Homeಮುಖಪುಟಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

ಫೈಜ್ ಅಹಮದ್ ಫೈಜ್‍ರ ಹಮ್ ದೇಖೇಂಗೇ ಕವಿತೆಯೂ ವೈದಿಕಮಣಿಗಳ ಸಂಕುಚಿತ ಬುದ್ಧಿಯೂ

- Advertisement -
- Advertisement -

ಪಾಕಿಸ್ತಾನದ ಸುಪ್ರಸಿದ್ಧ ಕವಿ ಫೈಜ್ ಅಹಮದ್ ಫೈಜ್ ಅವರ ಕವಿತೆಯೊಂದರ ಕುರಿತು ವಿವಾದ ಭುಗಿಲೆದ್ದಿದೆ. ದೆಹಲಿಯ ಮಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ್ದ ಅನಾಗರಿಕ ಹಲ್ಲೆ ದೌರ್ಜನ್ಯವನ್ನು ಖಂಡಿಸಿ, ಜಾಮಿಯಾ ವಿದ್ಯಾರ್ಥಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿ ಕಳೆದ ಡಿಸೆಂಬರ್ 17ರಂದು ಐಐಟಿ ಕಾನ್ಪುರ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಫೈಜ್ ಬರೆದಿದ್ದ “ಹಮ್ ದೇಖೇಂಗೇ” ಕವಿತೆಯನ್ನು ವಾಚಿಸಲಾಗಿತ್ತು. ಇನ್‍ಸ್ಪೈರ್ ಎಂಬ ವಿಜ್ಞಾನ ಕಾರ್ಯಕ್ರಮದಡಿ ಇದೇ ಐಐಟಿಯಲ್ಲಿ ಐದು ವರ್ಷಗಳ ಅವಧಿಗೆ ಕರಾರಿನ ಮೇಲೆ ಬೋಧಕನಾಗಿ 2016ರಲ್ಲಿ ನೇಮಕಗೊಂಡಿರುವ ವಸಿ ಶರ್ಮಾ ಎಂಬ ಪ್ರಾಧ್ಯಾಪಕ ಮತ್ತು ಇತರ 16 ಜನರು “ಹಮ್ ದೇಖೇಂಗೇ ಕವಿತೆ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸುತ್ತದೆ” ಎಂದು ಆಡಳಿತಾಂಗಕ್ಕೆ ದೂರು ಸಲ್ಲಿಸಿದ್ದರು. ಇದರ ಅನ್ವಯ ಆಡಳಿತಾಂಗವು ಆರು ಮಂದಿ ಪ್ರಾಧ್ಯಾಪಕರ ಸಮಿತಿಯೊಂದನ್ನು ನೇಮಿಸಿ ದೂರಿನ ಕುರಿತು ತನಿಖೆ ನಡೆಸಿ ದೂರಿನಲ್ಲಿ ಏನಾದರೂ ಹುರುಳಿದೆಯೋ ಎಂದು ವರದಿ ನೀಡಲು ತಿಳಿಸಿದೆ. ದ ಹಿಂದೂ ಪತ್ರಿಕೆಯಲ್ಲಿ ವರದಿಯಾದಂತೆ ಆಡಳಿತಾಂಗವು ಸ್ಪಷ್ಟಪಡಿಸಿರುವ ಪ್ರಕಾರ ತನಿಖಾ ಸಮಿತಿಯು ಕವಿತೆ ಹಿಂದೂ ವಿರೋಧಿಯೇ ಅಲ್ಲವೇ ಎಂಬ ಕುರಿತು ತನಿಖೆ ನಡೆಸುವುದಿಲ್ಲ, ಆದರೆ ಅದರ ಕುರಿತು ದೂರು ನೀಡಿರುವವರು ತಿಳಿಸಿರುವಂತೆ ಆ ಕವಿತೆಯನ್ನು ವಾಚಿಸಿದವರಲ್ಲಿ ದುರುದ್ದೇಶವಿತ್ತೇ ಎಂಬ ಕುರಿತು ವರದಿ ನೀಡುತ್ತದೆ.

