Homeಕರೋನಾ ತಲ್ಲಣಸಂಪರ್ಕದ ಮೂಲಕ ಕೊರೊನಾ : ಭಾರತದಲ್ಲೇ ಅತಿ ಹೆಚ್ಚು

ಸಂಪರ್ಕದ ಮೂಲಕ ಕೊರೊನಾ : ಭಾರತದಲ್ಲೇ ಅತಿ ಹೆಚ್ಚು

- Advertisement -
- Advertisement -

ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ, ಭಾರತವು ವಿಶ್ವದ ಅತ್ಯಧಿಕ ಕೊರೊನಾ ಸಂಪರ್ಕ ದರಕ್ಕೆ ಸಾಕ್ಷಿಯಾಗಿದೆ ಎಂದು ತಿಳಿದುಬಂದಿದೆ. ಆ ಮೂಲಕ ಸೋಂಕಿತ ವ್ಯಕ್ತಿಯು ಪ್ರತಿ ಎರಡು ದಿನಗಳಿಗೊಮ್ಮೆ ಇನ್ನೊಬ್ಬರಿಗೆ ಸೋಂಕು ತಗುಲಿಸುತ್ತಿದ್ದಾನೆ. ಆತಂಕಕಾರಿ ಸಂಗತಿಯೆಂದರೆ, ಈ ತಿಂಗಳ ಕೊರೊನಾ ಸಂಪರ್ಕ ದರದಲ್ಲಿ ಭಾರಿ ಏರಿಕೆಯಾಗಿದೆ.

ತಂತ್ರಜ್ಞಾನ ವಿಜ್ಞಾನ ವಿಭಾಗವು ಪ್ರಾರಂಭಿಸಿದ ಮಾದರಿಯ ಮೂಲಕ ಮಾಡಲಾಗಿರುವ ಇತ್ತೀಚಿನ ವಿಶ್ಲೇಷಣೆಯ ಪ್ರಕಾರ, “ಏಪ್ರಿಲ್ ಮಧ್ಯದ ವೇಳೆಗೆ ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಉತ್ತುಂಗಕ್ಕೆ ಏರುತ್ತದೆ. ಈ ಸಮಯದಲ್ಲಿ ದೈನಂದಿನ ಸೋಂಕುಗಳು 70,000 ಮತ್ತು 80,000 ರ ನಡುವೆ ಇರುತ್ತದೆ”. ಮುಖ್ಯವಾಗಿ ಈ ಸಮಯದಲ್ಲಿ ಮಹಾರಾಷ್ಟ್ರದಲ್ಲೇ ಪ್ರಕರಣ ಹೆಚ್ಚಿರುತ್ತದೆ ಎಂದು ವಿಶ್ಲೇಷಣೆ ತಿಳಿಸಿದೆ.

ಇದನ್ನೂ ಓದಿ: ತಮಿಳುನಾಡು: ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೊ ಬಳಸಲು BJP ಅಭ್ಯರ್ಥಿ ಹಿಂದೇಟು!

ವಿಶ್ಲೇಷಣೆ ನಡೆಸಿರುವ ವಿಜ್ಞಾನಿಗಳ ಪ್ರಕಾರ, ಶಾಲಾ-ಕಾಲೇಜುಗಳು, ಮಾರುಕಟ್ಟೆಗಳು, ಸಾರ್ವಜನಿಕ ಸ್ಥಳಗಳು ಮತ್ತು ಸಾರ್ವಜನಿಕ ಸಾರಿಗೆಗಳು ಸಂಪರ್ಕ ದರದ ಈ ಅನಿರೀಕ್ಷಿತ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ. ವೇಗವಾಗಿ ಹರಡುವ ರೂಪಾಂತರಿ ವೈರಸ್‌ಗಳು ಕೂಡಾ ಇದಕ್ಕೆ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಸಂಪರ್ಕದಿಂದಾಗಿ ಕೊರೊನಾ ಹರಡುತ್ತಿರುವ ಸಂಖ್ಯೆಯು ಭಾರತದಲ್ಲಿ ಕಂಡುಬರುತ್ತಿರುವಷ್ಟು ಪ್ರಪಂಚದಲ್ಲಿ ಎಲ್ಲಿಯೂ ವರದಿಯಾಗಿಲ್ಲ. ಸಂಪರ್ಕ ದರದಲ್ಲಿನ ಭಾರಿ ಏರಿಕೆ ಎಲ್ಲೆಡೆ ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ” ಎಂದು ಅವರು ತಿಳಿಸಿದ್ದಾರೆ.

ಮಾರ್ಚ್‌‌‌‌‌‌ ಆರಂಭದಲ್ಲಿ, ಒಬ್ಬ ಸೋಂಕಿತ ವ್ಯಕ್ತಿಯು ನಾಲ್ಕು ದಿನಗಳಲ್ಲಿ ಇನ್ನೊಬ್ಬರಿಗೆ ಸೋಂಕು ತಗುಲಿಸುತ್ತಿದ್ದರೆ, ಪ್ರಸ್ತುತ ಸುಮಾರು ಎರಡನೆ ದಿನದಲ್ಲಿ ಇನ್ನೊಬ್ಬರಿಗೆ ಸೋಂಕು ಹರಡುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿನ ಹೆಚ್ಚಳವು ಮುಖ್ಯವಾಗಿ ಸಂಪರ್ಕ ದರದಲ್ಲಿನ ಗಮನಾರ್ಹ ಹೆಚ್ಚಳದಿಂದ ಆಗಿದೆ ಎಂದು ಅಧ್ಯಯನದ ಭಾಗವಾಗಿರುವ ಕಾನ್ಪುರದ ಐಐಟಿಯ ಉಪನಿರ್ದೇಶಕ ಮನೀಂದ್ರ ಅಗ್ರವಾಲ್ ಹೇಳಿದ್ದಾರೆ.

ಅಗ್ರವಾಲ್‌‌‌ ‌‌‌‌‌‌ಅವರ ಪ್ರಕಾರ ಎರಡನೆ ಅಲೆಯ ಅತೀ ಹೆಚ್ಚು ಪ್ರಕರಣಗಳು ಏಪ್ರಿಲ್ 15 ರಿಂದ 25 ರ ಸುಮಾರಿಗೆ ವರದಿಯಾಗುತ್ತದೆ.

ಇದನ್ನೂ ಓದಿ: ಬೆಳ್ಳಿಚುಕ್ಕಿ: ಪಶ್ಚಿಮದಲ್ಲಿ ಹುಟ್ಟುವ ಸೂರ್ಯ ಮತ್ತು ಒಂದು ವರ್ಷಕ್ಕೂ ದೀರ್ಘವಾದ ಒಂದು ದಿನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...