Homeಅಂಕಣಗಳುಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿಡುವ ಧರ್ಮದ ಮೋಹ ಎಷ್ಟು ಸರಿ?

ಮಕ್ಕಳನ್ನು ಆಧುನಿಕ ಶಿಕ್ಷಣದಿಂದ ದೂರವಿಡುವ ಧರ್ಮದ ಮೋಹ ಎಷ್ಟು ಸರಿ?

- Advertisement -
- Advertisement -

|ಡಾ.ಸಾರಾ ಅಬೂಬಕ್ಕರ್|

ಕೆಲವು ವಾರಗಳ ಹಿಂದೆ ಉಡುಪಿಯಲ್ಲಿ ಸಹಬಾಳ್ವೆ ಎಂಬ ಮುಸ್ಲಿಂ ಸಂಘಟನೆಯ ಸರ್ವಜನೋತ್ಸವವೆಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶಾಂತಿ, ಸಹೋದರತೆ ಮತ್ತು ಐಕ್ಯತೆ ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕೋಮು ಸೌಹಾರ್ದದ ಧೋರಣೆ ಹೊಂದಿರುವ ಹೆಸರುವಾಸಿ ಲೇಖಕರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆಂದು ಪತ್ರಿಕೆಯಲ್ಲಿ ವರದಿಯಾಗಿತ್ತು.
ಇತ್ತೀಚೆಗೆ ಕೋಮು ಸೌಹಾರ್ದ, ಸಹೋದರತೆ, ಬಹುತ್ವ, ಐಕ್ಯತೆ ಮುಂತಾದ ವಿಷಯಗಳ ಕುರಿತು ಧಾರಾಳ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಮೇಲ್ಭಾಗದಲ್ಲಿ ಎಲ್ಲರೂ ಇಂತಹ ಮಾತುಗಳನ್ನಾಡುತ್ತಿದ್ದರೂ ಆಳದಲ್ಲಿ ‘ಹಿಂದುತ್ವ’ ಎಂಬ ಇನ್ನೊಂದು ಮಾತು ಹುದುಗಿಕೊಂಡಿವೆಯೆಂದೆನ್ನಿಸುತ್ತದೆ. ಹಿಂದುತ್ವದ ಜೊತೆಯಲ್ಲಿ ‘ಇಸ್ಲಾಮೀಕರಣ’ ಎಂಬ ಇನ್ನೊಂದು ಮಾತು ತಳುಕು ಹಾಕಿಕೊಂಡಿರುತ್ತವೆಯೇನೊ ಎಂದೆನ್ನಿಸುವಂತಾಯಿತು. ಈ ಎರಡು ವಿಷಯಗಳ ಕುರಿತು ನನ್ನ ಕೆಲವು ಅನುಭವಗಳನ್ನು ಓದುಗರ ಮುಂದಿಡಬಯಸುತ್ತೇನೆ.
ನಾನು ಕಳೆದ 40 ವರ್ಷಗಳಿಂದಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನನ್ನ ಕೊಡುಗೆಗಳನ್ನು ನೀಡುತ್ತಾ ಬಂದಿದ್ದೇನೆ. ಹಾಗೆಯೇ ನನ್ನ ಮನೆಯೊಳಗೆ ಮಾತ್ರ ನನಗೆ ಧರ್ಮವಿದೆಯೆಂದೂ, ಮನೆಯಿಂದ ಹೊರಗೆ ನಾನು ಈ ದೇಶದ ಜನಸಾಮಾನ್ಯರೊಂದಿಗೆ ಕೇವಲ ಮನುಷ್ಯಳಾಗಿ ಮಾತ್ರ ಬದುಕುತ್ತಿದ್ದೇನೆಂದೂ ಹೇಳುತ್ತಾ ಬಂದಿದ್ದೇನೆ. ನನ್ನ ಸಾಹಿತ್ಯ ಕೃತಿಗಳನ್ನು ವಿದ್ಯಾರ್ಥಿಗಳೂ ಯುವಜನರೂ ಮೆಚ್ಚಿಕೊಂಡು ಓದುತ್ತಲೂ ಇದ್ದರೆಂಬುವುದೂ ನನಗೆ ತಿಳಿದಿತ್ತು. ಇತ್ತೀಚೆಗೆ ಪುಸ್ತಕ ಮಾರಾಟಗಾರರೊಬ್ಬರು ನನ್ನೊಡನೆ ಹೇಳಿದ ಮಾತುಗಳಿಂದ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು.
