Homeಮುಖಪುಟಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ

- Advertisement -
- Advertisement -

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರು ದುಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರನ್ನು ದುಬೈನ ಅಮೆರಿಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ವಯಂಪ್ರೇರಿತ ದೇಶಭಷ್ಟರಾಗಿ ಹೊರಗುಳಿದಿದ್ದ ಅವರು ದೀರ್ಘ ಕಾಲದ ಅನಾರೋಗ್ಯದ ನಂತರ ನಿಧನರಾಗಿದ್ದಾರೆ.

1999ರಲ್ಲಿ ರಕ್ತರಹಿತ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ಬಳಿಕ ಸುಮಾರು ಒಂದು ದಶಕದ ಕಾಲ ಪಾಕಿಸ್ತಾನದಲ್ಲಿ ಮುಷರಫ್ ಆಡಳಿತ ನಡೆಸಿದರು.

ಅನೇಕ ವರ್ಷಗಳು ಅಧಿಕಾರದಲ್ಲಿದ್ದರು. ಅಲ್ ಖೈದಾ ಮತ್ತು ಇತರ ಉಗ್ರಗಾಮಿ ಇಸ್ಲಾಮಿಸ್ಟ್‌ಗಳು ಅವರನ್ನು ಕನಿಷ್ಠ ಮೂರು ಬಾರಿ ಕೊಲ್ಲಲು ಪತ್ನಿಸಿದ್ದರು.

ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ತೀವ್ರ ಮಿಲಿಟರಿ ಪ್ರಯೋಗವನ್ನು ಮಾಡಿದರು. ಅಲ್ ಖೈದಾ ಮತ್ತು ಅಫ್ಘಾನ್ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ಮಧ್ಯಪ್ರವೇಶಿಸಿದ್ದರಿಂದ ಮುಷರಫ್ ಆಡಳಿತ ಅವನತಿ ಹೊಂದಿತು.

1943ರಲ್ಲಿ ನವದೆಹಲಿಯಲ್ಲಿ ಜನಿಸಿದವರು ಮುಷರಫ್‌. ಅವರ ಕುಟುಂಬವು 1947ರಲ್ಲಿ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಾಗ ಅವರಿಗೆ ಕೇವಲ 4 ವರ್ಷ ವಯಸ್ಸಾಗಿತ್ತು. ತಂದೆ ವಿದೇಶಾಂಗ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದರು, ಅವರ ತಾಯಿ ಶಿಕ್ಷಕಿಯಾಗಿದ್ದರು.

18ನೇ ವಯಸ್ಸಿನಲ್ಲಿ ಮುಷರಫ್‌ ಸೈನ್ಯಕ್ಕೆ ಸೇರಿದರು. ಅದರ ಮುಖ್ಯಸ್ಥರಾಗುವ ಮೊದಲು ಕಮಾಂಡೋ ಘಟಕವನ್ನು ಮುನ್ನಡೆಸಿದರು. ಭಾರತದ ಹಿಡಿತದಲ್ಲಿರುವ ಕಾಶ್ಮೀರದ ಪ್ರದೇಶಗಳನ್ನು ಆಕ್ರಮಿಸುವ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದ್ದಕ್ಕಾಗಿ ಅವರನ್ನು ವಜಾಗೊಳಿಸಲು ಪ್ರಯತ್ನಿಸಿದ ಅಂದಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸುವ ಮೂಲಕ ಮುಷರಫ್‌ ಅಧಿಕಾರವನ್ನು ಪಡೆದಿದ್ದರು.

ಮುಷರಫ್ ಅವರ ಅಧಿಕಾರವಧಿಯಲ್ಲಿ ವಿದೇಶಿ ಹೂಡಿಕೆಯು ಪ್ರವರ್ಧಮಾನಕ್ಕೆ ಬಂದಿತು. ಪಾಕಿಸ್ತಾನವು 7.5%ರಷ್ಟು ವಾರ್ಷಿಕ ಆರ್ಥಿಕ ಬೆಳವಣಿಗೆಯನ್ನು ಕಂಡಿತು. ಇದು ವಿಶ್ವ ಬ್ಯಾಂಕ್ ಮಾಹಿತಿಯ ಪ್ರಕಾರ ಸುಮಾರು ಮೂರು ದಶಕಗಳಲ್ಲಿ ಅತ್ಯಧಿಕ ಮಟ್ಟದ್ದಾಗಿ ಗುರುತಿಸಿಕೊಂಡಿದೆ.

ಅವರ ಅಧ್ಯಕ್ಷೀಯ ಅವಧಿಯ ಬಳಿಕ ನಿರಂಕುಶ ಆಡಳಿತ ಹೆಚ್ಚಿತು. 2006ರಲ್ಲಿ, ಬಲೂಚಿಸ್ತಾನ್ ಪ್ರಾಂತ್ಯದ ಬುಡಕಟ್ಟು ಮುಖ್ಯಸ್ಥನನ್ನು ಕೊಲ್ಲಲು ಮುಷರಫ್ ಮಿಲಿಟರಿ ಕ್ರಮಕ್ಕೆ ಆದೇಶಿಸಿದರು. ಇದು ಇಂದಿಗೂ ಶಸಸ್ತ್ರ ವಿಪ್ಲವಕ್ಕೆ ಕಾರಣವಾಗಿದೆ.

ನಂತರ 2007ರಲ್ಲಿ ಪ್ರತಿಪಕ್ಷದ ನಾಯಕಿ ಬೆನಜೀರ್ ಭುಟ್ಟೊ ಅವರನ್ನು ಹತ್ಯೆ ಮಾಡಿದ ಆತ್ಮಹತ್ಯಾ ದಾಳಿಯು ಹಿಂಸಾಚಾರವನ್ನು ಪ್ರಚೋದಿಸಿತು. ನ್ಯಾಯಾಂಗವನ್ನು ಬಲಪಡಿಸುವ ಪ್ರಯತ್ನಗಳು ಪ್ರತಿಭಟನೆಗಳಿಗೆ ಕಾರಣವಾಯಿತು. ಮುತ್ತಿಗೆ ಹಾಕಿದ ಮುಷರಫ್ ಚುನಾವಣೆಗಳನ್ನು ಮುಂದೂಡಿದರು. ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

2008ರಲ್ಲಿ 11 ವರ್ಷಗಳ ಬಳಿಕ ದೇಶದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಗಳು ನಡೆದವು. ಮುಷರಫ್ ಅವರ ಪಕ್ಷವು ಸೋತಿತು. ಸಂಸತ್ತಿನ ದೋಷಾರೋಪಣೆಯನ್ನು ಎದುರಿಸಿತು. ಮುಷರಫ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಲಂಡನ್‌ಗೆ ಪಲಾಯನ ಮಾಡಿದರು.

ಸಂಸತ್ತಿಗೆ ಸ್ಪರ್ಧಿಸಲು ಅವರು 2013 ರಲ್ಲಿ ಪಾಕಿಸ್ತಾನಕ್ಕೆ ಮರಳಿದರು. ಆದರೆ ತಕ್ಷಣವೇ ಅನರ್ಹಗೊಳಿಸಲಾಯಿತು. 2016ರಲ್ಲಿ ದುಬೈಗೆ ತೆರಳಲು ಅವಕಾಶ ನೀಡಲಾಗಿತ್ತು.

2007ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕಾಗಿ ನ್ಯಾಯಾಲಯವು 2019ರಲ್ಲಿ ಮುಷರಫ್‌ಗೆ ಮರಣದಂಡನೆ ವಿಧಿಸಿತು. ಆದರೆ ತೀರ್ಪನ್ನು ನಂತರ ರದ್ದುಗೊಳಿಸಲಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಪಹರಣ ಆರೋಪಕ್ಕೆ ಪುರಾವೆಯಿಲ್ಲ, ರಾಜಕೀಯದ ಷಡ್ಯಂತ್ರದಿಂದ ಬಂಧನ: ಹೆಚ್.ಡಿ ರೇವಣ್ಣ

0
ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾದ ಬಳಿಕ ಮೊದಲ ಬಾರಿಗೆ ಶಾಸಕ ಹೆಚ್‌.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ...