Homeಚಳವಳಿರಿನ್ ನಾವಿಕರ ಬಂಡಾಯ ಮತ್ತು ಕಾರ್ಮಿಕರು: ಭಾರತದ ಕಾರ್ಮಿಕ ಚಳವಳಿಯ ಚರಿತ್ರೆ ಪುಸ್ತಕದ ಆಯ್ದಭಾಗ

ರಿನ್ ನಾವಿಕರ ಬಂಡಾಯ ಮತ್ತು ಕಾರ್ಮಿಕರು: ಭಾರತದ ಕಾರ್ಮಿಕ ಚಳವಳಿಯ ಚರಿತ್ರೆ ಪುಸ್ತಕದ ಆಯ್ದಭಾಗ

- Advertisement -
- Advertisement -

ಸುಕೊಮಲ್ ಸೆನ್‍ ರವರ ಮೇರು ಕೃತಿಯಾದ  “Working Class of India : History of Emergence and Movement, 1830-2010” ಅನ್ನು ‘ಭಾರತದ ಕಾರ್ಮಿಕ ಚಳುವಳಿಯ ಚರಿತ್ರೆ 1830-2010’ ಹೆಸರಿನಲ್ಲಿ ಕಾರ್ಮಿಕ ವರ್ಗದ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸಿ.ಆರ್.ಶಾನಭಾಗ ಮತ್ತು ವೇದರಾಜ ಎನ್.ಕೆ ರವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯನ್ನು ಬೆಂಗಳೂರಿನ ಕ್ರಿಯಾ ಮಾಧ್ಯಮ ಪ್ರಕಟಿಸಿದ್ದು, ನವೆಂಬರ್ 16 ರಂದು ಕುಂದಾಪುರದಲ್ಲಿ ಬಿಡುಗಡೆಯಾಗಿದೆ. ಕೃತಿಯ ಆಯ್ದಭಾಗ ಇಲ್ಲಿದೆ.

ರಿನ್ ನಾವಿಕರ ಬಂಡಾಯ ಮತ್ತು ಕಾರ್ಮಿಕರು

ಭಾರತದ ಕಾರ್ಮಿಕ ಚಳವಳಿಯ ಯುದ್ಧ-ಸಮಯದ ಮುನ್ನಡೆ ಮತ್ತು ಸಾಧನೆಗಳು ನಿಸ್ಸಂದೇಹವಾಗಿ ಭಾರತದ ಕಾರ್ಮಿಕ ಇತಿಹಾಸದಲ್ಲಿ ಒಂದು ಸ್ಮರಣೀಯ ಹಂತವೆಂದು ಪರಿಗಣಿಸಲ್ಪಡುತ್ತವೆ. ಫ್ಯಾಸಿಸಂನ ಸೋಲು ಮತ್ತು ಯುದ್ಧದ ಅಂತ್ಯವು ಭಾರತದ ಕಾರ್ಮಿಕ ವರ್ಗವು ಸಾಮ್ರಾಜ್ಯಶಾಹಿಯ ವಿರುದ್ಧ ಹೆಚ್ಚು ಸಂಘಟಿತ, ವರ್ಗ-ಪ್ರಜ್ಞೆ ಮತ್ತು ರಾಜಿಯಾಗದ ಹೋರಾಟದ ಶಕ್ತಿಯಾಗಿ ಹೊರಹೊಮ್ಮಿದನ್ನು ಕಂಡಿತು.

