Homeಸಿನಿಮಾಕ್ರೀಡೆಫಿಫಾ 2022 ಕೆಲವು ದಾಖಲೆಗಳು; ರೋಚಕ ಗೆಲುವಿನ ಮೂಲಕ 36 ವರ್ಷಗಳ ನಂತರ ವಿಶ್ವಕಪ್‌ಗೆ ಮುತ್ತಿಕ್ಕಿದ...

ಫಿಫಾ 2022 ಕೆಲವು ದಾಖಲೆಗಳು; ರೋಚಕ ಗೆಲುವಿನ ಮೂಲಕ 36 ವರ್ಷಗಳ ನಂತರ ವಿಶ್ವಕಪ್‌ಗೆ ಮುತ್ತಿಕ್ಕಿದ ಅರ್ಜೆಂಟೀನಾ

- Advertisement -
- Advertisement -

ಅರ್ಜೆಂಟೀನಾ ತಂಡ ಕೊನೆಯದಾಗಿ ಫಿಫಾ ವಿಶ್ವಕಪ್ ಗೆದ್ದದ್ದು 1986ರಲ್ಲಿ. ಆಗಿನ್ನೂ ಲಿಯೋನಲ್ ಮೆಸ್ಸಿ ಹುಟ್ಟಿರಲೇ ಇಲ್ಲ. ಆದರೆ, ಅರ್ಜೆಂಟೀನಾ ವಿಶ್ವಕಪ್ ಗೆಲ್ಲಲು ಮೆಸ್ಸಿಯಂತಹ ಆಟಗಾರನೇ ಹುಟ್ಟಿಬರಬೇಕಿತ್ತು ಎಂದರೆ ಅತಿಶಯೋಕ್ತಿಯೇನಲ್ಲ. ಏಕೆಂದರೆ ಫುಟ್‌ಬಾಲ್ ಲೋಕದಲ್ಲಿ ದಂತಕಥೆಯೇ ಆಗಿಬಿಟ್ಟಿದ್ದ ಡಿಯಾಗೋ ಮರಡೋನ ಸ್ವತಃ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದ ಆ ಸಾಧನೆಯನ್ನು ಇಂದು ಲಿಯೋನಲ್ ಮೆಸ್ಸಿ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ವಿಶ್ವಕಪ್ ಗೆಲುವಿನ ನಿಟ್ಟುಸಿರಿನೊಂದಿಗೆ ವಿಶ್ವಕಪ್‌ಗೆ ಘೋಷಿಸಿದ್ದ ವಿದಾಯವನ್ನೂ ಹಿಂತೆಗೆದುಕೊಂಡಿದ್ದಾರೆ. ಅದೇ ಕಾರಣಕ್ಕೆ ಫಿಫಾ 2022 ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೂ, ಅರ್ಜೆಂಟೀನಾ ಪಾಲಿಗೆ ಆ ಫೈನಲ್ ಗೆಲುವು ಅಷ್ಟು ಸುಲಭದ್ದಾಗಿರಲಿಲ್ಲ ಎಂಬುದೂ ನಿಜ.

