Homeಮುಖಪುಟಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

- Advertisement -
- Advertisement -

| ಶಿವಾ |

ವಿಜಯಪುರ ಬಿಸಿಲು ಎಂದರೆ ಸಾಕು ರಾಜ್ಯದ ಜನರು ನಲುಗಿ ಹೋಗಿ, ಬೇಡವೇ ಬೇಡ ವಿಜಯಪುರ ಸಹವಾಸ ಎಂದು ದೂರವೇ ಸರಿಯುತ್ತಾರೆ. ಆದರೆ ಇದೇ ಕೆಂಡದ ಮಳೆಯಂತಹ ಬಿಸಿಲು ಮತ್ತು ಬರ ಕೆಲವರಿಗೆ ವರದಾನವಾಗಿ ಪರಿಣಮಿಸಿದೆ.

ಬಿಸಿಲು ಮನುಷ್ಯನ ಜೀವನಕ್ಕೆ, ಅಂಗಾಗಕ್ಕೆ ಅನ್ನಾಂಗ (ವಿಟಮಿನ್) ನೀಡುವುದು. ವಿಜಯಪುರ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದರೆ ಭೂಮಿಯೊಳಗಿನ ಅಂತರ್ಜಲ ಕಡಿಮೆಯಾಗುತ್ತದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಬರಗಾಲ ಎದುರಿಸಲಾಗದವರು ಗುಳೆ ಹೋಗುತ್ತಾರೆ, ಮಳೆ ಇರುವ ಕಡೆಗೆ. ಆದರೆ, ಇದೇ ನಮ್ಮೂರು, ಇಲ್ಲೇ ನಮ್ಮ ಸೂರು, ಇಲ್ಲೆ ನಮ್ಮ ಬೇರು ಎಂದು ವಿಜಯಪುರದಲ್ಲಿ ಬಿಸಿಲು ಮತ್ತು ಬರದ ವಿರುದ್ಧ ಹೋರಾಡಿ, ಜೀವನದಲ್ಲಿ ಒಂದು ಹೊತ್ತಿನ ಗಂಜಿ ಸಂಪಾದಿಸುತ್ತ, ಕೃಷಿ ಸೇರಿದಂತೆ ಇತರೆ ಗುಡಿ ಕೈಗಾರಿಕೆ ಕಾರ್ಮಿಕರು ಇಲ್ಲಿದ್ದಾರೆ. ಬಿಸಿಲು ರೈತರ ಪಾಲಿಗೆ ಅತ್ಯಂತ ಆಪ್ತ ಮಿತ್ರವಾಗಿದೆ. ಅದರಲ್ಲೂ ರೈತ ಮಹಿಳೆಯರು ಈ ಬಿಸಿಲನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುತ್ತಾರೆ. ರಾಶಿ ಮಾಡಿದ ಫಸಲನ್ನು ಸಂರಕ್ಷಿಸುವುದಕ್ಕೆ ಈ ಬಿಸಿಲು ನೆರವಾಗುವುದು.

ಹಗೆವುನಲ್ಲಿ ತುಂಬಿಟ್ಟ ದವಸ, ಧಾನ್ಯ, ಕಾಳು ಕಡ್ಡಿಗಳನ್ನು ಹೊರ ತೆಗೆದು, ಬಿಸಿಲಿಗೆ ಒಣ ಹಾಕುವರು. ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಗೆ ಅಂಟಿರುವ ನುಶಿ ಪೀಡೆ, ಹೇನು ಪೀಡೆ, ಜಿಗಿ ಪೀಡೆ ಇತ್ಯಾದಿ ಹಾನಿಕಾರಕ ಕ್ರಿಮಿಕೀಟಗಳನ್ನು ನಾಶ ಮಾಡಲು ಈ ಬಿಸಿಲನ್ನೆ ರಾಮಬಾಣವಾಗಿ ಬಳಸುವರು.

