Homeಚಳವಳಿಕೋಮು ಗಲಭೆ ಬಿಟ್ಟು ಚಪ್ಪಲಿ ಅಂಗಡಿ ಹಾಕಿದ ಅಶೋಕ್: ಗುಜರಾತಿನ ಈ ಗೆಳೆಯರು ಇಂದಿನ ಭಾರತಕ್ಕೆ...

ಕೋಮು ಗಲಭೆ ಬಿಟ್ಟು ಚಪ್ಪಲಿ ಅಂಗಡಿ ಹಾಕಿದ ಅಶೋಕ್: ಗುಜರಾತಿನ ಈ ಗೆಳೆಯರು ಇಂದಿನ ಭಾರತಕ್ಕೆ ಮಾದರಿಯಾಗಬಲ್ಲರೆ?

ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಅನ್ಸಾರಿ

- Advertisement -
- Advertisement -

ಅಹಮದಾಬಾದ್ ನಲ್ಲಿ ಅಶೋಕ್ ಪರ್ಮಾರ್ ಎಂಬುವವರು ‘ಏಕತಾ ಚಪ್ಪಲ್ ಘರ್’ ಎಂಬ ಚಪ್ಪಲಿ ಶೂ ಅಂಗಡಿ ಆರಂಭಿಸಿದ್ದಾರೆ. ಅದನ್ನು ಕುತುಬುದ್ದೀನ್ ಅನ್ಸಾರಿ ಎಂಬುವವರು ಉದ್ಘಾಟಿಸಿದ್ದಾರೆ. ಆ ಇಬ್ಬರು ಗೆಳೆಯರು ಅಂಗಡಿಯ ಮುಂದೆ ನಿಂತು ತೆಗೆಸಿಕೊಂಡ ಫೋಟೊ ಎಲ್ಲಾ ಕಡೆ ವೈರಲ್ ಆಗಿದೆ. ಲಕ್ಷಾಂತರ ಜನ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಏಕೆ? ಯಾರಿವರು? ಇವರ ಹಿನ್ನೆಲೆ ಏನು?

ಅದು 2002ರ ಕಾಲ. ಸರಿಯಾಗಿ 17 ವರ್ಷಗಳ ಹಿಂದೆ ಗುಜರಾತ್ ನಲ್ಲಿ ಕೋಮುಗಲಭೆಗಳು ಉತ್ತುಂಗಕ್ಕೇರಿದ್ದವು. ಗೋಧ್ರಾ ರೈಲು ದುರಂತಕ್ಕೆ ಸೇಡು ತೀರಿಸಬೇಕೆಂದು ಒಂದು ಸಮುದಾಯದವರು ಮತ್ತೊಂದು ಸಮುದಾಯದವರನ್ನು ಹುಡಕಿ ಕೊಲ್ಲುತ್ತಿದ್ದ ಸಮಯ. ವೃತ್ತಿಯಲ್ಲಿ ಟೈಲರ್ ಆದ ಕುತುಬುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ನರೋಡಾ ಪಟಿಯಾ ಪ್ರದೇಶದಲ್ಲಿ ಗಲಭೆ ಉತ್ತುಂಗದಲ್ಲಿದ್ದಾಗ, ನರೋಲ್-ನರೋಡಾ ರಸ್ತೆಯಲ್ಲಿರುವ ತನ್ನ ಮನೆಯ ಹೊರಗೆ ಆತ ಸಹಾಯಕ್ಕಾಗಿ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಸಿಬ್ಬಂದಿಗೆ  ಕೈ ಮುಗಿದ ಮನವಿ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರ ರಕ್ತದ ಅಂಗಿಯ ಚಿತ್ರ ಮತ್ತು ಕಣ್ಣೀರು ತುಂಬಿದ ಕಣ್ಣುಗಳು ಗುಜರಾತ್ ಗಲಭೆಯ ಸಂತ್ರಸ್ತರನ್ನು ಪ್ರತಿನಿಧಿಸುವ ಚಿತ್ರವಾಯಿತು.

ಅದೇ ಸಂದರ್ಭದಲ್ಲಿ ಬಲಗೈಯ್ಯಲ್ಲೊಂದು ಕಬ್ಬಿಣದ ರಾಡ್, ತಲೆಗೆ ಕೇಸರಿ ಬಟ್ಟೆ ಕಟ್ಟಿ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅಟ್ಟಹಾಸ ಮೆರೆಯುತ್ತಿರುವ ಹಿಂದೂ ಸಮುದಾಯಕ್ಕೆ ಸೇರಿದ ಅಶೋಕ್ ಪರ್ಮಾರ್ ಅಲಿಯಾಸ್ ಅಶೋಕ್ ಮೋಚಿಯ ಫೋಟೊ ಕೂಡ ಅಂದಿನ ದೌರ್ಜನ್ಯದ ಸಂಕೇತವಾಗಿತ್ತು.

ಆದರ ಗಲಭೆಗಳು ನಿಂತು ಬಹಳ ಕಾಲವಾದ ನಂತರ ಅವರಿಬ್ಬರನ್ನು ಮಾತನಾಡಿಸಿ ಅವರನ್ನು ಒಂದೇ ವೇದಿಕೆಗೆ ತರುವ ಮೂಲಕ ಕೋಮು ಸೌಹಾರ್ದತೆ ಸಾರಲು ಕೇರಳದ ಸಿಪಿಎಂ ಪಕ್ಷ ಪ್ರಯತ್ನಿಸಿತ್ತು ಮತ್ತು ಅದಕ್ಕೆ ಯಶ ಸಿಕ್ಕಿತು ಕೂಡ. ಅಶೋಕ್ ಪರ್ಮಾರ್ ರನ್ನು ಮಾತನಾಡಿಸಿ ಈ ರೀತಿ ಕೋಮುದ್ವೇಷ ಸಾಧಿಸಿ ದಾಳಿ ಮಾಡುವುದು ತಪ್ಪಲ್ಲವೇ? ಇದರಿಂದ ಸಮಾಜಕ್ಕಾಗುವ ಅಪಾಯಗಳನ್ನು ತಿಳಿಹೇಳಲಾಯಿತು. ಆತನಿಗೆ ತನ್ನ ತಪ್ಪಿನ ಮನವರಿಕೆಯಾಗಿ ಬಹಿರಂಗ ಕ್ಷಮೆ ಕೇಳಿದ್ದ. ಮುಂದೆಂದೂ ಕೋಮುಗಲಭೆಗಳಲ್ಲಿ ಭಾಗವಹಿಸದೇ ಸಾಮಾನ್ಯ ಜೀವನ ಸಾಗಿಸಲು ನಿರ್ಧರಿಸಿದ್ದ. ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗವಹಿಸಿ ಅಶೋಕ್ ಮೋಚಿ, ಅನ್ಸಾರಿಗೆ ಗುಲಾಬಿ ಹೂ ಕೊಡುವ ಮೂಲಕ ಭಾವೈಕ್ಯತೆ ಮೆರದಿದ್ದ.

ಅಶೋಕ್ ಪರ್ಮಾರ್ ಬಡವನಾಗಿದ್ದರಿಂದ ದೆಹಲಿಯ ಫುಟ್ ಪಾತ್ ಗಳಲ್ಲಿ ಶೂ, ಚಪ್ಪಲಿ ಹೊಲೆಯುತ್ತಿದ್ದ ಮತ್ತು ಮಾರುತ್ತಿದ್ದ. ತನ್ನ ಜೀವನವನ್ನು ಮತ್ತಷ್ಟು ತಹಬದಿಗೆ ತರುವುದಕ್ಕಾಗಿ ಈಗ ಅಹಮದಾಬಾದ್ ನಲ್ಲಿ ಹೊಸ ಚಪ್ಪಲಿ ಅಂಗಡಿ ಹಾಕಿದ್ದಾನೆ. ಇದಕ್ಕಾಗಿ ಆತನಿಗೆ ಕೇರಳದ ಸಿಪಿಎಂ ಪಕ್ಷವು ಆರಂಭಿಕ ಬಂಡವಾಳದ ಹಣಕಾಸು ಸಹಾಯ ಮಾಡಿದೆ. ಅದಕ್ಕೆ ‘ಏಕತಾ ಚಪ್ಪಲ್ ಘರ್’ ಎಂಬ ಸೌಹಾರ್ದ ಸೂಚಿಸುವ ಹೆಸರು ಸಹ ಇಟ್ಟಿದ್ದಾನೆ. ಜೊತೆಗೆ ತನ್ನ ಗೆಳೆಯ ಕುತುಬುದ್ದೀನ್ ಅನ್ಸಾರಿರವರಿಂದಲೇ ಅದರ ಉದ್ಘಾಟನೆ ಮಾಡಿಸುವ ಮೂಲಕ ತನ್ನ ಹಿಂದಿನ ತಪ್ಪುಗಳಿಗೆ ಒಂದು ರೀತಿಯ ಪ್ರಾಯಶ್ಚಿತ ಮಾಡಿಕೊಂಡಿದ್ದಾನೆ ಎಂದು ಎಲ್ಲೆಡೆ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಅಶೋಕ್ ಪರ್ಮಾರ್ ರವರ ಹೊಸ ಅಂಗಡಿ ಉದ್ಘಾಟನೆಯ ಗೌರವಾನ್ವಿತ ಅತಿಥಿಯಾಗಿದ್ದ ಕುತುಬುದ್ದೀನ್ ಅನ್ಸಾರಿ ಗಲಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರು. ಅಲ್ಲಿಯೂ ಅವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಶೋಕ್ ಪರ್ಮಾರ್ ಮೋಚಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿರುವ ಕುತುಬುದ್ದೀನ್ ಅನ್ಸಾರಿ, “ನಾವು ಕಾಲಕಾಲಕ್ಕೆ ಭೇಟಿಯಾಗುತ್ತಲೇ ಇರುತ್ತೇವೆ. ಅವರು (ಅಶೋಕ್) ಅವರು ತಮ್ಮ ಅಂಗಡಿಯನ್ನು ನಾನು ಉದ್ಘಾಟಿಸಬೇಕೆಂದು ಕೇಳಿದರು ಮತ್ತು ನಾನು ಒಪ್ಪಿಕೊಂಡೆ. ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ನಾನು ಅವನನ್ನು ಚೆನ್ನಾಗಿ ಇರಲು ಬಯಸುತ್ತೇನೆ ಮತ್ತು ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿದೆ.

