ಬಿಜೆಪಿ ಅಡಳಿತವೆಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರಣಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖಿಸಿದೆ.
”ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು. ಬಿಜೆಪಿ ಅಡಳಿತವೆಂದರೆ ‘ಭ್ರಷ್ಟಾಚಾರದ ಅಕ್ಷಯ ಪಾತ್ರೆ’ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ. ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ 200% ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಇರುವ KKRDB ಹಣವನ್ನು ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧದೆ” ಎಂದಿದೆ.
ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು.
ಬಿಜೆಪಿ ಅಡಳಿತವೆಂದರೆ "ಭ್ರಷ್ಟಾಚಾರದ ಅಕ್ಷಯ ಪಾತ್ರೆ" ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ.ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ 200% ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ.
ಕಲ್ಯಾಣ ಕರ್ನಾಟಕದ… pic.twitter.com/XvXeGeD33j
— Karnataka Congress (@INCKarnataka) August 14, 2023
”ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ. ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ ಬಿಜೆಪಿ? ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ. ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ” ಎಂದು ಗುಡುಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ.
ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ @BJP4Karnataka ?
ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ.
ಜನರ… pic.twitter.com/8KSAGDzlI3
— Karnataka Congress (@INCKarnataka) August 14, 2023