Homeಮುಖಪುಟಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

ಸಂವಿಧಾನದ ಆಶಯ ಮಣ್ಣು ಪಾಲು ಮಾಡಲಿರುವ ಸಂಸದರು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮ ದೇಶದ ಸಂಸತ್ತಿಗೆ ಅದರದೆ ಆದ ಘನತೆ ಗೌರವ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತೀಯರೆಲ್ಲರ ಮಾನವನ್ನು  ಕಾಪಾಡುತ್ತ ಬಂದಿದೆ. ನಮ್ಮ ರಾಷ್ಟ್ರ , ಧರ್ಮ ನಿರಪೇಕ್ಷವಾದ ರಾಷ್ಟ್ರವಾದರೂ ಸಹ ಹಲವಾರು ಮತ ಧರ್ಮಗಳನ್ನು ತನ್ನ ಒಡಲಲ್ಲಿ ಇದು ಇಂಬಿಟ್ಟುಕೊಂಡಿದೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅದರ ತತ್ವಗಳನ್ನು ಅನುಸರಿಸುವ ಸ್ವಾತಂತ್ರ್ಯವಿದೆ. ಹಾಗಂತ ಎಲ್ಲರೂ ಧರ್ಮದ ಅಡಿಯಲ್ಲಿಯೆ ಬದುಕಬೇಕು ಎಂದೆನಿಲ್ಲ. ಅದೆಷ್ಟೋ ಜನರಿಗೆ ಧರ್ಮ ಒಂದು ಅಫೀಮಾಗಿ ಕಾಣಿಸಿದೆ. ಅಂಥವರು ತಮ್ಮ ವಿವೇಚನೆಯಂತೆ ಭಾರತದ ಸೌರ್ವಭೌಮತ್ವಕ್ಕೆ ದಕ್ಕೆಯಾಗದಂತೆ ವರ್ತಿಸುವ ಉದಾಹರಣೆಗಳು ಸಾಕಷ್ಟು ಇವೆ. ಗುಡಿ ಗುಂಡಾರ ಚರ್ಚು ಮಸೀದಿ ಗುರುದ್ವಾರ ಅನುಭವ ಮಂಟಪ ಮುಂತಾದವು ನಮ್ಮಲ್ಲಿ ಸಾಲು ಸಾಲಾಗಿ ಸಿಕ್ಕುತ್ತವೆ. ಆಯಾ ಧರ್ಮಿಯರು ತಮ್ಮ ತಮ್ಮ ನಂಬಿಕೆ ಆಚರಣೆಗಳನ್ನು ಮುನ್ನಡೆಸಿಕೊಂಡು ಹೊರಟಿದ್ದಾರೆ.

ಯಾವುದೆ ಧರ್ಮ ಇನ್ನೊಂದು ಧರ್ಮದ ಮೇಲೆ ಆಕ್ರಮಣ ನಡೆಸಬಾರದು. ಧರ್ಮದ ಮೂಲ ತಳಹದಿಯೆ ದಯೆ, ಪ್ರೀತಿ, ವಿಶ್ವಾಸ, ಅಂತಃಕರಣ ಎಂಬುದನ್ನು ನಾವು ಯಾರೂ ಮರೆಯಬಾರದು. ಆಯಾ ಧರ್ಮದ ಮೂಲಭೂತ ತತ್ವಗಳ ಕುರಿತು ಆರೋಗ್ಯಕರವಾಗಿ ಚಿಂತಿಸಬಹುದೆ ಹೊರತು ಆಕ್ರಮಣಕಾರಿಯಾಗಿ ಅದರ ವಿರುದ್ಧ ದಂಡೆತ್ತಿ ಹೋಗುವುದಲ್ಲ. ಸಮಾಜದಲ್ಲಿ ವಿಚಾರಗಳನ್ನು ಹರಿಬಿಡುವ ಮೂಲಕ ಧರ್ಮದ ಆಚರಣೆಗಳು ತಪ್ಪಾಗಿದ್ದರೆ ಅವನ್ನು ಒಪ್ಪಮಾಡಲು ಶ್ರಮಿಸಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

