Homeಮುಖಪುಟಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

- Advertisement -
- Advertisement -

ನೆಹರು ಮತ್ತು ಕಮಲಾರವರ ಮಗಳಾದ ಇಂದಿರಾ ಬಾಲ್ಯದಲ್ಲಿ ಏಕಾಂಗಿಯಾಗಿ ದಿನಗಳನ್ನು ಕಳೆದವರು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿಯ ಜೊತೆ ಅಲಹಾಬಾದಿನ ಆನಂದಭವನದಲ್ಲಿ ವಾಸ. ತಂದೆಯೋ ಸ್ವಾತಂತ್ರ್ಯ ಚಳವಳಿಯ ಮುಖ್ಯ ಭಾಗ. ರಾಜಕೀಯ, ಬಂಧನ ಮತ್ತು ಹೋರಾಟಗಳ ಕಾರಣಗಳಿಂದಾಗಿ ಮಗಳ ಜೊತೆಗೆ “ಕ್ವಾಲಿಟಿ ಟೈಂ” ಎಂದಿಗೂ ಕೊಡಲಾಗುತ್ತಿರಲಿಲ್ಲ. ಇಂದಿರಾಗೆ ಹುಟ್ಟಿದ ಒಬ್ಬ ತಮ್ಮನೋ ಬಲು ಬೇಗ ಕಣ್ಮುಚ್ಚಿದ. ರವೀಂದ್ರನಾಥ್ ಠಾಗೋರರ ಶಾಂತಿನಿಕೇತನವೂ ಸೇರಿದಂತೆ ಶಾಲೆಗೆಂದು ಹೋದರೂ ನಾನಾ ಕಾರಣಗಳಿಂದ ಶಾಲೆಗಳನ್ನು ಪದೇ ಪದೇ ಬದಲಾಯಿಸಬೇಕಾಗುತ್ತಿತ್ತು. ಕೊನೆಗೆ ಠಾಗೋರರ ಶಾಂತಿನಿಕೇತನ, ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಯೂನಿವರ್ಸಿಟಿ ಆಫ್ ಆಕ್ಸ್‍ಫರ್ಡ್‍ಗೆ ಶೈಕ್ಷಣಿಕವಾಗಿ ಸೇರ್ಪಡೆಯಾದ್ದರಿಂದ ಇಂದಿರಾ ಪದವಿಯನ್ನು ಪಡೆದಿದ್ದು ಅಲ್ಲಿಂದಲೇ. ಇಷ್ಟೆಲ್ಲದರ ಜೊತೆಗೆ ಅವರ ಆರೋಗ್ಯವೂ ಕೆಡುತ್ತಿದ್ದರಿಂದ ಪದೇಪದೇ ಚಿಕಿತ್ಸೆಗಾಗಿ ಸ್ವಿಜರ್‍ಲೆಂಡ್‍ಗೆ ಹೋಗುತ್ತಿದ್ದರು.

ಇವು ಔಪಚಾರಿಕ ಶಿಕ್ಷಣವನ್ನು ಪಡೆಯಲು ಇಂದಿರಾ ಎದುರಿಸುತ್ತಿದ್ದ ಅಡ್ಡಿ ಆತಂಕಗಳು. ಅಕಾಡೆಮಿಕ್ ಆಗಿ ಇಂದಿರಾ ಉತ್ತಮವಾದ ಮೇಲ್ಗೈಯನ್ನು ಸಾಧಿಸಿದ್ದು ಅಷ್ಟಕಷ್ಟೇ ಆಗಿದ್ದರೂ ಬಹು ಸುಶಿಕ್ಷಿತ ವ್ಯಕ್ತಿಯಾಗಿ ರೂಪುಗೊಂಡಿದ್ದು ತಂದೆ ನೀಡಿದ ಅನೌಪಚಾರಿಕ ಶಿಕ್ಷಣದಿಂದ.
ಸ್ವಾತಂತ್ರ್ಯ ಹೋರಾಟದಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ನೆಹರು ನೇರವಾಗಿ ಮಗಳ ಜೊತೆಗೆ ಇರಲಾಗದಿದ್ದರೂ ಮಗಳನ್ನು ಸುಶಿಕ್ಷಿತೆಯನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅದರ ಸಾಕ್ಷಿಯೇ “ಮಗಳಿಗೆ ತಂದೆಯ ಓಲೆಗಳು.”