ಫ್ಯಾಸಿಸಂನ ಸೋಲಿನ ನಂತರದ ವಿಶ್ವ ಪ್ರಜಾಪ್ರಭುತ್ವದ ಮತ್ತು ರಾಷ್ಟ್ರೀಯ ವಿಮೋಚನಾ ಶಕ್ತಿಗಳ ಉತ್ಕ್ರಾಂತಿ ಭಾರತವನ್ನೂ ಬೆಚ್ಚಿಬೀಳಿಸಿತು ಮತ್ತು ರಾಷ್ಟ್ರೀಯ ವಿಮೋಚನೆ ಮತ್ತು ಪ್ರಜಾಪ್ರಭುತ್ವದ ಪ್ರಗತಿಗಾಗಿ ಅಭೂತಪೂರ್ವ ಮತ್ತು ಅದಮ್ಯ ಹೋರಾಟವು ಇಡೀ ದೇಶವನ್ನು ಆವರಿಸಿತು. ಸುಭಾಸ್ ಚಂದ್ರ ಬೋಸ್ ಅವರು ‘ಇಂಡಿಯನ್ ನ್ಯಾಶನಲ್ ಆರ್ಮಿ’ (ಐಎನ್‌ಎ-ಆಝಾದ್ ಹಿಂದ್ ಸೇನೆ)ಯನ್ನು ಕಟ್ಟಿ ಬೆಳೆಸಿದ್ದು ಮತ್ತು ಆಕ್ಸಿಸ್ ಶಕ್ತಿಗಳ ಸೋಲಿನ ನಂತರ ಬ್ರಿಟಿಷ್ ಸರ್ಕಾರವು ಅವರನ್ನು ಸೆರೆ ಹಿಡಿದು, ಮಿಲಿಟರಿ ನ್ಯಾಯಮಂಡಳಿಯ ಮುಂದೆ ವಿಚಾರಣೆ ನಡೆಸಿದ್ದು, ಭಾರತದ ದೇಶಪ್ರೇಮಿ ಜನಸಮೂಹದ ಮನ ಕಲಕಿಸಿತು ಮತ್ತು ಅದೇ ಸಮಯದಲ್ಲಿ ಅವರ ರಾಷ್ಟ್ರೀಯ ಭಾವನೆಗಳನ್ನು ತೀವ್ರವಾಗಿ ಘಾಸಿಗೊಳಿಸಿತು.

ಯುದ್ಧದ ಅಂತ್ಯದೊಂದಿಗೆ. ಭಾರತ ಸರ್ಕಾರ ಕಾಯಿದೆ, 1935ರ ಚೌಕಟ್ಟಿನೊಳಗೆ ಭಾರತದಲ್ಲಿ ಮತ್ತಷ್ಟು ಸಾಂವಿಧಾನಿಕ ಬದಲಾವಣೆಗಳನ್ನು ಪರಿಚಯಿಸಲು ಬ್ರಿಟಿಷ್ ಸರ್ಕಾರವು ಹೊಸ ಪ್ರಸ್ತಾಪಗಳನ್ನು ಘೋಷಿಸಿತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರನ್ನು ಬಿಡುಗಡೆ ಮಾಡಲಾಯಿತು ಮತ್ತು 1945 ಜೂನ್ 25ರಂದು ಸಿಮ್ಲಾದಲ್ಲಿ ರಾಜಕೀಯ ನಾಯಕರ ಪ್ರಾತಿನಿಧಿಕ ಸಮಾವೇಶವನ್ನು ಕರೆಯಲಾಯಿತು.

ಆದರೆ ವೈಸ್ರಾಯ್ ಲಾರ್ಡ್ ವೇವೆಲ್ ಮಂಡಿಸಿದ ಅತೃಪ್ತಿಕರ, ಪ್ರಚೋದನಕಾರಿ ಮತ್ತು ವಿಭಜಕ ಪ್ರಸ್ತಾಪಗಳಿಂದಾಗಿ ಸಿಮ್ಲಾ ಸಮ್ಮೇಳನದ ವೈಫಲ್ಯವು ಕಾಂಗ್ರೆಸ್-ಮುಸ್ಲಿಂ ಲೀಗ್ ನಡುವೆ ಅನೈಕ್ಯತೆ ಮತ್ತು ಲೀಗಿನ ಕೋಮು ಬೇಡಿಕೆಯ ಜೊತೆ ಸೇರಿ ಭಾರತದಲ್ಲಿ ರಾಜಕೀಯ ಬಿಕ್ಕಟ್ಟನ್ನು ಉಂಟುಮಾಡಿತು.