ಈ ಮಾರಾಟಗಾರರು ನನ್ನೊಡನೆ ಪುಸ್ತಕ ಮಾರಾಟದ ಇತ್ತೀಚೆಗಿನ ತೊಂದರೆಗಳ ಕುರಿತು ಮಾತಾಡುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಈ ಅನುಭವವನ್ನು ನನ್ನೊಡನೆ ಹಂಚಿಕೊಂಡರು. ನಿನ್ನೆ ಪುಸ್ತಕ ಕೊಳ್ಳಲು ಬಂದವರೊಬ್ಬರು ನನ್ನೊಡನೆ, ‘ನೀವು ಯಾಕೆ ಮುಸ್ಲಿಮರ ಪುಸ್ತಕಗಳನ್ನು ಮಾರಾಟ ಮಾಡುತ್ತೀರಿ? ನಿಮಗೆ ಮಾರಾಟ ಮಾಡಲು ಹಿಂದೂಗಳ ಪುಸ್ತಕಗಳಿಲ್ಲವಾ? ಮುಸ್ಲಿಂ ಮಹಿಳೆಯ ಕೃತಿಗಳನ್ನು ಮಾರಾಟ ಮಾಡುವುದೇಕೆ? ಎಂದು ಕೇಳಿದರು!’ ಎಂದರು. ಅದಕ್ಕೆ ಉತ್ತರವಾಗಿ ನಾನು “ಇದು ಹಿಂದೂ ಮತಾಂಧತೆ. ಹಿಂದುತ್ವದ ಹೆಸರಿನಲ್ಲಿ ಮತ ಪಡೆಯಬಹುದಲ್ಲವಾ?” ಎಂದೆ. ‘ಇಸ್ಲಾಮೀಕರಣ ಇದಕ್ಕಿಂತ ಬೇರೆಯಾಗಿ ಏನೂ ಇಲ್ಲ’ ಎಂದು ನಾನಂದಾಗ ಆ ಮಾರಾಟಗಾರರು ತಮ್ಮ ಇನ್ನೊಂದು ಅನುಭವವನ್ನು ನನ್ನ ಮುಂದಿಟ್ಟರು.
ಅವರ ಬಳಿಗೆ ಬಂದ ಮುಸ್ಲಿಂ ವಿದ್ಯಾರ್ಥಿಯೋರ್ವನು ನಿಮ್ಮ ಎರಡು ಕೃತಿಗಳನ್ನೆತ್ತಿಕೊಂಡು ಹಣಕೊಟ್ಟು ಕೊಂಡುಕೊಂಡು ಹೋದನು. ಮರುದಿನ ಆತನ ತಂದೆ ಬಂದು, ‘ಈ ಪುಸ್ತಕ ನಮ್ಮಲ್ಲಿ ಇದೆ. ಇದು ಬೇಡ ಹಣ ಕೊಡಿ’ ಎಂದನು. ಹಾಗಾದರೆ ನೀವು ಅದೇ ಲೇಖಕಿಯ ಬೇರೆ ಪುಸ್ತಕ ಕೊಂಡುಕೊಳ್ಳಿ, ಆ ಕಡೆಯಲ್ಲಿದೆ ನೋಡಿ ಎಂದರು. ‘ಆಯಿತು, ಈಗ ಹಣ ಕೊಡಿ’ ಎಂದಾಗ ನಾನು ಹಣ ಕೊಟ್ಟೆ. ಆತ ಆಚೆ ಈಚೆ ನೋಡಿದಂತೆ ಮಾಡಿ ನನಗೆ ತಿಳಿಯದಂತೆ ಹಣ ತೆಗೆದುಕೊಂಡು ಓಡಿಯೇ ಬಿಟ್ಟ. ಒಂದೆರೆಡು ದಿನಗಳ ಬಳಿಕ ಆ ವಿದ್ಯಾರ್ಥಿ ಅಂಗಡಿಗೆ ಬಂದಾಗ ನಾನು ಆತನೊಡನೆ, “ನೀನು ಕೊಂಡು ಹೋದ ಪುಸ್ತಕ ನಿನ್ನ ತಂದೆ ಹಿಂದೆ ಕೊಟ್ಟರಲ್ಲಾ?” ಎಂದೆ. ಆಗ ಆತನು ‘ನನ್ನ ಪಠ್ಯಪುಸ್ತಕದಲ್ಲಿ ಸಾರಾ ಅಬೂಬಕ್ಕರ್ ಬರೆದ ಕತೆಯಿತ್ತು. ಅವರ ಕತೆಗಳು ನಮಗೆಲ್ಲಾ ತುಂಬಾ ಇಷ್ಟವಾಗುತ್ತಿತ್ತು. ಹೀಗಾಗಿ ನಾನು ಅವುಗಳನ್ನು ಕೊಂಡುಕೊಂಡಿದ್ದೆ. ತಂದೆ ಹಣ ಏನು ಮಾಡಿದೆ ಎಂದು ಕೇಳಿದಾಗ ನಾನು ಆ ಪುಸ್ತಕಗಳನ್ನು ತೋರಿಸಿದೆ. ಆಗ ಅವರು “ಆ ಮಹಿಳೆ ಬರೆದ ಪುಸ್ತಕ ಯಾಕೆ ತೆಗೆದುಕೊಂಡೆ? ಕೊಡು ಎಂದು ನನ್ನ ಕೈಯಿಂದ ಎಳೆದುಕೊಂಡು ಇಲ್ಲಿ ಬಂದು ನಿಮಗೆ ಕೊಟ್ಟರು. ಅವರು ಹಾಗೆ ಮಾಡುತ್ತಾರೆಂದು ಗೊತ್ತಿದಿದ್ದರೆ ನಾನು ಅವರಿಗೆ ಅವುಗಳನ್ನು ತೋರಿಸುತ್ತಿರಲಿಲ್ಲ” ಎಂದು ದುಃಖದಿಂದ ನುಡಿದನು. ಕೆಲವು ಕಡೆ ಮಸೀದಿಗಳಲ್ಲಿ ಸಾರಾ ಅಬೂಬಕ್ಕರ್ ಅವರ ಪುಸ್ತಕಗಳನ್ನು ಓದಬೇಡಿ ಎಂದು ಫತ್ವಾ ಹೊರಡಿಸಿದ್ದಾರಂತೆ. ಅದು ಎಷ್ಟು ಸುಳ್ಳೋ, ಎಷ್ಟು ಸತ್ಯವೊ ಎಂದು ತಿಳಿಯದು ಎಂದರು ಆ ಮಾರಟಗಾರರು.
ಮತಾಂಧತೆಯಲ್ಲಿ ಮುಳುಗುತ್ತಿರುವವರನ್ನು ಅದರಿಂದ ಹೊರಗೆ ತರಲು ಯಾರಿಂದಲೂ ಸಾಧ್ಯವಾಗಲಾರದು. ನಾನು ತ್ರಿವಳಿ ತಲಾಖನ್ನು ವಿರೋಧಿಸಿ ಅದನ್ನು ರದ್ದುಪಡಿಸಬೇಕೆಂದು ಲೇಖನ ಬರೆದಿರುವುದು ಈ ಜನರಿಗೆ ಇಷ್ಟವಾಗಿರುವುದಿಲ್ಲ. ಅದನ್ನು ರದ್ದುಪಡಿಸಿದರೆ ಇವರಿಗೆ ಬೇಕಾದಂತೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಲು ಸಾಧ್ಯ. ನನ್ನ ಈ ಲೇಖನಗಳನ್ನು ಅರಗಿಸಿಕೊಳ್ಳಲು ಮುಸ್ಲಿಂ ಪುರುಷರಿಂದ ಸಾಧ್ಯವಾಗುತ್ತಿಲ್ಲ. ಕೆಲವು ಮತಾಂಧ ಸಂಘಟನೆಗಳು ದೇಶಾದ್ಯಂತ ಮುಸ್ಲಿಂ ಪುರುಷರನ್ನು ‘ತಮ್ಮ ಧರ್ಮದಲ್ಲಿ ಸರಕಾರದ ಹಸ್ತಕ್ಷೇಪ’ವೆನ್ನುತ್ತಾ ಇಡೀ ದೇಶಾದ್ಯಂತ ಎತ್ತಿ ಕಟ್ಟುತ್ತಿದ್ದಾರೆ. ಶಾಬಾನು ಮೊಕದ್ದಮೆಯಲ್ಲಿ ಅವರಿಗೆ ಬೇಕಾದಂತೆ ಸರಕಾರ ಖುರ್‍ಆನ್ ವಾಕ್ಯದ ವಿರುದ್ಧವಾಗಿಯೇ ನಿಯಮ ರೂಪಿಸಿ ಜಾರಿಗೆ ತಂದಿದೆ. ಇಂದು ಇಂಡಿಯಾದ ಸುತ್ತಲೂ ಇರುವ ಸುಮಾರು ಇಪ್ಪತ್ತರಷ್ಟು ಮುಸ್ಲಿಂ ದೇಶಗಳು ತಮ್ಮ ದೇಶಗಳಲ್ಲಿ ತ್ರಿವಳಿ ತಲಾಖ್ ನಿಯಮವನ್ನು ರದ್ದುಪಡಿಸಿವೆ. ನಮ್ಮ ದೇಶದ ಮುಸ್ಲಿಂ ಪುರುಷರಿಗೆ ಈ ನಿಯಮ ಅನ್ವಯಿಸಬಾರದು ಎಂದರೆ ಏನರ್ಥ?