ಗೋಣಿ ಚೀಲದಲ್ಲಿ ತುಂಬಿರುವ ಸಜ್ಜೆ, ಜೋಳ, ಶೇಂಗಾ, ಕಡಲೆ, ತೊಗರಿ ದ್ವಿದಳ ಧಾನ್ಯಗಳಿಗೆ ನುಶಿ ಪೀಡೆ ಅಂಟುವುದು ಬಲು ಬೇಗ. ಹಾಗೇ ಅವು ಕಾಳು ಕಡ್ಡಿಗಳನ್ನು ನಾಶ ಪಡಿಸುತ್ತವೆ. ಮುಂಬರುವ ಮಳೆಗಾಲದ ಹೊತ್ತಿಗೆ ಆಹಾರ ಧಾನ್ಯಕ್ಕೆ ಅಂಟುವ ಕ್ರಿಮಿಕೀಟಗಳು ಸಂಪೂರ್ಣವಾಗಿ ಎಲ್ಲ ಅನ್ನಸಂಪತ್ತನ್ನು ತಿಂದು ಹಾಕುತ್ತವೆ. ಆಗ ರೈತ ಕಂಗಾಲಾಗುತ್ತಾನೆ.
ಮುಂಬರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕ್ರಿಮಿಕೀಟಗಳ ನಾಶಕ್ಕಾಗಿ ದವಸ- ಧಾನ್ಯಗಳನ್ನು ಬಿಸಿಲಿಗೆ ಹಾಕುತ್ತಾರೆ. ತಿನ್ನುವ ಆಹಾರ ಧಾನ್ಯ ಸ್ವಚ್ಛವಾಗಿದ್ದರೆ, ಆರೋಗ್ಯವು ಸದೃಢವಾಗಿರುತ್ತದೆ.

ವಿಜಯಪುರದ ಬಿಸಿಲು ಕೇವಲ ಆಹಾರ ಧಾನ್ಯ ಸಂರಕ್ಷಿಸುವುದಕ್ಕೆ ಅಷ್ಟೆ ಅಲ್ಲ. ಅದು ಬರದಿಂದ ಗುಳೆ ಹೋಗುವವರ ಜನರಿಗೆ ಬದುಕಿನ ಪಾಠ ಹೇಳುವ ನೇಸರ ಗುರುವಾಗಿದೆ.

ಬಿಸಿಲು ದುಡುಮೆಯ ಟಿಸಿಲು:
ಬಹುತೇಕ ಜನ ಗೃಹಿಣಿಯರು ಈ ಬೇಸಿಗೆ ಕಾಲಕ್ಕೆ ಕಾಯ್ದು ಕುಳಿತಿರುತ್ತಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು, ಹಾಗೇ ಅದರಿಂದ ದುಡಿಮೆಯ ದಾರಿಯನ್ನು ಕಂಡುಕೊಳ್ಳಲು.

ಶಾವಿಗೆ ಹೊಸೆದು, ಅದನ್ನು ಬಿಸಿಲಿಗೆ ಒಣ ಹಾಕಿ, ಸಂಜೆ ಹೊತ್ತಿಗೆ ಅದನ್ನು ಪ್ಯಾಕೇಟ್ ಮಾಡಿ, ಸ್ಥಳೀಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಚಳಿಗಾಲ, ಮಳೆಗಾಲದಲ್ಲಿ ಬದುಕು ತಣ್ಣಗಿರಲೆಂದು ಬೇಸಿಗೆ ಬಿಸಿಲನ್ನು ಬಳಸಿಕೊಳ್ಳುತ್ತಾರೆ.

ಹಾಗೇ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಸೇರಿದಂತೆ ಕುರುಕಲು ತಿಂಡಿ ಈ ಎಲ್ಲ ತಿನಿಸುಗಳು ಬಿಸಿಲಿನ ಬಿಸಿಗೆ ಸಿಲುಕಿ ಹದವಾಗಿ ತಿನ್ನುವುದಕ್ಕೆ ರೂಪುಗೊಂಡಿರುತ್ತವೆ. ಅದನ್ನು ರಾತ್ರಿ ಹೊತ್ತಿಗೆ ಕುಟುಂಬದವರೊಂದಿಗೆ ಊಟ ಮಾಡುವಾಗ, ಬಿಸಿಲನ್ನು ನೆನೆಯದೇ ಇರಲಾರರು.

