Homeಮುಖಪುಟಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು...

ಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು…

ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ

ಇಂಗ್ಲಂಡಿನ ಪ್ರಧಾನಿಯವರು ದಿನಾ ಬೆಳಿಗ್ಗೆ ಓದೋ ಪತ್ರಿಕೆ ʻದ ಗಾರ್ಡಿಯನ್ʼದಾಗ ಬೀದರಿನಂಥಾ ಸಣ್ಣ ಊರಿನ ದೊಡ್ಡು ಸುದ್ದಿ ಬಂತು ಅನ್ನೋದು ಇವತ್ತಿನ ಸುದ್ದಿ.

ಕುರುಡು ನಾಯಿ ಸಂತಿಗೆ ಬಂದಂಗ ಇದು ಯಾಕ ಬಂತು? ಬಂದದ್ದು ಎಂಥಾ ಸುದ್ದಿ? ಅನ್ನೋದನ್ನ ನೋಡೋಣ.

ಅದರಾಗ ಬಂದಿದ್ದು ಅಲ್ಲಮಾ ಇಕಬಾಲ್ ಟ್ರಸ್ಟಿನವರು ನಡೆಸೋ ಶಾಹೀನ್ ಶಾಲೆಯೊಳಗ ಹತ್ತು – ಹನ್ನೊಂದು ವರ್ಷದ ಹುಡುಗ-ಹುಡುಗಿಯರು ಆಡಿದ ನಾಟಕಕ್ಕ ಸಂಬಂಧಪಟ್ಟ ಸುದ್ದಿ. ಅದು ಏನಾತು ಅಂದರ ಅದರಾಗ ಒಂದು ಹುಡುಗಿ ಹಣ್ಣ ಹಣ್ಣ ಮುದಕೀ ಪಾತ್ರ ಮಾಡಿದ್ಲು. ನಮ್ಮ ಕಣ್ಣ ಮುಂದ ಬೆಳದ ಹುಡುಗಾ, ಚಹಾ ಮಾರತಿದ್ದ, ಅಂಥವಾ ಈಗ ದೊಡ್ಡ ಮನಿಷಾ ಆಗ್ಯಾನ, ನಮ್ಮ ದಾಖಲೆ ಕೇಳಲಿಕ್ಕೆ ಹತ್ಯಾನ ಅಂತ ಬೈತಾಳ. ನನ್ನೇನರ ಕಾಗದ ತೋರಸು ಅಂತ ಕೇಳಿದರ ಚಪ್ಪಲ ತೊಗೊಂಡು ಹೊಡೀತೇನಿ ಅಂತ ಅಂತಾಳ. ಇದನ್ನ ದೊಡ್ಡದು ಮಾಡಿ ಪೊಲಿಸರು ಆ ಹುಡುಗಿ ಅವ್ವನ್ನ, ಅಕೀ ಟೀಚರನ ಜೈಲಿಗೆ ಹಾಕ್ಯಾರ.

ಅಷ್ಟ ಅಲ್ಲಾ, ಪೊಲೀಸರು ಆ ಹುಡುಗ – ಹುಡುಗಿಯರನ್ನ ಅವರ ಪಾಲಕರು ಅಥವಾ ವಕೀಲರಿಲ್ಲದೇ ವಿಚಾರಣೆ ಮಾಡ್ಯಾರ. ಪ್ರತಿ ಸಲೆ ನಾಲ್ಕೈದು ತಾಸು ಅವರನ್ನು ಕೂಡಿಸಿಕೊಂಡು ವಿಚಾರಣೆ ಮಾಡ್ಯಾರ. ಖಲಿಸ್ತಾನ ಕೇಸು, ಕಸಾಬ ಕೇಸು, ಕಂದಹಾರ ಅಪಹರಣ ಕೇಸು, ಇಂದಿರಾಗಾಂಧಿ, ರಾಜೀವ ಗಾಂಧಿ ಹತ್ಯೆ ಕೇಸಿನ್ಯಾಗನೂ ಇಷ್ಟು ವಿಚಾರಣೆ ಮಾಡಿದ್ದರೋ ಇಲ್ಲೋ.