ಮುಸ್ಲಿಮರ ಈ ಮತಾಂಧತೆ ವಿದ್ಯಾರ್ಥಿಗಳನ್ನು ಆಧುನಿಕ ಶಿಕ್ಷಣದಿಂದಲೂ ದೂರ ಸರಿಸುತ್ತಿದೆ. ಖುರ್‍ಆನ್ ಬಾಯಿಪಾಠ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ‘ಹಾಫಿಜ್’ ಎಂಬುದು ಈ ಬಾಯಿಪಾಠದ ಹೆಸರಾಗಿದೆ. ಕೆಲವು ಹಳ್ಳಿಗಳ ಶಾಲೆಗಳಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯರನ್ನು ಮಂಗಳೂರಿಗೆ ಕರೆತಂದು ಅವರಿಗೆ ಮದ್ರಸಾದ ಗುರುಗಳಿಂದ ಖುರ್‍ಆನ್ ಬಾಯಿಪಾಠ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಎಂ.ಎ, ಎಂ.ಎಸ್ಸಿ ಪದವಿ ಪಡೆದರೆ ಅದು ಅವರ ಮುಂದಿನ ಬದುಕಿನಲ್ಲಿ ಪ್ರಯೋಜನವಾಗಬಹುದು. ಅರ್ಥ ತಿಳಿಯದ ಖುರ್‍ಆನ್ ವಾಕ್ಯಗಳನ್ನು ಬಾಯಿಪಾಠ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಬದುಕಿನಲ್ಲಿ ಏನೂ ಪ್ರಯೋಜನವಾಗಲಾರದು. ಸುಮಾರು 600 ಪುಟಗಳಿರುವ ಖುರ್‍ಆನ್ ಬಾಯಿಪಾಠವೆಂಬುದು ಸುಲಭದ ಕೆಲಸವೇನೂ ಅಲ್ಲ. ಎಲ್ಲ ವಿದ್ವಾಂಸರಿಗೂ ಈ ವಾಕ್ಯಗಳ ಸಮನಾದ ಅರ್ಥವನ್ನು ವಿವರಿಸುವುದು ಇಂದಿಗೂ ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ನಮ್ಮ ಮುಂದನ ಬದುಕಿಗೆ ನಿಷ್ಪ್ರಯೋಜಕವಾಗಿರುವ ಈ ಬಾಯಿಪಾಠದಿಂದ ಮಕ್ಕಳು ತಮ್ಮ ಶಿಕ್ಷಣ ಕ್ಷೇತ್ರದಿಂದ ದೂರ ಸರಿಯಬಹುದು. ಆ ರೀತಿ ಮಕ್ಕಳನ್ನು ದೂರ ಸರಿಸುವುದೇ ಹಾಫಿಜ್‍ನ ಉದ್ದೇಶವೇ? ಅಥವಾ ಸ್ವರ್ಗದಲ್ಲಿ ಸೀಟು ರಿಸರ್ವ್ ಮಾಡಿಸುವುದು ಇವರ ಹಿರಿಯರ ಉದ್ದೇಶವೇ? ಇತ್ತೀಚೆಗೆ ಹೆಣ್ಣುಮಕ್ಕಳ ಮದುವೆ ಸಂದರ್ಭಗಳಲ್ಲಿ ‘ಹುಡುಗಿ ಹಾಫಿಜ್ ಮಾಡಿದ್ದಾಳೆಯೇ?’ ಎಂಬ ಪ್ರಶ್ನೆಗಳೂ ಪ್ರಾರಂಭವಾಗಿವೆ! ಎಂದು ಕೇಳಿದ್ದೇನೆ.