ಆದರೆ ಬ್ರಿಟಿಷ್ ಸರ್ಕಾರವು ಏಕಕಾಲದಲ್ಲಿ ವಿಭಜಕ ತಂತ್ರಗಳನ್ನು ಆಡುವಲ್ಲಿ ನಿರತವಾಗಿದ್ದಾಗ ಮತ್ತು ಮೇಲ್ಮಟ್ಟದ ನಾಯಕತ್ವದ ಅನೈಕ್ಯತೆ ಮತ್ತು ಅಸ್ಥಿರತೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾಗ, ತಳಭಾಗದಲ್ಲಿದ್ದ ಜನಸಮೂಹ ಅಭೂತಪೂರ್ವ ಉತ್ಕ್ರಾಂತಿಯಲ್ಲಿ ರಭಸದಿಂದ ನುಗ್ಗಿದರು. ಕೋಮುವಾದದ ವಿಷಪೂರಿತ ಮತವಾರ್ತೆಗಳನ್ನು ಸಾರುವ ಮೂಲಕ ಭಾರತದ ಜನರನ್ನು ವಿಭಜಿಸಲು ನೀತಿಹೀನ ಸಾಮ್ರಾಜ್ಯಶಾಹಿಗಳ ನೆರವು ಮತ್ತು ಬೆಂಬಲದಿಂದ ಮತಾಂಧ ಶಕ್ತಿಗಳು ಬೆದರಿಕೆ ಹಾಕುತ್ತಿದ್ದಾಗ, ಲಕ್ಷಾಂತರ ಶ್ರಮಜೀವಿ ಜನಸಮೂಹ -ಹಿಂದೂಗಳು, ಮುಸ್ಲಿಮರು ಮತ್ತು ಅಸ್ಪೃಶ್ಯರು ಎಂದು ಕರೆಯಲ್ಪಡುವವರು ಒಟ್ಟಾಗಿ ಅಣಿನೆರೆದರು ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಭವ್ಯವಾದ ಮತ್ತು ಐಕ್ಯ ಹೋರಾಟವನ್ನು ಕೈಗೊಂಡರು ಎನ್ನುವದು ವಿಶೇಷ ಮಹತ್ವದ್ದಾಗಿತ್ತು. ಸಾವು ಮತ್ತು ಪೋಲಿಸ್ ಮತ್ತು ಸೈನ್ಯದಿಂದ ವಿವೇಚನಾಶೂನ್ಯ ಗುಂಡಿನ ದಾಳಿಯನ್ನು ಧಿಕ್ಕರಿಸಿ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಧ್ವಜಗಳು ಮತ್ತು ಕೆಲವು ಸಂದರ್ಭಗಳಲ್ಲಿ ಕೆಂಪು ಧ್ವಜಗಳನ್ನು ಹಿಡಿದುಕೊಂಡು, ಭಾರತದ ಸ್ವಾತಂತ್ರ‍್ಯಕ್ಕೆ ಒತ್ತಾಯಿಸುತ್ತಾ, ಕಲ್ಕತ್ತಾ, ಬಾಂಬೆ ಮತ್ತಿತರ ನಗರಗಳು ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಉಗ್ರ ಪ್ರದರ್ಶನಗಳಲ್ಲಿ ಸಾವಿರಾರು ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಜನರು ಸೇರಿಕೊಂಡರು.

ಐಎನ್‌ಎ ಅಧಿಕಾರಿಗಳ ಕೋರ್ಟ್-ಮಾರ್ಷಲ್ ಮತ್ತು ಶಿಕ್ಷೆ ಹಿಂದೂಗಳು ಮತ್ತು ಮುಸ್ಲಿಮರೆನ್ನದೆ ಭಾರತದ ಜನರನ್ನು ತೀವ್ರವಾಗಿ ಕೆರಳಿಸಿತು ಮತ್ತು ನಂತರ ನಡೆದ ಐಕ್ಯ ಪ್ರತಿಭಟನಾ ಕಾರ್ಯಕ್ರಮಗಳು ಅಂತಿಮವಾಗಿ ಅವರನ್ನು ಬಿಡುಗಡೆಗೊಳಿಸಲು ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುವಲ್ಲಿ ಯಶಸ್ವಿಯಾದವು.

