Homeಮುಖಪುಟಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

- Advertisement -
- Advertisement -

ನೆಹರು ಮತ್ತು ಕಮಲಾರವರ ಮಗಳಾದ ಇಂದಿರಾ ಬಾಲ್ಯದಲ್ಲಿ ಏಕಾಂಗಿಯಾಗಿ ದಿನಗಳನ್ನು ಕಳೆದವರು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿಯ ಜೊತೆ ಅಲಹಾಬಾದಿನ ಆನಂದಭವನದಲ್ಲಿ ವಾಸ. ತಂದೆಯೋ ಸ್ವಾತಂತ್ರ್ಯ ಚಳವಳಿಯ ಮುಖ್ಯ ಭಾಗ. ರಾಜಕೀಯ, ಬಂಧನ ಮತ್ತು ಹೋರಾಟಗಳ ಕಾರಣಗಳಿಂದಾಗಿ ಮಗಳ ಜೊತೆಗೆ “ಕ್ವಾಲಿಟಿ ಟೈಂ” ಎಂದಿಗೂ ಕೊಡಲಾಗುತ್ತಿರಲಿಲ್ಲ. ಇಂದಿರಾಗೆ ಹುಟ್ಟಿದ ಒಬ್ಬ ತಮ್ಮನೋ ಬಲು ಬೇಗ ಕಣ್ಮುಚ್ಚಿದ. ರವೀಂದ್ರನಾಥ್ ಠಾಗೋರರ ಶಾಂತಿನಿಕೇತನವೂ ಸೇರಿದಂತೆ ಶಾಲೆಗೆಂದು ಹೋದರೂ ನಾನಾ ಕಾರಣಗಳಿಂದ ಶಾಲೆಗಳನ್ನು ಪದೇ ಪದೇ ಬದಲಾಯಿಸಬೇಕಾಗುತ್ತಿತ್ತು. ಕೊನೆಗೆ ಠಾಗೋರರ ಶಾಂತಿನಿಕೇತನ, ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಯೂನಿವರ್ಸಿಟಿ ಆಫ್ ಆಕ್ಸ್‍ಫರ್ಡ್‍ಗೆ ಶೈಕ್ಷಣಿಕವಾಗಿ ಸೇರ್ಪಡೆಯಾದ್ದರಿಂದ ಇಂದಿರಾ ಪದವಿಯನ್ನು ಪಡೆದಿದ್ದು ಅಲ್ಲಿಂದಲೇ. ಇಷ್ಟೆಲ್ಲದರ ಜೊತೆಗೆ ಅವರ ಆರೋಗ್ಯವೂ ಕೆಡುತ್ತಿದ್ದರಿಂದ ಪದೇಪದೇ ಚಿಕಿತ್ಸೆಗಾಗಿ ಸ್ವಿಜರ್‍ಲೆಂಡ್‍ಗೆ ಹೋಗುತ್ತಿದ್ದರು.

ಇವು ಔಪಚಾರಿಕ ಶಿಕ್ಷಣವನ್ನು ಪಡೆಯಲು ಇಂದಿರಾ ಎದುರಿಸುತ್ತಿದ್ದ ಅಡ್ಡಿ ಆತಂಕಗಳು. ಅಕಾಡೆಮಿಕ್ ಆಗಿ ಇಂದಿರಾ ಉತ್ತಮವಾದ ಮೇಲ್ಗೈಯನ್ನು ಸಾಧಿಸಿದ್ದು ಅಷ್ಟಕಷ್ಟೇ ಆಗಿದ್ದರೂ ಬಹು ಸುಶಿಕ್ಷಿತ ವ್ಯಕ್ತಿಯಾಗಿ ರೂಪುಗೊಂಡಿದ್ದು ತಂದೆ ನೀಡಿದ ಅನೌಪಚಾರಿಕ ಶಿಕ್ಷಣದಿಂದ.
ಸ್ವಾತಂತ್ರ್ಯ ಹೋರಾಟದಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ನೆಹರು ನೇರವಾಗಿ ಮಗಳ ಜೊತೆಗೆ ಇರಲಾಗದಿದ್ದರೂ ಮಗಳನ್ನು ಸುಶಿಕ್ಷಿತೆಯನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅದರ ಸಾಕ್ಷಿಯೇ “ಮಗಳಿಗೆ ತಂದೆಯ ಓಲೆಗಳು.”