10-11 ವರ್ಷದ ಹುಡುಗಿಗೆ ನೈನಿತಾಲ್ ಜೈಲಿನಿಂದ ಬರೆದಿರುವ ಈ ಪತ್ರಗಳು ಜಗತ್ತಿನ ಚರಿತ್ರೆಯನ್ನು, ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ವಿಕಾಸವನ್ನು ತೆರೆದಿಡುತ್ತಾ ಹೋಗುತ್ತದೆ. ಇದು ಆ ಕಾಲಘಟ್ಟದ ಒಂದು ಸಂಕ್ಷಿಪ್ತ ವಿಶ್ವಕೋಶ. ಬರೆದಿರುವುದೋ ಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದಾದರೂ ತಮ್ಮ ಈ ಪತ್ರಗಳು ಸಂಗ್ರಹ ಯೋಗ್ಯವಾಗಿ ಮುಂದೊಂದು ದಿನ ಅತ್ಯುತ್ತಮ ಪುಸ್ತಕಗಳ ಸಾಲಿಗೆ ಸೇರಲಿದೆ ಎಂಬ ದೂರದೃಷ್ಟಿಯೂ ಅವರಿಗಿತ್ತು. ಹಾಗಾಗಿ ಒಂದೇ ಪ್ರಯತ್ನದಲ್ಲಿ ಮಗಳನ್ನು ಸುಶಿಕ್ಷಿತಳನ್ನಾಗಿಸುವುದು ಮತ್ತು ಗ್ರಂಥರಚನೆ ಎರಡಕ್ಕೂ ಆಕರಗಳನ್ನು ಸೃಷ್ಟಿಸಿದರು.

ಭೂಮಿಯ ಉಗಮ, ಸಸ್ಯ, ಪ್ರಾಣಿಗಳ ಸೃಷ್ಟಿ, ಜನಾಂಗಗಳು ಹೇಗೆ ಹುಟ್ಟಿದವು, ನಾಗರಿಕತೆ, ಧರ್ಮಗಳ ಉದಯ ಹೇಗಾಯಿತು, ಪ್ರಾಚೀನಕಾಲದಲ್ಲಿ ಇತಿಹಾಸ ಹೇಗೆ ಬರೆಯಲ್ಪಟ್ಟಿತು, ಒಕ್ಕಲುತನ ಹೇಗೆ ಪ್ರಾರಂಭವಾಯಿತು ಹೀಗೆ ಸಂಕೀರ್ಣವಾದ ವಿಷಯಗಳನ್ನು ಸರಳಶೈಲಿಯ ಪತ್ರಗಳಲ್ಲಿ ಇತಿಹಾಸ, ಮಾನವಶಾಸ್ತ್ರೀಯ ಅಧ್ಯಯನ, ಸಂಸ್ಕೃತಿಗಳ ಪರಿಚಯ, ಭಾಷೆಗಳ ಬಗ್ಗೆ, ಜನಾಂಗಗಳ ಸಂಘರ್ಷ ಮತ್ತು ಬೆರಗುಗಳು ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಾರಸ್ಯವೆಂದರೆ ತೀರಾ ವಿವರಣೆಗಳಿಂದಲೂ ಕೂಡಿರದೆ, ಹಾಗೆಂದು ಪರಿವಿಡಿಯಂತೆ ಬರಿಯ ಪಟ್ಟಿಯಾಗಿರದೇ ತಿಳಿಯಲೇಬೇಕಾದ ವಿಷಯವನ್ನು ಸಂಕ್ಷಿಪ್ತಗೊಳಿಸಿ ಸಾಂದ್ರಗೊಳಿಸುವಂತಹ ಚಾತುರ್ಯ ಈ ಬರವಣಿಗೆಯಲ್ಲಿದೆ.

ಒಂದು ಹುಡುಗಿ ತನ್ನ ತಂದೆ ತೋರುತ್ತಿರುವ ತನ್ನೆಲ್ಲಾ ಪ್ರೀತಿಯ ಜೊತೆಗೆ ನೀಡುವ ಆದ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಂವೇದನೆ ಎರಡಕ್ಕೂ ಒತ್ತು ನೀಡಿರುವ ನೆಹರು ಓದುಗನು ಯಾವುದನ್ನು ಸ್ವೀಕರಿಸಬೇಕು, ಹೇಗೆ ಗ್ರಹಿಸಬೇಕು, ಕೆಲವೊಂದರ ಬಗ್ಗೆ ತಿಳಿವಳಿಕೆ ಇದ್ದು ಅವನ್ನು ಹೇಗೆ ನಿರಾಕರಿಸಬೇಕು ಎಂದೂ ಸೂಕ್ಷ್ಮವಾಗಿ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ಧೋರಣೆಯನ್ನು ಹೇರದೇ ಅರಿವಿನ ಗ್ರಹಿಕೆಗೆ ಬೇಕಾದ ಸೂಚನೆಗಳಿವು ಎಂಬ ಕಾಳಜಿ ಗುಪ್ತವಾಗಿ ಬರವಣಿಗೆಯ ತಂತ್ರದಲ್ಲಿದೆ ಮತ್ತು ಪದಗಳ ಬಳಕೆಯಲ್ಲಿದೆ. ವಾಕ್ಯಗಳ ರಚನೆಯಲ್ಲಿ ವಿಚಾರವನ್ನೂ, ಬೆರಗನ್ನೂ ಮತ್ತು ನವಿರಾಗಿ ಭಾವುಕತೆಯನ್ನೂ ಬೆಸೆಯುತ್ತಾ ಹೋಗುತ್ತಾರೆ.