ಫೈಜ್ ಅಹಮದ್ ಫೈಜ್ ಅವರ ಕವಿತೆಯ ಕುರಿತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಇಂತಹ ತನಿಖೆಯನ್ನು ನಡೆಸುತ್ತಿರುವುದೇ ಹಾಸ್ಯಾಸ್ಪದ ಎಂಬ ಅಭಿಪ್ರಾಯವನ್ನು ದೇಶದ ಸಾಂಸ್ಕೃತಿಕ ಲೋಕದ ಹಲವಾರು ಗಣ್ಯರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ. ಫೈಜ್ ಅವರ ಬದುಕು, ಕಾವ್ಯದ ಅಲ್ಪಸ್ವಲ್ಪ ಪರಿಚಯವಿದ್ದವರಿಗೂ ಇಂತಹ ಆರೋಪ ಎಷ್ಟು ಬಾಲಿಶಃ ಎಂಬುದು ಅರ್ಥವಾಗುತ್ತದೆ.

ಹಮ್ ದೇಖೇಂಗೆ ಕವಿತೆಯಲ್ಲಿ ಏನಿದೆ?

ಫೈಜ್ ಅವರ ಹಮ್ ದೇಖೇಂಗೇ ಕವಿತೆ ಹಿಂದೂ ಧರ್ಮವನ್ನು ನಾಶ ಮಾಡಿ ಇಸ್ಲಾಂ ದೇಶವನ್ನು ಸ್ಥಾಪಿಸುವ ಕರೆ ನೀಡುವ ಕವಿತೆ ಎಂಬುದು ವಸಿ ಶರ್ಮನ ಮುಖ್ಯ ಆರೋಪ. ಅದಕ್ಕೆ ಅವನು ಈ ಕವಿತೆಯಲ್ಲಿ ಬರುವ ವಾಕ್ಯಗಳಲ್ಲಿನ ಕೆಲವು ಪದಗಳನ್ನು ಉಲ್ಲೇಖಿಸುತ್ತಾನೆ.
“ಜಬ್ ಅರ್ಜ್-ಎ-ಖುದಾ ಕೆ ಕಾಬೆ ಸೆ/ಸಬ್ ಬುತ್ ಉಠವಾಯೇ ಜಾಯೇಂಗೇ, ಹಮ್ ಅಹ್ಲ್-ಎ-ಸಫಾ ಮರ್ದೂದೆ ಹರಮ್/ಮಸನದ್ ಪೆ ಬಿಠಾಯೇ ಜಾಯೇಂಗೇ/ಸಬ್ ತಾಜ್ ಉಛಲೆ ಜಾಯೆಂಗೇ/ಸಬ್ ತಖ್ತ್ ಗಿರಾಯೇ ಜಾಯೆಂಗೆ/ಬಸ್ ನಾಮ್ ರಹೇಗಾ ಅಲ್ಲಾಹ್ ಕಾ” ಈ ಸಾಲುಗಳಲ್ಲಿ ಫೈಜ್ ಕವಿ ಎಲ್ಲಾ ವಿಗ್ರಹಗಳನ್ನು ನಾಶ ಮಾಡಿ ಕೇವಲ ಅಲ್ಲಾಹನ ಹೆಸರೊಂದೇ ಉಳಿಯುವ ಆ ದಿನವನ್ನು ನಾವು ನೋಡುತ್ತೇವೆ ಎಂದು ಹೇಳಿದ್ದಾನೆ ಹೀಗಾಗಿ ಇದು ನಮ್ಮ ಧರ್ಮವಿರೋಧಿ ಕವಿತೆಯಾಗಿದೆ ಎಂಬುದು ಶರ್ಮಾನ ವರಾತ. ಇವನ ವಾದವನ್ನು ನೋಡಿ ನಿಜಕ್ಕೂ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ಈ ಶರ್ಮಾ ಈ ಹಿಂದೆ “ಲವ್ ಜಿಹಾದ್” ಬಗ್ಗೆಯೂ ಇಂತಹುದೇ ಆರೋಪಗಳನ್ನು ಮಾಡಿ ತನ್ನನ್ನು ತಾನು ಇಸ್ಲಾಮಿ ಜಿಹಾದಿಗಳ ವಿರುದ್ಧ ಧ್ವನಿ ಎತ್ತುತ್ತಿರುವ ಭಾರೀ ಪಂಡಿತ ಎಂದು ಬಿಂಬಿಸಿಕೊಂಡಿರುವಾತ.