ಭಾನುವಾರ ನಡೆದ ಫಿಫಾ ವಿಶ್ವಕಪ್ 2022 ಫೈನಲ್ ಪಂದ್ಯದ ವೇಳೆ ಇಡೀ ಜಗತ್ತಿನೆಲ್ಲೆಡೆ ಫುಟ್‌ಬಾಲ್ ಪ್ರಿಯರು ಉಸಿರು ಬಿಗಿಹಿಡಿದು ಕುಳಿತಿದ್ದರು. ಅದಕ್ಕೆ ಕಾರಣ ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೋನೆಲ್ ಮೆಸ್ಸಿ, ತಮ್ಮ ಪಾಲಿಗೆ ಅದು ಕೊನೆಯ ವಿಶ್ವಕಪ್ ಪಂದ್ಯ ಎಂದು ಘೋಷಿಸಿದ್ದು. (ನಂತರ ತಾವು ಆಟ ಮುಂದುವರಿಸುವುದಾಗಿ ಹೇಳಿದ್ದಾರೆ.) ಈ ವಿದಾಯದಲ್ಲಾದರೂ ಮೆಸ್ಸಿ ಫುಟ್‌ಬಾಲ್ ವಿಶ್ವಕಪ್ ಗೆಲ್ಲಬೇಕೆಂಬುದು ಅಸಂಖ್ಯಾತ ಫುಟ್‌ಬಾಲ್ ಪ್ರೇಮಿಗಳ ಬಯಕೆಯಾಗಿತ್ತು. ಅದರಂತೆಯೇ ಪಂದ್ಯ ಶುರುವಾದ ಮೊದಲಾರ್ಧದ ಸಮಯದಲ್ಲಿಯೇ ಅರ್ಜೆಂಟೀನಾ ಎರಡು ಗೋಲು ಹೊಡೆಯುವ ಮೂಲಕ ಸಂತಸದ ಅಲೆಯಲ್ಲಿ ತೇಲಿತ್ತು. ಆದರೆ, ಆ ಖುಷಿ ಬದಲಾಗುವ ಹೊತ್ತು ಸ್ವಲ್ಪ ತಡವಾದರೂ ಬಂದೆರಗಿತ್ತು.

ಪಂದ್ಯದ ದ್ವಿತೀಯಾರ್ಧ ಆರಂಭವಾಗಿ ಸುಮಾರು 30 ನಿಮಿಷಗಳ ಆಟ ಮುಗಿದಿತ್ತು. ಆಗ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಎರಡು ನಿಮಿಷದ ಅಂತರದಲ್ಲಿ ಎರಡು ಗೋಲು ಹೊಡೆಯುವ ಮೂಲಕ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರವನ್ನೇ ಸೃಷ್ಟಿಸಿದ್ದರು. 90 ನಿಮಿಷದ ಆಟದ ಅವಧಿಯಲ್ಲಿ ಎರಡೂ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದ್ದವು. ಆಗ ಹೆಚ್ಚುವರಿ ಅರ್ಧ ಗಂಟೆಯ ಆಟ ಮುಂದುವರಿದಾಗ, ಮೆಸ್ಸಿ ಮತ್ತೊಂದು ಗೋಲು ಹೊಡೆದು ಅರ್ಜೆಂಟೀನಾವನ್ನು ಗೆಲುವಿನ ಹೊಸ್ತಿಲಿಗೆ ಕರೆದೊಯ್ದರು. ಆದರೆ, ಆಟ ಮುಕ್ತಾಯವಾಗಲು ಕೆಲವೇ ನಿಮಿಷಗಳಿರುವಾಗ ಎಂಬಾಪೆ ಗೋಲು ಬಾರಿಸುವ ಮೂಲಕ ಕಳೆದ ನಾಲ್ಕು ದಶಕಗಳಲ್ಲೇ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಆಟಗಾರ ಎಂಬ ಮತ್ತೊಂದು ಹೆಗ್ಗಳಿಕೆ ಪಾತ್ರರಾದರು. ಈ ವೇಳೆ ಮೆಸ್ಸಿ ಅಭಿಮಾನಿಗಳ ಹೃದಯಬಡಿತ ಹೆಚ್ಚಾದದ್ದು ಸುಳ್ಳಲ್ಲ.