ಹಿಂಗ ಬರೆ ಒಂದೆರಡಲ್ಲ, ಬರೋಬ್ಬರಿ ಐದು ಸರೆ ಮಾಡ್ಯಾರ. ಹದಿನೆಂಟು ವರ್ಷಕ್ಕಿಂತ ಚಿಕ್ಕ ಮಕ್ಕಳನ್ನ ಪೊಲೀಸರು ವಿಚಾರಣೆ ಮಾಡಬಾರದು. ಮಾಹಿತಿ ಸಂಗ್ರಹ ಮಾಡಬಹುದು. ಮಾಡುವಾಗ ಅವರ ಪಾಲಕರು ಅಥವಾ ವಕೀಲರು ಇರಬೇಕು ಅಂತ ಅನ್ನೋದು ಸತ್ ಸಂಪ್ರದಾಯ. ಭಾರತ ಸರಕಾರ ಸಹಿ ಮಾಡಿದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದದ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಆದರ ಇವೆಲ್ಲಾ ಆ ಪೊಲೀಸರಿಗೆ ನೆನಪಾಗಲಿಲ್ಲ. ಅವರು ರಾಜಕಾರಣಿಗಳ ಒತ್ತಡದಲ್ಲಿ ಮುಸ್ಲಿಂ ಸಾಲಿ ಒಳಗ ನಡಿಯೋದೆಲ್ಲಾ ತಪ್ಪು. ಆ ಹುಡುಗರು ಮುಸ್ಲಿಮರು ಇದ್ದದ್ದಕ್ಕ ಅವರು ಮಾಡಿದ್ದೆಲ್ಲಾ ತಪ್ಪ ಇರಬೇಕು ಅಂತ ಇವರು ನಿರ್ಧಾರ ಮಾಡಿದರು. ಆ ಹುಡುಗ- ಹುಡುಗಿಯರಿಗೆ ಜೀವನಪೂರ್ತಿ ಮರಿಯಲಾರದಂಥಾ ಕೆಟ್ಟ ಅನುಭವ ಮೂಡಿಸಿದರು. ಪೊಲೀಸರ ಕಂಡಾಗೆಲ್ಲಾ ಥರಾ ಥರಾ ಹೆದರೋಹಂಗ ಮಾಡಿದರು.

ಇದೆಲ್ಲಾ ನೋಡಿದ ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು. ಈ ಸುದ್ದಿ ಭಾರತದ ಎಲ್ಲಾ ಪ್ರಮುಖ ಪೇಪರಿನ್ಯಾಗನೂ ಬಂತು. ಅಷ್ಟಕ್ಕ ದಪ್ಪ ಚರ್ಮದವರಿಗೆ ಒಂಚೂರು ಚುಚ್ಚಿದಂಗ ಆತು. ಅಲ್ಲಿನ ಪೊಲೀಸ ವರಿಷ್ಠಾಧಿಕಾರಿ ಬದಲಾದರು. ಆದರೂ ಇನ್ನೂ ಆ ಸಾಲಿಯವರಿಗೆ ಪೊಲೀಸರ ಕಿರಿಕಿರಿ ಕಡಿಮಿ ಆಗಿಲ್ಲ.

ಅಷ್ಟಕ್ಕೂ ಆ ಹುಡುಗಿ ಮಾಡಿದ್ದು ಮುದುಕಿಯ ಪಾತ್ರ. ಕೋಲಾರದ ಮುದುಕಿಯೊಬ್ಬಾಕಿಗೆ ಯಾರೋ ನಿನ್ನ ಕಾಗದಾ ಕೇಳಿದರ ಏನು ಮಾಡತೀ ಅಂದಾಗ ಮೆಟ್ಟಿನ್ಯಾಗ ಹೊಡೀತೇನಿ ಅಂದದ್ದು ವಾಟ್ಸಪ್ಪಿನ್ಯಾಗ ಬಂದಿತ್ತು. ಅದನ್ನು ನೋಡಿದ ಪಾಲಕರು- ಹುಡುಗರು ಅದರ ನಾಟಕ ಮಾಡಿದರು. ಇದರ ಹಕೀಕತ್ತು ಏನಪಾ ಅಂದರ ಚರ್ಚಾಸ್ಪದ ಮಾತು ಆಡಿದ್ದು ಆ ಪುಟ್ಟ ಹುಡುಗಿಯಲ್ಲ, ಆ ನಾಟಕದ ಮುದುಕಿಯ ಪಾತ್ರ.

