ಬಿಜೆಪಿ ಎಲ್ಲಾ ಆಮ್ ಆದ್ಮಿ ಪಾರ್ಟಿಯ ಸದಸ್ಯರನ್ನು ಜೈಲಿಗೆ ಹಾಕಲು ಬಯಸಿದೆ. ಅದು ಸಂಭವಿಸಿದರೆ ದೆಹಲಿ ಸರ್ಕಾರವನ್ನು ಜೈಲಿನಿಂದ ನಡೆಸಲಾಗುವುದು ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. ಇದರ ಬೆನ್ನಲ್ಲೇ ಎಎಪಿ ನಾಯಕರು ಈಗಾಗಲೇ ಕೇಜ್ರಿವಾಲ್ ಅವರ ಬಂಧನದ ಸಾಧ್ಯತೆಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.
ಇಡಿ ಸಮನ್ಸ್ ನಂತರ ಕೇಜ್ರಿವಾಲ್ ಬಂಧನದ ಸಾಧ್ಯತೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ. ಇಂತಹ ಸನ್ನಿವೇಶದಲ್ಲಿ ಎಎಪಿ ಏನು ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಎಪಿ ನಾಯಕ ಸೌರಭ್ ಭಾರದ್ವಾಜ್, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ. ಆದರೆ ಇಡೀ ಪಕ್ಷವೇ ಜೈಲಿನಲ್ಲಿದ್ದರೆ, ಸರ್ಕಾರ ಮತ್ತು ಪಕ್ಷವು ಜೈಲಿನಿಂದಲೇ ನಡೆಯಲಿದೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಎಎಪಿಯ ಎಲ್ಲರೂ ಜೈಲಿನಲ್ಲಿ ಇರಬೇಕೆಂದು ಬಿಜೆಪಿ ಬಯಸುತ್ತಿದೆ. ಎಎಪಿ ಸರಕಾರ ನೀಡುತ್ತಿರುವ ಉಚಿತ ಶಿಕ್ಷಣ, ಉಚಿತ ವಿದ್ಯುತ್, ಉಚಿತ ನೀರು, ಉಚಿತ ಆಸ್ಪತ್ರೆಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳು ನಿಲ್ಲಬೇಕೆಂದು ಅವರು ಬಯಸುತ್ತಾರೆ ಆದರೆ ಅರವಿಂದ್ ಕೇಜ್ರಿವಾಲ್ ಇದಕ್ಕೆ ಸಮ್ಮತಿಸುವುದಿಲ್ಲ ಎಂದು ಭಾರದ್ವಾಜ್ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ದುರುಪಯೋಗದ ಕುರಿತು ಭಾರದ್ವಾಜ್ ನ್ಯಾಯಾಲಯಗಳನ್ನು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಯಾರೇ ಅಡ್ಡಿಯಾಗಬಹುದು, ಅವರನ್ನು ಮತ್ತು ಅವರ ಪಕ್ಷದ ನಾಯಕರನ್ನು ಒಂದಲ್ಲ ಒಂದು ರೀತಿಯಲ್ಲಿ ಜೈಲಿಗೆ ಕಳುಹಿಸಲಾಗುತ್ತದೆ ಎಂಬುದು ಈಗ ಬಹಿರಂಗವಾಗಿದೆ. ಪಿಎಂಎಲ್ಎ ಪುರಾವೆಗಳಿಲ್ಲದೆ ಯಾರನ್ನಾದರೂ ವರ್ಷಗಳ ಕಾಲ ಜೈಲಿಗೆ ಕಳುಹಿಸುವ ಕಾನೂನು. ಇಡೀ ರಾಷ್ಟ್ರವೇ ಇದನ್ನು ನೋಡುತ್ತಿದೆ, ನ್ಯಾಯಾಲಯಗಳಿಗೆ ಇದು ಏಕೆ ಅರ್ಥವಾಗುತ್ತಿಲ್ಲ? ಪ್ರತಿಪಕ್ಷದ ನಾಯಕರನ್ನು ಒಬ್ಬೊಬ್ಬರಾಗಿ ಜೈಲಿಗೆ ಕಳುಹಿಸುವುದನ್ನು ನ್ಯಾಯಾಲಯಗಳು ನೋಡುತ್ತಿಲ್ಲವೇ? ಇಂತಹ ಪರಿಸ್ಥಿತಿಯಲ್ಲಿ ನಾವು ನ್ಯಾಯಾಲಯಗಳ ಮೇಲೆ ಮಾತ್ರ ನಿರೀಕ್ಷೆ ಇಡುತ್ತೇವೆ ಎಂದು ಭಾರದ್ವಾಜ್ ಹೇಳಿದ್ದಾರೆ.
ಮದ್ಯನೀತಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ನ.2ರಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರೂ ಆಗಿರುವ ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಕ್ಟೋಬರ್ನಲ್ಲಿ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿತ್ತು.
#WATCH | Delhi: On being asked about the party strategy if Delhi CM Arvind Kejriwal gets arrested tomorrow, Delhi Minister Saurabh Bharadwaj says, "It would be decided by the senior leaders of the party. But if the whole party is in jail, then the government and the party would… pic.twitter.com/DeMoEcBdnt
— ANI (@ANI) November 1, 2023
ಇದನ್ನು ಓದಿ: ಮಹಾರಾಷ್ಟ್ರ: ಸರ್ವಪಕ್ಷ ಸಭೆಯ ನಿರ್ಣಯ ತಿರಸ್ಕರಿಸಿದ ಮನೋಜ್ ಪಾಟೀಲ್; ಉಪವಾಸ ಸತ್ಯಾಗ್ರಹ ನಿಲ್ಲಿಸಲು ನಿರಾಕರಣೆ