ಈ ವಸಿ ಶರ್ಮಾ ಹೇಳಿಕೇಳಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡಿರುವಾತ. ಅವನು ಫೈಜ್ ಅವರಂತಹ ಮಹಾನ್ ಕವಿಗಳ ಕವಿತೆಗಳನ್ನು ಅವುಗಳಲ್ಲಿರುವ ಉಪಮೆ, ರೂಪಕಗಳನ್ನು ಅರ್ಥಮಾಡಿಕೋ ಎಂದರೆ ಅವನಿಗೆ ಅದು ಸುಲಭದ ಕೆಲಸವಲ್ಲ. ಅಷ್ಟಕ್ಕೂ ಮನಸ್ಸಿನಲ್ಲಿ ಮತೋನ್ಮಾದದ ವಿಷವನ್ನೇ ತುಂಬಿಕೊಂಡಿದ್ದಾಗಲಂತೂ ಯಾವುದೇ ಕವಿತೆ ಆಶಯಗಳೂ ಅರ್ಥವಾಗುವುದು ಕಷ್ಟ.
ಆದರೆ ಈ ಕವಿತೆ ಮತ್ತು ಇದರ ಬಗ್ಗೆ ವಸಿ ಶರ್ಮಾನಂತರವು ಎತ್ತಿರುವ ತಕರಾರು ಮತಾಂಧ ಮನಸ್ಸುಗಳ ಆಲೋಚನಾ ದಾಟಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಮಾತ್ರವಲ್ಲ ಈ ವಿವಾದದ ನಂತರದಲ್ಲಿ ದೇಶದ ಸಹಸ್ರಾರು ಜನರು ಫೈಜ್ ಎಂಬ ಮಹಾಕವಿಯ ಬದುಕನ್ನು ಮತ್ತು ಆತನ ಕವಿತೆಗಳನ್ನು ಹುಡುಕಿಕೊಂಡು ತಿಳಿದುಕೊಳ್ಳುವಂತಾಗಿದೆ.

ಹಮ್ ದೇಖೇಂಗೇ ಕವಿತೆಯನ್ನು ಫೈಜ್ ಅಹಮದ್ ಫೈಜ್ ಬರೆದಿದ್ದು 1979ರಲ್ಲಿ. ಪಾಕಿಸ್ತಾನದ ಪ್ರಧಾನಿ ಜುಲ್ಫಿಕರ್ ಬುಟ್ಟೋ ಅವರನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಮಿಲಿಟರಿ ಜನರಲ್ ಜಿಯಾ ಉಲ್ ಹಕ್ ಕಟ್ಟರ್ ಪಂಥೀಯನಾಗಿದ್ದು ಇಡೀ ಪಾಕಿಸ್ತಾನವನ್ನು ಮತಾಂಧತೆಯೆಡೆಗೆ ದೂಡುತ್ತಿದ್ದ ಸನ್ನಿವೇಶದಲ್ಲಿ ಅವನ ದುರಾಡಳಿತದ ಅಂತ್ಯವನ್ನು ಬಯಸಿ ಫೈಜ್ ಬರೆದಿದ್ದ ಕವಿತೆಯೇ ‘ಹಮ್ ದೇಖೇಂಗೆ’. 1984ರಲ್ಲಿ ಫೈಜ್ ನಿಧನದ ಮರುವರ್ಷ ಅಂದರೆ 1985ರಲ್ಲಿ ಪಾಕಿಸ್ತಾನದ ಮಹಿಳೆಯರು ಸೀರೆ ಉಡುವಂತಿಲ್ಲ ಎಂಬ ಉಘಲಕ್ ಶಾಸನವನ್ನು ಜಿಯಾ ಉಲ್ ಹಕ್ ಘೋಷಿಸಿದ್ದ. ಈ ಶಾಸನವನ್ನು ಖಂಡಿಸಿ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ಇಕ್ಬಾಲ್ ಬಾನೋ ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ಕಪ್ಪು ಸೀರೆಯುಟ್ಟುಕೊಂಡು ಬಂದು ಫೈಜ್ ಅವರ “ಹಮ್ ದೇಖೇಂಗೇ” ಕವಿತೆಯನ್ನು ಸುಶ್ರಾವ್ಯವಾಗಿ ಹಾಡಿದ್ದರು. ಫೈಜ್ ಬರೆದ ಈ ಹಾಡಿನ ಗಾಯನವನ್ನು ಕೇಳಲೆಂದೇ ಅಂದು ಸುಮಾರು 50,000 ಜನರು ನೆರೆದಿದ್ದರು ಎಂದು ಹೇಳಲಾಗುತ್ತದೆ. ಹಾಡಿನುದ್ದಕ್ಕೂ ಕರತಾಡನ ಮಾಡುತ್ತಿದ್ದ ಜನರು ಹಾಡಿನ ಕೊನೆಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಘೋಷಣೆ ಕೂಗಿದ್ದರು. ಅಂದು ಇಕ್ಬಾಲ್ ಹಾಡಿದ್ದ ಈ ಗಾಯನದ ಧ್ವನಿಮುದ್ರಿಕೆಯನ್ನು ಹೇಗೋ ರಕ್ಷಿಸಿಕೊಂಡು ಬರಲಾಗಿದ್ದು ಇಂದಿಗೂ ಯೂಟ್ಯೂಬಿನಲ್ಲಿ ಕೇಳಲು ಲಭ್ಯವಿದೆ. ತದನಂತರದಲ್ಲಿ ಈ ಹಮ್ ದೇಖೇಂಗೇ ಕವಿತೆ ಒಂದು ಕ್ರಾಂತಿಗೀತೆಯಂತೆ ದಬ್ಬಾಳಿಕೆ ನಡೆಸುವ ಸರ್ಕಾರಗಳ ವಿರುದ್ಧದ ಹೋರಾಟಗಳಲ್ಲಿ ರಾಷ್ಟ್ರಗೀತೆಯಂತೆ ಹಾಡಲಾಗುತ್ತಿದೆ.