ಮೂಲತಃ ಧರ್ಮ ಸಂಸ್ಥಾಪಕರು ಯಾರಿಗೂ ಕೇಡುಂಟು ಮಾಡದ, ಎಲ್ಲರಿಗೂ ಒಳಿತನ್ನು ಉಂಟು ಮಾಡುವ ತತ್ವಗಳಿಂದ ಧರ್ಮವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಅವನ್ನು ಆಚರಣೆಗೆ ತರಬೇಕಾದ ಮುಲ್ಲಾ ಪಾದ್ರಿ ಪೂಜಾರಿಗಳು ತಮ್ಮ ತಪ್ಪು ಗ್ರಹಿಕೆಯಿಂದ ಮೂಲ ಗ್ರಂಥದ ತತ್ವಗಳನ್ನು ಜಾರಿಗೆ ತರುವಲ್ಲಿ ಸೋತು ಹೋಗಿದ್ದಾರೆ. ಇದರಿಂದಾಗಿ ಧರ್ಮ ವಿವೇಚನೆಯ ಮಾರ್ಗವಾಗುವ ಬದಲು ಇಂದು ಧರ್ಮ ಬಂಧನದವಾಗಿದೆ. ಸ್ವಚ್ಚಂದ ಹಕ್ಕಿಯನ್ನು ಕೂಡಿಹಾಕಿ ಅದರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ.

ಕೃಪೆ: ಪಂಜು ಗಂಗೊಳ್ಳಿ

ಭಾರತದ ಇಂದಿನ ಪರಿಸ್ಥಿತಿ ಎಂದಿಗಿಂತಲೂ ತುಂಬಾ ಭೀಕರವಾಗಿದೆ. ಧರ್ಮದ ಆಶಯಗಳು ಸಂಸತ್ತನ್ನು ಪ್ರವೇಶಿಸಿದ್ದರೆ ಯಾರಿಗೂ ತೊಂದರೆ ಇರುತ್ತಿರಲಿಲ್ಲ. ಆದರೆ  ಅಧರ್ಮದ ಹಿನ್ನೆಲೆಯ ಉಗ್ರವಾದ ನಮ್ಮ ಸಂಸತ್ತನ್ನು ಪ್ರವೇಶಿಸಿದೆ. ಮೊನ್ನೆ ಮೊನ್ನೆಯ ಸಂಸತ್ತಿನ ಆರಂಭದಲ್ಲಿ ಮೊಳಗಿದ ಜೈಶ್ರೀರಾಮ್, ತಕ್ಬಿರ್ ಅಲ್ಲಾಹು ಅಕ್ಬರ್, ಜೈ ಕಾಳಿ ಮಾತೆ ಎಂಬ ಮಾತುಗಳು ಅವರವ ಅಂತಃಕರಣದಿಂದ ಬಂದಿದ್ದರೆ ಯಾವ ಪ್ರಶ್ನೆಯೂ ನಮ್ಮಲ್ಲಿ ಮೊಳೆಯುತ್ತಿರಲಿಲ್ಲ. ಆದರೆ ಆ ಘೋಷಣೆಗಳ ಹಿಂದೆ ದೇಶದ ಜನರ ಭಾವನಾತ್ಮಕ ಮನಸ್ಸುಗಳನ್ನು ಉಪಯೋಗಿಸಿಕೊಂಡು ಮೇಲೇರಬೇಕೆಂಬ ತುಡಿತ ಇವರಲ್ಲಿ ಇದ್ದದ್ದು ಯಾರಿಗಾದರೂ ಕಾಣುತ್ತದೆ. ನಿಜವಾದ ಧರ್ಮದ ತಿರುಳುಗಳು ಓಟ್ ಬ್ಯಾಂಕ್ ಮಾಡಿಕೊಂಡರೆ ಯಾರದೂ ತಕರಾರು ಇಲ್ಲ. ಆದರೆ ಧರ್ಮದ ತತ್ವಗಳನ್ನು ಮೂಲೆಗುಂಪು ಮಾಡಿ, ಆ ತತ್ವಗಳನ್ನು ತಮ್ಮ ಮೂಗಿನ ನೇರಕ್ಕೆ ಅರ್ಥೈಸಿಕೊಂಡು ಓಟಿನ ರಾಜಕಾರಣ ಮಾಡುವುದು ಇದೆಯಲ್ಲ ಇದು ಜನತೆಯನ್ನು ಗಂಡಾಂತರಕ್ಕೆ ದೂಡಬಲ್ಲುದು.

ಕೃಪೆ: ಪಿ ಮಹಮ್ಮದ್

ಈ ಮನೋಭಾವದ ಹಿನ್ನೆಲೆಯ ಜೈಶ್ರೀರಾಮ ಘೋಷಣೆ ತುಂಬಾ ಅಪಾಯಕಾರಿಯಾದ ಬೆಳವಣಿಗೆ. ಜೈಶ್ರೀರಾಮ ಘೋಷಣೆ ಕೂಗುವುದು ಸಂವಿಧಾನ ವಿರೋಧಿ ಅಲ್ಲ, ಆದರೆ ಆ ಘೋಷಣೆಯೊಳಗೆ ಇನ್ನೊಬ್ಬರ ಕೆರಳಿಸುವುದು, ಅವಮಾನಿಸುವುದು, ತುಚ್ಛವಾಗಿ ಕಾಣುವುದು ಇದೆಯಲ್ಲ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಜೈ ಶ್ರೀರಾಮ ಘೋಷಣೆ ಕೂಗಿದಾಕ್ಷಣ ಅವರನ್ನು ಮಮತಾ ಬ್ಯಾನರ್ಜಿ ಜೈಲಿಗೆ ಅಟ್ಟುವುದು ಎಷ್ಟು ತಪ್ಪೋ, ಮಮತಾ ಅವರನ್ನು ಕಂಡಾಕ್ಷಣ ಅವರ ಚಿತ್ತಾವಣೆಗಾಗಿ ಜೈ ಶ್ರೀರಾಮ ಕೂಗುವುದು ಕೂಡ ತಪ್ಪು.

