Homeಮುಖಪುಟಆದಿವಾಸಿ ಬಾಲಕನ ಕೊಲೆ ಶಂಕೆ: ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿತ

ಆದಿವಾಸಿ ಬಾಲಕನ ಕೊಲೆ ಶಂಕೆ: ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿತ

- Advertisement -
- Advertisement -

17 ವರ್ಷದ ಅಪ್ರಾಪ್ತ ಬಾಲಕನ ಕೊಲೆ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಮಹಿಳೆ ಸೇರಿದಂತೆ ಗ್ರಾಮಸ್ಥರು  ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ರಾಂಚಿಯ ಬೊಕಾರೊದಲ್ಲಿ ನಡೆದಿದೆ.

ಅನೇಶ್ವರ್ ಓರಾನ್ ಎಂಬ ಬಾಲಕ 13 ದಿನಗಳಿಂದ ನಾಪತ್ತೆಯಾಗಿದ್ದ.ಬಳಿಕ ಬೊಕಾರೊ ಕೈಗಾರಿಕಾ ಪ್ರದೇಶದ ಕೊಳದ ಬಳಿ ಆತನ ಮೃತದೇಹ ಸಿಕ್ಕಿದೆ.ಅನೇಶ್ವರ್ ಓರಾನ್ ಶ್ರವಣ್ ಕುಮಾರ್‌ ಎಂಬಾತನ ಜೊತೆ ಕೊನೆಯ ಬಾರಿಗೆ ಇರುವುದನ್ನು ಜನರು ನೋಡಿದ್ದರು.

ಇದರಿಂದ ಶ್ರವಣ್ ಮೇಲೆ ಶಂಕೆ ವ್ಯಕ್ತಪಡಿಸಿ ಕೋಪಗೊಂಡ ಗ್ರಾಮಸ್ಥರು ಶ್ರವಣ್ ಕುಮಾರ್‌ನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಬಿದಿರಿನ ಕೋಲುಗಳಿಂದ ಗಂಭೀರವಾಗಿ ಹಲವು ಗಂಟೆಗಳ ಕಾಲ ಥಳಿಸಿದ್ದಾರೆ.

ಇಡೀ ಘಟನೆಯ ವೀಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ, ಇದರಲ್ಲಿ ಯುವಕನ ಹತ್ಯೆಗೆ ಕಾರಣ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಗ್ರಾಮಸ್ಥರ ಕೈಯಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆತನ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಅಪ್ರಾಪ್ತ ಮಕ್ಕಳನ್ನು ಕೊಂದು ಅವರ ದೇಹದ ಅಂಗಾಂಗಗಳನ್ನು ಮಾರಾಟ ಮಾಡುವ ಅಭ್ಯಾಸ ಶ್ರವಣ್ ಗೆ ಇದೆ ಎಂದು ಮೃತ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಆಗಸ್ಟ್ 5 ರಂದು ರಾತ್ರಿ 10 ಗಂಟೆ ಸುಮಾರಿಗೆ ಶ್ರಾವಣ ಮದ್ಯಪಾನ ಮಾಡಿ ಮನೆಗೆ ಬಂದು ನನ್ನ ಸಹೋದರ ಅನೇಶ್ವರ್ ನನ್ನು ಕೇಳಿದ.ನಾನು ಅವನನ್ನು ಬೆಳಿಗ್ಗೆ ಬರುವಂತೆ ಹೇಳಿದೆ. ಆದರೆ ಅವನು ಮತ್ತೆ ಮತ್ತೆ ಒತ್ತಾಯಿಸಿದ, ನಿದ್ರೆಯಲ್ಲಿದ್ದ ಸಹೋದರನಿಗೆ ಎಬ್ಬಿಸಿದೆ. ಬಳಿಕ ರಾತ್ರಿ ಆತ ಅನೇಶ್ವರ್ ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಆ ಬಳಿಕ ಆತ ಮನೆಗೆ ಬಂದಿಲ್ಲ.ಆತನ ಮೊಬೈಲ್  ಸ್ವಿಚ್ ಆಫ್ ಆಗಿತ್ತು ಎಂದು ಮೃತನ ಸಹೋದರಿ ಸಂಗೀತಾ ಹೇಳಿದ್ದಾರೆ.

ಸಂಗೀತಾ ಪ್ರಕಾರ, ಬೆಳಿಗ್ಗೆ ಶ್ರಾವಣ ಬಳಿ ತಾಯಿ ವಿಚಾರಿಸಿದಾಗ, ಆತ ಕೆಲಸಕ್ಕೆ ಹೋಗಿದ್ದಾನೆ ಎಂದು ಹೇಳಿದ್ದಾನೆ. ಅನೇಶ್ವರನನ್ನು ಪತ್ತೆ ಹಚ್ಚಿಲು ಬಳಿಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶ್ರಾವಣಗೆ ಅನೇಶ್ವರ್ ಎಲ್ಲಿದ್ದಾರೆ ಎಂದು ಕೇಳಿದಾಗ ಎಲ್ಲೋ ಹೋಗಿದ್ದಾನೆ ಮತ್ತೆ ಬರುತ್ತೇನೆ ಎಂದು ದಾರಿ ತಪ್ಪಿಸುತ್ತಿದ್ದ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ನೂಹ್ ಹಿಂಸಾಚಾರದ ಐದು ಅರ್ಧಸತ್ಯಗಳು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...