Homeಮುಖಪುಟಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

- Advertisement -
- Advertisement -

| ಶಿವಾ |

ವಿಜಯಪುರ ಬಿಸಿಲು ಎಂದರೆ ಸಾಕು ರಾಜ್ಯದ ಜನರು ನಲುಗಿ ಹೋಗಿ, ಬೇಡವೇ ಬೇಡ ವಿಜಯಪುರ ಸಹವಾಸ ಎಂದು ದೂರವೇ ಸರಿಯುತ್ತಾರೆ. ಆದರೆ ಇದೇ ಕೆಂಡದ ಮಳೆಯಂತಹ ಬಿಸಿಲು ಮತ್ತು ಬರ ಕೆಲವರಿಗೆ ವರದಾನವಾಗಿ ಪರಿಣಮಿಸಿದೆ.

ಬಿಸಿಲು ಮನುಷ್ಯನ ಜೀವನಕ್ಕೆ, ಅಂಗಾಗಕ್ಕೆ ಅನ್ನಾಂಗ (ವಿಟಮಿನ್) ನೀಡುವುದು. ವಿಜಯಪುರ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದರೆ ಭೂಮಿಯೊಳಗಿನ ಅಂತರ್ಜಲ ಕಡಿಮೆಯಾಗುತ್ತದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಬರಗಾಲ ಎದುರಿಸಲಾಗದವರು ಗುಳೆ ಹೋಗುತ್ತಾರೆ, ಮಳೆ ಇರುವ ಕಡೆಗೆ. ಆದರೆ, ಇದೇ ನಮ್ಮೂರು, ಇಲ್ಲೇ ನಮ್ಮ ಸೂರು, ಇಲ್ಲೆ ನಮ್ಮ ಬೇರು ಎಂದು ವಿಜಯಪುರದಲ್ಲಿ ಬಿಸಿಲು ಮತ್ತು ಬರದ ವಿರುದ್ಧ ಹೋರಾಡಿ, ಜೀವನದಲ್ಲಿ ಒಂದು ಹೊತ್ತಿನ ಗಂಜಿ ಸಂಪಾದಿಸುತ್ತ, ಕೃಷಿ ಸೇರಿದಂತೆ ಇತರೆ ಗುಡಿ ಕೈಗಾರಿಕೆ ಕಾರ್ಮಿಕರು ಇಲ್ಲಿದ್ದಾರೆ. ಬಿಸಿಲು ರೈತರ ಪಾಲಿಗೆ ಅತ್ಯಂತ ಆಪ್ತ ಮಿತ್ರವಾಗಿದೆ. ಅದರಲ್ಲೂ ರೈತ ಮಹಿಳೆಯರು ಈ ಬಿಸಿಲನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುತ್ತಾರೆ. ರಾಶಿ ಮಾಡಿದ ಫಸಲನ್ನು ಸಂರಕ್ಷಿಸುವುದಕ್ಕೆ ಈ ಬಿಸಿಲು ನೆರವಾಗುವುದು.

ಹಗೆವುನಲ್ಲಿ ತುಂಬಿಟ್ಟ ದವಸ, ಧಾನ್ಯ, ಕಾಳು ಕಡ್ಡಿಗಳನ್ನು ಹೊರ ತೆಗೆದು, ಬಿಸಿಲಿಗೆ ಒಣ ಹಾಕುವರು. ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಗೆ ಅಂಟಿರುವ ನುಶಿ ಪೀಡೆ, ಹೇನು ಪೀಡೆ, ಜಿಗಿ ಪೀಡೆ ಇತ್ಯಾದಿ ಹಾನಿಕಾರಕ ಕ್ರಿಮಿಕೀಟಗಳನ್ನು ನಾಶ ಮಾಡಲು ಈ ಬಿಸಿಲನ್ನೆ ರಾಮಬಾಣವಾಗಿ ಬಳಸುವರು.