“ಇದು ಹಿಂದೂ ವರ್ಣ ವ್ಯವಸ್ಥೆಯಾಗಿದ್ದು, ನನ್ನನ್ನು ಚಮ್ಮಾರನಾಗಿ ಸಿಲುಕಿಕೊಳ್ಳುತ್ತಲೇ ಇದೆ. ಅವರು ನಮಗೆ ಮುಂದುವರಿಯಲು ಬಿಡುವುದಿಲ್ಲ” ಎಂದಿರುವ ಅಶೋಕ್ ಪರ್ಮಾರ್ ಮೋಚಿ, ಉನಾದಲ್ಲಿ ದಲಿತರನ್ನು ಸಾರ್ವಜನಿಕವಾಗಿ ಥಳಿಸಿದ ನಂತರ ತಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಡಲು 2017 ರಲ್ಲಿ ಗುಜರಾತ್‌ನ ದಲಿತ ಆಜಾದಿ ಕೂಚ್‌ಗೆ ಸೇರಿದ್ದರು. ತನ್ನ ಅಂಗಡಿಯ ಉದ್ಘಾಟನೆಯಲ್ಲಿ ತನ್ನ ಗೆಳೆಯ ಅನ್ಸಾರಿ ಟೇಪು ಕತ್ತರಿಸುವುದನ್ನು ನೋಡಿದ ಮೋಚಿ ಭಾವುಕಗೊಂಡಿದ್ದಾರೆ.

ಒಟ್ಟಿನಲ್ಲಿ ಗುಜರಾತ್ ಗಲಭೆಯ ಸಮಯದಲ್ಲಿ ಎರಡು ವಿರುದ್ಧ ಧ್ರುವಗಳನ್ನು ಪ್ರತಿನಿಧಿಸಿದ್ದ ಇಬ್ಬರೂ ವ್ಯಕ್ತಿಗಳು ವಾಸ್ತವವನ್ನು ಅರ್ಥ ಮಾಡಿಕೊಂಡು ಸೌಹಾರ್ದತೆ ಮೆರೆದಿದ್ದಾರೆ. ಅಲ್ಲದೇ ಕೇವಲ ಭಾವನಾತ್ಮಕ ವಿಚಾರದಲ್ಲಿ ಜನರು ಆವೇಶಗೊಳಗಾಗದೆ ತಮ್ಮ ಬದುಕನ್ನು ಸುಧಾರಿಸುವ ಜೀವನೋಪಾಯದ ಕಡೆ ಚಲಿಸಬೇಕೆಂಬುದನ್ನು ಸಹ ಈ ಚಪ್ಪಲಿ ಅಂಗಡಿ ತೋರಿಸಿದೆ. ಇದು ಇಂದು ಇಡೀ ಭಾರತ ಅರ್ಥ ಮಾಡಿಕೊಳ್ಳಬೇಕಾದ ಪಾಠವಾಗಿದೆ. ಧರ್ಮ-ಧರ್ಮಗಳ ನಡುವಿನ ಕಂದರಗಳನ್ನು ಮುಚ್ಚಿಹಾಕಿ ಭಾರತದ ಎಲ್ಲಾ ಜನರು ತಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವುದರ ಜೊತೆಗೆ ದೇಶದ ಐಕ್ಯತೆ, ಸೌಹರ್ದತೆಗೆ ಶ್ರಮಿಸಬೇಕಿದೆ.

ಕೊನೆಯಲ್ಲಿ ಈ ಗೆಳೆಯರು ಹೀಗೆ ಬದಲಾಗಲು, ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಕೇರಳ ಸಿಪಿಎಂ ಪಕ್ಷವನ್ನು ಮನಃಪೂರ್ವಕವಾಗಿ ಅಭಿನಂದಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸೌಹಾರ್ದ ಳ್ಳೆಯದು.
    ಆದರೆ ಸಿಪಿಐದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
    ಹಿಂದೂ ಮಾತ್ರ ಗಲಭೆಕೋರ
    ಮುಸ್ಲಿಮರು ಸಂತ್ರಸ್ತರು !
    ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
    ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
    ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

  2. ಸೌಹಾರ್ದ ಳ್ಳೆಯದು.
    ಆದರೆ ಸಿಪಿಎಂದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
    ಹಿಂದೂ ಮಾತ್ರ ಗಲಭೆಕೋರ
    ಮುಸ್ಲಿಮರು ಸಂತ್ರಸ್ತರು !
    ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
    ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
    ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...