಂಡಗಳಲ್ಲಿ ಆಗುತ್ತಿರುವ ಡಿಜಿಟಲ್ ರೂಪಾಂತರದ ಬೆಳವಣಿಗೆಗಳೂ ಒಂದು ಬಹುಮುಖ್ಯ ಕಾರಣ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಇದರ ವಿಸ್ತಾರ ಇನ್ನಷ್ಟು ಹೆಚ್ಚುತ್ತಾ ಸಾಗಿದೆ. ಇದರ ಬಗೆಗಿನ ಭರವಸೆಗಳು, ಸುರಕ್ಷತೆ, ಪ್ರಗತಿ, ಫಲಿತಾಂಶಗಳು, ಅಪಾಯ, ಮಿತಿಗಳು, ಜವಾಬ್ದಾರಿ ಹಾಗು ತಾಂತ್ರಿಕ ಮತ್ತು ನೈತಿಕ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಿದರೆ ಮಾತ್ರ ಕೃತಕ ಮತಿಯನ್ನು ಸರಿಯಾಗಿ ಬಳಸಬಹುದಾಗಿದೆ. ಈಗಿರುವ ಅಸಮಾನ ವ್ಯವಸ್ಥೆಯಲ್ಲಿ ಉಳ್ಳವರ ಸುಳ್ಳುಗಳು ಯಾವುದೇ ಪ್ರತಿರೋಧವಿಲ್ಲದ ಸಾಮಾನ್ಯ ಜ್ಞಾನವಾಗುತ್ತಿರುವಾಗ ಈಗ ಸೃಷ್ಟಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಈ ಆಯಾಮದ ಬಗ್ಗೆ ಎಚ್ಚರಿಕೆಯಿಂದಲೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

ಅಲನ್ ಟ್ಯೂರಿಂಗ್

ಕೃತಕ ಮತಿಯ ಈಗಿನ ಸಾಮರ್ಥ್ಯದಲ್ಲಿ ಅರೋಗ್ಯ ವ್ಯವಸ್ಥೆಯಲ್ಲಿ ರೋಗನಿರ್ಣಯ ಇಮೇಜ್ ಮತ್ತು ಸ್ಕ್ಯಾನಿಂಗ್, ಜೆನೆಟಿಕ್ ಅನಾಲಿಸಿಸ್, ಎಲೆಕ್ಟ್ರೋ ರೋಗನಿರ್ಣಯ, ರೋಗದ ನಿಖರ ಊಹೆ, ಔಷಧ ಉತ್ಪಾದನಾ ಪ್ರೋಸೆಸ್‌ನಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಈಗಿನ ಕೋವಿಡ್ ಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಮತ್ತು ಪ್ರೆಡಿಕ್ಷನ್ ಮಾಡುವ ಕ್ಷೇತ್ರದಲ್ಲಿ, ಔಷಧ ತಯಾರಿಕಾ ಕ್ಷೇತ್ರದಲ್ಲಿ ಬಹಳ ಹೆಚ್ಚಾಗಿ ಇದರಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಮುಖ್ಯ ಕ್ಷೇತ್ರಗಳೆಂದರೆ ಕ್ಯಾನ್ಸರ್, ಹೃದಯಾಘಾತ ಮತ್ತು ಕ್ಷಯ ರೋಗದ ಪ್ರೆಡಿಕ್ಷನ್. ಡಾಕ್ಟರ್ ಅಥವಾ ತಜ್ಞರಿಗಿಂತಲೂ ಹೆಚ್ಚು ಕರಾರುವಾಕ್ಕಾಗಿ, ನಿಖರವಾಗಿ ರೋಗದ ಆರಂಭಿಕ ಹಂತದಲ್ಲೇ ಪ್ರೆಡಿಕ್ಟ್ ಮಾಡಬಲ್ಲ ಸಾಮರ್ಥ್ಯವನ್ನು ಎಐ ಗಳಿಸಿಕೊಂಡಿದೆ. ಯಂತ್ರ-ಕಲಿಕೆ ಮತ್ತು deep learning ಕ್ರಮಾವಳಿಗಳು ಈಗಾಗಲೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಕ್ಯಾನ್ಸರ್‌ಗಾಗಿ ಮ್ಯಾಮೋಗ್ರಾಮ್‌ಗಳನ್ನು ಸ್ಕ್ರೀನಿಂಗ್ ಮಾಡಲು ನುರಿತು, ವೈದ್ಯರಿಗಿಂತ ರೋಗ ಸ್ಥಿತಿಗಳನ್ನು ಉತ್ತಮವಾಗಿ ಊಹಿಸುತ್ತವೆ ಎಂದು ತೋರಿಸಲಾಗಿದೆ. ಅಮೆರಿಕ ಎಫ್‌ಡಿಎ (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಈಗಾಗಲೇ ವೆಬ್ ಆಧಾರಿತ ಕೃತಕ ಮತಿಯ ವ್ಯವಸ್ಥೆಯನ್ನು ಅನುಮೋದಿಸಿದೆ. ಅದು ನವಜಾತ ಶಿಶುಗಳಲ್ಲಿ ಜನ್ಮಜಾತ ಹೃದಯ ವೈಪರೀತ್ಯಗಳ ನಿಖರವಾದ ಸ್ಥಳಗಳನ್ನು ಸುಮಾರು 10 ನಿಮಿಷಗಳಲ್ಲಿ ಪತ್ತೆ ಹಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದು ಮೂಡಿಸುತ್ತಿರುವ ಭರವಸೆ ಮತ್ತು ಸಾಮರ್ಥ್ಯ ಎಷ್ಟೇ ಇದ್ದರೂ ಸಾಮಾನ್ಯ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಸಕಾರಣವಾಗಿ ಸ್ಪಂದಿಸುತ್ತಿಲ್ಲ. ಕಳೆದ ದಶಕದಿಂದ ಇರುವ ’ಆರೋಗ್ಯ ವ್ಯವಸ್ಥೆಯನ್ನು ಬದಲಾಯಿಸಿಬಿಡುತ್ತದೆ’ ಎನ್ನುವ ಹೈಪ್ ಒಂದು ಕಡೆಯಾದರೆ, ಒಂದೆರಡು ಕ್ಷೇತ್ರಗಳಲ್ಲಾದರೂ ಎಐ ತಂತ್ರಜ್ಞಾನ ಸಾಮಾನ್ಯ ಜನರನ್ನು ಇನ್ನೂ ತಲುಪಿಲ್ಲ ಎಂಬುದು ಕೂಡ ನಿಜ. ಅಥವಾ ಈ ಎಲ್ಲಾ ಭರವಸೆಗಳು ಅಮೆರಿಕ ಅಥವಾ ಯೂರೋಪಿನ ಲ್ಯಾಬ್ ಮತ್ತು ಸಂಶೋಧನೆಗೆ ಮಾತ್ರ ಸೀಮಿತವೇ? ಇಲ್ಲವೇ ಉಳ್ಳವರಿಗಾಗಿ ಮಾಡುತ್ತಿರುವ ವ್ಯವಸ್ಥೆಯೇ? ಅಷ್ಟೇ ಅಲ್ಲದೆ ದತ್ತಾಂಶ ಹಕ್ಕುಗಳು ಮತ್ತು ದತ್ತಾಂಶ ಗೌಪ್ಯತೆಯ ಬಗ್ಗೆ ಯಾವುದೇ ತಿಳಿವಳಿಕೆ ಇನ್ನೂ ಸರಿಯಾಗಿ ಮೂಡಿಲ್ಲ. ಆ ನಿಟ್ಟಿನಲ್ಲಿ ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳು ಹಾಕುತ್ತಿರುವ ಎಫರ್ಟ್ ಬಗ್ಗೆ ಸದ್ದೇ ಇಲ್ಲ ಎನ್ನುವಂತಾಗಿದೆ. ಕೃತಕ ಮತಿಗೆ ಬೆರೆಯಬೇಕಾದ ಅಲ್ಗೊರಿಥಮ್ ಯಾರು ಬರೆಯುತ್ತಾರೆ ಮತ್ತು ಅದರಲ್ಲಿನ ಸೇರಿ ಹೋಗುವ ಮನುಷ್ಯನಲ್ಲಿರುವ ಪಕ್ಷಪಾತ/ತಾರತಮ್ಯ ಧೋರಣೆಯನ್ನು ಹೇಗೆ ಸರಿ ಮಾಡುತ್ತಾರೆ? ಇದರ ನಿಯಂತ್ರಣ ಯಾರ ಕೈಯಲ್ಲಿರುತ್ತದೆ? ಇದರ ಪರಿಣಾಮ ಮತ್ತು ದುಷ್ಪರಿಣಾಮಗಳ ಜವಾಬ್ದಾರಿ ಯಾರು ಹೊರುತ್ತಾರೆ? ಸಾಮಾಜಿಕ, ಆರ್ಥಿಕ ಮತ್ತು ಜನಾಂಗೀಯ ಪಕ್ಷಪಾತವನ್ನು ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆಯೆಂದರೆ ಅದಕ್ಕೆ ಯಾರು ಹೊಣೆ ಹೊರುತ್ತಾರೆ ಮತ್ತು ಅದಕ್ಕೆ ಪರಿಹಾರವೇನು? ಇವೆಲ್ಲದ್ದಕ್ಕಾಗಿ ಒಂದು ವಿಧಾನವನ್ನು ಖಾತ್ರಿಪಡಿಸಲಾಗದೆ ಹೋದರೆ ಎಷ್ಟರಮಟ್ಟಿಗೆ ಅದರ ದತ್ತಾಂಶ ಪಾರದರ್ಶಕವಾಗಿರುತ್ತದೆಯೇ? ಇವೆಲ್ಲದರ ಮೇಲೆ ಪ್ರಶ್ನೆಗಳು ಎದ್ದಿವೆಯಾದರು ಅದಕ್ಕೆ ಪೂರಕವಾದ ವಿಮರ್ಶೆ ಚರ್ಚೆಗಳು ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಈ ಚರ್ಚೆಗಳಲ್ಲಿ ಜನಸಾಮಾನ್ಯರು ಭಾಗಿಯಾಗಿರುವುದಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಭವಿಷ್ಯದ ಪರಿಣಾಮವು ನಕಾರಾತ್ಮಕಕ್ಕಿಂತ ಹೆಚ್ಚು ಧನಾತ್ಮಕವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಎಐ ಸಂಶೋಧಕರ ಜವಾಬ್ದಾರಿಯಾಗಿದ್ದರೂ, ನೀತಿಶಾಸ್ತ್ರಜ್ಞರು, ಆಡಳಿತ ವ್ಯವಸ್ಥೆಗಳ ನೀತಿ ನಿರೂಪಕರು ಮತ್ತು ತತ್ವಜ್ಞಾನಿಗಳು ಮೊದಲಿನಿಂದಲೂ ಅಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕು. ಇದಲ್ಲದೆ ಎಐ ಸಂಶೋಧನೆಯಲ್ಲಿ ಹೆಚ್ಚಾಗಿ ಹೂಡಿಕೆ ಮಾಡಿರುವುದು ದೊಡ್ಡ ದೊಡ್ಡ ಕಾರ್ಪೊರೆಟ್ ಕುಳಗಳು. ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್, ಟೆಸ್ಲಾ, ಆಪಲ್, ಫೇಸ್ಬುಕ್, ನ್ಯೂರಲಿಂಕ್, ಇಂಟೆಲ್ ಇನ್ನು ಇತ್ಯಾದಿ ದೈತ್ಯ ಕಂಪನಿಗಳು. ಇವುಗಳೆಲ್ಲವೂ ಮಾನವೀಯತೆಯ ನೆಲೆಯಲ್ಲಿ ಕೆಲಸ ಮಾಡುತ್ತವೆ ಮತ್ತು ಎಲ್ಲರಿಗೂ ಎಟುಕುವಂತಹ ಆರೋಗ್ಯವ್ಯವಸ್ಥೆ ರೂಪಿಸಲು ಪೂರಕವಾಗಿರುತ್ತವೆ ಎಂದು ಖಂಡಿತ ಹೇಳಲಾಗುವುದಿಲ್ಲ, ಬದಲಾಗಿ ತಮ್ಮ ಲಾಭಕೋರತನಕ್ಕಾಗಿ ಏನನ್ನಾದರೂ ಮಾಡಲು ಹಿಂಜರಿಯದ ಕಂಪನಿಗಳಿವು. ಇನ್ನು ಡೇಟಾ ಗೌಪ್ಯತೆ, ನೈತಿಕ ಪ್ರಶ್ನೆಗಳನ್ನು ಬಗೆಹರಿಸುವುದು ಹೇಗೆ?

ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಟೆಕ್ನಾಕ್ರಟಿಕ್ ಪರಿಹಾರ ಹುಡುಕುವುದರಲ್ಲೇ ಒಂದು ದೊಡ್ಡ ಸಮಸ್ಯೆ ಇದೆ. ಇನ್ನು, ಯಾವುದೇ ಒಂದು ಖಾಯಿಲೆಯ ಬೆಳವಣಿಗೆಯಲ್ಲಿ, ಸಾಮಾಜಿಕ, ರೋಗಶಾಸ್ತ್ರ, ಪ್ರಾದೇಶಿಕ, ಹವಾಮಾನ ಇನ್ನೂ ಹಲವು ಬಗೆಯ ಆಯಾಮಗಳಿರುತ್ತವೆ. ಇವೆಲ್ಲವನ್ನೂ ಈಗ ಎಐನಡಿ ಒಂದು ರೀತಿಯ ಸಾರ್ವತ್ರೀಕರಣ (homogenization) ಮಾಡಲು ಹೊರಟಿದ್ದಾರೆ. ಪ್ರತಿಯೊಬ್ಬ ರೋಗಿಯ ಗುಣಲಕ್ಷಣಗಳು ಬಹಳ ನಿರ್ದಿಷ್ಟವಾಗಿರುತ್ತವೆ ಅಂದುಕೊಂಡರೆ ಪ್ರತಿಯೊಬ್ಬರಿಗೂ ಬೇಕಾಗಿರುವುದು ಪರ್ಸನಲ್ ಕೇರ್. ಒಟ್ಟಾರೆಯಾಗಿ ಮಾನವತಾವಾದಿ ದೃಷ್ಟಿಯಿಂದ ನೋಡಿದರೆ ಎಐಗೆ ಅಪಾರ ಸಾಮರ್ಥ್ಯ ಇರುವುದಂತೂ ಹೌದು ಮತ್ತು ಆರೋಗ್ಯ ಕ್ಷೇತ್ರವನ್ನು ಬದಲಾಯಿಸಲು ಶಕ್ತಿ ಹೊಂದಿದೆ. ಆದರೆ ನಮಗೆ ತೋರಿಸುತ್ತಿರುವ ಮತ್ತು ಪರಿಚಯಿಸಲಾಗುತ್ತಿರುವ ಎಐ ಬಂಡವಾಳಶಾಹಿ ಉತ್ಪಾದನೆ ತರ್ಕದ “ಮಾಸ್ ಪ್ರೊಡಕ್ಷನ್” ಈಗಿರುವ ಸಿದ್ಧ ಮಾದರಿಯ ಮತ್ತೊಂದು ಬಗೆಯಷ್ಟೇ. ಇದನ್ನು ನಾವು ಪ್ರಶ್ನಿಸುತ್ತಲೇ ಇರಬೇಕು ಮತ್ತು ಡೆಮಾಕ್ರಟೈಸ್ ಮಾಡುವತ್ತ ದಾಪುಗಾಲು ಇಡಬೇಕಿದೆ. ಈಗಾಗಲೇ ನಮಗೆ ನಂಬಿಸಲಾಗಿರುವ ಸಿದ್ಧ ಮಾದರಿಯ ಖಾಸಗಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕೋವಿಡ್ ಸಮಯದಲ್ಲಿ ವಿಫಲವಾಗಿದ್ದು ನಮ್ಮ ಕಣ್ಮುಂದೆಯೇ ಇದೆ. ಇಡೀ ವ್ಯವಸ್ಥೆಯ ಊಹೆ, ನಂಬಿಕೆ ಮತ್ತು ಭರವಸೆಯನ್ನೇ ಸುಳ್ಳು ಎಂದು ಸಾಬೀತುಪಡಿಸಿತು ಈ ಸಾಂಕ್ರಾಮಿಕ ರೋಗ. ಅದೇ ರೀತಿ ಎಐ ಕೂಡ ಮುಂದೊಂದು ದಿನ, ಈ ಅಸಮಾನ ವ್ಯವಸ್ಥೆಯಲ್ಲಿ ಯಾವೆಲ್ಲ ಸತ್ಯಗಳನ್ನು ಮತ್ತು ಲೋಪದೋಷಗಳನ್ನೂ ಮುಚ್ಚಿಡಲಾಗಿತ್ತೋ ಅವೆಲ್ಲ ಖುಲ್ಲಂಖುಲ್ಲಾ ಆಗಿ ಗಂಗಾ ನದಿಯಲ್ಲಿ ಕೋವಿಡ್ ಶವಗಳ ರೂಪದಲ್ಲಿ ತೇಲಿದ ಹಾಗೆ ಸಮಾಜದ ಮುಂದೆ ಅನಾವರಣಗೊಳ್ಳಲಿದೆ. ಅಲ್ಲಿಯವರೆಗೂ ಕಾಯದೆ ಎಐ ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಚಿಂತಿಸಬೇಕಿದೆ.

ಭರತ್ ಹೆಬ್ಬಾಳ

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

ಇದನ್ನೂ ಓದಿ: ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....