Homeಕರ್ನಾಟಕಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

ಭಟ್ಕಳದ ಎಮ್ಮೆಲ್ಲೆ ಇಪ್ಪತ್ತೈದೇ ದಿನಕ್ಕೆ ಖಡಕ್ ಎಎಸ್‍ಪಿಯನ್ನು ಎತ್ತಂಗಡಿ ಮಾಡಿಸಿದೇಕೆ? ಶುದ್ದೋಧನ

- Advertisement -
- Advertisement -

ಭಟ್ಕಳದ ಎಎಸ್‍ಪಿಯಾಗಿ ಚಾರ್ಜ್‍ತೆಗೆದು ಕೊಂಡ ಕೇವಲ ಇಪ್ಪತ್ತೈದು ದಿನಗಳಲ್ಲೇ ಐಪಿಎಸ್‍ ಅಧಿಕಾರಿ ನಿಖಿಲ್ ಬುಳ್ಳಾ ಅವರ ಎತ್ತಂಗಡಿ ಆಗಿರೋದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಸಮಾಜ ಕಂಟಕರಿಗೆ, ದೋನಂಬರಿನ ದಂಧೆದಾರರ ನಿದ್ದೆಗೆಡಿಸಿದ್ದ ನಿಖಿಲ್‍ರನ್ನು ಸ್ಥಳೀಯ ಬಿಜೆಪಿ ಶಾಸಕನೂ ಸ್ವಯಂಘೋಷಿತ ದೇಶಭಕ್ತ ಹೆಂಡೋದ್ಯಮಿಯೂ ಆಗಿರುವ ಸುನಿಲ್ ನಾಯ್ಕನೇ ಹಠಕ್ಕೆ ಬಿದ್ದು ಜಡಿಸಿದ್ದಾನೆಂಬುದೀಗ ಜಗಜ್ಜಾಹೀರಾಗಿ ಹೋಗಿದೆ! ಖುದ್ದು ಸಿಎಂ ಸಾಹೇಬರ ಅಪ್ಪಣೆಯಂತೆಯೇ ಈ ಎತ್ತಂಗಡಿ ನಡೆದಿರೋದು ಈಗ ರಹಸ್ಯವಾಗುಳಿದಿಲ್ಲ.

 

 

ಅಷ್ಟಕ್ಕೂ ನಿಖಿಲ್, ಶಾಸಕನ ಪಿತ್ತ ನೆತ್ತಿಗೇರಿಸುವಂಥ “ಉದ್ಧಟತನ” ಮಾಡಿದ್ದಾದರೂ ಏನು? ಭಟ್ಕಳದಲ್ಲಿ ಹಾವಳಿ ಎಬ್ಬಿಸಿರುವ ಅಕ್ರಮ ಹೆಂಡ ಮತ್ತು ಜೂಜು ಮಾಫಿಯಾದ ಹೆಡೆಮುರಿಕಟ್ಟುವ ನಿರ್ಧಾರಕ್ಕೆ ಬಂದಿದ್ದ ನಿಖಿಲ್‍ ಅಕ್ರಮ ಮದ್ಯ ಮಾರಾಟದ ಕಿಂಗ್‍ಪಿನ್‍ಗಳ ಮೇಲೆ ಒಂದರಹಿಂದೊಂದರಂತೆ ನಾಲ್ಕು ಪ್ರಕರಣ ದಾಖಲಿಸಿದ್ದರು.ತನ್ನ ಕೃಪಾಶಿರ್ವಾದವಿದ್ದ ನಾಲ್ವರು ಕಳ್ಳ ಹೆಂಡದಂಧೆದಾರರನ್ನು ಜೈಲಿಗಟ್ಟಿದ್ದೇ ಶಾಸಕನ ಪಿತ್ತ ನೆತ್ತಿಗೇರಿಸಿತ್ತು. ಕಮ್ಯುನಲಿ ಸೆನ್ಸಿಟಿವ್ ಎಂಬ ಹಣೆಪಟ್ಟಿಯ ಭಟ್ಕಳದಲ್ಲಿ ಬಲು ನಾಜೂಕಿನಿಂದಲೇ ಕಾರ್ಯಾಚರಣೆಗಿಳಿದಿದ್ದ ನಿಖಿಲ್ “ಪ್ರಭಾವಿಗಳ” ಮೇಲೆ 21 ಜೂಜು ಪ್ರಕರಣಜಡಿದಿದ್ದಲ್ಲದೆ ಸಿಗರೇಟ್ ಮತ್ತು ತಂಬಾಕುಉತ್ಪನ್ನಕಾಯ್ದೆಯಡಿ 93 ಕೇಸು ಹಾಕಿದ್ದರು.

