Homeಮುಖಪುಟಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಜನಾರೋಗ್ಯ ವ್ಯವಸ್ಥೆ

- Advertisement -
- Advertisement -

ಕಳೆದ ಒಂದು ದಶಕದಿಂದ ನಾವೆಲ್ಲರೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಕೃತಕ ಮತಿ ಎಂಬುದರ ಬಗ್ಗೆ ಹೆಚ್ಚಾಗಿ ಕೇಳುತ್ತಿದ್ದೇವೆ ಮತ್ತು ಓದುತ್ತಿದ್ದೇವೆ. ಈ ಚರ್ಚೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಇನ್ನಷ್ಟು ಚುರುಕು ಪಡೆದಿರುವುದೂ ನಿಜ. ವಿಜ್ಞಾನ ಮತ್ತು ತಂತ್ರಜ್ಞಾನ ಯಾವೆಲ್ಲ ರೀತಿ ಮಾನವನ ಜೀವನ ಸುಗಮಗೊಳಿಸಬಹುದು ಮತ್ತು ಅದ್ಭುತಗಳನ್ನು ಸೃಸ್ಟಿಸಬಹುದು ಎಂಬುದು ಬಹು ಚರ್ಚಿತ ವಿಷಯವಾಗಿಯೇ ಉಳಿದಿದೆ. ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ನೈಸರ್ಗಿಕವಾಗಿ ಕಾಣಸಿಗುವ ಮತಿ ಅಥವಾ ಬುದ್ಧಿಮತ್ತೆ ಯಂತ್ರಗಳಲ್ಲಿ ಇರುವುದಿಲ್ಲ ಎಂಬುದು ಈಗ ಸಾಮಾನ್ಯ ನಂಬಿಕೆಯಾಗಿ ಉಳಿದಿಲ್ಲ. ಮಾನವ ಯಂತ್ರಗಳಿಗೂ ತನ್ನದೇ ಆದ ಕೃತಕ ಮತಿ ಸೃಷ್ಟಿಸುವಲ್ಲಿ ಸಫಲವಾಗಿದ್ದಾನೆ ಮತ್ತು ಇದನ್ನೇ ಜನಪ್ರಿಯ ಮಾತುಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಎಐ ಎನ್ನುತ್ತಾರೆ. ಇಂದು ಎಷ್ಟೋ ಸಾಮಾನ್ಯ ನಾಗರಿಕರು ಬಳಸುವ ಸಲಕರಣಗಳಲ್ಲಿ ಎಐ ಹಾಸುಹೊಕ್ಕಿದೆ. ಇದರಿಂದ ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕನಿಗೂ ಪ್ರಯೋಜನವಿದೆಯೇ? ಅಥವಾ ಪ್ರತಿ ನಾಗರಿಕನ ಗೌಪ್ಯತೆಗೆ ಯಾವುದೇ ಬೆಲೆ ಕೊಡದೆ, ಮಾಹಿತಿ ತಂತ್ರಜ್ಞಾನ ಸೃಷ್ಟಿಸುತ್ತಿರುವ ಡಿಜಿಟಲ್ ಕಣ್ಗಾವಲಿನ ಡಿಸ್ಟೋಪಿಯಾದ ಮುಂದುವರೆದ ಅಧ್ಯಾಯವೇ? ಸದ್ಯದ ಪರಿಸ್ಥಿತಿಯಲ್ಲಿ ಇದರ ಪ್ರಯೋಜನ ಆರೋಗ್ಯ ಕ್ಷೇತ್ರದಲ್ಲಿ ಎಷ್ಟಿದೆ ಮತ್ತು ಈ ಕೃತಕ ಮತಿಯ ಮಿತಿಗಳೇನು ಎಂಬ ಪ್ರಶ್ನೆಗಳು ಎದ್ದಿರುವಾಗ ಇದರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಹಿಂದಿಗಿಂತಲೂ ಈಗ ಹೆಚ್ಚಿದೆ.

