Homeಚಳವಳಿಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ - ಪ್ರೊ.ದಿಲೀಪ್‌ ಮಂಡಲ್‌

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದೆ, ತಳಸಮುದಾಯಗಳನ್ನು ಕಡೆಗಣಿಸುತ್ತಿದೆ – ಪ್ರೊ.ದಿಲೀಪ್‌ ಮಂಡಲ್‌

- Advertisement -
- Advertisement -

ಟ್ವಿಟ್ಟರ್‌ ಜಾತಿವಾದ ಮಾಡುತ್ತಿದ್ದು, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ ಎಂದು ಹಿರಿಯ ಪತ್ರಕರ್ತರಾದ ಪ್ರೊ.ದಿಲೀಪ್‌ ಮಂಡಲ್‌ ಆರೋಪಿಸಿದ್ದಾರೆ.

ಟ್ವಿಟ್ಟರ್‌ ಒರಿಜಿನಲ್‌ ಆದ, ಹೆಚ್ಚು ಬಳಕೆಯ ಖಾತೆಗಳನ್ನು ವೆರಿಫೈಡ್‌ ಮಾಡುತ್ತದೆ. ಅದಕ್ಕಾಗಿ ಖಾತೆಯ ಹೆಸರಿನ ಮುಂದೆ ’ಬ್ಲೂ ಟಿಕ್’ ಚಿಹ್ನೆ ಹಾಕುತ್ತದೆ. ಇದು ಪ್ರಮುಖ ವ್ಯಕ್ತಿಗಳನ್ನು ಗುರುತಿಸಲು, ಅವರ ಖಾತೆಯನ್ನು ದೃಢೀಕರಿಸಲು ಅನುವಾಗುತ್ತದೆ. ಉದಾಹರಣೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಥವಾ ಬಾಲಿವುಡ್‌ ತಾರೆ ಅಮೀರ್‌ ಖಾನ್‌ರವರ ಹೆಸರಿನಲ್ಲಿ ಹಲವಾರು ಖಾತೆಗಳಿದ್ದಾಗ ಜನರಿಗೆ ಗೊಂದಲವಾಗಬಾರದೆಂದು ಒರಿಜಿನಲ್‌ ಖಾತೆಗೆ ಟ್ವಿಟ್ಟರ್‌ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿರುತ್ತದೆ.

ಈ ವೆರಿಫೈಡ್‌ ವಿಚಾರದಲ್ಲಿ ಟ್ವಿಟ್ಟರ್‌ ಜಾತಿವಾದಿಯಾಗಿ ನಡೆದುಕೊಳ್ಳುತ್ತಿದೆ ಎಂದು ಹಲವಾರು ತಳಸಮುದಾಯದ ಚಿಂತಕರು, ಹೋರಾಟಗಾರರು ಆರೋಪಿಸಿದ್ದಾರೆ. ಇದನ್ನು ಹಿರಿಯ ಪತ್ರಕರ್ತ ಪ್ರೊ.ದಿಲೀಪ್‌ ಮಂಡಲ್‌ರವರು ಮೊದಲು ಆರಂಭಿಸಿದರು. ಜಾತಿ ತಾರತಮ್ಯದ ಹಲವಾರು ಮುಖಗಳನ್ನು ಟ್ವಿಟ್ಟರ್‌ ಮೂಲಕ ಅನಾವರಣ ಮಾಡುತ್ತಿದ್ದ ಅವರ ಖಾತೆಯನ್ನು ಟ್ವಿಟ್ಟರ್‌ ಯಾವುದೇ ಕಾರಣವಿಲ್ಲದೇ ಬ್ಲಾಕ್‌ ಮಾಡಿತು. ಆಗ ಅವರು ಟ್ವಿಟ್ಟರ್‌ ವಿರುದ್ಧ ಅಭಿಯಾನ ಆರಂಭಿಸಿದರು.

ಮೊದಲಿಗೆ ಸ್ಯಾಕ್‌ಮಣಿಸ್‌ ಮಹೇಶ್ವರಿ ಎಂಬುದಾಗಿ ಅವರು ಟ್ರೆಂಡ್‌ ಮಾಡಿದರು. ಅದನ್ನು ಟ್ವಿಟ್ಟರ್‌ ತೆಗೆದುಹಾಕಿತು. ನಂತರ ಕ್ಯಾಸ್ಟಿಸ್ಟ್‌ ಟ್ವಿಟ್ಟರ್‌ ಎಂದು ಆನಂತರ ಜೈಭೀಮ್‌ ಟ್ವಿಟ್ಟರ್‌ ಎಂದು ಟ್ರೆಂಡ್‌ ಮಾಡಿ ಲಕ್ಷಾಂತರ ಜನರ ಗಮನಸೆಳೆದರು. ಇದಾದ ನಂತರ ಟ್ವಿಟ್ಟರ್‌ ಎಚ್ಚೆತ್ತುಕೊಂಡು ಅವರ ಅಕೌಂಟ್‌ಗೆ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡಿತು.

