Homeಮುಖಪುಟ’ಪ್ರಜಾಪ್ರಭುತ್ವ ಪ್ರಶ್ನಿಸುವ ಹಕ್ಕು ನೀಡಿದೆ’: ಭೋಜ್‌ಪುರಿ ಗಾಯಕಿ ಹಾಡುಗಳು ವೈರಲ್

’ಪ್ರಜಾಪ್ರಭುತ್ವ ಪ್ರಶ್ನಿಸುವ ಹಕ್ಕು ನೀಡಿದೆ’: ಭೋಜ್‌ಪುರಿ ಗಾಯಕಿ ಹಾಡುಗಳು ವೈರಲ್

ಕುತೂಹಲಕಾರಿ ವಿಷಯವೆಂದರೆ ಬಿಜೆಪಿಯ 'ಬಿಹಾರ ಮೇ ಈ ಬಾ' ಹಾಡು ನೇಹಾ ಸಿಂಗ್ ರಾಥೋಡ್ ಅವರ ಹಳೆಯ ಹಾಡು 'ಬಿಹಾರ ಮೇ ಕಾ ಬಾ' ಹಾಡಿಗೆ ಪ್ರತಿಕ್ರಿಯೆಯಾಗಿತ್ತು

- Advertisement -
- Advertisement -

ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷವು ತನ್ನ ಪ್ರಚಾರ ಗೀತೆ ‘ಬಿಹಾರ ಮೇ ಈ ಬಾ’ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿರೋಧ ಒಡ್ಡುವಂತಹ ಹಾಡುಗಳನ್ನು ಸಂಯೋಜಿಸಿ ಭೋಜ್‌ಪುರಿ ಗಾಯಕಿ ನೇಹಾ ಸಿಂಗ್ ರಾಥೋಡ್ ಬಿಡುಗಡೆ ಮಾಡಿದ್ದು, ಈ ಹಾಡುಗಳು ವೈರಲ್ ಆಗಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ವಿಮರ್ಶೆ ಮಾಡಿ ಹಾಡಿರುವ ಭೋಜ್‌ಪುರಿ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಪ್ರಜಾಪ್ರಭುತ್ವ ನಮಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ನೀಡಿದೆ. ನಾನದನ್ನೂ ಮಾಡುತ್ತಿದ್ದೇನೆ ಅಷ್ಟೇ” ಎನ್ನುತ್ತಾರೆ 23 ವರ್ಷದ ಗಾಯಕಿ ನೇಹಾ ಸಿಂಗ್ ರಾಥೋಡ್.

ನೇಹಾ ಸಿಂಗ್ ರಾಥೋಡ್ ಅವರ ಹೊಸ ಹಾಡು ವಾಸ್ತವವಾಗಿ ಅವರ ಹಿಂದಿನ ಹಾಡು ‘ಬಿಹಾರ ಮೇ ಕಾ ಬಾ (ಬಿಹಾರದಲ್ಲಿ ಏನಿದೆ)’ ಎಂಬ ಶೀರ್ಷಿಕೆಯ ವಿಸ್ತೃತ ಆವೃತ್ತಿಯಾಗಿದೆ. ಈ ಮೂಲಕ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ಅಕ್ಟೋಬರ್ 13 ರಂದು ಬಿಜೆಪಿ ಪಕ್ಷದ ಐಟಿ ಸೆಲ್ ಬಿಡುಗಡೆ ಮಾಡಿದ ಬಿಜೆಪಿಯ ‘ಬಿಹಾರ ಮೇ ಇ ಬಾ (ಇದು ಬಿಹಾರದಲ್ಲಿದೆ)’ ಗೀತೆಗೆ ಪ್ರತಿಕ್ರಿಯಿಸುವುದು ಹೊಸ ಹಾಡನ್ನು ಬಿಡುಗಡೆ ಮಾಡುವ ಹಿಂದಿನ ಆಲೋಚನೆಯಾಗಿತ್ತು. ಕುತೂಹಲಕಾರಿ ವಿಷಯವೆಂದರೆ ಬಿಜೆಪಿಯ ‘ಬಿಹಾರ ಮೇ ಈ ಬಾ’ ಹಾಡು ನೇಹಾ ಸಿಂಗ್ ರಾಥೋಡ್ ಅವರ ಹಳೆಯ ಹಾಡು ‘ಬಿಹಾರ ಮೇ ಕಾ ಬಾ’ ಹಾಡಿಗೆ ಪ್ರತಿಕ್ರಿಯೆಯಾಗಿತ್ತು.