ದೇಶವನ್ನು ವ್ಯಾಪಿಸುತ್ತಿದ್ದ ಪ್ರಚಂಡ ಸಾಮೂಹಿಕ ಹೋರಾಟಗಳು ಮತ್ತು ಆಝಾದ್ ಹಿಂದ್ ಸೇನೆಯ ಪ್ರತಿಷ್ಠೆಯು, ಭಾರತದ ಸಶಸ್ತ್ರ ಪಡೆಗಳಲ್ಲೂ ದೇಶಭಕ್ತಿಯ ಭಾವನೆಗಳನ್ನು ಹುಟ್ಟುಹಾಕಿದವು. ಭಾರತದ ಸ್ವಾತಂತ್ರ‍್ಯ ಚಳವಳಿಯ ಹಾದಿಯಲ್ಲಿ, ಇದು ಪ್ರಚಂಡ ಕ್ರಾಂತಿಕಾರಿ ಮಹತ್ವವನ್ನು ಹೊಂದಿದ್ದ ಸಂಪೂರ್ಣ ಹೊಸ ಬೆಳವಣಿಗೆಯಾಗಿತ್ತು.

ಪರಿಹಾರವಾಗದ ಕುಂದುಕೊರತೆಗಳ ಸುದೀರ್ಘ ಸರಣಿಯ ಪರಿಣಾಮವಾಗಿ ಹೆಚ್ಚು ಬಾಧಿತರಾಗಿದ್ದ ‘ರಾಯಲ್ ಇಂಡಿಯನ್ ನೇವಿ’(ರಿನ್) ನೌಕಾಪಡೆಯ ನಾವಿಕರು, ಬ್ರಿಟಿಷ್ ಆಡಳಿತದ ವಿರುದ್ಧ ಬಹಿರಂಗವಾಗಿ ಬಂಡೆದ್ದರು. ಈ ಬೆಂಕಿಯ ಕಿಡಿ ಮೊದಲು ಫೆಬ್ರವರಿ 18, 1946 ರಂದು ಬಾಂಬೆ ನೌಕಾ ನೆಲೆಯಲ್ಲಿ ಹುಟ್ಟಿಕೊಂಡಿತು. ಆರಂಭದಿಂದಲೂ, ಬಂಡಾಯದ ನಾಯಕರು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರನ್ನು ಸಂಪರ್ಕಿಸಿದ್ದರೂ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಅಡ್ಮಿರಲ್ ಗಾಡ್ಫ್ರೇ ಅವರು ಸರ್ಕಾರದ ಹತೋಟಿಯಲ್ಲಿದ್ಧ ಅಗಾಧ ಶಕ್ತಿಗಳನ್ನು ಬಳಸಿ ಬಂಡಾಯವನ್ನು ಹತ್ತಿಕ್ಕುವ ಬೆದರಿಕೆ ಹಾಕಿದಾಗ, ಬಂಡಾಯನಿರತ ಸೈನಿಕರಿಂದ ರಚಿಸಲ್ಪಟ್ಟ ಕೇಂದ್ರ ನೌಕಾ- ಮುಷ್ಕರ ಸಮಿತಿಯು ತಲೆಬಾಗುವ ಬದಲು, ಈ ಉದ್ಧಟ ಬೆದರಿಕೆಗೆ ಉತ್ತರವಾಗಿ ಶಾಂತಿಯುತ ಮುಷ್ಕರ ಮತ್ತು ಹರತಾಳ ಆಯೋಜಿಸುವಂತೆ ನಾಗರಿಕ ಜನಸಮೂಹಕ್ಕೆ ಮನವಿ ಮಾಡಿತು. ಈ ವಿಪರೀತ ನಿರ್ಣಾಯಕ ಪರಿಸ್ಥಿತಿಯಲ್ಲಿ, ಸಾಮ್ರಾಜ್ಯಶಾಹಿ ಬೆದರಿಕೆಯನ್ನು ಸೋಲಿಸಲು ಮತ್ತು ನೌಕಾಪಡೆಯ ಸೈನಿಕರ ದೇಶಭಕ್ತಿಯ ಹೋರಾಟವನ್ನು ಉಳಿಸಲು ರಾಷ್ಟ್ರೀಯ ಚಳವಳಿಯ ಶಕ್ತಿಗಳಿಂದ ಬೆಂಬಲ ಮತ್ತು ಬೆಂಬಲವನ್ನು ಕೋರಿದಾಗ, ಕಾಂಗ್ರೆಸ್ ಪರವಾಗಿ ವಲ್ಲಭಭಾಯಿ ಪಟೇಲ್ ಮುಷ್ಕರ ಮತ್ತು ಹರತಾಳವನ್ನು ಬೆಂಬಲಿಸಲು ನಿರಾಕರಿಸಿದರು ಮತ್ತು ಅದನ್ನು ವಿರೋಧಿಸಿದರು. ಆದರೆ ಕೇಂದ್ರ ನೌಕಾ ಮುಷ್ಕರ ಸಮಿತಿಯ ಕರೆಗೆ ಕಮ್ಯುನಿಸ್ಟ್ ಪಕ್ಷ ಮತ್ತು ಬಾಂಬೆಯ ಕಾರ್ಮಿಕ ಸಂಘಗಳಿಂದ ಪ್ರಾಮಾಣಿಕ ಬೆಂಬಲ ದೊರಕಿತು. ಫೆಬ್ರವರಿ 22 ರಂದು, ಕಾರ್ಮಿಕ ವರ್ಗ ಮತ್ತು ಬಾಂಬೆಯ ದುಡಿಯುವ ಜನಸಮೂಹದ ಇತರ ವಿಭಾಗಗಳು ಈ ಮುಷ್ಕರದಲ್ಲಿ ವ್ಯಾಪಕವಾಗಿ ಭಾಗವಹಿಸಿದವು ಮತ್ತು ವಿವೇಚನಾಶೂನ್ಯ ಪೊಲೀಸ್ ಮತ್ತು ಮಿಲಿಟರಿ ಗುಂಡಿನ ದಾಳಿಯನ್ನು ಎದುರಿಸಿದವು. ಸಂಪ್ರದಾಯವಾದಿ ಅಧಿಕೃತ ಅಂಕಿಅಂಶಗಳ ಪ್ರಕಾರ, ಫೆಬ್ರವರಿ 21 ರಿಂದ ಫೆಬ್ರವರಿ 23 ರವರೆಗೆ ಮೂರು ದಿನಗಳ ಕಾಲ ನಡೆದ ಪ್ರತಿರೋಧ ಹೋರಾಟದಲ್ಲಿ, ಬ್ರಿಟಿಷ್ ರಕ್ಕಸರ ಕ್ರೂರ ಕೈಗಳಿಂದ 250 ದೇಶಪ್ರೇಮಿಗಳು ತಮ್ಮ ಅಮೂಲ್ಯವಾದ ಜೀವಗಳನ್ನು ಬಲಿದಾನ ಮಾಡಿದರು. ಕಲ್ಕತ್ತಾ, ಮದ್ರಾಸ್, ಕರಾಚಿ ಮತ್ತು ಇತರ ಸ್ಥಳಗಳಲ್ಲಿ ನೌಕಾಪಡೆಯ ಸೈನಿಕರ ಹೋರಾಟವನ್ನು ಬೆಂಬಲಿಸಿ ಜನರ ಪ್ರತಿಭಟನಾ ಪ್ರದರ್ಶನಗಳು ನಡೆದವು. ಈ ಪ್ರಸಂಗವು ಕಾರ್ಮಿಕ ವರ್ಗ ಮತ್ತು ಇತರ ಶ್ರಮಜೀವಿ ಜನಸಮೂಹದ ತೀಕ್ಷ್ಣವಾದ ರಾಜಕೀಯ ಪ್ರಜ್ಞೆಯ ಮತ್ತು ರಾಷ್ಟ್ರೀಯ ಸ್ವಾತಂತ್ರ‍್ಯವನ್ನು ಸಾಧಿಸಲು ತಮ್ಮ ಪ್ರಾಣತ್ಯಾಗಕ್ಕೂ ನೂರಾರು ಸಂಖ್ಯೆಯಲ್ಲಿ ಸಿದ್ದರಾಗಿದ್ದ ಅವರ ತೀವ್ರವಾದ ಭಾವನೆಗಳ ಅದ್ಭುತ ಉದಾಹರಣೆಯೆಂದು ಗುರುತಿಸಲ್ಪಟ್ಟಿದೆ.