ಮತ್ತೊಂದು ಸಂಗತಿ : ಧರ್ಮದ ಆಚರಣೆಗಳು , ತತ್ವಗಳು ತೀರಾ ಖಾಸಗಿಯಾದ ಸಂಗತಿಗಳು. ಗಂಡ ಹೆಂಡತಿಯ ಸಂಬಂಧದಂತೆ ಅದು ಅಂತರಂಗದ ಸತ್ಯ. ಅದನ್ನು ಎಲ್ಲರಿಗೂ ಕಾಣಿಸುವಂತೆ ತೋರಿಸುವ ಅಗತ್ಯತೆ ಕಾಣುವುದಿಲ್ಲ. ಎಲ್ಲರಿಗೂ ಕಾಣಲಿ ಎಂಬಂತೆ ಧರ್ಮದ ಆಚರಣೆಗಳು ಮಾಡುತ್ತಿದ್ದರೆ ಅದು ಕೇವಲ ಆಡಂಬರದ ಆಚರಣೆಯಾಗುತ್ತದೆ. ಅಂತರಂಗದ ಆಚರಣೆ ಆಗಿರುವುದಿಲ್ಲ. ಧರ್ಮ ನಮ್ಮ ನಮ್ಮ ಮನದ ಕೊಳೆಯನ್ನು ತೊಳೆಯಲು ಉಪಯೋಗಿಸಿಕೊಳ್ಳಬೇಕೇ ಹೊರತು, ನಮ್ಮ ಅಂತರಂಗಕ್ಕೆ ಎಲ್ಲಿಯದೋ ಕಸ ಕಡ್ಡಿ ತಂದು ಹಾಕುವುದಕ್ಕೆ ಅಲ್ಲ. ಧರ್ಮ ಹರಿವ ನೀರಿನಂತೆ ನಿರ್ಮಲ. ನಿಷ್ಕಲ್ಮಶ. ಅದು ನಿಂತ ನೀರಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಸಂಸತ್ ಸದಸ್ಯರು ಭಾರತವನ್ನು ಊಧ್ರ್ವಮುಖದತ್ತ ಕೊಂಡು ಹೋಗಬಲ್ಲರು.

ಸ್ವವಿಮರ್ಶೆ , ಆತ್ಮವಲೋಕನ ಇಲ್ಲದೆ ನಾ ಹೆಚ್ಚು ನೀ ಹೆಚ್ಚು ಎಂಬ ದಾಟಿಯಲ್ಲಿ ಹೊರಟ ಸಂಸದರ ಮಾತು ವರ್ತನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದರೆ ನಮ್ಮ ಭಾರತದ ಸಂಸತ್ತು ಅಧರ್ಮ ಸಂಸತ್ತಾಗಿ ಮಾರ್ಪಾಟಾಗುತ್ತದೆ. ಸಂತೆಯ ಗದ್ದಲ,  ಬಲಶಾಲಿಯ ನಡೆ ನುಡಿಗಳೆ ಶ್ರೇಷ್ಠ ಎಂಬ ಕಾಡು ನ್ಯಾಯ ಸಂಸತ್ತು ಪ್ರವೇಶಿಸಿದರೆ ದೇಶದ ಜನತೆ ಮತ ಧರ್ಮಗಳ ನೆಪದಲ್ಲಿ ಹತರಾಗುವ ಕಾಲ ದೂರವಿಲ್ಲವೆನಿಸುತ್ತದೆ. ಧರ್ಮ ಅಫೀಮಾಗಿ ಮಾರ್ಪಟ್ಟಾಗ ಇದೆಲ್ಲ ಸಾಧ್ಯವಾಗುತ್ತದೆ. ಭಾರತ ನಿಜವಾದ ಧರ್ಮದ ಆಶಯಗಳನ್ನು ಹೊತ್ತುಕೊಂಡು ಹೋಗಲಿ. ಸಂವಿಧಾನದ ಮಾನವನ್ನು ಸಂಸದರು ಹಾಳು ಮಾಡದಿರಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...