ಎಂಬಾಪೆ ಹ್ಯಾಟ್ರಿಕ್ ಗೋಲಿನ ಕಾರಣಕ್ಕೆ ಪಂದ್ಯದ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್ ಮೂಲಕ ನಿರ್ಧರಿಸುವಂತಾಗಿತ್ತು. ಈ ವೇಳೆ ಅರ್ಜೆಂಟೀನಾ ಪೆನಾಲ್ಟಿಯಲ್ಲಿ 4-2ರ ಅಂತರದಲ್ಲಿ ಫ್ರಾನ್ಸ್‌ಅನ್ನು ಸೋಲಿಸುವ ಮೂಲಕ ಫಿಫಾ ವಿಶ್ವಕಪ್ ಕ್ಕೆ ಮುತ್ತಿಟ್ಟದ್ದು, ನಾಲ್ಕು ದಶಕಗಳ ಪ್ರಶಸ್ತಿಯ ಬರ ನೀಗಿಸಿದ್ದು ಈಗ ಇತಿಹಾಸ. ಈ ಗೆಲುವಿನೊಂದಿಗೆ ಮೆಸ್ಸಿ ಅಭಿಮಾನಿಗಳೂ ನಿಟ್ಟಿಸಿರುಬಿಟ್ಟಿದ್ದಾರೆ.

ವಿಶ್ವಕಪ್ ತಬ್ಬಿ ಮಲಗಿದ ಮೆಸ್ಸಿ

ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದು ಬೀಗಿದೆ. ಪರಿಣಾಮ ಲಿಯೋನಲ್ ಮೆಸ್ಸಿ ಇಂದು ವಿಶ್ವ ಫುಟ್‌ಬಾಲ್ ಅಭಿಮಾನಿಗಳಿಂದ ಕೊಂಡಾಡಲ್ಪಡುತ್ತಿದ್ದಾರೆ. ಈ ನಡುವೆ ಫ್ರಾನ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ಗೆದ್ದು ತನ್ನ ಕನಸನ್ನು ನನಸು ಮಾಡಿಕೊಂಡಿರುವ ಮೆಸ್ಸಿ ಭಾನುವಾರ ಇಡೀ ರಾತ್ರಿ ಫುಟ್‌ಬಾಲ್ ವಿಶ್ವಕಪ್ ತಬ್ಬಿ ಮಲಗಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಸ್ವತಃ ಮೆಸ್ಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2 ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಅವರು ಟ್ರೋಫಿ ಹಿಡಿದುಕೊಂಡೇ ಹಾಸಿಗೆ ಮೇಲೆ ಕಂಬಳಿ ಹೊದ್ದು ಮಲಗಿದ್ದರೆ, ಮತ್ತೊಂದು ಫೋಟೋದಲ್ಲಿ ಹಾಸಿಗೆಯಲ್ಲಿರುವಾಗಲೇ ಟ್ರೋಫಿಯೊಂದಿಗೆ ಪೋಸ್ ನೀಡಿದ್ದಾರೆ. ಪ್ರಸ್ತುತ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಹವಾ ಸೃಷ್ಟಿಸಿದೆ.

ಮುಂದಿನ ವಿಶ್ವಕಪ್‌ಗೆ ನಾರ್ಥ್ ಅಮೆರಿಕ ಸಾರಥ್ಯ

ಕತಾರ್ ಕಾರಣಕ್ಕೆ ಫಿಫಾ 2022 ಸಾಕಷ್ಟು ವಿವಾದಕ್ಕೆ ಗುರಿಯಾದರೂ ಈ ಹಿಂದಿನ ವಿಶ್ವಕಪ್‌ಗಳಿಗಿಂತ ಸಾಕಷ್ಟು ಯಶಸ್ವಿಯಾಗಿದೆ. ಈ ನಡುವೆ ಮುಂದಿನ ವಿಶ್ವಕಪ್‌ಅನ್ನು 2026ರಲ್ಲಿ ಅಮೆರಿಕ ಸೇರಿದಂತೆ ಮೂರು ದೇಶಗಳು ಜಂಟಿ ಆತಿಥ್ಯದಲ್ಲಿ ನಿರ್ವಹಿಸಲಿವೆ. ಹೀಗಾಗಿ ಅಭಿಮಾನಿಗಳ ಚಿತ್ತ ಇದೀಗ ಅಮೆರಿಕದತ್ತ ನೆಟ್ಟಿದೆ.

