Homeಚಳವಳಿಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ಪಠ್ಯಕ್ರಮ ನಿರ್ಧರಿಸಲಿರುವ ಕೇಂದ್ರ: ಒಕ್ಕೂಟ ಕಲ್ಪನೆಗೇ ಅನ್ಯಾಯ ಎಂದ ಶಿಕ್ಷಣ ತಜ್ಞರು

ಬಿಜೆಪಿ ಸರಕಾರವು ತನ್ನ ಮತೀಯವಾದಿ ನೀತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಇದು ಸಂಪೂರ್ಣವಾಗಿ ಸಹಕಾರಿಯಾಗುತ್ತದೆ.  ಅವರ ಉದ್ದೇಶವೂ ಸಹ ಇದೇ’ ಎಂದು ಶ್ರೀಪಾದ ಭಟ್‍ ಅಭಿಪ್ರಾಯ ಪಡುತ್ತಾರೆ.

- Advertisement -
- Advertisement -

ಎಲ್ಲವನ್ನೂ ನಿಯಂತ್ರಿಸಲು ಹೊರಟಿರುವ ಮೋದಿ ನೇತೃತ್ವದ ಸರ್ಕಾರ ಈಗ ರಾಜ್ಯಗಳ ಶಿಕ್ಷಣ ಕ್ಷೇತ್ರಕ್ಕೂ ಕೈ ಹಾಕಿದೆ. ಅದು ನಮ್ಮ ಮಕ್ಕಳ ಶಾಲಾ ಪುಸ್ತಕದಲ್ಲಿ ಏನಿರಬೇಕು ಎಂಬುದನ್ನು ತಾನೇ ನಿರ್ಧರಿಸಲು ಹೊರಟಿದ್ದು, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ ಎಂದು ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ತಜ್ಞ, ಜನಪರ ಚಿಂತಕ ಬಿ. ಶ್ರೀಪಾದ ಭಟ್‍, ‘ಇನ್ನು ಮುಂದೆ ರಾಜ್ಯ ಸರಕಾರಗಳು ರಚಿಸಿದ ಪಠ್ಯಪುಸ್ತಕಗಳನ್ನು, ಪಠ್ಯಕ್ರಮವನ್ನು ಕೇಂದ್ರ ಸರಕಾರವು ಸೆನ್ಸಾರ್‌ಶಿಪ್ ಮಾಡಲು ಬಿಜೆಪಿ ನೇತೃತ್ವದ ಆಡಳಿತವು ನಿರ್ಧರಿಸಿದೆ…..’ ಎನ್ನುತ್ತಾರೆ.