ಆಗ ಅವರು ಕೇವಲ ನನ್ನೊಬ್ಬನದು ಮಾತ್ರವಲ್ಲದೇ ದೇಶದ ಎಲ್ಲಾ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ ಟ್ವಿಟ್ಟರ್‌ ಖಾತೆಗಳಿಗೂ ವೆರಿಫೈಡ್‌ ಎಂದು ’ಬ್ಲೂ ಟಿಕ್’ ಚಿಹ್ನೆ ನೀಡುವಂತೆ ಆಗ್ರಹಿಸಿದರು. #verifySCSTOBCMinority ಹ್ಯಾಷ್‌ಟ್ಯಾಗ್‌ ನೀಡಿದರು. ಆನಂತರ ಈ ವಿಚಾರವಾಗಿ ಇಂದು, ಭೀಮ್ ಆರ್ಮಿ ಮುಂಬೈ ತಂಡವು ಟ್ವಿಟ್ಟರ್ ಇಂಡಿಯಾ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಯನ್ನು ನಡೆಸಿ ಇಡೀದಿನ ಟ್ವಟ್ಟರ್‌ ಕಚೇರಿಯನ್ನು ಬಂದ್‌ಮಾಡಿತ್ತು. ಆಗ ಟ್ವಿಟ್ಟರ್‌ನವರು ಭೀಮ್‌ ಆರ್ಮಿ ಸಂಘಟಕರೊಡನೆ ಸಭೆ ಕರೆದಿದ್ದರು.

ಇದನ್ನೂ ಓದಿ: ’ಜೈಭೀಮ್‌ ಟ್ವಿಟ್ಟರ್‌’ ಮೊಳಗಿದ ಘೋಷಗಳು: ಟ್ವಿಟ್ಟರ್‌ನ ಜಾತೀಯತೆಗೆ ಭಾರೀ ಪ್ರತಿರೋಧ…

ಪಾ. ರಂಜಿತ್‌ ಎಂಬ ತಮಿಳು ನಿರ್ದೇಶಕರು ಕಾಲ ಮತ್ತು ಕಬಾಲಿಯಂತಹ ಸಾವಿರಾರು ಕೋಟಿ ಬಂಡವಾಳದ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಭಾರತದ ಅತ್ಯಂತ ಯಶಸ್ವಿ ಚಿತ್ರಗಳ ನಿರ್ದೇಶಕರಾಗಿದ್ದು, ಟ್ವಿಟ್ಟರ್‌ನಲ್ಲಿ 8 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಳನ್ನು ಹೊಂದಿರುವ ಅಂಬೇಡ್ಕರೈಟ್ ಆಗಿದ್ದಾರೆ. ಅವರ ಖಾತೆಯನ್ನು ವೈರಫೈ ಮಾಡಿಲ್ಲ ಏಕೆ ಎಂದು ಟ್ವಿಟರ್ ಇಂಡಿಯಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅದೇ ರೀತಿಯಾಗಿ ನೂರಾರು ಜನರ ಉದಾಹರಣೆಯನ್ನು ದಿಲೀಪ್‌ ಮಂಡಲ್‌ರವರು ಟ್ವಿಟ್ಟರ್‌ನಲ್ಲಿ ಹೆಸರಿಸಿದ್ದಾರೆ. ಕಾಕಾವಾಣಿ ಎಂಬುವವರು ಒಂದೂವರೆ ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಟ್ರೈಬಲ್‌ ಆರ್ಮಿ 12ಸಾವರ ಅನುಯಾಯಿಗಳನ್ನು ಹೊಂದಿದೆ. ಜೈಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್‌ ರಾವಣ್‌ರವರು 67 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇಂತಹ ಅಸಂಖ್ಯ ತಳಸಮುದಾಯದವರ ಟ್ವಿಟ್ಟರ್‌ ಅಕೌಂಟ್‌ ವೆರಿಫೈ ಆಗಿಲ್ಲ. ಆದರೆ ಕೇವಲ 27 ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಜೈ ಶಾ ಅಕೌಂಟ್‌ ವೈರಿಫೈ ಆಗಿದೆ. 877 ಫಾಲೋವರ್ಸ್‌ಗಳನ್ನು ಹೊಂದಿರುವ ಹಿಂದೂ ವಿಶ್ವ ಎಂಬುವವರ ಅಕೌಂಟ್‌ ವರಿಫೈ ಆಗಲು ಕಾರಣವೇನು? ಎಂದು ಕಿಡಿಕಾರಿದ್ದಾರೆ.