ಈಗ ನಮ್ಮ ಪೊಲೀಸರು ಆ ಹತ್ತು- ಹನ್ನೊಂದರ ಹುಡುಗಾ- ಹುಡುಗಿಯರ ವಿಚಾರಣೆ ನಡಸಬಹುದು ಅಂದರ, ಅವರ ಅವ್ವನ್ನ, ಟೀಚರನ ಜೈಲಿಗೆ ಹಾಕಬಹುದು ಅಂದರ ಯರ‍್ಯಾರನ್ನ ವಿಚಾರಣೆ ನಡಸಬಹುದು, ಯರ‍್ಯಾರನ್ನು ಹಿಡೀಬಹುದು ಅನ್ನೂದನ್ನು ನೋಡೋಣ.

ʻʻಕರ್ಮʼʼ ಅನ್ನೋ ಹಿಂದಿ ಚಲನಚಿತ್ರದಾಗ ಅನುಪಮ ಖೇರ ಅವರು ಡಾಕ್ಟರ್ ಡ್ಯಾಂಗ ಅನ್ನೋ ಹೆಸರಿನ ವಿಲನ್ ಪಾತ್ರ ಮಾಡಿದ್ದರು. ಅದರಾಗ ಅವರು ನಾನು ಇಂಡಿಯಾವನ್ನು ಉಡಾಯಿಸಿ ಬಿಡತೇನಿ ಅಂತ ಮಾತಾಡಿದರು, ಮಿಸೈಲು ತಯಾರಿಸಿದರು, ಹೀರೋಗಳನ್ನು ಗೋಳು ಹೊಯಕೊಂಡರು. ಅವರನ್ನು ವಿಚಾರಣೆ ಮಾಡಬೇಕು.

ಅವರ ಅಪ್ಪ ಪುಷ್ಕರನಾಥ ಹಾಗೂ ಅವ್ವ ದುಲಾರಿ ಅವರನ್ನ ಜೈಲಿಗೆ ಹಾಕಬೇಕು.

ʻನಾಯಕʼ ಚಿತ್ರದಲ್ಲಿ ಅನಿಲಕಪೂರ್ ಅವರು ಮುಖ್ಯಮಂತ್ರಿಯನ್ನು ಹೊಡೆದದ್ದಕ್ಕೆ ಅವರನ್ನು ವಿಚಾರಣೆಗೆ ಒಳಪಡಿಸುವುದಲ್ಲದೇ ಒದ್ದು ಒಳಗೆ ಹಾಕಬೇಕು. ಅವರಪ್ಪ ಸುರಿಂದರ ಕಪೂರ್ ಅವರು ತೀರಿಕೊಂಡಾರ. ರೋಷೋಮನ್ ಚಿತ್ರದಲ್ಲಿ ಮಾಡಿದಂಗ ಅವರ ಆತ್ಮವನ್ನು ಆಹ್ವಾನಿಸಿ ಜೈಲಿಗೆ ಹಾಕಬೇಕು.

ರಾಜೇಂದ್ರ ಕುಮಾರ ಅವರ ʻಶತರಂಜʼ ಚಿತ್ರದಲ್ಲಿ ಮದನ ಪುರಿ ಅವರು ಹಾಗೂ ಅವರ ತಂದೆ ನಿಹಾಲ ಸಿಂಗ್ ಅವರಿಬ್ಬರೂ ಈಗ ಇಲ್ಲ. ಪುರಿ ಅವರು ಭಾರತವನ್ನು ನಾಶಪಡಿಸುವ ಮಾತಾಡಿದ್ದಕ್ಕೆ ಅವರನ್ನು ವಿಚಾರಣೆ ಮಾಡಿ ಅವರ ಅಪ್ಪ ನಿಹಾಲ ಸಿಂಗ್ ಜೊತೆಗೆ ಒಳಗ ಹಾಕಬೇಕು.

ಜಿತೇಂದ್ರ ಅವರ ಫರ್ಜ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ದೇಶದ ಮೇಲೆ ಬಾಂಬ ದಾಳಿ ನಡೆಸಿದ ರಾಜನಾಳಾ ಕಾಲೇಶ್ವರ ರಾವು ಅವರು ನಿಧನ ಹೊಂದಿದ್ದಾರೆ. ಅವರ ಆತ್ಮ ಮರಳಿ ಬರಲು ಒಪ್ಪದಿದ್ದರ ಅವರ ಹೆಂಡತಿ – ಮಕ್ಕಳನ್ನ ಜೈಲಿಗೆ ಹಾಕಬೇಕು.