ಈ ಕಾರಣಕ್ಕೇ ನಿಖಿಲ್‍ ಜನರ ನಡುವೆ ಭರ್ಜರಿ ಪ್ರಶಂಸೆಗೆ ಪಾತ್ರರಾಗಿದ್ದರು. ಶಾಸಕರ ಪರಮಾಪ್ತರು, ನೆಂಟರು-ಇಷ್ಟರೇ ಗ್ರಾಮೀಣ ಭಾಗದಲ್ಲಿ ಕಳ್ಳ ಹೆಂಡ ಯಥೇಚ್ಛವಾಗಿ ಸರಬರಾಜು ಮಾಡುತ್ತಿದ್ದುದನ್ನು ನಿಖಿಲ್‍ ಕಂಡುಹಿಡಿದಿದ್ದರು. ಇವರ್ಯಾರಿಗೂ ಆತ ಸೊಪ್ಪು ಹಾಕಲಿಲ್ಲ. ಅಕ್ರಮ ಹೆಂಡ ಹಂಚಿಕೆ ಬಗ್ಗೆ ಸಾರ್ವಜನಿಕರಿಂದ ದೂರೇನಾದರೂ ಬಂದರೆ ಆ ವ್ಯಾಪ್ತಿಯ ಅಧಿಕಾರಿಗಳೇ ಹೊಣೆಯೆಂಬ ಎಚ್ಚರಿಕೆ ತನ್ನ ಅಧೀನ ಸಿಬ್ಬಂದಿಗೆ ಕೊಟ್ಟಿದ್ದರು.ಹೀಗಾಗಿ ಶಾಸಕ ಸುನಿಲ್ ನಾಯ್ಕ ಸೂತ್ರಧಾರತ್ವದ ಮದ್ಯ ಮಾಫಿಯಾ ವಿಲ ವಿಲ ಒದ್ದಾಡುವಂತಾಗಿತ್ತು.

ಶಿರಾಲಿಯ ಬಾಳೆಲೆಚಂದ್ರು ಯಾನೆಚಂದ್ರು ನಾಯ್ಕ ಶಾಸಕ ಸುನಿಲ್ ನಾಯ್ಕನ ಕಷ್ಟ-ಸುಖದ ನಿಷ್ಠ ಸನ್ಮಿತ್ರ! ಹೊಟೇಲ್‍ ಉದ್ಯಮಿಯಾಗಿದ್ದಚಂದ್ರು, ದೋಸ್ತ್‍ ಎಮ್ಮೆಲ್ಲೆ ಆಗಿದ್ದೇತಡ ಸರ್ಕಾರಿಕಾಮಗಾರಿ ನಡೆಸುವ ಲಕ್ಷಾಧೀಶ ಗುತ್ತಿಗೆದಾರನಾಗಿ ಅವತರಿಸಿದ್ದಾನೆ. ಇಂಥಚಂದ್ರುನ ಭಾಮೈದ ಶಿರಾಲಿಯಲ್ಲಿ ನಡೆಸುತ್ತಿದ್ದ ಮೀನು ಊಟದ ಹೊಟೇಲಿನಲ್ಲಿ ಪರವಾನಗಿಇಲ್ಲದ ಹೆಂಡದ ವ್ಯವಹಾರ ಲಕ್ಷದ ಲೆಕ್ಕದಲ್ಲೇ ದಿನವೂ ನಡೆಯುತ್ತಿತ್ತು. ಈ ಹೊಟೇಲಿನ ಮೇಲೆ ರೇಡು ಹಾಕಿದ ಎಎಸ್‍ಪಿ ಪಡೆ ಚಂದ್ರುನ ಭಾಮೈದನ ಎತ್ಹಾಕಿಕೊಂಡು ಬಂದಿತ್ತು! ಆಗ ಶಾಸಕ ಸಾಹೇಬ ಫೋನಾಯಿಸಿದರೂ ಕೇರ್ ಮಾಡಿರಲಿಲ್ಲ.

ಕಂಡಕಂಡಲ್ಲಿ ಎಎಸ್‍ಪಿಗೆ ಬುದ್ಧಿ ಕಲಿಸುವ ಆವಾಜ್ ಹಾಕತೊಡಗಿದ್ದ ಎಮ್ಮೆಲ್ಲೆ ಸುನೀಲ್ ನಾಯ್ಕ ತನ್ನ ಖಾಸಾ ಭಾಮೈದನ ಕಳ್ಳಹೆಂಡದ ವ್ಯವಹಾರಕ್ಕೆ ತೊಂದರೆ ಪೊಲೀಸರಿಂದಾದಾಗ ನಿಗಿ ನಿಗಿ ಬೆಂಕಿಯಾಗಿ ಹೋದ!! ಭಟ್ಕಳದ ಹಳ್ಳಿಗಳ ಗೂಡಂಗಡಿಯಲ್ಲಿ ಹೆಂಡದ ವ್ಯಾಪಾರಜೋರಾಗಿದೆ. ಈ ಗೂಡಂಗಡಿಗಳಿಗೆ ಹೆಂಡ ಪೂರೈಕೆಯಾಗುವುದು ಶಾಸಕನ ಭಾಮೈದನ “ಕಂಪನಿ”ಯಿಂದ. ಹಾಡುವಳ್ಳಿ ಎಂಬಲ್ಲಿ ಗೂಡಂಗಡಿಯಲ್ಲಿ ಅಕ್ರಮವಾಗಿ ಸಾರಾಯಿ ಮಾಡುತ್ತಿದ್ದವನನ್ನು ಎಎಸ್‍ಪಿ ಬಂಧಿಸಿದ್ದರು. ಹೆಂಡ ಮಾರಾಟಗಾರ ಕಾಂಗ್ರೆಸ್‍ನ ಹಿಂದಿನ ಶಾಸಕ ಮಂಕಾಳು ವೈದ್ಯನ ಶಿಷ್ಯನಾದರೆ ಹೆಂಡ ಪೂರೈಸಿದವರು ಬಿಜೆಪಿ ಶಾಸಕನ ನೆಂಟನಗ್ಯಾಂಗಿನವರು. ಎರಡೂ ಕಡೆಯಿಂದ ಎಎಸ್‍ಪಿಗೆ ಫೋನ್ ಹೋಗಿದೆ. “ಇಲ್ಲ…. ಇಲ್ಲಾ…. ಕಾನೂನು ಬಿಟ್ಟು ನಾನು ನಡೆಯುವುದಿಲ್ಲ…..” ಎಂದಿದ್ದಾರೆ ಎಎಸ್‍ಪಿ ನಿಖಿಲ್.