10-11 ವರ್ಷದ ಹುಡುಗಿಗೆ ನೈನಿತಾಲ್ ಜೈಲಿನಿಂದ ಬರೆದಿರುವ ಈ ಪತ್ರಗಳು ಜಗತ್ತಿನ ಚರಿತ್ರೆಯನ್ನು, ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ವಿಕಾಸವನ್ನು ತೆರೆದಿಡುತ್ತಾ ಹೋಗುತ್ತದೆ. ಇದು ಆ ಕಾಲಘಟ್ಟದ ಒಂದು ಸಂಕ್ಷಿಪ್ತ ವಿಶ್ವಕೋಶ. ಬರೆದಿರುವುದೋ ಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದಾದರೂ ತಮ್ಮ ಈ ಪತ್ರಗಳು ಸಂಗ್ರಹ ಯೋಗ್ಯವಾಗಿ ಮುಂದೊಂದು ದಿನ ಅತ್ಯುತ್ತಮ ಪುಸ್ತಕಗಳ ಸಾಲಿಗೆ ಸೇರಲಿದೆ ಎಂಬ ದೂರದೃಷ್ಟಿಯೂ ಅವರಿಗಿತ್ತು. ಹಾಗಾಗಿ ಒಂದೇ ಪ್ರಯತ್ನದಲ್ಲಿ ಮಗಳನ್ನು ಸುಶಿಕ್ಷಿತಳನ್ನಾಗಿಸುವುದು ಮತ್ತು ಗ್ರಂಥರಚನೆ ಎರಡಕ್ಕೂ ಆಕರಗಳನ್ನು ಸೃಷ್ಟಿಸಿದರು.

ಭೂಮಿಯ ಉಗಮ, ಸಸ್ಯ, ಪ್ರಾಣಿಗಳ ಸೃಷ್ಟಿ, ಜನಾಂಗಗಳು ಹೇಗೆ ಹುಟ್ಟಿದವು, ನಾಗರಿಕತೆ, ಧರ್ಮಗಳ ಉದಯ ಹೇಗಾಯಿತು, ಪ್ರಾಚೀನಕಾಲದಲ್ಲಿ ಇತಿಹಾಸ ಹೇಗೆ ಬರೆಯಲ್ಪಟ್ಟಿತು, ಒಕ್ಕಲುತನ ಹೇಗೆ ಪ್ರಾರಂಭವಾಯಿತು ಹೀಗೆ ಸಂಕೀರ್ಣವಾದ ವಿಷಯಗಳನ್ನು ಸರಳಶೈಲಿಯ ಪತ್ರಗಳಲ್ಲಿ ಇತಿಹಾಸ, ಮಾನವಶಾಸ್ತ್ರೀಯ ಅಧ್ಯಯನ, ಸಂಸ್ಕೃತಿಗಳ ಪರಿಚಯ, ಭಾಷೆಗಳ ಬಗ್ಗೆ, ಜನಾಂಗಗಳ ಸಂಘರ್ಷ ಮತ್ತು ಬೆರಗುಗಳು ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಾರಸ್ಯವೆಂದರೆ ತೀರಾ ವಿವರಣೆಗಳಿಂದಲೂ ಕೂಡಿರದೆ, ಹಾಗೆಂದು ಪರಿವಿಡಿಯಂತೆ ಬರಿಯ ಪಟ್ಟಿಯಾಗಿರದೇ ತಿಳಿಯಲೇಬೇಕಾದ ವಿಷಯವನ್ನು ಸಂಕ್ಷಿಪ್ತಗೊಳಿಸಿ ಸಾಂದ್ರಗೊಳಿಸುವಂತಹ ಚಾತುರ್ಯ ಈ ಬರವಣಿಗೆಯಲ್ಲಿದೆ.

ಒಂದು ಹುಡುಗಿ ತನ್ನ ತಂದೆ ತೋರುತ್ತಿರುವ ತನ್ನೆಲ್ಲಾ ಪ್ರೀತಿಯ ಜೊತೆಗೆ ನೀಡುವ ಆದ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಂವೇದನೆ ಎರಡಕ್ಕೂ ಒತ್ತು ನೀಡಿರುವ ನೆಹರು ಓದುಗನು ಯಾವುದನ್ನು ಸ್ವೀಕರಿಸಬೇಕು, ಹೇಗೆ ಗ್ರಹಿಸಬೇಕು, ಕೆಲವೊಂದರ ಬಗ್ಗೆ ತಿಳಿವಳಿಕೆ ಇದ್ದು ಅವನ್ನು ಹೇಗೆ ನಿರಾಕರಿಸಬೇಕು ಎಂದೂ ಸೂಕ್ಷ್ಮವಾಗಿ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ಧೋರಣೆಯನ್ನು ಹೇರದೇ ಅರಿವಿನ ಗ್ರಹಿಕೆಗೆ ಬೇಕಾದ ಸೂಚನೆಗಳಿವು ಎಂಬ ಕಾಳಜಿ ಗುಪ್ತವಾಗಿ ಬರವಣಿಗೆಯ ತಂತ್ರದಲ್ಲಿದೆ ಮತ್ತು ಪದಗಳ ಬಳಕೆಯಲ್ಲಿದೆ. ವಾಕ್ಯಗಳ ರಚನೆಯಲ್ಲಿ ವಿಚಾರವನ್ನೂ, ಬೆರಗನ್ನೂ ಮತ್ತು ನವಿರಾಗಿ ಭಾವುಕತೆಯನ್ನೂ ಬೆಸೆಯುತ್ತಾ ಹೋಗುತ್ತಾರೆ.