‘ಈ ಮೂಲಕ ತನಗೆ ಸರಿ ಕಾಣದ, ಸೈದ್ದಾಂತಿಕವಾಗಿ ಭಿನ್ನ ಪಠ್ಯಗಳಿರುವ ಸಿಲಬಸ್‍ ಅನ್ನು ತೆಗೆದು ಹಾಕಿ ತನ್ನದೇ ಹೊಸ ಪಠ್ಯಗಳನ್ನು ಸೇರಿಸುವ ಪರಮಾಧಿಕಾರ ಹೊಂದಲು ನಿರ್ಧರಿಸಿದೆ…. ಈ ಹಿನ್ನೆಲೆಯಲ್ಲಿ ಎನ್‍ಸಿಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ) ತಮ್ಮ ಶಿಫಾರಸ್ಸುಗಳನ್ನು ಸಲ್ಲಿಸಬೇಕೆಂದು ರಾಜ್ಯಗಳಿಗೆ ಕೇಳಿದೆ. ಎನ್‍ಸಿಇಆರ್‌ಟಿಟಿ ಈ ರೀತಿಯ ನಿರ್ದೇಶನ ನೀಡುತ್ತಿರುವುದು ಇದೇ ಮೊದಲು’ ಎನ್ನುತ್ತಾರೆ ಶ್ರೀಪಾದ ಭಟ್‍.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು ‘ಇದಕ್ಕೂ ಮುಂಚೆ  ಕೇಂದ್ರವು ಕೊಡುವ ಸ್ಥೂಲ ವಿವರಣೆ ಒಳಗೊಂಡಂತೆ ರಾಜ್ಯಗಳು  ಸಲ್ಲಿಸುವ ದಸ್ತಾವೇಜು ಆಧರಿಸಿ ‘ರಾಷ್ಟ್ರೀಯ ಪಠ್ಯಕ್ರಮ’ ರಚನೆಯಾಗುತ್ತಿತ್ತು. ರಾಜ್ಯಗಳು ಕಳುಹಿಸಿದ ಪಠ್ಯಕ್ರಮದಲ್ಲಿ ಕೆಲ ಭಾಗಗಳನ್ನು ತೆಗೆದು ತನ್ನ ಪಠ್ಯವನ್ನು ಸೇರಿಸಲು ಕೇಂದ್ರಕ್ಕೆ ಅಧಕಾರವಿದೆ. ಇದು ಕೂಡ ರಾಜ್ಯಗಳ ಸ್ವಾಯತ್ತತೆ ಮತ್ತು ಒಕ್ಕೂಟ ತತ್ವಕ್ಕೆ ವಿರೋಧ ನೀತಿಯಾಗಿದೆ. ಆದರೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿ ಬರುವುದರಿಂದ ಇದು ಸಾಮಾನ್ಯವಾದ ವಾಡಿಕೆಯಾಗಿದೆ. ಈವರೆಗೂ ಕೇಂದವು ರಾಜ್ಯಗಳ ಪಠ್ಯವಸ್ತು ರಚನೆ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ಆದರೆ ಈ ರೂಢಿಯನ್ನು ಬದಲಿಸಲು ಬಿಜೆಪಿ ನಿರ್ಧರಿಸಿದೆ. ಇದರ ಅನುಸಾರ ಇನ್ನು ಮುಂದೆ ರಾಜ್ಯಗಳು ತಾವು ಶಾಲಾ ಸಿಲಬಸ್‍ ರಚನೆ ಮಾಡುವುದಕ್ಕೂ ಮುಂಚೆ ಕೇಂದ್ರಕ್ಕೆ ಅದರ ಎಲ್ಲಾ ರೂಪುರೇಷೆಗಳ, ಪಠ್ಯಗಳ ಮಾಹಿತಿ ಒದಗಿಸಬೇಕು. ನಂತರ ಕೇಂದ್ರ ಸರಕಾರವು ಅದರಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತೆಗೆಯಬೇಕು ಎಂದು ನಿರ್ಧರಿಸುತ್ತದೆ. ಅದರ ಆದಾರದಲ್ಲಿ ರಾಜ್ಯಗಳು ಮರಳಿ ಪಠ್ಯಕ್ರಮ ರಚಿಸಿ ಕೇಂದ್ರಕ್ಕೆ ಕಳುಹಿಸಬೇಕು. ಇದು ಸರ್ವಾಧಿಕಾರದ ಲಕ್ಷಣವೇ ಆಗಿದ್ದು, ಒಕ್ಕೂಟ ವ್ಯವಸ್ಥೆಯನ್ನೇ ಧ್ವಂಸ ಮಾಡುವ ನಿಟ್ಟಿನಲ್ಲಿ ನಡೆಯುತ್ತಿರುವ ಕ್ರಮಗಳ ಮಗದೊಂದು ಭಾಗವೇ ಆಗಿದೆ’ ಎನ್ನುತ್ತಾರೆ.

‘2007ರಲ್ಲಿ ರಾಜ್ಯಗಳು ಸಿದ್ದಪಡಿಸಿದ್ದ ಪಠ್ಯಕ್ರಮ ಅಥವಾ ಸಿಲಬಸ್‍ ಅನ್ನು 2013ರಲ್ಲಿ ಪರಿಷ್ಕರಿಸಲಾಯಿತು. ಆಗ ಕೇಂದ್ರವು ಯಾವುದೇ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ಈಗ ರಾಜ್ಯಗಳು ಪಠ್ಯಕ್ರಮ ಅಥವಾ ಸಿಲಬಸ್‍ ರಚನೆಗೆ ಮುಂಚೆ ಕೇಂದ್ರಕ್ಕೆ ಅದರ ವಿವರಗಳನ್ನು ಒದಗಿಸಬೇಕು. ಇದು ವಿಕೇಂದ್ರಿಕರಣ ನೀತಿಗೆ ತದ್ವಿರುದ್ಧ’ ಎಂದರು.

‘ಚುನಾವಣೆಗಳೇ ಬೇಡ ಬಿಡಿ. ಕೇಂದ್ರ ಸರ್ಕಾರವೇ ಮುಖ್ಯಮಂತ್ರಿಗಳನ್ನು ಮತ್ತು ರಾಜ್ಯ ಸರ್ಕಾರಗಳನ್ನು ನೇಮಿಸಿ ಬಿಡಲಿ. ಇದು ತೀರಾ ಅತಿಗೆ ಹೋಗುತ್ತಿದೆ. ಹೊಸ ಶಿಕ್ಷಣ ನೀತಿಯೇ ಒಂದು ಅಧ್ವಾನ.. ಎಲ್ಲ ರಾಜ್ಯ ಸರ್ಕಾರಗಳು ಇದನ್ನು ತಿರಸ್ಕರಿಸುವ ನಿರ್ಣಯ ಮಂಡಣೆ ಮಾಡಬೇಕು’ ಎಂದು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಒಂದು ಪಠ್ಯ ಚೌಕಟ್ಟನ್ನು ಒದಗಿಸಬೇಕು ಅಷ್ಟೇ. ಅದರ ಅನ್ವಯ ರಾಜ್ಯಗಳು ತಮ್ಮ ಸ್ಥಳೀಯತೆಯ ಆಧಾರದಲ್ಲಿ ಪಠ್ಯ  ರಚನೆ ಮಾಡಿಕೊಳ್ಳುತ್ತವೆ. ಆದರೀಗ ತಾನು ಸೂಚಿಸಿದ ಪಠ್ಯಗಳನ್ನೇ ಅಥವಾ ಪಠ್ಯಕ್ರಮವನ್ನೇ ಎಲ್ಲರೂ ಪಾಲಿಸಬೇಕು ಎನ್ನುವುದು ಸಂವಿಧಾನ ವಿರೋಧಿ ಕ್ರಮವಾಗಿದೆ. ಸಮವರ್ತಿ ಪಟ್ಟಿಯಲ್ಲಿರುವ ಶಿಕ್ಷಣಕ್ಕೆ ಮೊದಲು ಅನುದಾನ ನೀಡುವ ಕೆಲಸವನ್ನು ಕೇಂದ್ರ ಮಾಡಲಿ. ಅದು ಬಿಟ್ಟು ಇಂತಹ ಅನಾಹುತ ಕೆಲಸ ಮಾಡುವುದನ್ನು ಕೈ ಬಿಡಲಿ. ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡಲು ಹೊರಟ ಕೇಂದ್ರದ ವಿರುದ್ಧ ಎಲ್ಲ ರಾಜ್ಯಗಳ ಜನ ಪ್ರತಿರೋಧ ತೋರಬೇಕಾಗಿದೆ’ ಎಂದು ನಿರಂಜನಾರಾಧ್ಯ ಹೇಳಿದರು.

‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2020 ಸಹ ಶಿಕ್ಷಣದ ಕೇಂದ್ರೀಕರಣಕ್ಕೆ ಹೆಚ್ಚಿನ ಒತ್ತು ಕೊಡುತ್ತದೆ. ಈಗ ಪಠ್ಯದಲ್ಲೂ ತಲೆ ಹಾಕುವ ನಿರ್ಧಾರ ಪ್ರಜಾಪ್ರಭುತ್ವದ ಆಶಯಗಳಿಗೆ, ಸಂವಿಧಾನದ ನೀತಿಸಂಹಿತೆಗಳಿಗೆ ವಿರೋಧಿಯಾಗಿದೆ. ಬಿಜೆಪಿ ಸರಕಾರವು ತನ್ನ ಮತೀಯವಾದಿ ನೀತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಇದು ಸಂಪೂರ್ಣವಾಗಿ ಸಹಕಾರಿಯಾಗುತ್ತದೆ.  ಅವರ ಉದ್ದೇಶವೂ ಸಹ ಇದೇ’ ಎಂದು ಶ್ರೀಪಾದ ಭಟ್‍ ಅಭಿಪ್ರಾಯ ಪಡುತ್ತಾರೆ.

‘ಇದರಿಂದ ರಾಜ್ಯಗಳು ಪಠ್ಯಕ್ರಮ ಸಿದ್ದಪಡಿಸುವ ಸಂಬಂಧಿತ ತಮಗಿರುವ ಅಲ್ಪ ಸ್ವಲ್ಪ ಹಕ್ಕುಗಳನ್ನು ಕಳೆದುಕೊಳ್ಳುತ್ತವೆ. ಕೇರಳ, ತಮಿಳುನಾಡು ರಾಜ್ಯಗಳು ಮಾತ್ರ ಈ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿವೆ. ವಿರೋಧ ಪಕ್ಷ ಆಡಳಿತವಿರುವ ಮಿಕ್ಕ 12 ರಾಜ್ಯಗಳು ದಿವ್ಯ ಮೌನದಲ್ಲಿವೆ. ಕರ್ನಾಟಕ ಬಿಡಿ, ಜಿಎಸ್‍ಟಿ ಪಾಲು, ಅತಿವೃಷ್ಟಿ ಪರಿಹಾರ ಕೊಡದಿದ್ದರೂ ತೆಪ್ಪಗಿರುತ್ತದೆ, ಎಲ್ಲ ಬಿಜೆಪಿ ಆಳ್ವಿಕೆಯ ಸರ್ಕಾರಗಳಂತೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಈ ಇಬ್ಬರು ಶಿಕ್ಷಣ ತಜ್ಞರು ಹೊಸ ಶಿಕ್ಷಣ ನೀತಿಯೇ ಅಪಾಯಕಾರಿ ಎನ್ನುತ್ತಾರೆ. ‘ಆ ಶಿಕ್ಷಣ ನೀತಿಯ ಕರಡುವಿನಲ್ಲಿ ಬಸವ, ಅಂಬೇಡ್ಕರ್, ಪೆರಿಯಾರ್, ತಿರುವಳ್ಳುವರ್ ಮುಂತಾದ ಸಮಾನತೆಯ ಹರಿಕಾರರ ಪ್ರಸ್ತಾಪವೇ ಇಲ್ಲ. ಚರಕ, ಶುಶ್ರೂತ ಇತ್ಯಾದಿ ವೈದಿಕ ಹೆಸರುಗಳೇ ತುಂಬಿವೆ. ಎಲ್ಲ ರಾಜ್ಯ ಸರ್ಕಾರಗಳೂ ಮೊದಲು ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಬೇಕು. ಸಂವಿಧಾನ ಆ ಅವಕಾಶವನ್ನೂ ನೀಡಿದೆ’ ಎಂದು ಪ್ರೊ. ನಿರಂಜನಾರಾಧ್ಯ ನಾನುಗೌರಿ.ಕಾಂಗೆ ತಿಳಿಸಿದರು.


ಇದನ್ನೂ ಓದಿ: ಪದವಿ ಶಿಕ್ಷಣ ನಾಲ್ಕು ವರ್ಷಕ್ಕೆ ಏರಿಸುವುದಕ್ಕೆ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವಿರೋಧ   

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...