1945-46ರ ಅವಧಿಯ ಸಾಮೂಹಿಕ ಬಂಡಾಯದ ಘಟನೆಗಳು ಭಾರತದ ರಾಜಕೀಯ ನಕ್ಷೆಯಲ್ಲಿ ವರ್ಗಶಕ್ತಿಗಳ ಹೊಸ ಸಂಯೋಜನೆಯನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದವು. ಕೋಮು ಪಿತೂರಿಗಳನ್ನು ಧಿಕ್ಕರಿಸಿ, ಇಡೀ ಕಾರ್ಮಿಕ ವರ್ಗದ ಐಕ್ಯತೆ ಮತ್ತು ಒಗ್ಗಟ್ಟು ಮತ್ತು ರಾಜಕೀಯ ಸಾಮೂಹಿಕ ಹೋರಾಟಗಳಲ್ಲಿ ಅವರು ಸ್ಪೂರ್ತಿಯುತವಾಗಿ ಭಾಗವಹಿಸಿದ್ದು ಮತ್ತು ರೈತರು ವಿದ್ಯಾರ್ಥಿಗಳು ಮತ್ತು ಮಧ್ಯಮ ವರ್ಗದ ಜನರು ಪ್ರದರ್ಶಿಸಿದ ರಾಜಿಯಾಗದ ದೃಢ ನಿಶ್ಚಯ, ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಗತಿಯನ್ನು ಸವಾಲಿನ ಎತ್ತರಕ್ಕೆ ಏರಿಸಿದವು. ಇಡೀ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಶಕ್ತಿಗಳು ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿಯ ಅಡಿಪಾಯವನ್ನು ಸ್ಫೋಟಿಸಲು ಸಜ್ಜಾಗಿ ನಿಂತವು. ಆದರೆ ಈ ಕ್ಷಣದಲ್ಲಿ ಕಾರ್ಮಿಕ ವರ್ಗ ಮತ್ತು ಜನರು ಸತತ ಬೃಹತ್ ಹೋರಾಟದ ಹಾದಿಯಲ್ಲಿ ಸಾಗಲು ಪ್ರಾರಂಭಿಸಿದಾಗ ಮತ್ತು ಬಂಡಾಯದ ಕಿಡಿಗಳು ಸಶಸ್ತ್ರ ಪಡೆಗಳನ್ನು ಆವರಿಸಲು ಪ್ರಾರಂಭಿಸಿದಾಗ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್, ಜನಸಾಮಾನ್ಯರು ಮತ್ತು ಸಶಸ್ತ್ರ ಪಡೆಗಳ ಮುಷ್ಕರಗಳನ್ನು ಮತ್ತು ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಚ್ಚುಮರೆಯಿಲ್ಲದೇ ಖಂಡಿಸಿದವು. ನೌಕಾಪಡೆಯ ಬಂಡಾಯನಿರತ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಅಬುಲ್ ಕಲಾಂ ಆಜಾದ್: “ಮುಷ್ಕರಗಳು, ಹರತಾಳಗಳನ್ನು ಮಾಡುವುದು ಮತ್ತು ಮೇಲಧಿಕಾರಿಗಳ ಆಜ್ಣೆಯನ್ನು ಧಿಕ್ಕರಿಸುವುದು ಸರಿಯಲ್ಲ” ಎಂದು ಘೋಷಿಸಿದರು.