ಇದನ್ನೂ ಓದಿ: ಪಿಸ್ತೂಲ್-ಪೆಟ್ರೋಲ್-ಫಾರ್ಮಾ-ಡ್ರಗ್-ಡಾಲರ್ ಪ್ರಪಂಚವನ್ನು ನಿಯಂತ್ರಿಸುತ್ತಿರುವ ಪಂಚ ಅಸ್ತ್ರಗಳು!

‘ಲಾ ಸುನಾ ಜಬಾಬ್, ಕಾ ಬಾ ಬಿಹಾರ ಮೇ’ ಎಂಬ ಹಾಡಿನಲ್ಲಿ, ಬಿಹಾರದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು, ಸ್ಟ್ರೆಚರ್‌ಗಳು, ಔಷಧಿಗಳು, ಆಂಬುಲೆನ್ಸ್‌ಗಳು ಮತ್ತು ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಕೊರತೆಯನ್ನು ನೇಹಾ ಉಲ್ಲೇಖಿಸಿದ್ದಾರೆ.

ತಮ್ಮ ಹಾಡುಗಳಲ್ಲಿ ಎನ್‌ಡಿಎ ಸರ್ಕಾರವನ್ನು ಟೀಕಿಸಿ, ನಾಯಕರು ಕೇವಲ ಭರವಸೆಗಳನ್ನು ನೀಡುತ್ತಾರೆ. ಆದರೆ ಅವುಗಳನ್ನು ಈಡೆರಿಸುವುದಿಲ್ಲ ಎಂದಿದ್ದಾರೆ. ಇವರಿಗೆ ಬಡ ಜನರೊಂದಿಗೆ ಯಾವುದೇ ಸಂಬಂಧವಿಲ್ಲ, ನಾಯಕರು ಅಧಿಕಾರದಲ್ಲಿರಲು ಬಯಸುತ್ತಾರೆ ಎಂದು ನೇಹಾ ಹೇಳುತ್ತಾರೆ.

ನೇಹಾ ಅವರ ಈ ಹಾಡುಗಳು 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಧಕ್ಕೆ ತರುತ್ತದೆ ಎಂದು ಪಾಟ್ನಾ ಮೂಲದ ರಾಜಕೀಯ ವಿಶ್ಲೇಷಕ ಸರೋಜ್ ಯಾದವ್ ಹೇಳಿದ್ದಾರೆ.

“ಗಾಯಕರು ಮತ್ತು ಕವಿಗಳು ಸಾಮಾನ್ಯವಾಗಿ ಆಡಳಿತ ಸರ್ಕಾರದ ಬಗ್ಗೆ ವಿಮರ್ಶಾತ್ಮಕವಾಗಿರುತ್ತಾರೆ. ಬಹುಶಃ ವಿಶ್ವದಲ್ಲೇ ದೊಡ್ಡದಾಗಿದೆ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷ ಬಿಜೆಪಿ ಈ ಗಾಯಕಿಗೆ ಉತ್ತರಿಸಿದ್ದು ಬಹುಶಃ ಮೊದಲ ಬಾರಿಗೆ ಎನ್ನುತ್ತಾರೆ ಯಾದವ್.

ಇದನ್ನೂ ಓದಿ: ಕಾರ್ಪೋರೇಟ್‌ಗಳ ಮುದ್ದಿನ ಪಕ್ಷ; 7 ವರ್ಷಗಳಲ್ಲಿ ಅತೀ ಹೆಚ್ಚು ದೇಣಿಗೆ ಪಡೆದ BJP

ಆದರೆ, ನೇಹಾ ಸಿಂಗ್ ರಾಥೋಡ್ ಅವರ ಸ್ನೇಹಿತರು ಆಗಾಗ್ಗೆ ಆಕೆಗೆ ಅಪಾಯ ಉಂಟಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 2017 ರಲ್ಲಿ ಬೆಂಗಳೂರಿನಲ್ಲಿರುವ ತನ್ನ ಮನೆಯ ಬಾಗಿಲಲ್ಲಿ ದುರ್ಷ್ಕಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶರಂತೆ ನಿನ್ನನ್ನು ಕೊನೆಗೊಳಿಸಬಹುದು ಎಂದು ಹಲವು ಸ್ನೇಹಿತರು ಎಚ್ಚರಿಸಿದ್ದಾರೆ ಎನ್ನುತ್ತಾರೆ.

 

ಇಂತಹ ಹೇಳಿಕೆಗಳು ಹೆಚ್ಚಿನ ಜನರನ್ನು ಹೆದರಿಸುತ್ತವೆ. ಆದರೆ ರಾಥೋಡ್ ತನ್ನ ಸ್ನೇಹಿತರ ಎಚ್ಚರಿಕೆಯ ಮಾತುಗಳನ್ನು ಅಭಿನಂದನೆಗಳಾಗಿ ತೆಗೆದುಕೊಳ್ಳುತ್ತಾರೆ.

ಬಿಹಾರ-ಉತ್ತರ ಪ್ರದೇಶ ಗಡಿಯಲ್ಲಿರುವ ಜಂದಾಹ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸುವ ನೇಹಾ ಸಿಂಗ್ ರಾಥೋಡ್, 2019 ರಲ್ಲಿ ಪದವಿ ಮುಗಿಸಿದ ನಂತರ ಜಾನಪದ ಗೀತೆಗಳನ್ನು ಹಾಡಲು ಪ್ರಾರಂಭಿಸಿದರು.  ಆಕೆಯ ಯೂಟ್ಯೂಬ್ ಚಾನೆಲ್ ಧಾರೋಹರ್‌ಗೆ 95 ಸಾವಿರ ಜನ ಚಂದಾದಾರರಾಗಿದ್ದಾರೆ. ಅವರ ಫೇಸ್‌ಬುಕ್ ಪುಟ ಮತ್ತು ಟ್ವಿಟರ್ ಖಾತೆ ಕೂಡ ಅಷ್ಟೇ ಜನಪ್ರಿಯವಾಗಿವೆ. ಅವರ ಅಭಿಮಾನಿಗಳಲ್ಲಿ ಚಲನಚಿತ್ರ ನಿರ್ಮಾಪಕರು, ಪತ್ರಕರ್ತರು, ಮಾಜಿ ಅಧಿಕಾರಿಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಸೇರಿದ್ದಾರೆ. ಹಳ್ಳಿಗಾಡು ಮತ್ತು ಬಂಡಾಯ ನೇಹಾ ಸಿಂಗ್ ರಾಥೋಡ್‌ನ ಹಾಡುಗಳ ವಿಶಿಷ್ಟ ಲಕ್ಷಣವಾಗಿದೆ.


ಇದನ್ನೂ ಓದಿ: ಅಂಬೇಡ್ಕರ್ ಜೀವನಾಧಾರಿತ “ಮಹಾನಾಯಕ” ಧಾರಾವಾಹಿ ನಿಲ್ಲಿಸುವಂತೆ ಬೆದರಿಕೆ: ರಾಘವೇಂದ್ರ ಹುಣಸೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...