ಸದಾ ಪ್ರಚೋದಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಕಾರಣವಾಗುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಈಗ ಮತ್ತೊಂದು ಅಂತಹುದೇ ಹೇಳಿಕೆ ನೀಡಿ ವಿವಾದವೊಂದನ್ನು ಮೈಮೆಲೆ ಎಳೆದುಕೊಂಡಿದ್ದಾರೆ. 2017ಕ್ಕೆ ಮೊದಲು ‘ಅಬ್ಬ ಜಾನ್’ ಎನ್ನುವವರಿಗೆ ಮಾತ್ರ ರೇಷನ್ ಸಿಗುತ್ತಿತ್ತು ಎಂಬ ಅವರ ಕೋಮು ಪ್ರಚೋದನಾ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಿಹಾರದಲ್ಲಿ ಅವರ ವಿರುದ್ಧ ದೂರು ಸಹ ದಾಖಲಾಗಿದೆ.
ಉತ್ತರ ಪ್ರದೇಶದ ಖುಷಿ ನಗರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ “2017ಕ್ಕೆ ಮುಂಚೆ ನಿಮಗೆ ರೇಷನ್ ಸಿಗುತ್ತಿತ್ತೆ? ಆಗ ಕೇವಲ ಅಬ್ಬ ಜಾನ್ (ಸಾಮಾನ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ತಂದೆಯನ್ನು ಕರೆಯುವ ಪರಿ) ಎಂದು ಕರೆಯುವವರು ಎಲ್ಲಾ ರೇಷನ್ ತಿಂದುಹಾಕುತ್ತಿದ್ದರು. ಆಗ ಶ್ರೀನಗರಕ್ಕೆ ನೀಡಲಾಗುವ ಪಡಿತರವು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಹೋಗಿತ್ತು” ಎಂದಿದ್ದಾರೆ.
#WATCH | Under PM Modi leadership, there is no place for appeasement politics….Before 2017 was everyone able to get ration?….Earlier only those who used to say 'Abba Jaan' were digesting the ration: Uttar Pradesh Chief Minister Yogi Adityanath in Kushinagar pic.twitter.com/CPr6IMbwry
— ANI UP (@ANINewsUP) September 12, 2021
2017ರವರೆಗೆ ಇದ್ದ ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರವನ್ನು ಸಹ ಗುರಿಯಾಗಿಸಿ ಟೀಕಿಸಿರುವ ಆದಿತ್ಯನಾಥ್ “ನಮ್ಮ ಸರ್ಕಾರದಲ್ಲಿ ಬಡವರ ಪಾಲಿನ ರೇಷನ್ ಕದಿಯುವವರನ್ನು ಜೈಲಿಗೆ ಅಟ್ಟುತ್ತೇವೆ” ಎಂದಿದ್ದಾರೆ.
ಯೋಗಿ ಆದಿತ್ಯನಾಥ್ರವರ ಈ ಹೇಳಿಕೆ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ಅಬ್ಬ ಜಾನ್ ಹೇಳಿಕೆಯ ಮೂಲಕ ಯೋಗಿ ಆದಿತ್ಯನಾಥ್ ಮುಸ್ಲಿಂ ಸಮುದಾಯವನ್ನು ಹೀಯಾಳಿದ್ದಾರೆ ಎಂದು ಆರೋಪಿಸಿ ಬಿಹಾರದ ಮುಜಾಫರ್ಪುರ ಜಿಲ್ಲಾ ನ್ಯಾಯಾಲಯದಲ್ಲಿ ತಮನ್ನಾ ಹಶ್ಮಿ ಎಂಬ ಸಾಮಾಜಿಕ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.
ಈ ಹಿಂದೆ ಹಲವು ರಾಜಕಾರಣಿಗಳ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ದೂರು ನೀಡಿರುವ ಹಶ್ಮಿಯವರು ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಯೋಗಿ ಆದಿತ್ಯನಾಥ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ವಿಚಾರಣೆ ನಡೆಸಬೇಕೆಂದು’ ಕೋರಿದ್ದಾರೆ.
ಮುಸ್ಲಿಂ ಸಮುದಾಯದ ವಿರುದ್ಧ ಕೋಮುವಾದಿ ಹೇಳಿಕೆಗಳು, ದ್ವೇಷಭಾಷಣ ಬಿಟ್ಟು ಬಿಜೆಪಿ ಎಂದೂ ಜನರ ಸಮಸ್ಯೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸಿಲ್ಲ. ಮುಂದಿನ ವರ್ಷ ಚುನಾವಣೆಯಿರುವುದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಓಮರ್ ಅಬ್ದುಲ್ಲಾ ಕಿಡಿಕಾರಿದ್ದಾರೆ.
I miss my Abbajaan. pic.twitter.com/4UOiEFLe4o
— Hansal Mehta (@mehtahansal) September 13, 2021
ಟ್ವಿಟರ್ನಲ್ಲಿಯೂ ಯೋಗಿ ಆದಿತ್ಯನಾಥ್ ಹೇಳಿಕೆ ಖಂಡಿಸಿ “ನಾನು ನನ್ನ ತಂದೆಯನ್ನು ಅಬ್ಬ ಜಾನ್ ಎಂದೇ ಕರೆಯುತ್ತೇನೆ” ಎಂಬ ಅಭಿಯಾನ ಆರಂಭವಾಗಿದೆ. ಎಲ್ಲಾ ಸಮುದಾಯದ ಬಹಳಷ್ಟು ಜನರು ತಮ್ಮ ತಂದೆಯ ಫೋಟೊವನ್ನು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ ನಮ್ಮ ತಂದೆಯನ್ನು ಅಬ್ಬ ಜಾನ್ ಎಂದೇ ಕರೆಯುತ್ತೇವೆ ಎಂದು ಬರೆಯುವ ಮೂಲಕ ಯೋಗಿಗೆ ಸೆಡ್ಡು ಹೊಡೆದಿದ್ದಾರೆ. ಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ನಾನು ನನ್ನ ಅಬ್ಬ ಜಾನ್ ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ನನ್ನ ಅಬ್ಬ ಜಾನ್ ಒಬ್ಬ ಅತ್ಯುತ್ತಮ ಬ್ಯಾಂಕರ್ ಆಗಿದ್ದರು. ನನ್ನ ಅಬ್ಬ ಜಾನ್ ನಿವೃತ್ತ ನ್ಯಾಯಾಧೀಶರು, ನನ್ನ ಅಬ್ಬಾ ಜಾನ್ ಕೆಲಸ ಮಾಡುತ್ತಿದ್ದ ಸ್ಥಳ ಎಂದೆಲ್ಲಾ ಬರೆದಿರುವ ನೆಟ್ಟಿಗರು ‘ಹಮಾರೆ ಅಬ್ಬ ಜಾನ್‘ ಎಂಬ ಹ್ಯಾಸ್ಟ್ಯಾಗ್ ಅನ್ನು ಟ್ರೆಂಡ್ ಮಾಡಿದ್ದಾರೆ. ಅಂತಹ ಕೆಲವು ಟ್ವೀಟ್ಗಳು ಇಲ್ಲಿವೆ.
My #AbbaJaan was one of the most eminent bankers of our country.
Worked at the highest levels in RBI.
Headed the ACD.
Was instrumental in setting up & heading NABARD
Was financial advisor to the #UP govt
Was Chairman of the Banking Service Recruitment Board
And much more❤️? 1/2— atiya zaidi (@atiyaz) September 13, 2021
ये मेरे अब्बू हैं जिन्हें कभी कभी प्यार से मैं पिताजी कहती हूँ ☺️
आपके अब्बू को देखने का मन है?#HamareAbbaJaan pic.twitter.com/OdvHzo4RlY— Sayema (@_sayema) September 13, 2021
Here’s my #AbbaJaan reading holy scripture.. when I count my blessings I count him twice .. pic.twitter.com/W1qWYn65Yc
— Jagmeet singh (@jagmeet81) September 13, 2021
ಒಟ್ಟಿನಲ್ಲಿ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಚುನಾವಣೆ ಗೆಲ್ಲುವುದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಗಳು ಅವರಿಗೆ ತಿರುಗುಬಾಣವಾಗಿವೆ. ಬಹಳಷ್ಟು ಜನ ಸೌಹಾರ್ದತೆಯನ್ನು ಒಡೆಯಬೇಡಿ ಎಂಬ ಸಂದೇಶಗಳನ್ನು ಕಳುಹಿಸಿದ್ದಾರೆ.
ಇದನ್ನೂ ಓದಿ: ಯುಪಿ: 3 ಗಂಟೆ ಕಾದರೂ ದಾಖಲಿಸದ ಆಸ್ಪತ್ರೆ, ಹೆತ್ತವರ ಕಣ್ಣು ಮುಂದೆ 5 ವರ್ಷದ ಬಾಲಕಿ ಸಾವು