Homeಮುಖಪುಟಸತಿ ಸಹಗಮನ ಆಚರಣೆಯನ್ನು ವೈಭವೀಕರಿಸಿದ ಬಿಜೆಪಿ ಸಂಸದ ಜೋಶಿ: ವಿಪಕ್ಷ ನಾಯಕರ ಆರೋಪ

ಸತಿ ಸಹಗಮನ ಆಚರಣೆಯನ್ನು ವೈಭವೀಕರಿಸಿದ ಬಿಜೆಪಿ ಸಂಸದ ಜೋಶಿ: ವಿಪಕ್ಷ ನಾಯಕರ ಆರೋಪ

- Advertisement -
- Advertisement -

ಬಿಜೆಪಿ ನಾಯಕ ಸಿಪಿ ಜೋಶಿ ಅವರು, ‘ಸತಿ ಸಹಗಮನ’ದಂತಹ ಕೆಟ್ಟ ಆಚರಣೆಯನ್ನು ವೈಭವೀಕರಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಮಂಗಳವಾರ ಸಂಸತ್ತಿನ ಬಾವಿಗಿಳಿದು ಪ್ರತಿಭಟಿಸಿದರು. ಪ್ರತಿಪಕ್ಷಗಳ ಸದಸ್ಯರ ಪ್ರತಿಭಟನೆಯಿಂದ ಭಾರಿ ಗದ್ದಲ ಏರ್ಪಟ್ಟಿತು. ಆನಂತರ ಸ್ಪೀಕರ್ ಸದನವನ್ನು ಮುಂದೂಡಿದರು.

ರಾಜಸ್ಥಾನದ ಚಿತ್ತೋರ್‌ಗಢದ ಸಂಸದ ಜೋಶಿ ಅವರ ಹೇಳಿಕೆಗೆ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಆಕ್ಷೇಪಣೆ ಹೊರಹಾಕಿದರು. ಈ ವೇಳೆ ಅವರು ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು ಎಂದು ಒತ್ತಾಯ ಕೇಳಿಬಂದಿತು.

ಬಿಜೆಪಿ ಸಂಸದರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿರೋಧ ಪಕ್ಷದ ಸಂಸದರು ಆರೋಪಿಸಿದ ನಂತರ ಸಂಸತ್ತಿನ ಕೆಳಮನೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗದ್ದಲ ಪ್ರಾರಂಭವಾಯಿತು. ಹಾಗಾಗಿ ಸದನವನ್ನು ಮಧ್ಯಾಹ್ನ 1:30ಕ್ಕೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಮಾತನಾಡುವ ವೇಳೆ ಜೋಶಿ ಅವರು, ಮೇವಾರ್‌ನ ರಾಣಿ ಪದ್ಮಾವತಿಯನ್ನು ಉಲ್ಲೇಖಿಸಿದ್ದಾರೆ. ರಾಣಿ ಪದ್ಮಾವತಿ ಆಕ್ರಮಣಕಾರ ಅಲ್ಲಾವುದೀನ್ ಖಿಲ್ಜಿಯಿಂದ ತನ್ನ ಗೌರವವನ್ನು ರಕ್ಷಿಸಲು ‘ಜೌಹರ್’ ಮಾಡುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ವಕೀಲೆ ವಿಕ್ಟೋರಿಯಾ ಗೌರಿ ಮದ್ರಾಸ್‌ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ; ಸುಪ್ರೀಂನಲ್ಲಿ ತಕರಾರು

ಜೌಹರ್ ಎಂಬುದು ವಿದೇಶಿ ಆಕ್ರಮಣಕಾರರಿಂದ ಸೆರೆಹಿಡಿಯುವಿಕೆ ಅಥವಾ ಅತ್ಯಾಚಾರವನ್ನು ತಪ್ಪಿಸಲು ಭಾರತದ ಭಾಗಗಳಲ್ಲಿ ಮಹಿಳೆಯರಿಂದ ಸಾಮೂಹಿಕ ಸ್ವಯಂ-ದಹನದ ಹಳೆಯ ಅಭ್ಯಾಸವಾಗಿತ್ತು.

ಜೋಶಿ ಅವರು ‘ಸತಿ ಸಹಗಮನ’ ಪದ್ಧತಿಯನ್ನು ವೈಭವೀಕರಿಸಿದ್ದಾರೆ ಎಂದು ಪ್ರತಿಪಕ್ಷದ ಸದಸ್ಯರಾದ ಎನ್‌ಸಿಪಿಯ ಸುಪ್ರಿಯಾ ಸುಳೆ, ಡಿಎಂಕೆಯ ಕನಿಮೋಳಿ, ದಯಾನಿಧಿ ಮಾರನ್, ಮತ್ತು ಕಾಂಗ್ರೆಸ್‌ನಿಂದ ಎ ರಾಜಾ, ಕೆ ಮುರಳೀಧರನ್ ಮತ್ತು ಇಮ್ತಿಯಾಜ್ ಜಲೀಲ್ (ಎಐಎಂಐಎಂ) ಅವರು ಪ್ರತಿಪಾದಿಸಿದರು.

ಆ ವೇಳೆ ಸಿಪಿ ಜೋಶಿ ಅವರು, ”ಸತಿ ಪದ್ಧತಿಯ ಬಗ್ಗೆ ಯಾವುದೇ ಉಲ್ಲೇಖವನ್ನು ನಾನು ಮಾಡಿಲ್ಲ. ಆದರೆ ಪದ್ಮಾವತಿ ತನ್ನ ಗೌರವವನ್ನು ರಕ್ಷಿಸಲು ‘ಜೌಹರ್’ (ಸತಿ ಸಹಗಮನ) ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದ್ದೇನೆ” ಎಂದು ಹೇಳಿದರು.

ಪ್ರತಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗುತ್ತಿದ್ದಂತೆ, ”ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ” ಎಂದು ಜೋಶಿ ಹೇಳಿದರು.

ಇದಕ್ಕೂ ಮೊದಲು ಲೋಕಸಭೆಯ ಸದನದಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳಾದ ಎಲ್‌ಐಸಿ ಮತ್ತು ಎಸ್‌ಬಿಐ ಹೂಡಿಕೆಯಲ್ಲಿನ ವಂಚನೆಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಮಾತನಾಡಿ, ಪ್ರತಿಪಕ್ಷಗಳು ಕೃತಜ್ಞತಾ ನಿರ್ಣಯಕ್ಕೆ ಅನುಮತಿ ನೀಡಲು ಸಿದ್ಧವಿದ್ದರೂ, ಸಧ್ಯ ನಡೆಯುತ್ತಿರುವ ಹಿಂಡನ್‌ಬರ್ಗ್-ಅದಾನಿ ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವುದು “ಮೊದಲ ಆದ್ಯತೆ” ಎಂದು ಹೇಳಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಸುವ ಹಡಗಿಗೆ ಬಂದರಿನಲ್ಲಿ ನಿಲುಗಡೆ ನಿಷೇಧಿಸಿದ ಸ್ಪೇನ್

0
ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ. "ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ...