Homeಮುಖಪುಟಬುಡಕಟ್ಟು ಬಾಲಕಿಯರಲ್ಲಿ ಹೆಚ್ಚಿದ ಬಾಲ್ಯವಿವಾಹ, ವಿಚ್ಛೇದನ: ವರದಿ

ಬುಡಕಟ್ಟು ಬಾಲಕಿಯರಲ್ಲಿ ಹೆಚ್ಚಿದ ಬಾಲ್ಯವಿವಾಹ, ವಿಚ್ಛೇದನ: ವರದಿ

- Advertisement -
- Advertisement -

ಪುಣೆ, ಅಹ್ಮದ್‌ನಗರ, ಔರಂಗಾಬಾದ್ ಮತ್ತು ಅಮರಾವತಿ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಾದ ಪಾರ್ಧಿಗಳು, ಭಿಲ್‌ಗಳು ಮತ್ತು ಥಕರ್‌ ಸಮುದಾಯದ ಹೆಣ್ಣುಮಕ್ಕಳು ಬಾಲ್ಯ ವಿವಾಹಗಳು ಮತ್ತು ಹೆಚ್ಚಿನ ವಿಚ್ಛೇದನದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಚೈಲ್ಡ್‌ ರೈಟ್ಸ್‌ ಆಂಡ್ ಯೂ (CRY) ವರದಿ ತಿಳಿಸಿದೆ.

ಈ ಸಮುದಾಯಗಳಲ್ಲಿನ ಬಾಲಕಿಯರನ್ನು ಹಣಕಾಸಿನ ಕಾರಣಗಳಿಗಾಗಿ ಸಣ್ಣ ಪ್ರಾಯದಲ್ಲಿ ವಿವಾಹ ಮಾಡಿಸಿಕೊಡಲಾಗುತ್ತದೆ. ಸಾಲಗಳನ್ನು ಮರುಪಾವತಿಸಲು ಅಥವಾ ಕುಟುಂಬದಲ್ಲಿ ಯಾರಾದರು ವ್ಯಕ್ತಿಗಳು ಬಂಧನದಲ್ಲಿದ್ದರೆ ಅವರನ್ನು  ಜಾಮೀನಿನ ಮೇಲೆ ಬಿಡುಗಡೆಗೆ ಹಣಕ್ಕಾಗಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ವಿವಾಹ ಮಾಡಿಸಿಕೊಡಲಾಗುತ್ತದೆ.

ಹಣದ ವ್ಯವಹಾರವು ವರನ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಬಾಲಕಿಯರ ಸೌಂದರ್ಯ ಮತ್ತು ದೈಹಿಕ ಲಕ್ಷಣಗಳನ್ನು ಅವಲಂಬಿಸಿರುತ್ತದೆ.  ಮೊತ್ತವು ರೂ 25,000 ರಿಂದ ರೂ 50,000 ವರೆಗೆ ಇರುತ್ತದೆ ಮತ್ತು ಕೆಲವೊಮ್ಮೆ ಒಂದು ಲಕ್ಷಕ್ಕೂ ಹೆಚ್ಚು ಇರಬಹುದು. ಅನೇಕ ಪ್ರಕರಣಗಳಲ್ಲಿ ಕುಟುಂಬದ ಋಣ ತೀರಿಸಲು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ.

ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಾಗ, ಕಟುಂಬವು ಬಾಲಕಿಯರನ್ನು  ತನ್ನ ಒಪ್ಪಿಗೆಯಿಲ್ಲದೆ ಸಾಲಗಾರನ ಮನೆಗೆ ಸೆಟಲ್‌ಮೆಂಟ್‌ಗಾಗಿ  ಎಂದು ಮದುವೆ ಮಾಡಿಸಿಕೊಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಜೈಲಿನಲ್ಲಿರುವ ವ್ಯಕ್ತಿಯನ್ನು ಬಿಡುಗಡೆ ಮಾಡಲು ಅಗತ್ಯವಿರುವ ಹಣವನ್ನು ಪಡೆಯಲು ಬಾಲಕಿಯರನ್ನು ಮದುವೆ ಮಾಡಿಸಿಕೊಡಲಾಗುತ್ತದೆ ಎಂದು ವರದಿ ಹೇಳಿದೆ.

ಸಮುದಾಯಗಳಲ್ಲಿ ಬಾಲ್ಯವಿವಾಹಗಳು ಸಾಕಷ್ಟು ಹೆಚ್ಚಿವೆ. 10 ವರ್ಷದಿಂದ 15 ವರ್ಷ ವಯಸ್ಸಿನ ಬಾಲಕಿಯರು ಬೇಗನೆ ಮದುವೆಯಾಗುತ್ತಾರೆ. ಹಣಕಾಸಿನ ಸಾಲವನ್ನು ಇತ್ಯರ್ಥಪಡಿಸಲು ಮದುವೆ ಮಾಡುತ್ತಾರೆ. ಮದುವೆಯಾದ ಒಂದು ಅಥವಾ ಎರಡು ವರ್ಷಗಳ ನಂತರ ಹೆಣ್ಣುಮಕ್ಕಳನ್ನು ತ್ಯಜಿಸುವ ಘಟನೆ ಸಾಮಾನ್ಯವಾಗಿದೆ. ಈ ಬಾಲಕಿಯರಿಗೆ ತಮ್ಮ ಹೆತ್ತವರು ಮರುಮದುವೆಯನ್ನು ಕೂಡ ಮಾಡುತ್ತಾರೆ ಮತ್ತಷ್ಟು ಶೋಷಣೆಗೆ ಒಳಗಾಗುತ್ತಾರೆ ಎಂದು ವರದಿ ತಿಳಿಸಿದೆ.

CRY ನಡೆಸಿದ ಅಧ್ಯಯನದ ಪ್ರಕಾರ, 2020 ಮತ್ತು 2022ರ ನಡುವೆ, ಪಾರ್ಧಿ, ಭಿಲ್ ಮತ್ತು ಥಾಕರ್ ಸಮುದಾಯದ ಒಟ್ಟು 396 ಬಾಲಕಿಯರ ಮರುಮದುವೆ ನಡೆದಿದೆ.

ಪಾರ್ಧಿಗಳು, ಭಿಲ್‌ಗಳು ಮತ್ತು ಥಕರ್‌ ಬುಡಕಟ್ಟು ಸಮುದಾಯದ ಜನರು ರಾಜ್ಯ ಮಟ್ಟದಲ್ಲಿ ಹಾಗೂ ಸಮಾಜದ ಇತರ ಹಂತಗಳಲ್ಲಿ ಬಹುತೇಕ ಪ್ರಾತಿನಿಧ್ಯವಿಲ್ಲದೆ, ಅವರು ತಮ್ಮ ವೈಯಕ್ತಿಕ ಗುರುತನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ CRY ವರದಿ ತಿಳಿಸಿದೆ.

CRY  ಜನರಲ್ ಮ್ಯಾನೇಜರ್ ಕುಮಾರ್ ನಿಲೇಂದು ಅವರ ಪ್ರಕಾರ, ಅಲೆಮಾರಿ ಸಮುದಾಯಗಳು ಸಾಮಾನ್ಯವಾಗಿ ವಿಭಿನ್ನ ರೀತಿಯ ಕಷ್ಟಗಳನ್ನು ಎದುರಿಸುತ್ತವೆ ಮತ್ತು ಆದ್ದರಿಂದ ಈ ಸಮುದಾಯಗಳ ಮಕ್ಕಳು ಹೆಚ್ಚು ಹಿಂದುಳಿದಿದ್ದಾರೆ ಎಂದು ಹೇಳಿದೆ. CRY ಈ ಸಮುದಾಯಗಳ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದೆ ಮತ್ತು ನಾವು ಅದನ್ನು ಮಾಡುವಲ್ಲಿ ತುಲನಾತ್ಮಕವಾಗಿ ಯಶಸ್ವಿಯಾಗಿದ್ದೇವೆ ಎಂದು ಹೇಳಿಕೊಂಡಿದೆ.

ಇದನ್ನು ಓದಿ: ಸಂಸದ ಎ ರಾಜಾ ಒಡೆತನದ 55ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...