ವಾಸ್ತವದಲ್ಲಿ ಫೈಜ್ ಒಬ್ಬ ಎಡಪಂಥೀಯ ಕವಿ. ಅವರ ಪ್ರತಿ ಕವಿತೆಗಳಲ್ಲಿ ಪ್ರೇಮ ಮತ್ತು ಕ್ರಾಂತಿಯ ಸಂದೇಶಗಳ ಹೊರತಾಗಿರುವುದು ಏನೂ ಇಲ್ಲ. ಹಮ್ ದೇಖೇಂಗೇ ಕವಿತೆಯಲ್ಲಿ ಅವರು ಬಳಸಿರುವ ದೈವಿಕವಾದ ಪದಪುಂಜಗಳನ್ನು ಈ ಕವಿತೆಯ ಆಶಯ ಮತ್ತು ಅದು ಹುಟ್ಟಿದ ಸಂದರ್ಭದಿಂದ ಹೊರತಾಗಿ ನೊಡಹೋದರೆ ವಸಿ ಶರ್ಮಾನಂತಹ ಕೂಪಮಂಡೂಕಗಳ ಮಾತುಗಳಲ್ಲಿ ಸತ್ಯವಿದೆ ಅನಿಸಬಹುದು. ಮೇಲೆ ಉಲ್ಲೇಖಿಸಿರುವ ವಿವಾದಿತ ಸಾಲುಗಳಲ್ಲಿ ಕವಿ ಫೈಜ್ ಸರ್ವಾಧಿಕಾರಿ ಜಿಯಾ ಉಲ್ ಹಕ್‍ನನ್ನು ಧರೆಯ ಮೇಲಿನ ಪೊಳ್ಳುತನಗಳಿಗೆ ಹೋಲಿಸುತ್ತಾರೆ. ಸರ್ವಾಧಿಕಾರಿಗಳ ಸಿಂಹಾಸನಗಳು ಧರೆಗುರುಳುವ ಆ ದಿನ ದ್ರೋಹಿಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ನಿಜವಾದ ಹೃದಯವಂತು ಹಕ್ಕಿನ ಗದ್ದುಗೆ ಏರುತ್ತೇವೆ, ಬೂಟಾಟಿಕೆಯ ದೊರೆಗಳು ನಾಶವಾಗಿ ಅಂತಿಮವಾಗಿ ಸರ್ವಶಕ್ತನ ಹೆಸರೊಂದೇ ಉಳಿಯುತ್ತದೆ ಎಂಬುದು ಈ ಕವಿತೆಯ ಸಾಲುಗಳ ಸಾರ. ಇಲ್ಲಿ ಅಲ್ಲಾಹುವಿನ ಎಂಬ ಇಸ್ಲಾಂ ಧರ್ಮದ ದೇವರನ್ನು ಸೂಚಿಸುವ ಪದವನ್ನು ಫೈಜ್ ಬಳಸಿದ್ದಾರೆ ನಿಜ. ಆದರೆ ಫೈಜ್ ನಂಬುವ ಅಲ್ಲಾಹ್ ಯಾರು ಎಲ್ಲಿದ್ದಾನೆ ಎಂಬುದನ್ನು ಇದೇ ಕವಿತೆಯ ಮುಂದಿನ ಪ್ಯಾರಾದಲ್ಲಿರುವ ಸಾಲುಗಳು ತಿಳಿಸುತ್ತವೆ. ಅದರಲ್ಲಿ ಫೈಜ್ ಹೇಳುತ್ತಾರೆ “ಜೊ ನಾಮ್ ರಹೇಗಾ ಅಲ್ಲಾಹ್ ಕಾ/ ಜೊ ಗಾಯೆಬ್ ಭೀ ಹೇ ಜಾಜಿರ್ ಭೀ/ ಜೊ ಮಂಜಿರ್ ಭೀ/ಉಠ್ಠೇಗಾ ಅನಲ್ ಹಕ್ ಕಾ ನಾರಾ/ಜೊ ಮೈಂ ಭೀ ಹೂಂ ಓರ್ ತುಮ್ ಭೀ ಹೋ” ಇವುಗಳ ಭಾವಾರ್ಥ ಹೀಗಿದೆ: ಅಲ್ಲಾಹನ ಹೆಸರೊಂದೇ ಉಳಿಯುತ್ತದೆ, ನಾನು ಮತ್ತು ನೀನು ಇಬ್ಬರೂ ದೇವರ ಪ್ರೀತಿಗೆ ಪಾತ್ರರಾಗುವ ಆ ದಿನ ಅನಲ್ ಹಕ್‍ನ ಘೋಷ ಮೊಳಗಲಿದೆ, ಆ ದಿನ ನಾನು ಮತ್ತು ನೀನು ದೇವರಾಗಲಿದ್ದೇವೆ.