ಮೊನ್ನೆ ಮೊನ್ನೆ ಬಂದ ಆಲಿಯಾ ಭಟ ಅವರ ರಾಝೀ ಸಿನಿಮಾದಾಗ ಪಾಕಿಸ್ತಾನದ ಸೈನ್ಯದ ಕಮಾಂಡರ ಪಾತ್ರ ಮಾಡಿದ್ದ ಅಶ್ವಥ ಭಟ್ ಅವರನ್ನು ಒಳಗ ಹಾಕಬೇಕು.

ಇವೆಲ್ಲಾ ಬರೇ ಉದಾಹರಣೆ ಅಷ್ಟ. ಚೈನಾ, ಪಾಕಿಸ್ತಾನದ ವಿಲನ್‌ಗಳ ಪಾತ್ರ ಮಾಡಿದರ ಜೈಲಿಗೆ ಹಾಕತಾರ ಅಂತ ಗೊತ್ತಾದರ ಸಾಕು, ಧೈರ್ಯವಂತರಿಂದ ತುಂಬಿ ತುಳುಕತಾ ಇರೋ ಹಿಂದಿ ಸಿನಿಮಾ ರಂಗದ ಮಹಾಮಹಿಮರೆಲ್ಲಾ ಅದನ್ನ ಬಿಟ್ಟ ಬಿಡತಾರ. ಬರೇ ನಮ್ಮ ವಜ್ರಮುನಿ, ತೂಗುದೀಪ ಶ್ರೀನಿವಾಸರಂಥಾ ಹಳ್ಳೀ ಗೌಡರ ಪಾತ್ರ ಅಷ್ಟ ಮಾಡತಾರ. ಸಿನಿಮಾರಂಗದ ಭಾರತೀಕರಣ ಆಗತದ.

ಅಂದಂಗ ಶಾಹೀನ ಅಂದರ ಪರ್ಶಿಯನ್- ಉರ್ದು ದಾಗ ಗರುಡ. ಶಾಹೀನ ಅನ್ನೋದರ ಬಗ್ಗೆ ಈ ಯುಗದ ಕವಿ ಅಲ್ಲಮಾ (ಜ್ಞಾನಿ) ಇಕಬಾಲ್ ಏನು ಹೇಳ್ಯಾರ ಅಂತ ನೋಡೋಣ

ʻನೋಡಪಾ ತಮ್ಮಾ ನೀ

ಮಹಾರಾಜರ ಅರಮನಿ ಮ್ಯಾಲೆ

ಅಲ್ಲೆ – ಇಲ್ಲೆ

ಎಲ್ಲಾ ಕಡೆ

ಗೂಡು ಕಟಿಗೋತ ಕೂಡಬ್ಯಾಡʼ

ʻನೀ ಗರುಡ ಅದೀ

ದೊಡ್ ದೊಡ್ಡ ಪರ್ವತದ ನೆತ್ತಿ ಮ್ಯಾಲೆ

ಇರಬೇಕಾದವ ನೀ

ಅಲ್ಲೇ ಇರಂತೀ ಹಾರಿಕೋತ ಹೋಗ್ ಈಗʼ

ʻನೋಡಪಾ ತಮ್ಮಾ,

ನೀ ಗರುಡ ಅದೀ

ಬ್ಯಾರೆ ಏನೇನೂ ಅಲ್ಲ

ಹಾರಿಕೋತ ಇರೋದ ನಿನ್ನ ಕೆಲಸ

ನಿನ್ನೆದುರಿಗೆ ಇರೋದು

ಬರೇ ಒಂದ ಆಕಾಶ ಅಲ್ಲ

ತಿಳಕೋʼ

ಬೀದರಿನ ಶಾಹೀನ ಸಾಲಿಗೂ ದೆಹಲಿಯ ಶಾಹೀನ ಬಾಗಿಗೂ ಏನೂ ಸಂಬಂಧ ಇಲ್ಲ. ಹೆಸರು ಮಾತ್ರ ಒಂದ. ಕನ್ನಡ ಸಿನಿಮಾದಾಗ ಅಪರಾಧ ಆದಮ್ಯಾಲೆ ಬರೋ ಪೊಲಿಸರಿಗೆ ಅದು ಕನ್‌ಫ್ಯೂಸ್ ಆಗಿರಬೇಕು. ಅದಕ್ಕ ಈ ಬಂಧನ- ವಿಚಾರಣೆ ಆಗಿರಬೇಕು, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಒಟ್ಟಾರೆಯಾಗಿ ಕರ್ನಾಟಕದ ಮಾನ ಮರ್ಯಾದೆಯನ್ನು ನಮ್ಮ ಪೊಲೀಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಇನ್ನಾದರೂ ಇವರು ಬುದ್ದಿ ಕಲಿಯುತ್ತಾರಾ?