ಬಿಸಿಲು ನಗರದಲ್ಲಿರುವ ಕ್ರಿಯಾಶೀಲ ಮಹಿಳೆಯರಿಗೆ ಇದು ಹೊಸ ಬೆಳದಿಂಗಳ ಬೆಳಕಾಗಿದೆ. ಮರದ ನೆರಳ ಕೆಳಗೆ ಕುಳಿತು ಕೌದಿಯನ್ನು ಹೊಲೆಯುವುದು, ಬಳೆ ತೊಡಿಸುವುದು, ಮದರಂಗಿ ಹಾಕುವುದು, ಬಟ್ಟೆಗಳ ಮೇಲೆ ಹೆಣಿಗೆ, ಸ್ವೇಟರ್ ಹೆಣೆಯುವುದು ಈ ಬಿಸಿಲು ಕಾಲದಲ್ಲಿಯೆ ರೂಪ ಪಡೆಯುತ್ತವೆ.

ಬಿಸಿಲು ಏಪ್ರಿಲ್, ಮೇ ತಿಂಗಳಲ್ಲಿ ಜನರನ್ನು ಕಂಗೆಡಿಸುವಂತಿರುತ್ತದೆ. ಈ ಎರಡು ತಿಂಗಳ ಬಿಸಿಲನ್ನು ಬಳಸಿಕೊಂಡು ಜಿಲ್ಲೆಯ ಬಹುತೇಕ ಮಹಿಳೆಯರು ತಮ್ಮಲ್ಲಿರುವ ಕೆಲಸ, ಕಾಯಕ, ಕಲೆಯ ಮೂಲಕ ಅನಾವರಣಗೊಳಿಸುತ್ತಾರೆ.

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

ಇನ್ನೇನು ಬೇಸಿಗೆ ಅಂತ್ಯಕ್ಕೆ ಬಂದಿದ್ದು, ಮಳೆಗಾಲ ಸನಿಹಗೊಂಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ವಿಜಯಪುರದಲ್ಲಿ ಜೋರಾದ ಗಾಳಿ, ಗುಡುಗು, ಸಿಡಿಲು ಮಿಶ್ರಿತ ಮಳೆಯಾಗಿದೆ. ಈ ಅಕಾಲಿಕ ಮಳೆ ಪ್ರತಿ ವರ್ಷ ಹೀಗೆ ಸುರಿಯುವುದು ವಾಡಿಕೆಯಾಗಿದೆ. ಪ್ರಸಕ್ತ ವರ್ಷದ ಬೇಸಿಗೆಯ ಮೇ ತಿಂಗಳಲ್ಲಿ 42.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಏಪ್ರಿಲ್‍ನಲ್ಲಿ 42.6 ರಷ್ಟು ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ ರಾತ್ರಿಯಲ್ಲೂ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲುಗೊಂಡು ಈ ಭಾಗದ ಜನರ ನಿದ್ರೆಗೆ ಕೊಳ್ಳಿಯಿಟ್ಟಂತಾಗಿ, ಸಾರ್ವಜನಿಕರು ನಿದ್ರೆಯಿಲ್ಲದೆ ಪರದಾಡಿರುವುದು ಸುಳ್ಳಲ್ಲ. ಹೀಗೆ ಸೂರ್ಯ ಪುತ್ರರು ಬಿಸಿಲು, ಬರವನ್ನು ತಮ್ಮ ವರವಾಗಿ ಬಳಸಿಕೊಂಡು, ಸುಡು ಬಿಸಿಲಿನಲ್ಲಿಯೇ ಗರಮ್ ಮರಮ್ ಚಹಾ, ಚೋಡಾ, ಮಿರ್ಚಿ ಭಜ್ಜಿ ತಿಂದು, ಬಿಸಿಲ ಬದುಕಿನ ಸುಖ ಅನುಭವಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...