ರಾಜ್ಯ ಶಾಸಕಾಂಗವು ಅಂಗೀಕರಿಸಿದ ಪ್ರಮುಖ ವಿಧೇಯಕಗಳನ್ನು ಸುಪ್ರೀಂಕೋರ್ಟ್ಗೆ ಬರುವ ಮೊದಲೇ ವಿಲೇವಾರಿ ಮಾಡಬೇಕು. ಮಸೂದೆಗಳಿಗೆ ಅಂಕಿತ ಹಾಕಲು ನಿರಾಕರಿಸಬಾರದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ತಮ್ಮ ಒಪ್ಪಿಗೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಸೂದೆಗಳನ್ನು ಹಿಂದಿರುಗಿಸಿದ್ದಾರೆ.
ಇದರ ಬೆನ್ನಲ್ಲೇ ನ.18ರಂದು ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಸೂದೆಯನ್ನು ಮತ್ತೊಮ್ಮೆ ಅಂಗೀಕರಿಸಲು ತಮಿಳುನಾಡು ರಾಜ್ಯವು ಸಜ್ಜಾಗಿದೆ. ತಿರುವಣ್ಣಾಮಲೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಎಂ.ಅಪ್ಪಾವು ಶನಿವಾರ ವಿಧಾನಸಭೆಯ ವಿಶೇಷ ಅಧಿವೇಶನ ನಡೆಯಲಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲ ರವಿ ಅವರು ತಮ್ಮ ಒಪ್ಪಿಗೆಗಾಗಿ ಕಳುಹಿಸಿದ ಹಲವಾರು ಮಸೂದೆಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಅಂತಹ ವಿಧೇಯಕಗಳನ್ನು ತಕ್ಷಣವೇ ಮತ್ತೊಮ್ಮೆ ಅಂಗೀಕರಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಮತ್ತು ಆದ್ದರಿಂದ ನ. 18 ರಂದು ವಿಧಾನಸಭೆ ಸಭೆಯ ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
4 ಬಿಜೆಪಿಯೇತರ ಆಡಳಿತದ ರಾಜ್ಯಗಳಾದ ಕೇರಳ, ತಮಿಳುನಾಡು, ಪಂಜಾಬ್ ಮತ್ತು ತೆಲಂಗಾಣ ಸರಕಾರ ವಿಧಾನಸಭೆಯಲ್ಲಿ ಪಾಸ್ ಆದ ಬಿಲ್ಗಳಿಗೆ ರಾಜ್ಯಪಾಲರು ಅಂಕಿತ ಹಾಕಿಲ್ಲ ಎಂದು ಆರೋಪಿಸಿ ರಾಜಗ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ತಮಿಳುನಾಡಿನಲ್ಲಿ ಕನಿಷ್ಠ 12 ಬಿಲ್ಗಳು ಬಾಕಿ ಉಳಿದಿವೆ. ಅದರಲ್ಲಿ 4 ಅಧಿಕೃತ ಆದೇಶಗಳು ಮತ್ತು 54 ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಕಡತಗಳು ಕೂಡ ಬಾಕಿ ಉಳಿದಿದೆ. ರಾಜ್ಯಪಾಲ ರವಿ ಅವರು 10 ಬಿಲ್ಗಳನ್ನು ವಾಪಾಸ್ಸು ಕಳುಹಿಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ನಲ್ಲಿ ವಿಧಾನಸಭೆಯನ್ನು ಮುಂದೂಡಲಾಗಿತ್ತು
ಡಿಎಂಕೆ ಸರ್ಕಾರದ ಮನವಿಯನ್ನು ಆಲಿಸಿದ ಸುಪ್ರೀಂಕೋರ್ಟ್, ಸಮಸ್ಯೆಗಳು ಗಂಭೀರ ಕಳವಳವನ್ನು ಉಂಟುಮಾಡುತ್ತವೆ. ಆರ್ಟಿಕಲ್ 200ರ ಅಡಿಯಲ್ಲಿ ರಾಜ್ಯಪಾಲರಿಗೆ ಸಲ್ಲಿಸಲಾದ 12 ಮಸೂದೆಗಳು ಬಾಕಿ ಇದೆ ಎಂದು ಹೇಳಿದೆ.
ಇದನ್ನು ಓದಿ: ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸದಂತೆ ಪೊಲೀಸರು ತಡೆಯುತ್ತಾರೆ; ಮಾಜಿ IAS ಅಧಿಕಾರಿ ಆರೋಪ