ರಾಷ್ಟ್ರೀಯ ಚಳವಳಿಯ ಆರಂಭದಿಂದಲೂ ಪದೇ ಪದೇ ಮುಂಚೂಣಿಗೆ ಬರಲು ಒಲವು ತೋರುತ್ತಿದ್ದ ಮುಂದುವರಿದ ಸಾಮೂಹಿಕ ಹೋರಾಟ ಮತ್ತು ಸುಧಾರಣಾವಾದಿ ಬೂರ್ಜ್ವಾ ನಾಯಕತ್ವದ ನಡುವಿನ ವೈರುಧ್ಯ, ಮತ್ತು ಸಾಮೂಹಿಕ ಬಂಡಾಯಗಳು ಉದ್ಬವವಾದ ಕೂಡಲೇ ನಾಯಕತ್ವವನ್ನು ಆಗಾಗ್ಗೆ ಕಾಡುವ ಭೀತಿ ಮತ್ತು ಅದಕ್ಕೆ ಮತ್ತೆ ಮತ್ತೆ ಕಡಿವಾಣ ಹಾಕುವ ತರಾತುರಿಯ ಪ್ರಯತ್ನಗಳು, ಈ ಎಲ್ಲಾ ವಿರೋಧಾಭಾಸಗಳು ಭಾರತದ ಸ್ವಾತಂತ್ರ‍್ಯ ಹೋರಾಟದ ಈ ಮಹತ್ವದ ಘಟ್ಟದಲ್ಲಿ ತೀವ್ರವಾಗಿ ಅಭಿವೃದ್ಧಿ ಹೊಂದಿದವು ಮತ್ತು ನಾಯಕತ್ವ ಮತ್ತು ಜನಸಾಮಾನ್ಯರ ನಡುವೆ ಅಪಾರ ಅಂತರವನ್ನು ಸೃಷ್ಟಿಸಿದವು.

ರಾಷ್ಟ್ರೀಯ ಚಳವಳಿಯ ಈ ಅಂತರ್ಗತ ದೌರ್ಬಲ್ಯಗಳನ್ನು ಗ್ರಹಿಸುವಲ್ಲಿ ಬ್ರಿಟಿಷ್ ಸರ್ಕಾರ ವಿಫಲವಾಗಲಿಲ್ಲ. ಬ್ರಿಟನ್‌ನ ಯುದ್ಧ-ಸಮಯದ ಪ್ರಧಾನ ಮಂತ್ರಿ ಚರ್ಚಿಲ್ ಅವರ ರಾಜೀನಾಮೆ ಮತ್ತು ಹೊಸ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತದ ವಿಭಜನೆಯಾಗಿ, ಉಪ-ಖಂಡದ ಎರಡೂ ಭಾಗಗಳ ಬಂಡವಾಳಶಾಹಿ-ಭೂಮಾಲೀಕ ವರ್ಗಗಳಿಗೆ ಅಧಿಕಾರ ವರ್ಗಾವಣೆಯಲ್ಲಿ ಪರಾಕಾಷ್ಠೆಯಾಗುವವರೆಗೂ ನಡೆದ ರಾಜತಾಂತ್ರಿಕ ಚಟುವಟಿಕೆಗಳು, ಅದರೊಂದಿಗೆ ಬ್ರಿಟಿಷ್ ಸರ್ಕಾರವು ಈ ದೌರ್ಬಲ್ಯವನ್ನು ಬಳಸಿಕೊಳ್ಳಲು ಪ್ರಯತ್ನಿಸಿದ ಧೂರ್ತತೆ ಮತ್ತು ವಿಭಜಕ ತಂತ್ರಗಳ ಸ್ವರೂಪಕ್ಕೆ ಸಾಕಷ್ಟು ಸಾಕ್ಷಿಯಾಗಿವೆ.

ಪುಸ್ತಕ: ಭಾರತದ ಕಾರ್ಮಿಕ ಚಳುವಳಿಯ ಚರಿತ್ರೆ 1830-2010
ಮೂಲ: ಸುಕೊಮಲ್ ಸೆನ್‍
ಕನ್ನಡಕ್ಕೆ; ಸಿ.ಆರ್.ಶಾನಭಾಗ ಮತ್ತು ವೇದರಾಜ ಎನ್.ಕೆ
ಪ್ರಕಟಣೆ: ಕ್ರಿಯಾ ಮಾಧ್ಯಮ
ಬೆಲೆ: 1,200/-
ಪುಸ್ತಕಕ್ಕಾಗಿ: 9448578021

ಇದನ್ನೂ ಓದಿ: ಕ್ರಿಯಾ ಮಾಧ್ಯಮ ಪ್ರಕಟನೆಯ ‘ಜರ್ಮನ್ ರೈತ ಯುದ್ಧ’ – ಪುಸ್ತಕ ಬಿಡುಗಡೆ, ಉಪನ್ಯಾಸ, ಸಂವಾದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...