ಜಾನ್ ಮಕ್ಕಾರ್ತಿ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಪದವನ್ನು ಮೊದಲು ಜಾನ್ ಮಕ್ಕಾರ್ತಿ ಎಂಬುವವರು 1956ರಲ್ಲಿ ಬಳಸಿದ್ದಾದರೂ ಇದನ್ನು ಮೊದಲು ಜಗತ್ತಿಗೆ ಪರಿಚಯಿಸಿದ್ದು ಅಲನ್ ಟ್ಯೂರಿಂಗ್ ಎಂಬ ಗಣಿತಜ್ಞ ಮತ್ತು ಕಂಪ್ಯೂಟರ್ ತರ್ಕವನ್ನು ಪರಿಚಯಿಸಿದ ವಿಜ್ಞಾನಿ. ಇಲ್ಲಿಂದ ಮನುಷ್ಯನ ಮತಿಯ ಮಿತಿಗಳನ್ನು ಕೃತಕ ಮಿತಿ ಒಂದೊಂದಾಗಿ ಮೀರುತ್ತಾ ಸಾಗಿದೆ. ವಿಜ್ಞಾನ ಜಗತ್ತಿನ ಹೊಸಹೊಸ ಆವಿಷ್ಕಾರಗಳು ತಾನು ನೀಡುತ್ತಿರುವ ತಿರುವುಗಳಿಂದ ಮಾನವ ಸಮಾಜವನ್ನು ಮುನ್ನಡೆಸುತ್ತಿದೆ. ಅದರ ಮುಂದುವರಿದ ಭಾಗವಾಗಿ ಕೃತಕ ಮತಿ ಎಂಬ ಹೊಸ ಆಯಾಮದ ವಿಜ್ಞಾನ ಕಳೆದ ಏಳೆಂಟು ದಶಕಗಳಿಂದ ಬೃಹತ್ತಾಗಿ ಬೆಳೆಯುತ್ತಾ ಇಂದು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಆವರಿಸಿಕೊಂಡಿರುವುದಷ್ಟೇ ಅಲ್ಲದೆ ನಮ್ಮ ಜೀವನದ ಒಂದು ಭಾಗವಾಗಿ ಬೆಳೆದು ನಿಂತಿದೆ. ಮೊದಲಿಗೆ ಬಹಳ ಸರಳವಾದ ಕೆಲಸಗಳನ್ನು ಮಾಡುತ್ತಿದ್ದ ತಂತ್ರಜ್ಞಾನ ಈಗ ಮುಖ ಗುರುತಿಸುವಿಕೆ, ಕಂಪ್ಯೂಟರ್ ದೃಷ್ಟಿ, ಬಯೋಮೆಟ್ರಿಕ್ಸ್, ನಿಗಾವಹಿಸುವುದು, ಮುಂದೆ ನಡೆಯುವುದನ್ನು ಮೊದಲೇ ಪ್ರೆಡಿಕ್ಟ್ ಮಾಡುವುದು ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಅಪ್ಲಿಕೇಶನ್‌ಗಳಿಗೆ ಕೃತಕ ಮತಿಯನ್ನು ಅನ್ವಯಿಸುವುದರಿಂದ ದೂರಗಾಮಿ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ. ಹಣಕಾಸು, ಔಷಧ, ಆರೋಗ್ಯ, ಇ-ಕಾಮರ್ಸ್, ಸಂಚಾರ, ಉತ್ಪಾದನೆ, ನಿರ್ವಹಣೆ ಮತ್ತು ಸಾರ್ವಜನಿಕ ಭದ್ರತೆ ಸೇರಿದಂತೆ ಇತರೆ ಅನೇಕ ಕ್ಷೇತ್ರಗಳಲ್ಲಿ ಉಪಯೋಗಿಸಲಾಗುತ್ತಿದೆ.

ಕಳೆದ ಒಂದೂವರೆ ದಶಕದಿಂದಲೂ ಈ ಕೃತಕ ಮತಿ ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲಿ ತನ್ನ ಪ್ರಭಾವವನ್ನು ಗಣನೀಯವಾಗಿ ಬೆಳೆಸಿಕೊಳ್ಳುತ್ತಾ ಬಂದಿದೆ. ಅದಕ್ಕೆ ಅಮೆರಿಕ ಮತ್ತು ಯೂರೋಪ್ ಖಂಡಗಳಲ್ಲಿ ಆಗುತ್ತಿರುವ ಡಿಜಿಟಲ್ ರೂಪಾಂತರದ ಬೆಳವಣಿಗೆಗಳೂ ಒಂದು ಬಹುಮುಖ್ಯ ಕಾರಣ. ಕೋವಿಡ್ ನಂತರದ ಕಾಲಘಟ್ಟದಲ್ಲಿ ಇದರ ವಿಸ್ತಾರ ಇನ್ನಷ್ಟು ಹೆಚ್ಚುತ್ತಾ ಸಾಗಿದೆ. ಇದರ ಬಗೆಗಿನ ಭರವಸೆಗಳು, ಸುರಕ್ಷತೆ, ಪ್ರಗತಿ, ಫಲಿತಾಂಶಗಳು, ಅಪಾಯ, ಮಿತಿಗಳು, ಜವಾಬ್ದಾರಿ ಹಾಗು ತಾಂತ್ರಿಕ ಮತ್ತು ನೈತಿಕ ಪರಿಣಾಮಗಳನ್ನು ಸಮಗ್ರವಾಗಿ ಪರಿಶೀಲಿಸಿದರೆ ಮಾತ್ರ ಕೃತಕ ಮತಿಯನ್ನು ಸರಿಯಾಗಿ ಬಳಸಬಹುದಾಗಿದೆ. ಈಗಿರುವ ಅಸಮಾನ ವ್ಯವಸ್ಥೆಯಲ್ಲಿ ಉಳ್ಳವರ ಸುಳ್ಳುಗಳು ಯಾವುದೇ ಪ್ರತಿರೋಧವಿಲ್ಲದ ಸಾಮಾನ್ಯ ಜ್ಞಾನವಾಗುತ್ತಿರುವಾಗ ಈಗ ಸೃಷ್ಟಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಈ ಆಯಾಮದ ಬಗ್ಗೆ ಎಚ್ಚರಿಕೆಯಿಂದಲೇ ಮುಂದಿನ ಹೆಜ್ಜೆ ಇಡಬೇಕಾಗಿದೆ.

ಅಲನ್ ಟ್ಯೂರಿಂಗ್

ಕೃತಕ ಮತಿಯ ಈಗಿನ ಸಾಮರ್ಥ್ಯದಲ್ಲಿ ಅರೋಗ್ಯ ವ್ಯವಸ್ಥೆಯಲ್ಲಿ ರೋಗನಿರ್ಣಯ ಇಮೇಜ್ ಮತ್ತು ಸ್ಕ್ಯಾನಿಂಗ್, ಜೆನೆಟಿಕ್ ಅನಾಲಿಸಿಸ್, ಎಲೆಕ್ಟ್ರೋ ರೋಗನಿರ್ಣಯ, ರೋಗದ ನಿಖರ ಊಹೆ, ಔಷಧ ಉತ್ಪಾದನಾ ಪ್ರೋಸೆಸ್‌ನಲ್ಲಿ ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಈಗಿನ ಕೋವಿಡ್ ಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಮತ್ತು ಪ್ರೆಡಿಕ್ಷನ್ ಮಾಡುವ ಕ್ಷೇತ್ರದಲ್ಲಿ, ಔಷಧ ತಯಾರಿಕಾ ಕ್ಷೇತ್ರದಲ್ಲಿ ಬಹಳ ಹೆಚ್ಚಾಗಿ ಇದರಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇನ್ನೂ ಕೆಲವು ಮುಖ್ಯ ಕ್ಷೇತ್ರಗಳೆಂದರೆ ಕ್ಯಾನ್ಸರ್, ಹೃದಯಾಘಾತ ಮತ್ತು ಕ್ಷಯ ರೋಗದ ಪ್ರೆಡಿಕ್ಷನ್. ಡಾಕ್ಟರ್ ಅಥವಾ ತಜ್ಞರಿಗಿಂತಲೂ ಹೆಚ್ಚು ಕರಾರುವಾಕ್ಕಾಗಿ, ನಿಖರವಾಗಿ ರೋಗದ ಆರಂಭಿಕ ಹಂತದಲ್ಲೇ ಪ್ರೆಡಿಕ್ಟ್ ಮಾಡಬಲ್ಲ ಸಾಮರ್ಥ್ಯವನ್ನು ಎಐ ಗಳಿಸಿಕೊಂಡಿದೆ. ಯಂತ್ರ-ಕಲಿಕೆ ಮತ್ತು deep learning ಕ್ರಮಾವಳಿಗಳು ಈಗಾಗಲೇ ಎಲೆಕ್ಟ್ರೋಕಾರ್ಡಿಯೋಗ್ರಾಮ್ ಮತ್ತು ಕ್ಯಾನ್ಸರ್‌ಗಾಗಿ ಮ್ಯಾಮೋಗ್ರಾಮ್‌ಗಳನ್ನು ಸ್ಕ್ರೀನಿಂಗ್ ಮಾಡಲು ನುರಿತು, ವೈದ್ಯರಿಗಿಂತ ರೋಗ ಸ್ಥಿತಿಗಳನ್ನು ಉತ್ತಮವಾಗಿ ಊಹಿಸುತ್ತವೆ ಎಂದು ತೋರಿಸಲಾಗಿದೆ. ಅಮೆರಿಕ ಎಫ್‌ಡಿಎ (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಈಗಾಗಲೇ ವೆಬ್ ಆಧಾರಿತ ಕೃತಕ ಮತಿಯ ವ್ಯವಸ್ಥೆಯನ್ನು ಅನುಮೋದಿಸಿದೆ. ಅದು ನವಜಾತ ಶಿಶುಗಳಲ್ಲಿ ಜನ್ಮಜಾತ ಹೃದಯ ವೈಪರೀತ್ಯಗಳ ನಿಖರವಾದ ಸ್ಥಳಗಳನ್ನು ಸುಮಾರು 10 ನಿಮಿಷಗಳಲ್ಲಿ ಪತ್ತೆ ಹಚ್ಚುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದು ಮೂಡಿಸುತ್ತಿರುವ ಭರವಸೆ ಮತ್ತು ಸಾಮರ್ಥ್ಯ ಎಷ್ಟೇ ಇದ್ದರೂ ಸಾಮಾನ್ಯ ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಸಕಾರಣವಾಗಿ ಸ್ಪಂದಿಸುತ್ತಿಲ್ಲ. ಕಳೆದ ದಶಕದಿಂದ ಇರುವ ’ಆರೋಗ್ಯ ವ್ಯವಸ್ಥೆಯನ್ನು ಬದಲಾಯಿಸಿಬಿಡುತ್ತದೆ’ ಎನ್ನುವ ಹೈಪ್ ಒಂದು ಕಡೆಯಾದರೆ, ಒಂದೆರಡು ಕ್ಷೇತ್ರಗಳಲ್ಲಾದರೂ ಎಐ ತಂತ್ರಜ್ಞಾನ ಸಾಮಾನ್ಯ ಜನರನ್ನು ಇನ್ನೂ ತಲುಪಿಲ್ಲ ಎಂಬುದು ಕೂಡ ನಿಜ. ಅಥವಾ ಈ ಎಲ್ಲಾ ಭರವಸೆಗಳು ಅಮೆರಿಕ ಅಥವಾ ಯೂರೋಪಿನ ಲ್ಯಾಬ್ ಮತ್ತು ಸಂಶೋಧನೆಗೆ ಮಾತ್ರ ಸೀಮಿತವೇ? ಇಲ್ಲವೇ ಉಳ್ಳವರಿಗಾಗಿ ಮಾಡುತ್ತಿರುವ ವ್ಯವಸ್ಥೆಯೇ? ಅಷ್ಟೇ ಅಲ್ಲದೆ ದತ್ತಾಂಶ ಹಕ್ಕುಗಳು ಮತ್ತು ದತ್ತಾಂಶ ಗೌಪ್ಯತೆಯ ಬಗ್ಗೆ ಯಾವುದೇ ತಿಳಿವಳಿಕೆ ಇನ್ನೂ ಸರಿಯಾಗಿ ಮೂಡಿಲ್ಲ. ಆ ನಿಟ್ಟಿನಲ್ಲಿ ಎಐ ಕ್ಷೇತ್ರದಲ್ಲಿ ಹೂಡಿಕೆ ಮಾಡಿರುವ ಸಂಸ್ಥೆಗಳು ಹಾಕುತ್ತಿರುವ ಎಫರ್ಟ್ ಬಗ್ಗೆ ಸದ್ದೇ ಇಲ್ಲ ಎನ್ನುವಂತಾಗಿದೆ. ಕೃತಕ ಮತಿಗೆ ಬೆರೆಯಬೇಕಾದ ಅಲ್ಗೊರಿಥಮ್ ಯಾರು ಬರೆಯುತ್ತಾರೆ ಮತ್ತು ಅದರಲ್ಲಿನ ಸೇರಿ ಹೋಗುವ ಮನುಷ್ಯನಲ್ಲಿರುವ ಪಕ್ಷಪಾತ/ತಾರತಮ್ಯ ಧೋರಣೆಯನ್ನು ಹೇಗೆ ಸರಿ ಮಾಡುತ್ತಾರೆ? ಇದರ ನಿಯಂತ್ರಣ ಯಾರ ಕೈಯಲ್ಲಿರುತ್ತದೆ? ಇದರ ಪರಿಣಾಮ ಮತ್ತು ದುಷ್ಪರಿಣಾಮಗಳ ಜವಾಬ್ದಾರಿ ಯಾರು ಹೊರುತ್ತಾರೆ? ಸಾಮಾಜಿಕ, ಆರ್ಥಿಕ ಮತ್ತು ಜನಾಂಗೀಯ ಪಕ್ಷಪಾತವನ್ನು ವ್ಯವಸ್ಥೆಯಲ್ಲಿ ಸಂಯೋಜಿಸಲಾಗಿದೆಯೆಂದರೆ ಅದಕ್ಕೆ ಯಾರು ಹೊಣೆ ಹೊರುತ್ತಾರೆ ಮತ್ತು ಅದಕ್ಕೆ ಪರಿಹಾರವೇನು? ಇವೆಲ್ಲದ್ದಕ್ಕಾಗಿ ಒಂದು ವಿಧಾನವನ್ನು ಖಾತ್ರಿಪಡಿಸಲಾಗದೆ ಹೋದರೆ ಎಷ್ಟರಮಟ್ಟಿಗೆ ಅದರ ದತ್ತಾಂಶ ಪಾರದರ್ಶಕವಾಗಿರುತ್ತದೆಯೇ? ಇವೆಲ್ಲದರ ಮೇಲೆ ಪ್ರಶ್ನೆಗಳು ಎದ್ದಿವೆಯಾದರು ಅದಕ್ಕೆ ಪೂರಕವಾದ ವಿಮರ್ಶೆ ಚರ್ಚೆಗಳು ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಈ ಚರ್ಚೆಗಳಲ್ಲಿ ಜನಸಾಮಾನ್ಯರು ಭಾಗಿಯಾಗಿರುವುದಂತೂ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಭವಿಷ್ಯದ ಪರಿಣಾಮವು ನಕಾರಾತ್ಮಕಕ್ಕಿಂತ ಹೆಚ್ಚು ಧನಾತ್ಮಕವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಎಐ ಸಂಶೋಧಕರ ಜವಾಬ್ದಾರಿಯಾಗಿದ್ದರೂ, ನೀತಿಶಾಸ್ತ್ರಜ್ಞರು, ಆಡಳಿತ ವ್ಯವಸ್ಥೆಗಳ ನೀತಿ ನಿರೂಪಕರು ಮತ್ತು ತತ್ವಜ್ಞಾನಿಗಳು ಮೊದಲಿನಿಂದಲೂ ಅಂತಹ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಆಳವಾಗಿ ತೊಡಗಿಸಿಕೊಳ್ಳಬೇಕು. ಇದಲ್ಲದೆ ಎಐ ಸಂಶೋಧನೆಯಲ್ಲಿ ಹೆಚ್ಚಾಗಿ ಹೂಡಿಕೆ ಮಾಡಿರುವುದು ದೊಡ್ಡ ದೊಡ್ಡ ಕಾರ್ಪೊರೆಟ್ ಕುಳಗಳು. ಮೈಕ್ರೋಸಾಫ್ಟ್, ಗೂಗಲ್, ಅಮೆಜಾನ್, ಟೆಸ್ಲಾ, ಆಪಲ್, ಫೇಸ್ಬುಕ್, ನ್ಯೂರಲಿಂಕ್, ಇಂಟೆಲ್ ಇನ್ನು ಇತ್ಯಾದಿ ದೈತ್ಯ ಕಂಪನಿಗಳು. ಇವುಗಳೆಲ್ಲವೂ ಮಾನವೀಯತೆಯ ನೆಲೆಯಲ್ಲಿ ಕೆಲಸ ಮಾಡುತ್ತವೆ ಮತ್ತು ಎಲ್ಲರಿಗೂ ಎಟುಕುವಂತಹ ಆರೋಗ್ಯವ್ಯವಸ್ಥೆ ರೂಪಿಸಲು ಪೂರಕವಾಗಿರುತ್ತವೆ ಎಂದು ಖಂಡಿತ ಹೇಳಲಾಗುವುದಿಲ್ಲ, ಬದಲಾಗಿ ತಮ್ಮ ಲಾಭಕೋರತನಕ್ಕಾಗಿ ಏನನ್ನಾದರೂ ಮಾಡಲು ಹಿಂಜರಿಯದ ಕಂಪನಿಗಳಿವು. ಇನ್ನು ಡೇಟಾ ಗೌಪ್ಯತೆ, ನೈತಿಕ ಪ್ರಶ್ನೆಗಳನ್ನು ಬಗೆಹರಿಸುವುದು ಹೇಗೆ?

ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಟೆಕ್ನಾಕ್ರಟಿಕ್ ಪರಿಹಾರ ಹುಡುಕುವುದರಲ್ಲೇ ಒಂದು ದೊಡ್ಡ ಸಮಸ್ಯೆ ಇದೆ. ಇನ್ನು, ಯಾವುದೇ ಒಂದು ಖಾಯಿಲೆಯ ಬೆಳವಣಿಗೆಯಲ್ಲಿ, ಸಾಮಾಜಿಕ, ರೋಗಶಾಸ್ತ್ರ, ಪ್ರಾದೇಶಿಕ, ಹವಾಮಾನ ಇನ್ನೂ ಹಲವು ಬಗೆಯ ಆಯಾಮಗಳಿರುತ್ತವೆ. ಇವೆಲ್ಲವನ್ನೂ ಈಗ ಎಐನಡಿ ಒಂದು ರೀತಿಯ ಸಾರ್ವತ್ರೀಕರಣ (homogenization) ಮಾಡಲು ಹೊರಟಿದ್ದಾರೆ. ಪ್ರತಿಯೊಬ್ಬ ರೋಗಿಯ ಗುಣಲಕ್ಷಣಗಳು ಬಹಳ ನಿರ್ದಿಷ್ಟವಾಗಿರುತ್ತವೆ ಅಂದುಕೊಂಡರೆ ಪ್ರತಿಯೊಬ್ಬರಿಗೂ ಬೇಕಾಗಿರುವುದು ಪರ್ಸನಲ್ ಕೇರ್. ಒಟ್ಟಾರೆಯಾಗಿ ಮಾನವತಾವಾದಿ ದೃಷ್ಟಿಯಿಂದ ನೋಡಿದರೆ ಎಐಗೆ ಅಪಾರ ಸಾಮರ್ಥ್ಯ ಇರುವುದಂತೂ ಹೌದು ಮತ್ತು ಆರೋಗ್ಯ ಕ್ಷೇತ್ರವನ್ನು ಬದಲಾಯಿಸಲು ಶಕ್ತಿ ಹೊಂದಿದೆ. ಆದರೆ ನಮಗೆ ತೋರಿಸುತ್ತಿರುವ ಮತ್ತು ಪರಿಚಯಿಸಲಾಗುತ್ತಿರುವ ಎಐ ಬಂಡವಾಳಶಾಹಿ ಉತ್ಪಾದನೆ ತರ್ಕದ “ಮಾಸ್ ಪ್ರೊಡಕ್ಷನ್” ಈಗಿರುವ ಸಿದ್ಧ ಮಾದರಿಯ ಮತ್ತೊಂದು ಬಗೆಯಷ್ಟೇ. ಇದನ್ನು ನಾವು ಪ್ರಶ್ನಿಸುತ್ತಲೇ ಇರಬೇಕು ಮತ್ತು ಡೆಮಾಕ್ರಟೈಸ್ ಮಾಡುವತ್ತ ದಾಪುಗಾಲು ಇಡಬೇಕಿದೆ. ಈಗಾಗಲೇ ನಮಗೆ ನಂಬಿಸಲಾಗಿರುವ ಸಿದ್ಧ ಮಾದರಿಯ ಖಾಸಗಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕೋವಿಡ್ ಸಮಯದಲ್ಲಿ ವಿಫಲವಾಗಿದ್ದು ನಮ್ಮ ಕಣ್ಮುಂದೆಯೇ ಇದೆ. ಇಡೀ ವ್ಯವಸ್ಥೆಯ ಊಹೆ, ನಂಬಿಕೆ ಮತ್ತು ಭರವಸೆಯನ್ನೇ ಸುಳ್ಳು ಎಂದು ಸಾಬೀತುಪಡಿಸಿತು ಈ ಸಾಂಕ್ರಾಮಿಕ ರೋಗ. ಅದೇ ರೀತಿ ಎಐ ಕೂಡ ಮುಂದೊಂದು ದಿನ, ಈ ಅಸಮಾನ ವ್ಯವಸ್ಥೆಯಲ್ಲಿ ಯಾವೆಲ್ಲ ಸತ್ಯಗಳನ್ನು ಮತ್ತು ಲೋಪದೋಷಗಳನ್ನೂ ಮುಚ್ಚಿಡಲಾಗಿತ್ತೋ ಅವೆಲ್ಲ ಖುಲ್ಲಂಖುಲ್ಲಾ ಆಗಿ ಗಂಗಾ ನದಿಯಲ್ಲಿ ಕೋವಿಡ್ ಶವಗಳ ರೂಪದಲ್ಲಿ ತೇಲಿದ ಹಾಗೆ ಸಮಾಜದ ಮುಂದೆ ಅನಾವರಣಗೊಳ್ಳಲಿದೆ. ಅಲ್ಲಿಯವರೆಗೂ ಕಾಯದೆ ಎಐ ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಚಿಂತಿಸಬೇಕಿದೆ.

ಭರತ್ ಹೆಬ್ಬಾಳ

ಭರತ್ ಹೆಬ್ಬಾಳ
ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿರುವ ಭರತ್ ಸಾಮಾಜಿಕ ಚಳವಳಿಗಳ ಜೊತೆಗೆ ನಂಟು ಬೆಳೆಸಿಕೊಂಡವರು. ತಂತ್ರಜ್ಞಾನದ ಸಾಧ್ಯತೆಗಳು ಮತ್ತು ಜಾಗತಿಕ ಭೌಗೋಳಿಕ ರಾಜಕೀಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಾರೆ.


ಇದನ್ನೂ ಓದಿ: ಸ್ವಾಭಾವಿಕವೆನಿಸುವಂತೆ ಮುನ್ನುಗ್ಗಿರುವ ಕೃತಕ ಬದ್ಧಿಮತ್ತೆ; ಸಾರ್ವಜನಿಕರ ಒಳತಿನ ಪ್ರಶ್ನೆ ಕೇಳುವವರಾರು?

ಇದನ್ನೂ ಓದಿ: ಕೃತಕ ಬುದ್ಧಿಮತ್ತೆ (AI) ಎತ್ತ ಸಾಗುತ್ತಿದೆ?

ಇದನ್ನೂ ಓದಿ: ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...