  2. ಮಕ್ಕಳ ಭವಿಷ್ಯದ ಬಗ್ಗೆ ಚೂರು ಯೋಚನೆ ಮಾಡದೆ ಕಾನೂನಿನ ವಿರುದ್ಧ ಮಕ್ಕಳಿಗೆ ತೊಂದರೆ ಕೊಟ್ಟು ಮಾಡಬಾರದ ಕೆಲಸ ಮಾಡಿದ, ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಪೋಲೀಸರನ್ನು ಸಸ್ಪೆಂಡ್ ಮಾಡಬೇಕು ಮತ್ತು ಶಿಕ್ಷೆಗೊಳಪಡಿಸಬೇಕು ಹಾಗಾದರೆ ಮಾತ್ರ ಯಾರೂ ಇಂಥ ಬೇಜವಾಬ್ದಾರಿ ಕೆಲಸ ಮಾಡುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ಕ್ಯಾಬಿನೆಟ್‌ನಲ್ಲಿ ಮಹಿಳೆಯರಿಗಿಲ್ಲ ಸ್ಥಾನ: ಸಿಎಂ ಡಿ.ಕೆ. ಶಿವಕುಮಾರ್ ಗೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆಯಿಂದ ಬಹಿರಂಗ ಪತ್ರ

ಕರ್ನಾಟಕದ ನೂತನ ಸಚಿವ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕರಿಗೆ ಅವಕಾಶ ನೀಡದಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಜ್ಯದ ಪ್ರಮುಖ ಮಹಿಳಾ ಹಾಗೂ ಜನಪರ ಸಂಘಟನೆಗಳ ಒಕ್ಕೂಟ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಸಂಘಟನೆ ಮುಖ್ಯಮಂತ್ರಿಗಳಿಗೆ ಬಹಿರಂಗ...

ಜಾರ್ಖಂಡ್ | ಜೆಪಿಎಸ್‌ಸಿ, ಜೆಎಸ್‌ಎಸ್‌ಸಿ ಪರೀಕ್ಷಾ ಅಕ್ರಮಗಳ ವಿರುದ್ಧ ತೀವ್ರಗೊಂಡ ಪ್ರತಿಭಟನೆ : ಆರು ಮಂದಿಯಿಂದ ಉಪವಾಸ ಸತ್ಯಾಗ್ರಹ

ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್‌ಸಿ) ನಡೆಸಿದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧದ ಪ್ರತಿಭಟನೆಯು ತೀವ್ರ...

ಸಚಿವ ಸ್ಥಾನ ಸಿಗದಿದ್ದಕ್ಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದು ಸುಳ್ಳು: ಶಾಸಕ ಬಿ. ಆರ್‌ ಪಾಟೀಲ್‌ ಸ್ಪಷ್ಟನೆ

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ಸಲ್ಲಿಸಿರುವುದು ನಿಜ. ಆದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳು...

ಪ್ರಧಾನಿ ಮೋದಿ ವಿಡಿಯೋ ತೆಗೆದುಹಾಕಿದ ಪ್ರಕರಣ: ಮಾರ್ಕ್ ಝುಕರ್‌ಬರ್ಗ್‌ ಕ್ಷಮೆಯಾಚಣೆಗೆ ಒತ್ತಾಯಿಸಿದ ಸಂಸದೀಯ ಸಮಿತಿ; 3 ದಿನಗಳ ಗಡುವು

ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಫೇಸ್‌ಬುಕ್‌ನಿಂದ ತೆಗೆದುಹಾಕಿದ್ದಕ್ಕೆ ಸಂಬಂಧಿಸಿದಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಒತ್ತಾಯಿಸಿದ್ದು, ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ. ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ...

ಜನರ ಆತಂಕಗಳಿಗೆ ಧ್ವನಿಯಾಗಲು CJP ಸಿದ್ಧತೆ: ಮಹಾರಾಷ್ಟ್ರದಲ್ಲಿ ಅಭಿಜೀತ್ ದೀಪ್ಕೆ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಕಾಕ್ರೋಚ್ ಜನತಾ ಪಾರ್ಟಿ (CJP) ಸದ್ಯಕ್ಕೆ ಒತ್ತಡದ ಗುಂಪಾಗಿ ಕೆಲಸ ಮಾಡಲಿದ್ದು, ಪ್ರಸಕ್ತ ಭಾರತಕ್ಕೆ ಬೇಕಾಗಿರುವುದು ಕೂಡ ಅದೇ ಆಗಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಬುಧವಾರ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ...