ಗೋಣಿ ಚೀಲದಲ್ಲಿ ತುಂಬಿರುವ ಸಜ್ಜೆ, ಜೋಳ, ಶೇಂಗಾ, ಕಡಲೆ, ತೊಗರಿ ದ್ವಿದಳ ಧಾನ್ಯಗಳಿಗೆ ನುಶಿ ಪೀಡೆ ಅಂಟುವುದು ಬಲು ಬೇಗ. ಹಾಗೇ ಅವು ಕಾಳು ಕಡ್ಡಿಗಳನ್ನು ನಾಶ ಪಡಿಸುತ್ತವೆ. ಮುಂಬರುವ ಮಳೆಗಾಲದ ಹೊತ್ತಿಗೆ ಆಹಾರ ಧಾನ್ಯಕ್ಕೆ ಅಂಟುವ ಕ್ರಿಮಿಕೀಟಗಳು ಸಂಪೂರ್ಣವಾಗಿ ಎಲ್ಲ ಅನ್ನಸಂಪತ್ತನ್ನು ತಿಂದು ಹಾಕುತ್ತವೆ. ಆಗ ರೈತ ಕಂಗಾಲಾಗುತ್ತಾನೆ.
ಮುಂಬರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕ್ರಿಮಿಕೀಟಗಳ ನಾಶಕ್ಕಾಗಿ ದವಸ- ಧಾನ್ಯಗಳನ್ನು ಬಿಸಿಲಿಗೆ ಹಾಕುತ್ತಾರೆ. ತಿನ್ನುವ ಆಹಾರ ಧಾನ್ಯ ಸ್ವಚ್ಛವಾಗಿದ್ದರೆ, ಆರೋಗ್ಯವು ಸದೃಢವಾಗಿರುತ್ತದೆ.

ವಿಜಯಪುರದ ಬಿಸಿಲು ಕೇವಲ ಆಹಾರ ಧಾನ್ಯ ಸಂರಕ್ಷಿಸುವುದಕ್ಕೆ ಅಷ್ಟೆ ಅಲ್ಲ. ಅದು ಬರದಿಂದ ಗುಳೆ ಹೋಗುವವರ ಜನರಿಗೆ ಬದುಕಿನ ಪಾಠ ಹೇಳುವ ನೇಸರ ಗುರುವಾಗಿದೆ.

ಬಿಸಿಲು ದುಡುಮೆಯ ಟಿಸಿಲು:
ಬಹುತೇಕ ಜನ ಗೃಹಿಣಿಯರು ಈ ಬೇಸಿಗೆ ಕಾಲಕ್ಕೆ ಕಾಯ್ದು ಕುಳಿತಿರುತ್ತಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು, ಹಾಗೇ ಅದರಿಂದ ದುಡಿಮೆಯ ದಾರಿಯನ್ನು ಕಂಡುಕೊಳ್ಳಲು.

ಶಾವಿಗೆ ಹೊಸೆದು, ಅದನ್ನು ಬಿಸಿಲಿಗೆ ಒಣ ಹಾಕಿ, ಸಂಜೆ ಹೊತ್ತಿಗೆ ಅದನ್ನು ಪ್ಯಾಕೇಟ್ ಮಾಡಿ, ಸ್ಥಳೀಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಚಳಿಗಾಲ, ಮಳೆಗಾಲದಲ್ಲಿ ಬದುಕು ತಣ್ಣಗಿರಲೆಂದು ಬೇಸಿಗೆ ಬಿಸಿಲನ್ನು ಬಳಸಿಕೊಳ್ಳುತ್ತಾರೆ.

ಹಾಗೇ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಸೇರಿದಂತೆ ಕುರುಕಲು ತಿಂಡಿ ಈ ಎಲ್ಲ ತಿನಿಸುಗಳು ಬಿಸಿಲಿನ ಬಿಸಿಗೆ ಸಿಲುಕಿ ಹದವಾಗಿ ತಿನ್ನುವುದಕ್ಕೆ ರೂಪುಗೊಂಡಿರುತ್ತವೆ. ಅದನ್ನು ರಾತ್ರಿ ಹೊತ್ತಿಗೆ ಕುಟುಂಬದವರೊಂದಿಗೆ ಊಟ ಮಾಡುವಾಗ, ಬಿಸಿಲನ್ನು ನೆನೆಯದೇ ಇರಲಾರರು.