ಈ ಎಎಸ್‍ಪಿಯನ್ನು ಹೀಗೆ ಬಿಟ್ಟರೆ ತಮ್ಮ ಕಳ್ಳ ವ್ಯವಹಾರಕ್ಕೆ ಸಂಚಕಾರ ಬರುತ್ತದೆಂದು ಕಂಗಾಲಾದ ಎಮ್ಮೆಲ್ಲೆ ಪಟಾಲಮ್‍ ಆತನ ಎತ್ತಂಗಡಿಗೆ ಪ್ರಯತ್ನ ಪ್ರಾರಂಭಿಸಿಯೇ ಬಿಟ್ಟರು. “…. ನೀನು ನಿನ್ನಡ್ಯೂಟಿ ಮಾಡಿದೆಯಲ್ಲಾ…. ಈಗ ನಾನು ನನ್ನಡ್ಯೂಟಿ ಮಾಡ್ತೇನೆ ನೋಡು….. ನೀನು ಒಂದು ಮಾತೂ ಕೇಳೋನಲ್ಲ….” ಎಂದು ಎಗರಾಡಿದ್ದ ಸುನಿಲ್ ರಾತ್ರೋರಾತ್ರಿ ಬೆಂಗಳೂರಿಗೆ ಹೋಗಿ, ಸಿಎಂ ಯಡ್ಡಿಗೆ ಗಂಟು ಬಿದ್ದು ಎಎಸ್‍ಪಿ ವರ್ಗ ಮಾಡುವಂತೆ ಅಲವತ್ತುಕೊಂಡಿದ್ದಾನೆ. ಒಂದು ವಾರ ಬೆಂಗಳೂರಲ್ಲೇ ಠಿಕಾಣಿ ಹೂಡಿ ಅಂತಿಮವಾಗಿ ಸಾಕ್ಷಾತ್ ಸಿಎಂ ಸಾಹೇಬರಿಂದಲೇ ಎಎಸ್‍ಪಿ ವರ್ಗಾವಣೆ ಆದೇಶ ಮಾಡಿಸಿದ್ದಾನೆ. ಆ ಜಾಗಕ್ಕೆ ತನ್ನಜಾತಿ ಬಂಧುವಾದ ನಾನ್‍ ಐಪಿಎಸ್‍ ಅಧಿಕಾರಿಯನ್ನು ಹಾಕಿಸಿಕೊಂಡಿದ್ದಾನೆ.
ಶಿರಾಲಿಯಲ್ಲಿ ತನ್ನ ಹೆಂಡದ ಅಂಗಡಿ ಸುತ್ತಲೆಲ್ಲೂ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ಮಳಿಗೆ ತಲೆಯೆತ್ತದಂತೆ ಮಾಡಿರುವ ಸುನಿಲ್ ನಾಯ್ಕ ಅಕ್ರಮ ಸಾರಾಯಿದಂಧೆ ನಿರಾತಂಕ ಮಾಡಿಕೊಂಡಿದ್ದಾನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತನ್ನ ಪಕ್ಷದ ಶಾಸಕ ಕಾಯಕಕ್ಕೆ ಅಡ್ಡಿಪಡಿಸಿದ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವ ಯಡಿಯೂರಪ್ಪನವರ ಸಾಧನೆ ಪ್ರಶಂಸನೀಯ ಮತ್ತು ಅನುಕರಣೆಗೆ ಯೋಗ್ಯವಾದದ್ದು!? ಭೇಷ್ ಯಡಿಯೂರಪ್ಪನವರ ಮರಿ ಸರ್ವಾಧಿಕಾರಕ್ಕೆ ಭೋಪರಾಕ್. ಒಂದು ಕಡೆ ಮಾಧ್ಯಮಕ್ಕೆ ನಿರ್ಬಂಧ. ಮತ್ತೊಂದು ಕಡೆ ಕಾನೂನಿನ ಬಗ್ಗೆ ನಿಷ್ಠೆ ಉಳ್ಳ ಅಧಿಕಾರಿಯ ಎತ್ತಂಗಡಿ. ಇದಕ್ಕಿಂತಲೂ ಒಳ್ಳೆಯ “ರಾಮ ರಾಜ್ಯ” ಯಾರಿಂದಲೂ ಸಾಧ್ಯವಿಲ್ಲ.

  2. ಇಂತಹ ಸುಳ್ಳು ಸುದ್ದಿ ಬಿತ್ತರಿಸುವ ನಿಮ್ಮಂತ ನಾಯಿಗಳನ್ನು ನಡು ಬೀದಿಯಲ್ಲಿ ದುಓಡಗೆ ನಿಲ್ಲಿಸಬೇಕು. ಗೌರಿಯಂತ ಶನಿಯಿಂದ ಮುಕ್ತಿ ಸಿಕ್ಕಿದ್ದರು ಅವಳ ಹೆಸರಿನ ಶನಿ ಕರ್ನಾಟಕವನ್ನು ಕಾಡುತ್ತಲೇ ಇದೆ.

LEAVE A REPLY

Please enter your comment!
Please enter your name here

- Advertisment -

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...

ತೆಲಂಗಾಣ| ಅಂತರ್ಜಾತಿ ವಿವಾಹಕ್ಕೆ ಯುವತಿ ಕುಟುಂಬದ ವಿರೋಧ; ದಲಿತ ಯುವಕನ ಮನೆ ಧ್ವಂಸ

ಹೈದರಾಬಾದ್ ಸಮೀಪದ ಗದ್ವಾಲ್ ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ದಲಿತ ಯುವಕನ ಮನೆಯನ್ನು ಧ್ವಂಸಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಲಿತ ಬಹುಜನ ಫ್ರಂಟ್, ಹ್ಯೂಮನ್...