ಕಳೆದ 7 ಆವೃತ್ತಿಗಳಲ್ಲಿ ತಲಾ 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡರೆ, 2026ರ ವಿಶ್ವಕಪ್‌ನಲ್ಲಿ 48 ತಂಡಗಳು ಕಣಕ್ಕಿಳಿಯಲಿವೆ. ಹೀಗಾಗಿ ಪಂದ್ಯಗಳ ಸಂಖ್ಯೆ 64ರ ಬದಲು 80ಕ್ಕೆ ಏರಿಕೆಯಾಗಲಿದೆ. ಟೂರ್ನಿಗೆ ಆಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಆತಿಥ್ಯ ವಹಿಸಲಿದ್ದು, 14 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.

ಭಾರತದಲ್ಲೂ ಫುಟ್‌ಬಾಲ್ ಕ್ರೇಜ್

ಭಾರತದಲ್ಲಿ ಸಾಮಾನ್ಯವಾಗಿ ಕ್ರಿಕೆಟ್ ಟೂರ್ನಿಗಳಿಗೆ ವೀಕ್ಷಕರ ಸಂಖ್ಯೆ ಅಧಿಕ. ಆದರೆ, ಈ ಬಾರಿಯ ಫುಟ್‌ಬಾಲ್ ವಿಶ್ವಕಪ್ ಭಾರತದಲ್ಲಿ ಕ್ರಿಕೆಟ್ ದಾಖಲೆಯನ್ನು ಮುರಿದಿದೆ. ಡಿಜಿಟಲ್ ಸ್ಟ್ರೀಮಿಂಗ್ ವೇದಿಕೆ ಜಿಯೋ ಸಿನಿಮಾದಲ್ಲಿ ಬರೋಬ್ಬರಿ 110 ಮಿಲಿಯನ್ ವೀಕ್ಷಕರು ಈ ಬಾರಿ ಫುಟ್‌ಬಾಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಇನ್ನು ಅರ್ಜೆಂಟೀನಾ ಹಾಗೂ ಫ್ರಾನ್ಸ್ ನಡುವಿನ ಫೈನಲ್ ಪಂದ್ಯವೊಂದನ್ನೇ ಜಿಯೋಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಮೂಲಕ 32 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅಲ್ಲದೆ, ಫಿಫಾ ವಿಶ್ವಕಪ್ ಟೂರ್ನಿ ಭಾರತದಲ್ಲಿ ಬರೋಬ್ಬರಿ 40 ಮಿಲಿಯನ್ ನಿಮಿಷಗಳ ವೀಕ್ಷಣೆ ಕಾಣುವ ಮೂಲಕ ಜಿಯೋ ಸಿನಿಮಾ ಹಾಗೂ ಸ್ಪೋರ್ಟ್ಸ್ 18 ಹೊಸ ದಾಖಲೆ ಬರೆದಿವೆ. ಇದರ ಜೊತೆಗೆ ಜಿಯೋಸಿನಿಮಾ ಹಾಗೂ ಸ್ಪೋರ್ಟ್ಸ್ 18 ಅತೀ ಹೆಚ್ಚು ಡೌನ್ಲೋಡ್ ಕಂಡಿರುವ ಆಪ್‌ಗಳು ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿವೆ.

ಗೂಗಲ್‌ನಲ್ಲೂ ಫಿಫಾ ದಾಖಲೆ!

ಫಿಫಾ ವಿಶ್ವಕಪ್ 2022ರ ಫೈನಲ್ ಪಂದ್ಯಾಟದ ಬಗ್ಗೆ ಗೂಗಲ್‌ನಲ್ಲಿ ಅತೀಹೆಚ್ಚು ಜನರು ಸರ್ಚ್ ಮಾಡಿದ್ದು, ಇದರಿಂದ ಗೂಗಲ್‌ನ ಟ್ರಾಫಿಕ್ ಕೂಡ ಹೆಚ್ಚಾಗಿದೆ. ಗೂಗಲ್‌ನ 25 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸದೊಂದು ದಾಖಲೆ ಸೃಷ್ಟಿಯಾಗಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚ್ಚೈ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.

