Homeಕರ್ನಾಟಕಬಿಜೆಪಿ ಅಡಳಿತವೆಂದರೆ 'ಭ್ರಷ್ಟಾಚಾರದ ಅಕ್ಷಯ ಪಾತ್ರೆ' ಇದ್ದಂತೆ: ಕಾಂಗ್ರೆಸ್ ಲೇವಡಿ

ಬಿಜೆಪಿ ಅಡಳಿತವೆಂದರೆ ‘ಭ್ರಷ್ಟಾಚಾರದ ಅಕ್ಷಯ ಪಾತ್ರೆ’ ಇದ್ದಂತೆ: ಕಾಂಗ್ರೆಸ್ ಲೇವಡಿ

- Advertisement -
- Advertisement -

ಬಿಜೆಪಿ ಅಡಳಿತವೆಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖಿಸಿದೆ.

”ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು. ಬಿಜೆಪಿ ಅಡಳಿತವೆಂದರೆ ‘ಭ್ರಷ್ಟಾಚಾರದ ಅಕ್ಷಯ ಪಾತ್ರೆ’ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ. ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತ 200% ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಇರುವ KKRDB ಹಣವನ್ನು ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧದೆ” ಎಂದಿದೆ.

”ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ. ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ ಬಿಜೆಪಿ? ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ. ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ” ಎಂದು ಗುಡುಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನ್ಯೂಸ್‌ಕ್ಲಿಕ್ ಸಂಪಾದಕರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಪೊಲೀಸ್; ‘ಅನಾವಶ್ಯಕ ಆತುರ’ ಏಕೆ ಎಂದ ಸುಪ್ರೀಂ...

0
ಬಂಧಿತ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥನನ್ನು ತನ್ನ ವಕೀಲರಿಗೂ ತಿಳಿಸದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿರುವ "ಅನಾವಶ್ಯಕ ಆತುರ"ವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. "ನೀವು ಅವರ ವಕೀಲರು ಅಥವಾ ಕಾನೂನು ತಂಡಕ್ಕೆ ಏಕೆ ತಿಳಿಸಲಿಲ್ಲ?...