ಇದು ಕೇವಲ ವೆರಿಫೈ ವಿಷಯ ಮಾತ್ರವಲ್ಲ. ಟ್ವಿಟ್ಟರ್‌ನಲ್ಲಿ ತಳಸಮುದಾಯ ವಿಷಯ, ಸುದ್ದಿಗಳನ್ನು, ಬರಹಗಳನ್ನು ಸಹ ಹೆಚ್ಚು ಜನರಿಗೆ ತಲುಪದಂತೆ ಟ್ವಿಟ್ಟರ್‌ ತಡಯುತ್ತಿದೆ ಎಂದು ದಿಲೀಪ್‌ ಮಂಡಲ್‌ರವರ ಆರೋಪಿಸಿದ್ದಾರೆ. ಇದಕ್ಕೆ ಟ್ವಿಟ್ಟರ್‌ ಇಂಡಿಯಾದ ಆಯಾಕಟ್ಟಿಯ ಹುದ್ದೆಗಳಲ್ಲಿ ಕುಳಿತಿರುವ ಜಾತಿವಾದಿಗಳೇ ಕಾರಣ ಎಂದು ದೂರಿದ್ದಾರೆ.

ಇದ್ಯಾವುದಕ್ಕೂ ಟ್ವಿಟ್ಟರ್‌ ಬಳಿ ಉತ್ತರವಿಲ್ಲ. ಮುಕ್ತ ಮತ್ತ ಸ್ವತಂತ್ರ ಎಂದು ಭಾವಿಸುವ ಸೋಷಿಯಲ್‌ ಫ್ಲಾಟ್‌ಫಾರಂಗಳು ಸಹ ಹೇಗೆ ಜಾತಿವಾದಿಗಳಾಗಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಹಾಗಾಗಿ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದು ದಿಲೀಪ್‌ ಮಂಡಲ್‌ ಹೇಳಿದ್ದಾರೆ.

ಈ ಹಿಂದೆಯೂ ಸಹ 7 ಜನ ಮಹಿಳೆಯರೊಂದಿಗೆ ಟ್ವಿಟ್ಟರ್‌ ಸಿಇಓ ಸಭೆ ಮಾಡುವಾಗ ಸ್ಮಾಶ್ ಬ್ರಾಹ್ಮಿನಿಕಲ್ ಪೆಟ್ರಿಯಾರ್ಕಿ ಎಂಬ ಚಿತ್ರ ನೀಡಿದಾಗ ದೊಡ್ಡ ವಿವಾದವಾಗಿತ್ತು. ಅದು ನಿಜ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಲು ಸಂಯುಕ್ತ ಹೋರಾಟ ಕರ್ನಾಟಕ ಆಗ್ರಹ

ಫಲವತ್ತಾದ ಕೃಷಿ ಭೂಮಿ ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿ. ಇಂತಹ ಪರಿಸರ ವಿನಾಶದ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆಯನ್ನು...

‘ಮನೆ ಕೊಡಿ ಇಲ್ಲಾ ಜೈಲಿಗಾದರೂ ಬಿಡಿ’ : ಬೀದಿಗೆ ಬಿದ್ದ ಕೋಗಿಲು ನಿರಾಶ್ರಿತರ ಅಳಲು

"ನಮಗೊಂದು ಸೂರು ಕೊಟ್ಟರೆ ಅದಕ್ಕೆ ಕಾರಣರಾದ ಎಲ್ಲರನ್ನೂ ಹರಸಿ ನೆಮ್ಮದಿಯಾಗಿ ಬದುಕುತ್ತೇವೆ. ಇಲ್ಲವಾದರೆ ನಮ್ಮನ್ನು ಜೈಲಿಗಾದರೂ ಹಾಕಿಬಿಡಿ. ಒಂದು ನೆಲೆ ಮತ್ತು ಮೂರು ಹೊತ್ತಿನ ಊಟವಾದರೂ ಸಿಗುತ್ತದೆ". ಇದು ಸರ್ಕಾರ ಮನೆ ಧ್ವಂಸ...

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...