ಓದಿನ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ, ವಿಸ್ಮಯವನ್ನೂ ಮತ್ತು ಪ್ರೀತಿಯನ್ನೂ ಹುಟ್ಟಿಸುವಂತಹ ಕೃತಿಯಾಗಿ ಇದು ಕಾಣುತ್ತದೆ. ವಿಶೇಷವೆಂದರೆ, ಜಗತ್ತಿನ ಎಲ್ಲ ಜನರಿಗೂ ಮತ್ತು ಓದುತ್ತಿರುವ ನನಗೂ ಸಂಬಂಧವಿದೆ ಎಂಬಂತಹ ಭಾವವಿದೆ. ಈ ಅನೌಪಚಾರಿಕ ಶಿಕ್ಷಣ ಬರಿಯ ಇಂದಿರಾಗೆ ಮಾತ್ರವಲ್ಲ ಯಾವುದೇ ಓದುವ ಪ್ರೀತಿಯುಳ್ಳವನಿಗೆ ಸಂವೇದನೆಯನ್ನು ಉಂಟುಮಾಡಬಲ್ಲದು. ಓದುಗ ಮತ್ತು ಬರಹಗಾರನ ನಡುವೆ ಆತ್ಮೀಯತೆಯನ್ನು ಮೊಳೆಸಬಲ್ಲದು. ಆಪ್ತತೆಯನ್ನು ಬೆಸೆಯಬಲ್ಲದು. ಏನೇ ಆದರೂ ತಂದೆ ಮಗಳಿಗೆ ಬರೆದದ್ದು ಅಲ್ಲವೇ!

ಜಗತ್ತೆಂದರೆ ಹಲವು ರಾಷ್ಟ್ರಗಳ ಒಂದು ದೊಡ್ಡ ಕುಟುಂಬ ಎಂದು ಅರಿವಾಗಲೆಂಬ ನೆಹರೂರವರ ಆಶಯವನ್ನು ಈ ಪತ್ರಗಳ ಸಂಗ್ರಹ ಧ್ವನಿಸುವುದಂತೂ ಸತ್ಯ.

ಪ್ರೀತಿಯ ಇಂದಿರಾ ಎಂದು ಸಂಬೋಧಿಸುತ್ತಾ ಯಾವುದೇ ಕತೆ ಕಾದಂಬರಿಗಿಂತ ರೋಚಕವಾಗಿರುವ ಜಗತ್ತಿನ ಕತೆಯನ್ನು ತೆರೆದಿಡುವ ನೆಹರೂ ಓರ್ವ ತಂದೆಯಾಗಿ ಮಕ್ಕಳ ಶಿಕ್ಷಣದ ವಿಷಯದಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಮಾದರಿಯಾಗಿ ನಿಲ್ಲುತ್ತಾರೆ.

ನೆಹರು ಮಗಳಿಗೆ ಇಂಗ್ಲಿಷಲ್ಲಿಯೇ ಪತ್ರಗಳನ್ನು ಬರೆದಿದ್ದು. ನಂತರ ಹಿಂದಿಯೇ ಮೊದಲಾದ ಭಾಷೆಗಳಿಗೆ ಅನುವಾದವಾಯ್ತು. ಶ್ರೀ ಕಪಟರಾಳ ಕೃಷ್ಣರಾಯರು ನೆಹರೂ ಜೊತೆಗೆ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ, ತಪ್ಪುಒಪ್ಪುಗಳನ್ನೆಲ್ಲಾ ಗಮನಿಸಿಕೊಂಡು 1946ರಲ್ಲಿಯೇ ಕನ್ನಡಕ್ಕೆ ತಂದವರು. ಪ್ರಕಾಶಕರು ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು.


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...