Homeಮುಖಪುಟಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: 500ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಣತಜ್ಞರಿಂದ ಖಂಡನೆ

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: 500ಕ್ಕೂ ಹೆಚ್ಚು ವಿಜ್ಞಾನಿಗಳು, ಶಿಕ್ಷಣತಜ್ಞರಿಂದ ಖಂಡನೆ

- Advertisement -
- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವ ಹೇಳಿಕೆಯನ್ನು 500 ಕ್ಕೂ ಹೆಚ್ಚು ಭಾರತೀಯ ವಿಜ್ಞಾನಿಗಳು ಮತ್ತು ಶಿಕ್ಷಣತಜ್ಞರು ಬೆಂಬಲಿಸಿದ್ದಾರೆ. ”ಇದು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುತ್ತಿದೆ” ಎಂಬ ನೆಪವು ಸಮಂಜಸವಲ್ಲ ಎಂದು ಹೇಳಿದ್ದಾರೆ.

ಭಾರತ: ಮೋದಿ ಪ್ರಶ್ನೆ ಎಂಬ ಶೀರ್ಷಿಕೆಯ ಎರಡು ಭಾಗಗಳ ಸಾಕ್ಷ್ಯಚಿತ್ರವನ್ನು ತೆಗೆದುಹಾಕಿರುವುದು, ಸಮಾಜ ಮತ್ತು ಸರ್ಕಾರದ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿದುರ್ಕಳ್ಳಲು ಮತ್ತು ಚರ್ಚಿಸಲು ಭಾರತೀಯ ನಾಗರಿಕರಿಗೆ ಸಾಧ್ಯವಾಗುವುದಿಲ್ಲ. ಇದು ನಾಗರಿಕರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅವರು ಹೇಳಿದರು.

ವಿಶ್ವವಿದ್ಯಾನಿಲಯ ಆಡಳಿತಗಳು ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಡೆಯಲು ತೆಗೆದುಕೊಂಡ ನಿರ್ಧಾರಗಳನ್ನು ಅವರು ಟೀಕಿಸಿದರು. ”ಇದು ಶೈಕ್ಷಣಿಕ ಸ್ವಾತಂತ್ರ್ಯದ ತತ್ವಗಳನ್ನು ಉಲ್ಲಂಘಿಸುತ್ತದೆ. ವಿಶ್ವವಿದ್ಯಾನಿಲಯಗಳು ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳ ಮುಕ್ತ ಚರ್ಚೆಗಳನ್ನು ಪ್ರೋತ್ಸಾಹಿಸಬೇಕು. ಪ್ರಜಾಸತ್ತಾತ್ಮಕ ಸಮಾಜದ ಸರಿಯಾದ ಕಾರ್ಯನಿರ್ವಹಣೆಗೆ ಇಂತಹ ಚರ್ಚೆಗಳು ನಿರ್ಣಾಯಕ. ವಿಶ್ವವಿದ್ಯಾನಿಲಯಗಳು ಸರ್ಕಾರವನ್ನು ಟೀಕಿಸುವ ಕಾರಣದಿಂದ ಕೆಲವು ಅಭಿಪ್ರಾಯಗಳ ಅಭಿವ್ಯಕ್ತಿಯನ್ನು ನಿರ್ಬಂಧಿಸುವುದು ಸ್ವೀಕಾರಾರ್ಹವಲ್ಲ” ಎಂದು ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಬಿಬಿಸಿ ಸ್ವತಂತ್ರ ಸಂಸ್ಥೆ: ಸಾಕ್ಷ್ಯಚಿತ್ರದ ವಿರುದ್ಧದ ಟೀಕೆಗಳಿಗೆ ರಿಷಿ ಸುನಕ್ ವಕ್ತಾರ ಪ್ರತಿಕ್ರಿಯೆ

ಸಂಪೂರ್ಣ ಹೇಳಿಕೆ ಮತ್ತು ಸಹಿ ಮಾಡಿದವರ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

BBC ಸಾಕ್ಷ್ಯಚಿತ್ರ “ಇಂಡಿಯಾ: ಮೋದಿ ಪ್ರಶ್ನೆ” ಸೆನ್ಸಾರ್ಶಿಪ್ ಕುರಿತು ಹೇಳಿಕೆ

ನಾವು ಭಾರತೀಯ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರ ಗುಂಪು.