ಈಗಾಗಲೇ ಹಲವು ದಾಖಲೆಗಳಿಗೆ ಪಾತ್ರವಾಗಿರುವ ಫಿಫಾ 2022 ವಿಶ್ವಕಪ್ ಬಗ್ಗೆ 100 ಕೋಟಿಗೂ ಹೆಚ್ಚು ಜನರು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಈ ಮೂಲಕ ಗೂಗಲ್ ಟ್ರಾಫಿಕ್ ಹಿಂದೆದೂ ಕಾಣದಷ್ಟು ಹೆಚ್ಚಾಗಿದೆ ಎಂದು ಸುಂದರ್ ಪಿಚ್ಚೈ ತಿಳಿಸಿದ್ದಾರೆ.

ವಿಶ್ವಕಪ್‌ನಲ್ಲಿ ಗಮನ ಸೆಳೆದವರು ಇವರು!

ಎಂಬಾಪೆಗೆ ಗೋಲ್ಡನ್ ಬೂಟ್

ಫ್ರಾನ್ಸ್‌ನ ಯುವ ಆಟಗಾರ ಕಿಲಿಯನ್ ಎಂಬಾಪೆ ಈ ಬಾರಿಯ ವಿಶ್ವಕಪ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಆ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್ ಹಂತಕ್ಕೇರುವಂತೆ ಮಾಡಿತ್ತು. ಫೈನಲ್‌ನಲ್ಲಿಯೂ ಐತಿಹಾಸಿಕ ಸಾಧನೆ ಮಾಡಿದ ಎಂಬಾಪೆ ಹ್ಯಾಟ್ರಿಕ್ ಗೋಲು ಬಾರಿಸಿ ಫ್ರಾನ್ಸ್ ತಂಡದ ಗೆಲುವಿಗಾಗಿ ಪ್ರಯತ್ನಿಸಿದರು. ಆದರೆ ಫೆನಾಲ್ಟಿ ಶೂಟ್‌ಔಟ್‌ನಲ್ಲಿ ಫ್ರಾನ್ಸ್ ಸೋಲು ಅನುಭವಿಸಬೇಕಾಯಿತು. ಆದರೆ ಈ ವಿಶ್ವಕಪ್‌ನಲ್ಲಿ ಒಟ್ಟು 8 ಗೋಲು ಗಳಿಸಿದ ಎಂಬಾಪೆ ಅತಿ ಹೆಚ್ಚು ಗೋಲು ಸಿಡಿಸಿ ವಿಶ್ವಕಪ್‌ನ ಪ್ರತಿಷ್ಠಿತ ಪ್ರಶಸ್ತಿಯಾದ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮೆಸ್ಸಿಗೆ ಗೋಲ್ಡನ್ ಬಾಲ್

ಅತ್ಯುತ್ತಮ ಆಟಗಾರನಿಗೆ ನೀಡುವ ಗೋಲ್ಡನ್ ಬಾಲ್ ಪ್ರಶಸ್ತಿ ಲಿಯೋನೆಲ್ ಮೆಸ್ಸಿ ಪಾಲಾಗಿದೆ. 7 ಗೋಲು ಹಾಗೂ 3 ಅಸಿಸ್ಟ್‌ಗಳನ್ನು ಲಿಯೋನೆಲ್ ಮೆಸ್ಸಿ ತನ್ನ ಹೆಸರಿಗೆ ಹೊಂದಿದ್ದು ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಫೈನಲ್ ಪಂದ್ಯದಲ್ಲೂ ಅವರು ಎರಡು ಗೋಲು ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಎಮಿಗೆ ಗೋಲ್ಡನ್ ಗ್ಲವ್