ಪ್ರವಾದಿಗಳು ಖುರ್‍ಆನ್ ಮೂಲಕ ಜನರಿಗೆ ಬದುಕಿನ ಕುರಿತು ಬೋಧನೆ ನೀಡಿದ್ದಾರೆಏ ಹೊರತು ಅದನ್ನು ಬಾಯಿಪಾಠ ಮಾಡಿ ಎಂದು ಹೇಳಿಲ್ಲ. ನಾವು ನಮ್ಮ ಸಮಾಜದಲ್ಲಿ ಹೇಗೆ ಬುದುಕಬೇಕು, ಎಲ್ಲ ರೀತಿಯ ಮೋಸ, ವಂಚನೆ, ನೀಚತನವಿಲ್ಲದೆ ಉತ್ತಮ ಮನುಷ್ಯರಾಗಿ, ಯಾರಿಗೂ ನೋವು ಕೊಡದೆ ಬದುಕಬೇಕೆಂಬುದು ಪ್ರವಾದಿಗಳ ಬೋಧನೆಯಾಗಿದೆ. ‘ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂಬ ಬೋಧನೆಯು ನಮ್ಮ ಹಿರಿಯರಿಂದ ನಮಗೂ ದೊರಕಿತ್ತು.’ ಇಂತಹ ಉತ್ತಮ ಬೋಧನೆಯನ್ನು ನಾವು ಅರ್ಥ ಮಾಡಿಕೊಳ್ಳುಬೇಕೇ ಹೊರತು ಅರ್ಥ ತಿಳಿಯದ ವಾಕ್ಯಗಳನ್ನು ಬಾಯಿಪಾಠ ಮಾಡುವುದು, ಮಕ್ಕಳಿಂದ ಬಾಯಿಪಾಠ ಮಾಡಿಸಿ ಅವರು ತರಗತಿಗಳಲ್ಲಿ ಶಿಕ್ಷಣದಿಂದ ಹಿಂದುಳಿಯುವುದು ಎಂದಿಗೂ ಅನುಸರಣೀಯವೆನಿಸಲು ಸಾಧ್ಯವಿಲ್ಲ.
ನಾನು ಪ್ರವಾದಿಗಳನ್ನಾಗಲಿ, ದೇವರನ್ನಾಗಲಿ ಯಾವ ರೀತಿಯಿಂದಲೂ ಟೀಕೆ ಮಾಡುವುದಾಗಲಿ, ವಿಮಶಿಸುವುದಾಗಲಿ ಮಾಡಲಿಲ್ಲ. ಧರ್ಮದ ಹೆಸರಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರ ಮೇಲೆ ಏನೇನೊ ಅಧಾರ್ಮಿಕ ನಿಯಮಗಳನ್ನು ಹೇರಿವೆ ಎಂದಿದ್ದೇನೆ. ಇತ್ತೀಚೆಗೆ ಉಪನ್ಯಾಸಕರೊಬ್ಬರು ನನ್ನೊಡನೆ, “ಈಗ ಈ ಮತಾಂಧತೆಯನ್ನು ಉತ್ತರ ಕರ್ನಾಟಕದ ಚಿಕ್ಕ ಚಿಕ್ಕ ಹಳ್ಳಿಗಳಲ್ಲೂ ಹರಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದಿನವರೆಗೆ ನಮ್ಮೂರುಗಳಲ್ಲಿ ಮೊಹರಂ ಹಬ್ಬ ಮತ್ತು ಚೌತಿ ಹಬ್ಬವನ್ನು ಹಿಂದೂ ಮುಸ್ಲಿಮರು ಒಟ್ಟಾಗಿ ಆಚರಿಸುತ್ತಿದ್ದರು. ಈಗ ಹಿಂದುತ್ವ ಮತ್ತು ಇಸ್ಲಾಮೀಕರಣದಿಂದಾಗಿ ಈ ಒಟ್ಟು ಸೇರುವಿಕೆಯು ಜನರ ನಡುವಿನಿಂದ ಮರೆಯಾಗುತ್ತಿದೆ” ಎಂದರು. ಮತಾಂಧತೆ ನಮ್ಮನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...