“ಭಾರತ: ಮೋದಿ ಪ್ರಶ್ನೆ” ಎಂಬ ಎರಡು ಭಾಗಗಳ ಬಿಬಿಸಿ ಸಾಕ್ಷ್ಯಚಿತ್ರವನ್ನು ಸೆನ್ಸಾರ್‌ಶಿಪ್‌ನಲ್ಲಿ ತಂದಿರುವುದನ್ನು ಕಂಡು ನಾವು ದಿಗ್ಭ್ರಮೆಗೊಂಡಿದ್ದೇವೆ. ಈ ಸಾಕ್ಷ್ಯಚಿತ್ರ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ದುರ್ಬಲಗೊಳಿಸುತ್ತಿದೆ ಎಂಬ ನೆಪದಲ್ಲಿ ಭಾರತ ಸರ್ಕಾರವು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದೆ. ಈ ಸಮರ್ಥನೆಯು ಒಪ್ಪವಂತಹದ್ದಲ್ಲ. ಸಾಕ್ಷ್ಯಚಿತ್ರವನ್ನು ತೆಗೆದುಹಾಕಿರುವುದು, ಸಮಾಜ ಮತ್ತು ಸರ್ಕಾರದ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿದುಕೊಳ್ಳಲು ಮತ್ತು ಚರ್ಚಿಸಲು ಭಾರತೀಯ ನಾಗರಿಕರಿಗೆ ಸಾಧ್ಯವಾಗುವುದಿಲ್ಲ. ಇದು ನಾಗರಿಕರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ.

ದೇಶದಾದ್ಯಂತ ವಿಶ್ವವಿದ್ಯಾಲಯದ ಆಡಳಿತಗಳು ಸಾಕ್ಷ್ಯಚಿತ್ರದ ಪ್ರದರ್ಶನವನ್ನು ತಡೆಯಲು ಪ್ರಯತ್ನಿಸಿದವು. ಇದು ಶೈಕ್ಷಣಿಕ ಸ್ವಾತಂತ್ರ್ಯದ ತತ್ವಗಳನ್ನು ಉಲ್ಲಂಘಿಸುತ್ತದೆ. ವಿಶ್ವವಿದ್ಯಾನಿಲಯಗಳು ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಗಳ ಮುಕ್ತ ಚರ್ಚೆಗಳನ್ನು ಪ್ರೋತ್ಸಾಹಿಸಬೇಕು. ಪ್ರಜಾಸತ್ತಾತ್ಮಕ ಸಮಾಜದ ಸರಿಯಾದ ಕಾರ್ಯನಿರ್ವಹಣೆಗೆ ಇಂತಹ ಚರ್ಚೆಗಳು ನಿರ್ಣಾಯಕ. ವಿಶ್ವವಿದ್ಯಾನಿಲಯಗಳು ಸರ್ಕಾರವನ್ನು ಟೀಕಿಸುವ ಕಾರಣದಿಂದ ಕೆಲವು ಅಭಿಪ್ರಾಯಗಳ ಅಭಿವ್ಯಕ್ತಿಯನ್ನು ನಿರ್ಬಂಧಿಸುವುದು ಸ್ವೀಕಾರಾರ್ಹವಲ್ಲ.

BBC ಸಾಕ್ಷ್ಯಚಿತ್ರವು ಯಾವುದೇ ಮೂಲಭೂತವಾಗಿ ಹೊಸ ಅಂಶಗಳನ್ನು ಎತ್ತುವುದಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ. ಈಗಾಗಲೇ, 2002 ರಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಗೋಧ್ರಾ ದುರಂತದಿಂದ ಪ್ರಾರಂಭಿಸಿ ಮತ್ತು ನಂತರದ ಹಿಂಸಾಚಾರದವರೆಗೆ ಮುಂದುವರಿದಿದ್ದನ್ನು ನೋಡಿ, “ಗುಜರಾತಿನ ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ರಾಜ್ಯವು ಸಮಗ್ರವಾಗಿ ವಿಫಲವಾಗಿದೆ ಎಂದು ಖಚಿತವಾದ ತೀರ್ಮಾನಕ್ಕೆ ಬಂದಿತ್ತು. ನಂತರದ ವಾರಗಳಲ್ಲಿ, ಹಲವಾರು ವಿದ್ವಾಂಸರು, ಚಲನಚಿತ್ರ ನಿರ್ಮಾಪಕರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ರೀತಿಯ ತೀರ್ಮಾನಕ್ಕೆ ಬಂದಿದ್ದಾರೆ.

ಇದರ ಹೊರತಾಗಿಯೂ, 2002 ರಲ್ಲಿ ಗುಜರಾತ್‌ನಲ್ಲಿ ನಡೆದ ಹಿಂಸಾಚಾರವನ್ನು ಉತ್ತೇಜಿಸಲು ಮತ್ತು ಸಕ್ರಿಯಗೊಳಿಸಲು ಕಾರಣಕರ್ತರಾದವರನ್ನು ಗುರುತಿಸಲಾಗಿಲ್ಲ. ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ಮಾತ್ರವಲ್ಲದೇ, ಇಂದು ದೇಶವನ್ನು ಛಿದ್ರಗೊಳಿಸುವ ಬೆದರಿಕೆಯೊಡ್ಡುತ್ತಿರುವ ಕೋಮು ಧ್ರುವೀಕರಣವನ್ನು ಹಿಮ್ಮೆಟ್ಟಿಸಲು ಇದರ ಹೊಣೆಗಾರಿಕೆಯು ನಿರ್ಣಾಯಕವಾಗಲಿದೆ. ಆದ್ದರಿಂದ, ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಎತ್ತಿರುವ ಪ್ರಶ್ನೆಗಳು ಮುಖ್ಯವಾಗಿವೆ. ಚಲನಚಿತ್ರವನ್ನು ಬ್ಯಾನ್ ಮಾಡುವುದರಿಂದ ಈ ಹಿಂಸಾಚಾರದ ಸಂತ್ರಸ್ತರ ಧ್ವನಿಯನ್ನು ಮತ್ತಷ್ಟು ಮೌನಗೊಳಿಸಿದಂತಾಗಬಹುದು.

ಭಾರತದಲ್ಲಿನ ಸೆನ್ಸಾರ್‌ಶಿಪ್‌ನ ನಮ್ಮ ಟೀಕೆಯನ್ನು BBC ಅಥವಾ ಬ್ರಿಟಿಷ್ ಸ್ಥಾಪನೆಯ ಅನುಮೋದನೆ ಎಂದು ವ್ಯಾಖ್ಯಾನಿಸಬಾರದು ಎಂದು ಹೇಳಬೇಕಾಗಿಲ್ಲ. ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಳ್ಳುವ ಜಾಕ್ ಸ್ಟ್ರಾ ಅವರು ಟೋನಿ ಬ್ಲೇರ್ ಅವರ ಸಂಪುಟದಲ್ಲಿ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು ಎಂದು ನಮಗೆ ತಿಳಿದಿದೆ. ಈ ಪಾತ್ರದಲ್ಲಿ, “ಇರಾಕಿನ ಸಾಮೂಹಿಕ ವಿನಾಶದ ಆಯುಧಗಳ” ಬಗ್ಗೆ ಸುಳ್ಳುಸುದ್ದಿಗಳನ್ನು ಹರಡಲು ಅವರು ಜವಾಬ್ದಾರರಾಗಿದ್ದರು, ಇದನ್ನು ಬಿಬಿಸಿ ಯಥಾವತ್ತಾಗಿ ಪುನರಾವರ್ತಿಸಿತು ಮತ್ತು ನೂರಾರು ಸಾವಿರ ಮುಗ್ಧ ಜನರ ಸಾವಿಗೆ ಕಾರಣವಾದ ಇರಾಕ್‌ನ ಆಂಗ್ಲೋ-ಅಮೇರಿಕನ್ ಆಕ್ರಮಣವನ್ನು ಸಮರ್ಥಿಸಲು ಬಳಸಲಾಯಿತು..

ಭಾರತೀಯ ವಿದ್ವಾಂಸರು ಮತ್ತು ಕಾರ್ಯಕರ್ತರು, ಬೃಹತ್ ಮತ್ತು ವಿಶ್ವಾಸಾರ್ಹ ವಿಷಯದೊಂದಿಗೆ ನಿರ್ಮಿಸಿರುವ BBC ಸಾಕ್ಷ್ಯಚಿತ್ರವನ್ನು ಬೆಂಬಲಿಸುತ್ತೇವೆ ಮತ್ತು ವೀಕ್ಷಕರನ್ನು ಪ್ರೋತ್ಸಾಹಿಸುತ್ತೇವೆ. 2002 ರ ಭಯಾನಕ ಘಟನೆಗಳು ಮತ್ತು ಇಂದು ದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಭಯಾನಕ ಪರಿಸ್ಥಿತಿ ಎರಡನ್ನೂ ಇದು ದಾಖಲಿಸುತ್ತದೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಳ್ಳಾರಿಯ ಚಿನ್ನಾಭರಣ ಮಳಿಗೆಯಲ್ಲಿ ನಡೆದಿರುವುದು ಬಾಂಬ್ ಸ್ಪೋಟವಲ್ಲ

0
ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಮಳಿಗೆಯಲ್ಲಿ ಬಾಂಬ್ ಸ್ಪೋಟ ಸಂಭವಿಸಿದೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹಂಚಿಕೊಳ್ಳಲಾಗಿದೆ. "ಮತ್ತೊಂದು ದಿನ, ಕರ್ನಾಟಕದಲ್ಲಿ ಮತ್ತೊಂದು ಭಯಾನಕ ಘಟನೆ. ಬಳ್ಳಾರಿಯ ಕಲ್ಯಾಣ್ ಜುವೆಲ್ಲರ್ಸ್ ಶೋ ರೂಮ್‌ನಲ್ಲಿ ಸ್ಪೋಟ ಸಂಭವಿಸಿದ್ದು,...