ಇದರ ಮೂಲಕ ಫೈಜ್ ಇಸ್ಲಾಂ ಮತಾಂಧತೆಯನ್ನು ಪ್ರಚುರಪಡಿಸುತ್ತಿಲ್ಲ ಬದಲಿಗೆ, ಜಗತ್ತಿನ ಎಲ್ಲಾ ಧರ್ಮಗಳ ಜನರು ಒಪ್ಪಿಕೊಂಡಿರುವ ಆಧ್ಯಾತ್ಮಿಕ ತತ್ವವನ್ನು ತಮ್ಮ ಕವಿತೆಯ ಮೂಲಕ ಹೇಳುತ್ತಿದ್ದಾರೆ. ಇಲ್ಲಿ ಫೈಜ್ ಬಳಸಿರುವ ‘ಅನಲ್ ಹಕ್” ಪದವನ್ನು ನೀಡಿದ್ದು ಧಾರ್ಮಿಕ ಮೂಲಭೂತವಾದಕ್ಕೆ ತನ್ನದೇ ರೀತಿಯಲ್ಲಿ ಸೆಡ್ಡು ಹೊಡೆದ ಸೂಫಿ ಪಂಥ. ಕ್ರಿ.ಶ. 922ರಲ್ಲಿ ಪರ್ಷಿಯಾದ ಅನುಭಾವಿ ಸೂಫಿ ಸಂತ ಮನ್ಸೂರ್ ಅಲ್ ಹಲ್ಲಾಝ್ ಈ ‘ಅನಲ್ ಹಕ್’ ಎಂಬ ನುಡಿಗಟ್ಟನ್ನು ಸೂಫಿ ಸಾಹಿತ್ಯದಲ್ಲಿ ಬಳಕೆಗೆ ತಂದ ಕಾರಣದಿಂದ ಆತನನ್ನು “ಧರ್ಮದ್ರೋಹ”ದ ಆರೋಪದಲ್ಲಿ ಗಲ್ಲಿಗೇರಿಸಲಾಗಿತ್ತು. ಯಾಕೆಂದರೆ ಈ ನುಡಿಗಟ್ಟಿನ ಮೂಲಕ ಸೂಫಿ ಕವಿ ಹೇಳಿದ್ದು ನಾನು ಮತ್ತು ದೇವರು ಬೇರೆ ಅಲ್ಲ, ನಾನೇ ಸತ್ಯ, ನಾನೇ ದೇವರು, ನಮ್ಮ ಅಹಂನ್ನು ಕಳಚಿಕೊಂಡು, ನಮ್ಮೊಳಗಿನ ಅಂತಿಮ ಸತ್ಯವನ್ನು ಕಂಡುಕೊಳ್ಳುವ ಮೂಲಕವೇ ದೇವರನ್ನು ಕಂಡುಕೊಳ್ಳಬೇಕು ಎಂದು. ಆ ಸ್ಥಿತಿಯೇ ಅನಲ್ ಹಕ್ ಎನ್ನಲಾಗಿದೆ. ಆದರೆ ದೇವರೆಂದರೆ ಇದು, ಧರ್ಮವೆಂದರೆ ಇದು ಎಂದು ಬರೆದುಕೊಂಡು ಕುಳಿತವರಿಗೆ ಈ ತತ್ವವನ್ನು ಅರಗಿಸಿಕೊಳ್ಳುವುದು ಕಷ್ಟ. ಮನ್ಸೂರ್ ಬರೆಯುತ್ತಾನೆ, “ಹೃದಯದ ಕಣ್ಣಿನಿಂದ ನನ್ನ ದೇವರನ್ನು ನಾನು ನೋಡಿದೆ, ಆಗ ನಾನು ಕೇಳಿದೆ “ನೀನು ಯಾರು”, ಅದಕ್ಕವನುತ್ತರಿಸಿದ “ನೀನು”. ಇದನ್ನೇ ಅಲ್ಲವೇ ನಮ್ಮ ಕಬೀರನೂ ಹೇಳಿದ್ದು, ಶಿಶುನಾಳ ಶರೀಫರೂ ಹೇಳಿದ್ದು? ಹಾಗಿದ್ದ ಮೇಲೆ ಹಿಂದೂ ಧರ್ಮದ ವಿರೋಧದ ಪ್ರಶ್ನೆ ಎಲ್ಲಿ ಬರುತ್ತದೆ? ಫೈಜ್ ತಮ್ಮ ಕವಿತೆಯಲ್ಲಿ ಮಾರ್ದನಿಸಿದ ಮನ್ಸೂರನ ಸೂಫಿ ತತ್ವ ಬೇರೆಯಲ್ಲ ಉಪನಿಷತ್ತುಗಳಲ್ಲಿ ಹೇಳಲಾದ ಅದ್ವೈತ ತತ್ವ ಬೇರೆಯಲ್ಲ. ನಮ್ಮ ನೋಡುವ ಕಣ್ಣು, ಸ್ವೀಕರಿಸುವ ಒಳಗಣ್ಣು ಹೃದಯಗಳು ಪರಿಶುದ್ಧವಾಗಿದ್ದರೆ ಇದನ್ನು ಅರಿಯುವುದು ಕಷ್ಟವೇನಲ್ಲ ಆದರೆ ವೈದಿಕ ವಿಷಜಂತು ವಸಿ ಶರ್ಮಾನಂತ ಮತಾಂಧರಿಗೆ ಪ್ರತಿಯೊಂದೂ ಹಿಂದು ಧರ್ಮ ವಿರೋಧಿಯಾಗಿಯೇ ಕಾಣಿಸುವುದು, ಫೈಜ್ ಕವಿತೆಯನ್ನು ಹಾಡುವ, ಅದನ್ನು ಸಮರ್ಥಿಸುವ ಪ್ರತಿಯೊಬ್ಬರೂ ಐಸಿಸ್‍ನ ಸಮರ್ಥಕರಂತೆ ತೋರುತ್ತಿರುವುದು ಅಚ್ಚರಿಯೂ ಅಲ್ಲ ಹೊಸ ವಿಷಯ ಅಂತೂ ಅಲ್ಲವೇ ಅಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾಗ-2: ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

30 ಸಾವಿರದಿಂದ ಒಂದು ಸಾವಿರದ ಒಳಗಿನ ಮತಗಳ ಅಂತರದಿಂದ ಗೆದ್ದಿರುವ ಕರ್ನಾಟಕದ 97 ಕ್ಷೇತ್ರಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಆದಂತೆಯೇ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದಾಗ ಎಸ್‌ಐಆರ್ ಜಾರಿಯಾದರೆ ಬಿಜೆಪಿಗೆ ಅನುಕೂಲವಾಗುವ...

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ "ದ್ವಿಪಕ್ಷೀಯ" ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ...

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...