ಬಿಸಿಲು ನಗರದಲ್ಲಿರುವ ಕ್ರಿಯಾಶೀಲ ಮಹಿಳೆಯರಿಗೆ ಇದು ಹೊಸ ಬೆಳದಿಂಗಳ ಬೆಳಕಾಗಿದೆ. ಮರದ ನೆರಳ ಕೆಳಗೆ ಕುಳಿತು ಕೌದಿಯನ್ನು ಹೊಲೆಯುವುದು, ಬಳೆ ತೊಡಿಸುವುದು, ಮದರಂಗಿ ಹಾಕುವುದು, ಬಟ್ಟೆಗಳ ಮೇಲೆ ಹೆಣಿಗೆ, ಸ್ವೇಟರ್ ಹೆಣೆಯುವುದು ಈ ಬಿಸಿಲು ಕಾಲದಲ್ಲಿಯೆ ರೂಪ ಪಡೆಯುತ್ತವೆ.

ಬಿಸಿಲು ಏಪ್ರಿಲ್, ಮೇ ತಿಂಗಳಲ್ಲಿ ಜನರನ್ನು ಕಂಗೆಡಿಸುವಂತಿರುತ್ತದೆ. ಈ ಎರಡು ತಿಂಗಳ ಬಿಸಿಲನ್ನು ಬಳಸಿಕೊಂಡು ಜಿಲ್ಲೆಯ ಬಹುತೇಕ ಮಹಿಳೆಯರು ತಮ್ಮಲ್ಲಿರುವ ಕೆಲಸ, ಕಾಯಕ, ಕಲೆಯ ಮೂಲಕ ಅನಾವರಣಗೊಳಿಸುತ್ತಾರೆ.

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

ಇನ್ನೇನು ಬೇಸಿಗೆ ಅಂತ್ಯಕ್ಕೆ ಬಂದಿದ್ದು, ಮಳೆಗಾಲ ಸನಿಹಗೊಂಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ವಿಜಯಪುರದಲ್ಲಿ ಜೋರಾದ ಗಾಳಿ, ಗುಡುಗು, ಸಿಡಿಲು ಮಿಶ್ರಿತ ಮಳೆಯಾಗಿದೆ. ಈ ಅಕಾಲಿಕ ಮಳೆ ಪ್ರತಿ ವರ್ಷ ಹೀಗೆ ಸುರಿಯುವುದು ವಾಡಿಕೆಯಾಗಿದೆ. ಪ್ರಸಕ್ತ ವರ್ಷದ ಬೇಸಿಗೆಯ ಮೇ ತಿಂಗಳಲ್ಲಿ 42.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಏಪ್ರಿಲ್‍ನಲ್ಲಿ 42.6 ರಷ್ಟು ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ ರಾತ್ರಿಯಲ್ಲೂ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲುಗೊಂಡು ಈ ಭಾಗದ ಜನರ ನಿದ್ರೆಗೆ ಕೊಳ್ಳಿಯಿಟ್ಟಂತಾಗಿ, ಸಾರ್ವಜನಿಕರು ನಿದ್ರೆಯಿಲ್ಲದೆ ಪರದಾಡಿರುವುದು ಸುಳ್ಳಲ್ಲ. ಹೀಗೆ ಸೂರ್ಯ ಪುತ್ರರು ಬಿಸಿಲು, ಬರವನ್ನು ತಮ್ಮ ವರವಾಗಿ ಬಳಸಿಕೊಂಡು, ಸುಡು ಬಿಸಿಲಿನಲ್ಲಿಯೇ ಗರಮ್ ಮರಮ್ ಚಹಾ, ಚೋಡಾ, ಮಿರ್ಚಿ ಭಜ್ಜಿ ತಿಂದು, ಬಿಸಿಲ ಬದುಕಿನ ಸುಖ ಅನುಭವಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...