ಟೂರ್ನಿಯ ಅತ್ಯುತ್ತಮ ಗೋಲ್‌ಕೀಪರ್‌ಗೆ ನೀಡುವ ಗೋಲ್ಡನ್ ಗ್ಲವ್ ಪ್ರಶಸ್ತಿ ಅರ್ಜೆಂಟಿನಾ ತಂಡದ ಗೋಲ್ ಕೀಪರ್ ಎಮಿ ಮಾರ್ಟೀನ್ಜ್ ಪಾಲಾಗಿದೆ. ಆದರೆ, ಪ್ರಶಸ್ತಿ ಪಡೆದ ಬಳಿಕ ತೋರಿದ ಅನುಚಿತ ವರ್ತನೆಯಿಂದಾಗಿ ಇದೀಗ ಎಮಿ ಹಲವು ವಿವಾದಕ್ಕೆ ಈಡಾಗಿದ್ದಾರೆ.

ಫರ್ನಾಂಡಿಸ್‌ಗೆ ಯುವ ಆಟಗಾರ ಪ್ರಶಸ್ತಿ

ಈ ವಿಶ್ವಕಪ್‌ನ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಅರ್ಜೆಂಟೀನಾ ತಂಡದ ಯುವ ಆಟಗಾರ ಎನ್ಜೋ ಫರ್ನಾಂಡಿಸ್ ಪಾಲಾಗಿದೆ. ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಈತ ಲಿಯೋನಲ್ ಮೆಸ್ಸಿ ಸ್ಥಾನವನ್ನು ತುಂಬಲಿದ್ದಾರೆ ಎಂಬ ಭರವಸೆಯನ್ನು ತಮ್ಮ ಆಟದ ಮೂಲಕ ಮೂಡಿಸಿದ್ದಾರೆ.

ಫಿಫಾ ಗೋಲು ಗಳಿಸಿದವರ ಪಟ್ಟಿ

ಕುಲಿಯನ್ ಎಂಬಾಪೆ (ಫ್ರಾನ್ಸ್) – 8 ಗೋಲು
ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) – 7 ಗೋಲು
ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) 4 ಗೋಲು
ಒಲಿವಿಯರ್ ಗಿರೌಡ್ (ಫ್ರಾನ್ಸ್)- 4 ಗೋಲು
ಅಲ್ವಾರೊ ಮೊರಾಟಾ (ಸ್ಪೇನ್) – 3
ಬುಕಾಯೊ ಸಾಕಾ (ಇಂಗ್ಲೆಂಡ್) – 3
ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) – 3

ಭಾನುವಾರ ನಡೆದ ಫಿಫಾ ವಿಶ್ವಕಪ್ 2022ರ ಫೈನಲ್ ಸೆಣೆಸಾಟದಲ್ಲಿ ಅರ್ಜೆಂಟಿನಾ ತಂಡ ಗೆದ್ದು ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೂ, ಬ್ರೆಜಿಲ್ ಅಗ್ರಸ್ಥಾನ ಅಬಾಧಿತವಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಬೆಲ್ಜಿಯಂ ತಂಡವನ್ನು ಕೆಳಕ್ಕಿಳಿಸಿ ಬ್ರೆಜಿಲ್ ತಂಡ ನಂಬರ್ 1 ತಂಡವಾಗಿತ್ತು. ಆದರೆ ಈ ಬಾರಿಯ ವಿಶ್ವಕಪ್‌ನ ಕ್ವಾಟರ್‌ಫೈನಲ್ ಹಂತದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರಬಿದ್ದರೂ ವಿಶ್ವಚಾಂಪಿಯನ್ ಅರ್ಜೆಂಟಿನಾ ತಂಡಕ್ಕೆ ಬ್ರೆಜಿಲ್ ತಂಡವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಚಾಂಪಿಯನ್ ಅರ್ಜೆಂಟೀನಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...