ರಾಯಚೂರು: ದಲಿತ ಮುಖಂಡ ಭೂಮಾನಂದ ಬರ್ಬರ ಹತ್ಯೆ; ಆಲ್ ಇಂಡಿಯಾ ಬಿಎಸ್‌ಪಿ ಹಾಗೂ ಜನಪರ ಸಂಘಟನೆಗಳ ತೀವ್ರ ಆಕ್ರೋಶ 

ರಾಯಚೂರು ಜಿಲ್ಲೆಯಲ್ಲಿ ದಲಿತ ಯುವ ನಾಯಕನೊಬ್ಬನ ಭೀಕರ ಕೊಲೆ ಪ್ರಕರಣ ವರದಿಯಾಗಿದ್ದು, ಇಡೀ ಜಿಲ್ಲೆಯಲ್ಲಿ ತೀವ್ರ ಆತಂಕ, ಕಾವು ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ನಿವಾಸಿ, ಮಾದಿಗ...

ತಮಿಳುನಾಡು: ಹಿಂದೂ ‘ಮೇಲ್ಜಾತಿ’ ವ್ಯಕ್ತಿಯ ಜಮೀನಿನಲ್ಲಿ ಕುದುರೆ ಮೇಯಿಸುತ್ತಿದ್ದ ಎಂಬ ಕಾರಣಕ್ಕೆ 26 ವರ್ಷದ ದಲಿತ ವ್ಯಕ್ತಿಯ ಬರ್ಬರ ಹತ್ಯೆ 

ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಜಾತಿ ಗರ್ವದ ಬಲಿಪೀಠಕ್ಕೆ 26 ವರ್ಷದ ದಲಿತ ಯುವಕನೊಬ್ಬ ಬಲಿಯಾಗಿರುವ ಕ್ರೂರ ಘಟನೆ ವರದಿಯಾಗಿದೆ. ‘ಮೇಲ್ಜಾತಿ’ ಪ್ರಬಲ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನ ಜಮೀನಿನಲ್ಲಿ ಕುದುರೆ ಮೇಯುತ್ತಿತ್ತು ಎಂಬ ಕ್ಷುಲ್ಲಕ...

ಹಸು ಕೇವಲ ಉಪಯುಕ್ತ ಪ್ರಾಣಿ, ದೇವತೆಯಲ್ಲ ಎಂದಿದ್ದ ಸಾವರ್ಕರ್, ಕೋರ್ಟ್‌ನಲ್ಲಿ ಸಾವರ್ಕರ್ ಮೊಮ್ಮಗನ ಮಹತ್ವದ ಹೇಳಿಕೆ

ವಿನಾಯಕ ದಾಮೋದರ ಸಾವರ್ಕರ್ ಅವರು ಗೋಪೂಜೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು ಮತ್ತು ಹಸುವನ್ನು ಕೇವಲ ಒಂದು ಉಪಯುಕ್ತ ಪ್ರಾಣಿಯನ್ನಾಗಿಷ್ಟೇ ಪರಿಗಣಿಸುತ್ತಿದ್ದರು" ಎಂದು ಅವರ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆಯ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹೇಳಿಕೆ...

ಯಾದಗಿರಿ: ಫಾರ್ಮಾ ಘಟಕದಲ್ಲಿ ವಿಷಾನಿಲ ಸೋರಿಕೆ, ಮೂವರು ಕಾರ್ಮಿಕರ ದಾರುಣ ಸಾವು, FIR ದಾಖಲು

ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ 'ಸಿಲ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್' (Sil Laboratories Pvt Ltd) ಔಷಧಿ ತಯಾರಿಕಾ ಘಟಕದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ರಾಸಾಯನಿಕ...

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’: ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ದ್ವೇಷ ಭಾಷಣಕ್ಕೆ ವ್ಯಾಪಕ ಆಕ್ರೋಶ

‘ಮದ್ರಸಾಗಳು ಭಯೋತ್ಪಾದನೆಯನ್ನು ಉತ್ಪಾದಿಸುತ್ತವೆ’ ಎಂಬ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಯು ತೀವ್ರ ಸ್ವರೂಪದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನೀಡಿರುವ ಈ ಹೇಳಿಕೆಯು...