ಓದಿನ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ, ವಿಸ್ಮಯವನ್ನೂ ಮತ್ತು ಪ್ರೀತಿಯನ್ನೂ ಹುಟ್ಟಿಸುವಂತಹ ಕೃತಿಯಾಗಿ ಇದು ಕಾಣುತ್ತದೆ. ವಿಶೇಷವೆಂದರೆ, ಜಗತ್ತಿನ ಎಲ್ಲ ಜನರಿಗೂ ಮತ್ತು ಓದುತ್ತಿರುವ ನನಗೂ ಸಂಬಂಧವಿದೆ ಎಂಬಂತಹ ಭಾವವಿದೆ. ಈ ಅನೌಪಚಾರಿಕ ಶಿಕ್ಷಣ ಬರಿಯ ಇಂದಿರಾಗೆ ಮಾತ್ರವಲ್ಲ ಯಾವುದೇ ಓದುವ ಪ್ರೀತಿಯುಳ್ಳವನಿಗೆ ಸಂವೇದನೆಯನ್ನು ಉಂಟುಮಾಡಬಲ್ಲದು. ಓದುಗ ಮತ್ತು ಬರಹಗಾರನ ನಡುವೆ ಆತ್ಮೀಯತೆಯನ್ನು ಮೊಳೆಸಬಲ್ಲದು. ಆಪ್ತತೆಯನ್ನು ಬೆಸೆಯಬಲ್ಲದು. ಏನೇ ಆದರೂ ತಂದೆ ಮಗಳಿಗೆ ಬರೆದದ್ದು ಅಲ್ಲವೇ!

ಜಗತ್ತೆಂದರೆ ಹಲವು ರಾಷ್ಟ್ರಗಳ ಒಂದು ದೊಡ್ಡ ಕುಟುಂಬ ಎಂದು ಅರಿವಾಗಲೆಂಬ ನೆಹರೂರವರ ಆಶಯವನ್ನು ಈ ಪತ್ರಗಳ ಸಂಗ್ರಹ ಧ್ವನಿಸುವುದಂತೂ ಸತ್ಯ.

ಪ್ರೀತಿಯ ಇಂದಿರಾ ಎಂದು ಸಂಬೋಧಿಸುತ್ತಾ ಯಾವುದೇ ಕತೆ ಕಾದಂಬರಿಗಿಂತ ರೋಚಕವಾಗಿರುವ ಜಗತ್ತಿನ ಕತೆಯನ್ನು ತೆರೆದಿಡುವ ನೆಹರೂ ಓರ್ವ ತಂದೆಯಾಗಿ ಮಕ್ಕಳ ಶಿಕ್ಷಣದ ವಿಷಯದಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಮಾದರಿಯಾಗಿ ನಿಲ್ಲುತ್ತಾರೆ.

ನೆಹರು ಮಗಳಿಗೆ ಇಂಗ್ಲಿಷಲ್ಲಿಯೇ ಪತ್ರಗಳನ್ನು ಬರೆದಿದ್ದು. ನಂತರ ಹಿಂದಿಯೇ ಮೊದಲಾದ ಭಾಷೆಗಳಿಗೆ ಅನುವಾದವಾಯ್ತು. ಶ್ರೀ ಕಪಟರಾಳ ಕೃಷ್ಣರಾಯರು ನೆಹರೂ ಜೊತೆಗೆ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ, ತಪ್ಪುಒಪ್ಪುಗಳನ್ನೆಲ್ಲಾ ಗಮನಿಸಿಕೊಂಡು 1946ರಲ್ಲಿಯೇ ಕನ್ನಡಕ್ಕೆ ತಂದವರು. ಪ್ರಕಾಶಕರು ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು.


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...